ಮಂಬೈ (ಆ, 03) : ಕೊರೊನಾ ಲಾಕ್ದೌನ್ ನಿಂದಾಗಿ ಮುಂಬೈಯಲ್ಲಿ ಕೇಟರಿಂಗ್ ಮತ್ತು ಡೆಕೋರೇಷನ್ ಉದ್ಯಮಕ್ಕೆ ಬಹಳಷ್ಟು ಪೆಟ್ಟು ಬಿದ್ದಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ನವಿ ಮುಂಬೈ ವೆಡ್ಡಿಂಗ್ ಅಸೋಷಿಯೇಷನ್ (ರಿ.) ಕಳೆದ ಕೆಲವು ತಿಂಗಳುಗಳಿಂದ ಬಹಳ ಶ್ರಮ ಪಡುತ್ತಿದೆ. ಹಲವಾರು ಜನಪ್ರತಿನಿಧಿಗಳ ಬಳಿ ತೆರಳಿ ನೆನೆಗುದಿಗೆ ಬಿದ್ದಿರುವ ಈ ಉದ್ಯಮವನ್ನು ಮತ್ತು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಕೇಟರಿಂಗ್ ಉದ್ಯಮವನ್ನು ಉಳಿಸಿ ಕೊಡಬೇಕಾಗಿ […]
Author: KundaVahini Editor
ಗುರುಕುಲ ಚಾಣಕ್ಯ ಪ್ರಶಸ್ತಿಗೆ ಬಿ. ಎಸ್. ಬಾಗೇವಾಡಿಮಠ ಆಯ್ಕೆ
ರಾಣಿಬೇನ್ನೂರು (ಆ, 03) : ನಗರದ ಯುವ ಕವಿ ಸಾಹಿತಿ ಹಾಗೂ ಲೇಖಕರಾದ ಹಾವೇರಿ ಜಿಲ್ಲೆಯರಾಣಿಬೆನ್ನೂರಿನ ಬಸವರಾಜ .ಎಸ್ . ಬಾಗೇವಾಡಿಮಠ ರವರು ಸಾಹಿತ್ಯ, ಸಮಾಜ ಸೇವೆ, ಹಾಗೂ ಇವರ ಮಾನವೀಯ ಸೇವೆಗಳನ್ನು ಗುರುತಿಸಿ ಗುರು ಕುಲ ಚಾಣಕ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗುರುಕುಲ ಕಲಾ ಪ್ರತಿಷ್ಠಾನ (ರಿ) ರಾಜ್ಯ ಘಟಕದ ಸಂಸ್ಥೆಯ ಅಧ್ಯಕ್ಷರಾದ ಹುಲಿಯೂರು ದುರ್ಗ ಲಕ್ಷ್ಮೀ ನಾರಾಯಣ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗೊಳ್ಳಿ : ಬಿಲ್ಲವ ಹಿತರಕ್ಷಣಾ ವೇದಿಕೆಯ ಪ್ರಥಮ ಸಭೆ
ಗಂಗೊಳ್ಳಿ (ಆ, 3) : ಒಂದು ಸಮುದಾಯದ ಹಿತರಕ್ಷಣೆಗಾಗಿ ಸಂಬಂಧಪಟ್ಟ ಎಲ್ಲರೂ ಒಮ್ಮನಸ್ಸಿನಿಂದ ಕೆಲಸವನ್ನು ಮಾಡಬೇಕು. ಸಮಗ್ರ ಪರಿಶ್ರಮದಿಂದಲೇ ಸಮುದಾಯದ ಹಿತ ರಕ್ಷಣೆ ಸಾಧ್ಯ ಎಂದು ಬಿಲ್ಲವ ಸಮುದಾಯದ ಹಿರಿಯರಾದ ಮುತ್ತ ಕುಂದರ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ನಡೆದ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ಜತ್ತನ್ ಮಾತನಾಡಿ, ಸಂಸ್ಥೆಗಳು ಸಮುದಾಯದ ಕೆಳವರ್ಗದ ಜನರನ್ನು ಕೂಡ […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಹಳ್ಳಿಹೊಳೆ ಒಕ್ಕೂಟದ ಸಂಘದ ಸದಸ್ಯರಿಗೆ ಲಾಭಾಂಶ ಹಂಚಿಕೆ
