ಕನ್ನಡ ಕರಾವಳಿಯ ಕುಂದಾಪುರ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ಇದರ ವಾರ್ಷಿಕ ಮಾರಿಜಾತ್ರೆ ಇದೇ ಫೆಬ್ರವರಿ 2 ರಿಂದ 5 ನೇ ತಾರಿಕಿನ ತನಕ ನಡೆಯಲಿದ್ದು ಜಾತ್ರೆಯ ಪ್ರಯುಕ್ತ ವಿಶೇಷ ವಾರ್ಷಿಕ ರಂಗಪೂಜೆ, ಗೆಂಡಸೇವೆ ಧಕ್ಕೆಬಲಿ, ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುತ್ತದೆ
Author: KundaVahini Editor
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ರಕ್ಷಕ-ಶಿಕ್ಷಕ ಸಭೆ
ಕುಂದಾಪುರ, ಜನವರಿ 28 : ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಹೆತ್ತವರ ಮೇಲಿದೆ ಎಂದು ಡಾ.ಅತುಲ್ ಕುಮಾರ್ ಶೆಟ್ಟಿ ಹೇಳಿದರು.ಅವರು ಡಾ.ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 28ರಂದು ನಡೆದ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ […]
ಶ್ರೀ ಶಾರದ ಕಾಲೇಜು ಬಸ್ರೂರು: ಹೊಸ ಸರ್ಟಿಫಿಕೇಟ್ ಕೋರ್ಸುಗಳ ಉದ್ಘಾಟನೆ
ಕುಂದಾಪುರ: ಶ್ರೀ ಶಾರದ ಕಾಲೇಜು ಬಸ್ರೂರು ಇದರ ಐಕ್ಯೂಎಸಿ ,ಇತಿಹಾಸ ವಿಭಾಗ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಗೊಳ್ಳಲಿರುವ ಪುರಾತತ್ವ ದಾಖಲೀಕರಣ ಮತ್ತು ಅಧ್ಯಯನ ಕೇಂದ್ರ ಹಾಗೂ ಕನ್ನಡ ಪ್ರಾತಿನಿಧಿಕ ಸರ್ಟಿಫಿಕೇಟ್ ಕೋರ್ಸುಗಳನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಜಗದೀಶ ಶೆಟ್ಟಿ ಉದ್ಘಾಟಿಸಿದರು. ಅವರು ಜನವರಿ 27ರಂದು ಕಾಲೇಜಿನಲ್ಲಿ ಆಯೋಜಿಸಿದ್ದ ಸರ್ಟಿಫಿಕೇಟ್ ಕೋರ್ಸುಗಳನ್ನು ಉದ್ಘಾಟಿಸಿ ಬಸ್ರೂರಿನ ಮಹತ್ವದ ಬಗ್ಗೆ ತಿಳಿಸಿದರು.ಬಸ್ರೂರು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡ […]
ಕರಾವಳಿಯ ಉದಯೋನ್ಮುಖ ಹಿನ್ನೆಲೆ ಗಾಯಕ ಅಕ್ಷಯ್ ಬಡಾಮನೆಗೆ “ಅತ್ಯುತ್ತಮ ಗಾಯಕ ಪ್ರಶಸ್ತಿ”
