ಉಡುಪಿ (ಫೆ.28) ಸಾಸ್ತಾನದ ಗುಂಡ್ಮಿ ಅಂಬಾಗಿಲು ಬಳಿ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಕೋಟ ಸಮೀಪದ ಬನ್ನಾಡಿಯ ಸುಭಾಷ್ ಅಮೀನ್ (45) ಮೃತ ಬೈಕ್ ಸವಾರ. ಈತ ಸಿವಿಲ್ ಕಾಂಟ್ರಾಕ್ಟ್ ರಾಗಿದ್ದು, ಕೆಲಸದ ಸಲುವಾಗಿ ಬನ್ನಾಡಿಯಿಂದ ಉಡುಪಿ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತ ನಡೆಸಿದ ಕಾರು ಚಾಲಕ ಕುಂದಾಪುರದ ಚರ್ಚ್ ವೊಂದರ ಫಾದರ್ ಎಂದು ತಿಳಿದು ಬಂದಿದ್ದು ಅವರನ್ನು ಕೋಟ ಠಾಣೆಯ ಪೊಲೀಸರು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ ಪೋಲಿಸ್ ಠಾಣಾಧಿಕಾರಿ ಸಂತೋಷ್ ಬಿ.ಪಿ ಸಿಬ್ಬಂದಿ ರಾಜು.ಕೆ, ರಾಮಣ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮೃತ ಸುಭಾಷ್ ಪತ್ನಿ, ಮಗು ಮತ್ತು ತಾಯಿಯನ್ನು
ಅಗಲಿದ್ದಾರೆ.