ಹಳ್ಳಿಹೊಳೆ (ಆ, 2) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ಇದರ ಕೊಲ್ಲೂರು ವಲಯದ ಹಳ್ಳಿಹೊಳೆ ಒಕ್ಕೂಟದ ಸಂಘದ ಸದಸ್ಯರಿಗೆ ಸುಮಾರು 7.59 ಲಕ್ಷಕ್ಕೂ ಹೆಚ್ಚು ಲಾಭಾಂಶ ಮೊತ್ತವನ್ನು ಆಗಸ್ಟ್ 01ರಂದು ವಿತರಣೆ ಮಾಡಲಾಯಿತು. ಲಾಭಾಂಶ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶಂಕರ್ ನಾಯ್ಕ ರವರು ವಹಿಸಿದ್ದರು. ವಲಯದ ಮೇಲ್ವಿಚಾರಕರಾದ ಶ್ರೀ ರಾಮ. ಎನ್ ರವರು ಸದಸ್ಯರಿಗೆ ಮಾಹಿತಿ ನೀಡಿದರು. ಸೇವಾಪ್ರತಿನಿಧಿ ಕೃಷ್ಣ […]
ಮೀನುಗಾರರನ್ನು ಕರೋನ ಲಸಿಕೆಯ ಆದ್ಯತೆಯ ಪಟ್ಟಿಯಲ್ಲಿ ಸೇರಿಸಬೇಕು
ಕರೋನಾ ಲಾಕ್ಡೌನಿನ ಕಳೆದೆರಡು ಅವಧಿಯಲ್ಲಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು, ಸರಕಾರದ ಪ್ಯಾಕೇಜುಗಳು ಸರಿಯಾಗಿ ಸಿಗದೆ ಬದುಕು ಸಾಗಿಸಿದ ಮೀನುಗಾರರು ಮತ್ತೆ ಕಡಲಿಗೆ ಇಳಿಯಲು ಸಜ್ಜಾಗುತ್ತಿದ್ದಾರೆ. ಕರೋನಾ ಮೂರನೆ ಅಲೆಯ ಭಯದ ನಡುವೆ ಹೊಟ್ಟೆಪಾಡಿಗಾಗಿ ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸರ್ಕಾರದ ನಿಯಮದಂತೆ ಮೀನು ಹಿಡಿಯಲು ಹೊರಡುತ್ತಿರುವ ಬಹುತೇಕ ಮೀನುಗಾರರಿಗೆ ಕರೋನಾ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಕರೋನಾ ಲಸಿಕಾಕರಣ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಜೊತೆಗೆ ಸರ್ಕಾರ ಮೀನುಗಾರರನ್ನು ಕರೋನ ಲಸಿಕೆಯ […]
ಗುರುಕುಲ ಸೇವಾ ರತ್ನ ಪ್ರಶಸ್ತಿಗೆ ಡಾ. ಪಿ. ಎಮ್. ಭೋಜೆ ಆಯ್ಕೆ
ಬೆಳಗಾವಿ (ಆ, 2) : ಜಿಲ್ಲೆಯ ಸದಗಾಲ ಗ್ರಾಮದ ಡಾ| ಪ್ರಕಾಶ ಎಮ್. ಭೋಜೆಯವರು ಒರ್ವಸೃಜನಶೀಲ ಶಿಕ್ಷಕರು, ಸಾಹಿತಿ, ಹಾಗೂ ಲೇಖಕರಾಗಿದ್ದಾರೆ. ಇವರು ತಮ್ಮ ಶಿಕ್ಷಣ ಜೊತೆಗೆ ಬಡ ಮಕ್ಕಳಿಗೆ ಉಚಿತ ಪಾಠ ಬೋಧನೆ ಮಾಡಿ ಜ್ಞಾನ ದಾಸೋಹಿಯಾಗಿ ಪ್ರೇರಣೆರಾಗಿದ್ದಾರೆ. ಇವರ ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಮಾಜ ಸೇವೆಯಲ್ಲಿನ ಗಣನೀಯ ಸೇವೆ ಹಾಗೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ತುಮಕೂರಿನಲ್ಲಿ ನಡೆಯಲಿರುವ ಪ್ರಥಮ ರಾಜ್ಯ ಗುರುಕುಲ ಸಾಹಿತ್ಯ ಸಮ್ಮೇಳನದಲ್ಲಿ ಗುರುಕುಲ […]
ನ್ಯಾಯದ ಹಸಿವು