ಅಕ್ಷಯ್ ಬಡಾಮನೆ ಓರ್ವ ಉದಯೋನ್ಮುಕ ಪ್ರತಿಭೆ. ಹತ್ತು ಹಲವು ಹಾಡುಗಳಿಗೆ ಧ್ವನಿಯಾಗಿ ಎಲ್ಲರ ಮನೆಮಾತಾದವರು. ರಿಹಾ ಇಂಡಿಯನ್ ಆರ್ಗ್ ಸಂಸ್ಥೆ ಇವರ ಗಾಯನಕ್ಕೆ ಮೆಚ್ಚಿ ಈ ವರ್ಷದ ಅತ್ಯುತ್ತಮ ಗಾಯಕ ಪ್ರಶಸ್ತಿ (ಅಲ್ಬಂ ಹಾಡು ಹಾಗೂ ಕಿರುಚಿತ್ರ ಹಾಡುಗಳ ವಿಭಾಗ) ನೀಡಿರುತ್ತಾರೆ. ರಿಹಾ ಐದಾರು ವರ್ಷಗಳಿಂದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸುತ್ತದ್ದು, ಈ ವರ್ಷದ ಪ್ರಶಸ್ತಿ ಸಮಾರಂಭವನ್ನು ಗೋವಾದಲ್ಲಿ ನೆಡೆಸುವ ತಯಾರಿಯಲ್ಲಿದೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಅಕ್ಷಯ್ ಬಡಾಮನೆ […]
ಮೂಡ್ಲಕಟ್ಟೆ ಎಂ. ಐ. ಟಿ. : ರೌಟರ್ ತಂತ್ರಜ್ಞಾನ ವೆಬಿನಾರ್
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ “ರೌಟರ್ ತಂತ್ರಜ್ಞಾನ” ವಿಷಯದ ಮೇಲೆ ವೆಬಿನಾರ್ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸಿಸ್ಕೋ ಕಂಪನಿಯಲ್ಲಿ ಟೆಕ್ನಿಕಲ್ ಲೀಡ್ ಇಂಜಿನಿಯರ್ ಆಗಿರುವ ಶ್ರೀ. ವಿವೇಕ್ ದಿನಕರ ರವರು ಭಾಗವಹಿಸಿದ್ದರು. ಶ್ರೀ. ವಿವೇಕ್ ದಿನಕರ ರವರು ಇಲೆಕ್ಟ್ರಾನಿಕ್ಸ್ ಸಂವಹನದಲ್ಲಿ ವಿವಿಧ ರೀತಿಯ ರೌಟರ್ ತಂತ್ರಜ್ಞಾನದ ಉಪಯೋಗ ಮತ್ತು ಬಳಕೆಯ ಕುರಿತು ಉಪನ್ಯಾಸ ನೀಡಿದರು. ವಿವಿಧ ರೀತಿಯ ರೌಟರ್ ಪ್ರೋಟೋಕಾಲ್ ಕುರಿತು ಮಾಹಿತಿ […]
ಹೀಗೊಂದು ಪ್ರೇಮ ಕವನ
ಉಳಿದದ್ದು ನೆನಪು ಮಾತ್ರ,ಉಳಿಯದ ಅವಳ ಪ್ರೀತಿಯಲಿ.ಉಳಿದದ್ದು ನೋವು ಮಾತ್ರ,ಮರೆಯದ ಅವಳ ನೆನೆಪಿನಲ್ಲಿ. ಖಾಲಿ ಕಿಸೆಯಿದ್ದರೂ ಆಗ,ನೀಲಿ ಬಾನೆತ್ತರದ ಕನಸುಗಳು.ಜಾಲಿ ಮುಳ್ಳುಗಳೀಗ ನೆನಪು,ಕಿಸೆತುಂಬಿದ್ದರೂ ಮನಸು ಬರಿದು. ಎಲ್ಲಿ ಮರೆಯಾಗುವೆಯೋ ನೀನುಹಂಚಿಕೊಂಡರೆ ಪ್ರೀತಿ.ಹೇಳಲಾಗದ ಧೈರ್ಯ,ಕಳವಳದ ಮನಸ್ಸಿಗೆ ಒಂದೇ ಭೀತಿ. ಅಂದು ನನ್ನದು ಬರೀ ಮೌನ.ಆಡಬೇಕಿದ್ದ ಮಾತುಗಳುಇಂದಾಗುತ್ತಿದೆ ಕವನ.ಕ್ಷಮಿಸಿಬಿಡು ನನ್ನನ್ನ. – ನಾಗು
ಕುಂದಗನ್ನಡದ ಬಹು ನಿರೀಕ್ಷೆಯ ಚಿತ್ರ : ಜಿ ಸಿ ಮೂವಿಸ್ರವರ ‘ದಿ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ’
ಸಿನಿಮಾಗಳಲ್ಲಿ ಕುಂದಗನ್ನಡ ಭಾಷೆ ಕಾಣಸಿಗುವುದೇ ಅಪರೂಪ, ಸಿಕ್ಕರೂ ಅಲ್ಲಿಲ್ಲೊಂದು ಸಿಗಬಹುದೋ ಏನೋ. ಒಂದೆರಡು ಕುಂದಗನ್ನಡ ಸಿನಿಮಾಗಳು ಬಂದುಹೋದವು ಕೂಡ.
ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ ಗೋಪಾಡಿ ವಾರ್ಷಿಕ ಜಾತ್ರಾ ಮಹೋತ್ಸವ
ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ – ಗೋಪಾಡಿ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 28ರಿಂದ 30ರ ತನಕ ನಡೆಯಲಿದೆ.
ಕುಂದಾಪುರದ ನೂತನ ಡಿವೈಎಸ್ಪಿಯಾಗಿ ಕೆ. ಶ್ರೀಕಾಂತ್ ಅಧಿಕಾರ ಸ್ವೀಕಾರ
ಕುಂದಾಪುರ ಉಪವಿಭಾಗದ ನೂತನ ಡಿವೈಎಸ್ಪಿ ಯಾಗಿ ಕೆ .ಶ್ರೀಕಾಂತ ಅಧಿಕಾರ ಸ್ವೀಕರಿಸಿದ್ದಾರೆ .ಕಾರವಾರದ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಯಾಗಿ ಸೇವೆಸಲ್ಲಿಸಿರುವ ಇವರು 1998ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ
ನಮ್ಮಿಬ್ರದ್ದು ಇವತ್ತು ನಿನ್ನೆಯ ಪ್ರೀತಿ ಅನ್ಕೊಂಡ್ರಾ???… ನೋ ವೇ ಚಾನ್ಸೆ ಇಲ್ಲ.
ಕೆಲಸ ಮುಗಿಸಿ ಬಂದು ಸುಸ್ತಾಗಿದ್ದ ಅಜ್ಜಯ್ಯ, ಕಾಲು ತೊಳೆದು ಚಾವಡಿ ಗೆ ಬಂದಿದ್ದರಷ್ಟೇ, ಆಗಲೇ ಬೊಬ್ಬೆ ಬಿದ್ದಿತ್ತು!!!. ಅವರೇನು ಬರಿಗೈಯಲ್ಲಿ ಮನೆಯನ್ನ ಹೊಕ್ಕಿರಲಿಲ್ಲ. ನಾಲ್ಕೈದು ಬೊಟಿ ಪ್ಯಾಕೆಟ್ಟು, ನಾಲ್ಕಾಣೆಯ ನಾಲ್ಕು ಚಾಕ್ಲೆಟ್ಟುಗಳು, ಬಲಗೈಯಲ್ಲಿ ಹಿಡಿದಿದ್ದ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಕಣ್ಣ್ ಕಣ್ಣ್ ಬಿಡುತ್ತ, ಎಡಗೈಯಲ್ಲಿ ಹಿಡಿದಿದ್ದ ಮೀನಿನ ಚೀಲದೊಂದಿಗೆ ಅಡುಗೆ ಮನೆ ಸೇರಿದ್ದವು… ನನಗೂ ಮೊದ ಮೊದಲು ಅರ್ಥ ಆಗಿರ್ಲಿಲ್ಲ. ನನ್ನನ್ನ ಯಾಕಿವನು ಇಷ್ಟು ಇಷ್ಟ ಪಡ್ತಿದ್ದಾನೆ ಅಂತ. ಈಗ್ಲೂ ಮಹಾ […]