ಬೈಂದೂರು(ಜು,29): ಕಾಲ್ತೋಡು ಮತ್ತು ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅರೆಶಿರೂರುನಿಂದ ಬಲಗೋಣು, ಪಾರೆ,ಬೋಳಂಬಳ್ಳಿ, ಜೋಡುಗುಪ್ಪೆ, ಜೋಗಿಜೆಡ್ಡು, ಮೆಟ್ಟಿನಹೊಳೆ,ಕಾಲ್ತೋಡು, ಹೆರೆಂಜಾಲು, ಕಂಬದಕೋಣೆ, ಉಪ್ಪುಂದ ಮಾರ್ಗವಾಗಿ ಬೈಂದೂರಿಗೆ ವಿದ್ಯಾರ್ಥಿಗಳ ಸಂಚಾರದ ಸಮಯಕ್ಕೆ ಹೆಚ್ಚುವರಿಸರ್ಕಾರಿ ಬಸ್ ಸಂಪರ್ಕ ಕಲ್ಪಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್. ಇವರಿಗೆ ಗ್ರಾಮ ಕಾಲ್ತೋಡು ಪಂಚಾಯತ್ ಅಧ್ಯಕ್ಷರಾದ ಬಿ. ಅಣ್ಣಪ್ಪ ಶೆಟ್ಟಿ, ಭಟ್ನಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲ್ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.