ಹಸಿದ ಹೊಟ್ಟೆ ಮಾತ್ರ ಆಹಾರವನ್ನು ಹುಡುಕುತ್ತದೆ. ಹಸಿವಿಲ್ಲದವನಿಗೆ ಆಹಾರವು ಅಗತ್ಯ ಅನಿಸುವುದಿಲ್ಲ. ಈ ಸಮಾಜದ ಪರಿಸ್ಥಿತಿ ಕೂಡ ಹಾಗೇ ಆಗಿದೆ. ಇಲ್ಲಿ ಶೋಷಿತರು ,ಬಡವರು, ಅವಕಾಶ ವಂಚಿತ ಸಮುದಾಯಗಳು ಸಾಮಾಜಿಕವಾಗಿ ನ್ಯಾಯದಿಂದ ವಂಚಿತರಾಗಿದ್ದಾರೆ. ಇವರಿಗೆ ನ್ಯಾಯವೆಂಬ ಹಸಿವಿದೆ..ಆದರೆ….! ಹಸಿದವನಿಗೆ ಮಾತ್ರ ತಿಳಿಯುವುದು ಅನ್ನದ ಮಹತ್ವ. ಅನ್ಯಾಯಕ್ಕೊಳಗಾದವನಿಗೆ ತಿಳಿಯುವುದು ನ್ಯಾಯದ ಮಹತ್ವ .ಹಸಿವಿಲ್ಲದ ವ್ಯಕ್ತಿ ಹೇಗೆ ಆಹಾರವನ್ನು ಹುಡುಕುವುದಿಲ್ಲವೊ ಹಾಗೆ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಪ್ರಬಲ ಹೊಂದಿರುವ ವ್ಯಕ್ತಿ ಅನ್ಯಾಯದ ಕುರಿತು […]
ಬಂಧನದೊಳಗೆ
ಮೋಹವೋ, ವ್ಯಾಮೋಹವೋ … ಸೆಳತಕೆ ಒಳಗಾಗಿ ಬಂದಿಯಾಗುತಿದ್ದೇವೆ….ಯಾರಿಗೂ ತಿಳಿಯದೆ, ತಿಳಿದು ಗೊತ್ತಾಗದೆ ಹೊಟ್ಟೆಯ ಚೀಲ ತುಂಬಿಸಲು…ಜೀವದ ಹಂಗು ತೊರೆದು ಎರಡು ಅಲೆಗಳಿಗೆ ಎದೆ ಕೊಟ್ಟುಈಜಿದ್ದು ಗೊತ್ತಾಗಲೇ ಇಲ್ಲಾ ! ಬದುಕಿನ ದೋಣಿ ಮುಳುಗಿದ್ದು ಗೊತ್ತಾಗುವ ಮುನ್ನವೇ… ಆಸೆ ಭಾಸೆಗಳ ಆಡುವು ಇಟ್ಟಿದ್ದು ನಿನ್ನ ಒಳ ಮನಸಿಗು ಗೊತ್ತಾಗಲಿ …!!! ನೀರಿನ ಸೆಳತದಲ್ಲಿ ಸಿಕ್ಕಿ ಈಗಷ್ಟೇ ದಡಕ್ಕೆ ಬರುತ್ತಿರುವ ದೋಣಿಗೆಮಹತ್ವದ ಸೂಚನೆಯಂತೆ ಏಳುತಿದೆಯಂತೆ ಮೂರನೇ ಅಲೆ ಈ ಅಲೆಗಳಿಗೆ ಬೆಲೆ ಕೊಟ್ಟು […]
ಒಲಿಂಪಿಕ್ಸ್ : ಪಿವಿ ಸಿಂಧು ಗೆ ಕಂಚಿನ ಪದಕ
ಬೆಂಗಳೂರು (ಆ, 1) : ಟೋಕಿಯೊ ಒಲಿಂಪಿಕ್ಸ್ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಕಂಚಿನ ಪದಕವನ್ನು ಪಡೆದಿದ್ದಾರೆ. ಚೀನಾದ ಹೀ ಬಿಂಗ್ ಜಿಯಾವೊ ರ ವಿರುದ್ಧ 21-13, 21-15 ನೇರ ಗೇಮ್ ಗಳ ಅಂತರದಲ್ಲಿ ಪಿ. ವಿ. ಸಿಂಧು ಗೆಲುವನ್ನು ಸಾಧಿಸಿದ್ದಾರೆ.
ಹೆಮ್ಮಾಡಿ : ಒತ್ತಡ ನಿವಾರಣೆ – ಆರೋಗ್ಯ ಜೀವನಶೈಲಿ ಕಾರ್ಯಾಗಾರ
ಹೆಮ್ಮಾಡಿ (ಜು, 31) : ಆಧುನಿಕತೆಯ ಒತ್ತಡದ ಬದುಕಿನಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ನಕಾರಾತ್ಮಕ ಪ್ರಭಾವಗಳು ಹೆಚ್ಚಾಗುತ್ತಿದ್ದು ಅದರಿಂದ ಹೊರ ಬರಲು ನಾವು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು. ಆ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ನಮ್ಮ ಲಯನ್ಸ್ ಸಂಸ್ಥೆ ಇಂದು ಗ್ರಾಮೀಣ ಭಾಗದ ಮಹಿಳೆಯರಿಗೆ ಆರೋಗ್ಯವನ್ನು ಕಾಪಾಡಲು ಕಾರ್ಯಗಾರವನ್ನು ಹಮ್ಮಿಕೊಂಡಿದೆ ಎಂದು ಕುಂದಾಪುರ ಲಯನ್ಸ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ನಾಯಕ್ ಕುಂದಾಪುರ ಹೇಳಿದರು. ಅವರು ಲಯನ್ಸ್ ಕ್ಲಬ್ ಕುಂದಾಪುರ, […]










