ಜಡ್ಕಲ್ (ಜೂನ್, 26) : ಪ್ರಾದೇಶಿಕ ಅರಣ್ಯ ಉಪ ವಿಭಾಗ ಕುಂದಾಪುರ ಹಾಗೂ ಗ್ರಾಮ ಅರಣ್ಯಸಮಿತಿ ಜಡ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಜೂನ್ ,25 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಕ್ಕೆ ಯಲ್ಲಿ ನಡೆಯಿತು. ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಜಾಕ್ಷಿ ಶೆಟ್ಟಿ, ಗಿಡ ನೆಡುವುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಶ್ರೀಯುತ ಸುನಿಲ್ ಅವರು ಮಾತನಾಡಿ ವನಮಹೋತ್ಸವದ ಮಹತ್ವವನ್ನು ತಿಳಿಸಿದರು.
ನಂತರ ಮುದೂರು ಬ್ಲಾಕ್ ಮೀಸಲು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿದ ಇಂಗು ಗುಂಡಿಗಳ ಬಳಿ ಮಾವು, ಹಲಸು, ಚಾರ, ಹೊಂಗೆ ಮತ್ತು ಇನ್ನಿತರ ವಿವಿಧ ಕಾಡು ಜಾತಿಯ ಸಸ್ಯಗಳ ಬೀಜ ಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಡ್ಕಲ್ ಗ್ರಾಮಪಂಚಾಯತ್ ಪ್ರಥಮ ಪ್ರಜೆ ಶ್ರೀಮತಿ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿ, ಸದಸ್ಯೆ ಭಾರತಿ ಶೆಟ್ಟಿ, ಅರಣ್ಯ ಸಮಿತಿ ಅಧ್ಯಕ್ಷರಾದ ಸುರೇಂದ್ರ ನಾಯ್ಕ್, ಶಾಲಾ ಸ್ಥಾಪಕ ಅಧ್ಯಕ್ಷರಾದ ಎಂ. ಜೆ. ಬೇಬಿ, ಸ್ಥಳ ದಾನಿಗಳಾದ ನಾರಾಯಣ ಪೂಜಾರಿ ಮೆಕ್ಕೆ, ಶಾಲಾ SDMC. ಅಧ್ಯಕ್ಷರಾದ ಶ್ರೀಮತಿ ರಾಧಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ದೇವಕಿ, ಸಹ ಶಿಕ್ಷಕಿ ಶ್ರೀಮತಿ ನೇತ್ರ, SDMC.ಮಾಜಿ ಅಧ್ಯಕ್ಷರಾದ ಮಹಾಬಲ ಪೂಜಾರಿ, ಅರಣ್ಯ ಇಲಾಖೆಯ ಸುನಿಲ್ ಮತ್ತು ಹರಿಪ್ರಸಾದ್, ವಿದ್ಯಾಭಿಮಾನಿ ರಾಮ ಶೆಟ್ಟಿ ಅತ್ತಿಕಾರ್, ಹಣಿ ಸಿಂಸಲ್, ಭಾಸ್ಕರ್ ನಾಯ್ಕ್, ಹಳೆ ವಿದ್ಯಾರ್ಥಿಗಳಾದ ಗುರುರಾಜ್ ಪೂಜಾರಿ ಮೆಕ್ಕೆ, ರಮೇಶ್ ಪೂಜಾರಿ ಮೆಕ್ಕೆ, ವಿದ್ಯಾರ್ಥಿನಿ ಸಾನ್ವಿ ಉಪಸ್ಥಿತರಿದ್ದರು. ಸುನಿಲ್ ಸ್ವಾಗತಿಸಿದರು. ರಾಮ ಶೆಟ್ಟಿ ಅತ್ತಿಕಾರ್ ವಂದಿಸಿದರು.















