ಕುಂದಾಪುರ (ಮೇ. 13) : ಕುಂದಾಪುರದ ಬೋರ್ಡ್ ಹೈಸ್ಕೂಲ್ನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಕಲಾಕ್ಷೇತ್ರ, ಸೇವಾ ಭಾರತಿ, ಬಿಜೆಪಿ ಹಾಗೂ ಕಾಂಗ್ರೆಸ್ ಸ್ವಯಂ ಸೇವಕರ ಸಹಯೋಗದೊಂದಿಗೆ ಕರೋನಾ ಲಸಿಕೆ ನೀಡುವಿಕೆ ಹಲವು ದಿನಗಳಿಂದ ನಡೆಯುತ್ತಿದ್ದು ,ಗುರುವಾರದಂದು 18 ವರ್ಷಚ ಮೇಲ್ಪಟ್ಟು ನೋಂದಣಿ ಮಾಡಿಸಿಕೊಂಡು ಮೊಬೈಲ್ಗೆ ಸಂದೇಶ ಬಂದ 150 ಮಂದಿಗೆ ಕೊವಿಶೀಲ್ಡ್ ಲಸಿಕೆ ನೀಡಲಾಯಿತು. ಲಸಿಕೆ ನೀಡುತ್ತಿರುವ ಸ್ಥಳಕ್ಕೆ ಕುಂದಾಪುರದ ಡಿವೈಎಸ್ಪಿ ಕೆ. ಶ್ರೀಕಾಂತ್ ಭೇಟಿ ನೀಡಿ ವ್ಯವಸ್ಥೆಯ […]
Author: KundaVahini Editor
ಬೈಂದೂರು ಶಾಸಕರ ಗೃಹ ಕಛೇರಿಗೆ ನೂತನ ತಹಶೀಲ್ದಾರ್ ಭೇಟಿ
ಬೈಂದೂರು (ಮೇ,13): ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ಶೋಭಾಲಕ್ಷ್ಮೀ ಹೆಚ್. ಎಸ್ ರವರು ಬೈಂದೂರು ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಯವರ ಗೃಹಕಛೇರಿಗೆ ಮೇ 13ರಂದು ಭೇಟಿ ನೀಡಿದರು. ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ಶೋಭಾ ಲಕ್ಷ್ಮಿ ಹೆಚ್ ರವರನ್ನು ಶಾಸಕರು ಶುಭ ಹಾರೈಸಿ ತಾಲೂಕಿನ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಕೋವಿಡ್ ನಿರ್ವಹಣೆ ಹಾಗೂ ಜಿಲ್ಲೆಯ ಅತ್ಯಂತ ಗ್ರಾಮೀಣ ಭಾಗವಾಗಿರುವ ಬೈಂದೂರು ಕ್ಷೇತ್ರದ ಜನತೆಯ ಆಡಳಿತಾತ್ಮಕ […]
“ನೆಲೆ ಕಾಣದ ಬಂಡಿ”
ಬಹಳ ವರ್ಷದ ಹಿಂದೆ ಆ ಪುಟ್ಟ ಹಳ್ಳಿಯ ಎಲ್ಲ ಮನೆಯಲ್ಲೂ ಬಡತನವು ತಾಂಡವ ನರ್ತನ ವಾಡುತ್ತಿತ್ತು. ವಸಂತಗಳು ಕಳೆಯುತ್ತಾ ಹೋದಂತೆ ಆ ಹಳ್ಳಿಯಲ್ಲಿ ಹಲವಾರು ಸುಧಾರಣೆ ಕಾಣ ತೊಡಗಿದವು. ಇದರ ಪರಿಣಾಮ ಊರಿನ ಜನತೆ ಬೇರೆ ಬೇರೆ ಊರುಗಳಿಗೆ ತೆರಳಿ ಸ್ವಂತ ಉದ್ಯಮ ಪ್ರಾರಂಭಿಸಿ ತಕ್ಕಮಟ್ಟಿಗೆ ಬದುಕನ್ನು ಸುಧಾರಿಸಿಕೊಂಡಿದ್ದರು. ಸಾಲ ಕಡ ಮಾಡಿ ಅಕ್ಕ ತಂಗಿಯರ ಮದುವೆ ಮತ್ತು ಮನೆ ಕಟ್ಟಿಕೊಂಡು ಮಾಡಿದ ಸಾಲ ತೀರಿಸಿ ಎಲ್ಲವೂ ಒಂದು ಹಂತಕ್ಕೆ […]
ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಅಧಿಕಾರ ಸ್ವೀಕಾರ
ಗಂಗೊಳ್ಳಿ (ಮೇ, 12) : ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಮೇ 11ರಂದು ಅಧಿಕಾರ ಸ್ವೀಕರಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಭೀಮಾಶಂಕರ್ ಎಸ್. ರವರು ವರ್ಗಾವಣೆಗೊಂಡ ಬಳಿಕ ಖಾಲಿಯಿದ್ದ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ನಂಜಾ ನಾಯ್ಕ ಎನ್. ನಿಯುಕ್ತಿಗೊಂಡಿರುತ್ತಾರೆ. ನೂತನ ಉಪನಿರೀಕ್ಷಕರಾದ ನಂಜಾ ನಾಯ್ಕ ಎನ್. ಅವರಿಗೆ ಪ್ರಭಾರ ಎಸ್. ಐ. ಪ್ರಕಾಶ್ ಸಾಲಿಯಾನ್ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಹೋಟೆಲ್ ಕಾರ್ಮಿಕರ ಗೋಳು ಕೇಳುವವರು ಯಾರು?
ಹೋಟೆಲ್ ಕಾರ್ಮಿಕರೆಂದರೆ ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಹು ಸಂಖ್ಯಾತರಲ್ಲಿ ಪ್ರಮುಖವಾದ ಬಡ ಮತ್ತು ಮಧ್ಯಮ ವರ್ಗದವರ ಒಂದು ಸಮುದಾಯ. ಸಣ್ಣ ಪುಟ್ಟ ಹೋಟೆಲ್ ಕ್ಯಾಂಟೀನ್ ಬೇಕರಿ ಇತ್ಯಾದಿ ವ್ಯಾಪಾರ ಮಾಡಿಕೊಂಡು ತಮ್ಮ ದಿನನಿತ್ಯಕ್ಕೆ ಬೇಕಾಗುವಷ್ಟು ಸಂಪಾದನೆ ಮಾಡಿಕೊಂಡು, ತಮ್ಮ ಸಂಸಾರ ,ತಂದೆ ತಾಯಿಯನ್ನು ಸಾಕಿಕೊಂಡು ಇರುವುದರಲ್ಲಿ ತೃಪ್ತಿಪಟ್ಟುಕೊಂಡು ಅತೀ ಸುಖದಲ್ಲಿ ಇಲ್ಲದಿದ್ದರೂ ಸಹ ತಕ್ಕ ಮಟ್ಟಿನ ಸಂತೋಷ ಜೀವನ ಸಾಗಿಸುತ್ತ ಬದುಕಿನ ದಿನ ದುಡುತ್ತಿರುವ ಈ ವರ್ಗ ಇಂದು […]
ಮಕ್ಕಳಿಗೆ ಚಮಚ ಕೊಡಿ ಸಾಕು… ಚಿನ್ನದ ಚಮಚ ಬೇಡ
ಅಂದು ಗೋಪಾಲರಾಯರ ಪಾಲಿಗೆ ವಿಶೇಷ ದಿನವಾಗಿತ್ತು. ಅಂದು ಅವರಿಗೆ 72 ವರ್ಷವಾಗಿತ್ತು. ಬ್ಯಾಂಕಿಗೆ ಓಡೋಡಿ ಹೋಗಿದ್ದರು. ಅಂದು ಅವರ 25 ವರ್ಷದ ಕನಸು ನನಸಾಗುವುದರಲ್ಲಿತ್ತು. ಆ ದಿನಕ್ಕಾಗಿಯೇ ಅವರು 25 ವರ್ಷ ಕಾದಿದ್ದರು. ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ, ನಿವೃತ್ತಿಯ ನಂತರ ಸಮೀಪದ ದೇವಸ್ಥಾನದಲ್ಲಿ ಮೇಲ್ವಿಚಾರಕನಾಗಿ ತಾನು ಸಂಪಾದಿಸಿದ ಹಣದಲ್ಲಿ ಪ್ರತಿ ತಿಂಗಳು ಒಟ್ಟು 25 ವರ್ಷ ಅಂದರೆ 300 ತಿಂಗಳು 4000 ರೂ. ಜಮೆ ಮಾಡಲು ಅದೆಷ್ಟೊ ಕಷ್ಟ ಪಟ್ಟಿದ್ದರು. […]
ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ : ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ
ಉಡುಪಿ (ಮೇ. 12): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ IEEE ವಿದ್ಯಾರ್ಥಿ ಶಾಖೆಯ ಆಶ್ರಯದಲ್ಲಿ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಗಮನ ಸೆಳೆದ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಆರ್ಥಿಕವಾಗಿ ಪ್ರಾಯೋಜಿಸಲ್ಪಟ್ಟ ವಿವಿಧ ಪ್ರಾಜೆಕ್ಟ್ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಶಾಖೆಯ ಅಧ್ಯಕ್ಷರಾದ ಶ್ರೀ ಅಶುತೋಷ್ ಕುಮಾರ್ ಕಾರ್ಯಕ್ರಮವನ್ನು ಸಂಯೋಜಿಸಿ […]
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಂಸದ ಬಿ. ವೈ. ರಾಘವೇಂದ್ರ ಭೇಟಿ
ಕೊಲ್ಲೂರು (ಮೇ, 10) : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಂಸದ ಬಿ. ವೈ. ರಾಘವೇಂದ್ರ ಮತ್ತು ಅವರ ಧರ್ಮಪತ್ನಿ ತೇಜಸ್ವಿನಿ ರಾಘವೇಂದ್ರ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ, ಮತ್ತು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಇಡೀ ದೇಶಕ್ಕೆ ಆವರಿಸಿಕೊಂಡಿರುವ ಮಹಾಮಾರಿ ಕೊರೊನಾ ನಿವಾರಣೆಗಾಗಿ ಸಂಸದರು ಮೂಕಾಂಬಿಕೆಗೆ ವಿಶೇಷ ಪೂಜೆ […]
ಅಕ್ಕ ಎರಡು ಸೇರು ಅಕ್ಕಿ ಇದ್ರೆ ಕೊಡಿ ಅಕ್ಕ……
ನಾನು ಬೆಂಗಳೂರಿನಿಂದ ಬಂದು ಸುಮಾರು ಹತ್ತು ದಿನ ಆಗಿದೆ. ಮನೆಯ ಮಹಡಿ ಮೇಲಿನ ಒಂದು ಕೋಣೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದೇನೆ. (Covid ಇಲ್ಲ ಆದರೂ ನಮ್ಮ ಜಾಗ್ರತೆ ). ಮನೆಯ ಗೇಟ್ ಹತ್ತಿರ ಒರ್ವ ಮಹಿಳೆಯ ಕೂಗು ಕೇಳಿಸಿತು. ನಮ್ಮ ಮನೆಯ ಎರಡು ನಾಯಿ ಬೌ ಬೌ ಎಂದು ಕೂಗುತ್ತಾ ಆಕೆಯ ಮೇಲೆ ದಾಳಿ ಮಾಡಲು ಮುಂದಾದವು. ನಾನು ಜೋರಾಗಿ ನಾಯಿಗಳನ್ನು ವಾಪಸು ಕರೆದೆ… ಅವು ಸುಮ್ಮನಾದವು.. ಆ ತಾಯಿಯ […]
ಮರಳಿ ಬಂತು ಲಾಕಡೌನ್
ಕರೋನ ಎನ್ನುವ ಮಹಾಮಾರಿ ಕಾಯಿಲೆ ಬಂದು ಸರಿಸುಮಾರು ಎರೆಡುವರೆ ವರ್ಷಗಳೆ ಕಳೆದಿದೆ.ಆದರೆ ಅದರ ವಿರುದ್ದ ಹೋರಾಟ ಮಾಡಿ ಜಯಗಳಿಸಲು ನಮಗೆ ಸಾಧ್ಯವಾದಿರುವುದು ವಿಪರ್ಯಾಸವೇ ಸರಿ.ಅದಕ್ಕೆ ಕಾರಣಗಳು ಹಲವು … ಜನತೆಯ ನಿರ್ಲಕ್ಷ್ಯ, ಸರ್ಕಾರದ ಅವೈಜ್ಞಾನಿಕ ಕಠಿಣ ನಿರ್ಧಾರ ಗಳು ಇತ್ಯಾದಿ.ಕರೋನ ನಿಯಂತ್ರಿಸುವಲ್ಲಿ ಸರ್ಕಾರ ಮೊದಲ ಅಲೆಯಲ್ಲ ಎಡವಿದೆ ಎನ್ನುವುದರಲ್ಲಿ ಎರೆಡು ಮಾತಿಲ್ಲ .! ಎರೆಡನೆ ಅಲೆ ಬರುವ ಮುನ್ನ ಬೇಕಾದಷ್ಟು ಸಮಯಾವಕಾಶ ಇದ್ದರೂ ಅದನ್ನು ಸದುಪಯೋಗ ಮಾಡಿಕೊಳ್ಳದೆ ಹಲವಾರು ಸಾವು […]










