ಕುಂದಾಪುರ (ಮಾ. 9) : ವಿಧ್ಯಾರ್ಥಿಗಳು ಸಮಾಜದ ಆಗು-ಹೋಗುಗಳ ಕುರಿತು ಸೂಕ್ಷ್ಮವಾಗಿ ಗಮನಿಸುವುದರ ಜತೆಗೆ ವಿಧ್ಯಾರ್ಥಿ ದೆಸೆಯಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನ ವಿವಿಧ ವೇದಿಕೆಗಳ ಕ್ರಿಯಾಚಟುವಟಿಕೆಗಳಲ್ಲಿ ತಮ್ಮನ್ನು ಸೃಜನಶೀಲವಾಗಿ ತೊಡಗಿಸಿಕೊಂಡು, ವಿಧ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಸತ್ವಜೆಗಳಾಗಬೇಕೆಂದು ಕೊಲ್ಲೂರು ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅರುಣ್ ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳನ್ನು ಮಾರ್ಚ್ 05 ರಂದು ಉದ್ಘಾಟಿಸಿ […]
Author: KundaVahini Editor
ಇಂದುಧರ ದೇವಸ್ಥಾನ ಗಂಗೊಳ್ಳಿ : ಅಮೃತ ಮಹೋತ್ಸವ ಹಾಗೂ ನೂತನ ಸಭಾಭವನ ಉದ್ಘಾಟನೆ
ಗಂಗೊಳ್ಳಿ (ಮಾ.8): ಗಂಗೊಳ್ಳಿಯಲ್ಲಿ ಕಳೆದ 75 ವರ್ಷಗಳಿಂದ ಧರ್ಮ ಜಾಗ್ರತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುತ್ತಿರುವ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನ ಕುಂದಾಪುರ ಪರಿಸರದ ಪ್ರಮುಖ ಭಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ಸರಕಾರದ ಹಾಗೂಇತರ ಅನುದಾನವನ್ನು ಬಳಸಿಕೊಂಡು ವ್ಯವಸ್ಥಿತವಾದ ಸಭಾಭವನವನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದು ಬೈಂದೂರಿನ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಅವರು ಮಾರ್ಚ್ 7 ರ ರವಿವಾರ ಶ್ರೀ ಇಂದುಧರ ದೇವಸ್ಥಾನ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ವಿಶ್ವ ಮಹಿಳಾ ದಿನಾಚರಣೆ – ಸಾಧಕ ಮಹಿಳೆಯರಿಗೆ ಸನ್ಮಾನ
ಕುಂದಾಪುರ (ಮಾ. 8) ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ಜೇಸಿರೇಟ್ ವಿಂಗ್ ಆಫ್ ಜೆಸಿಐ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಡಾ.ಶ್ರಾವ್ಯ (ಸಮಾಜಸೇವೆ), ಮಮತಾ ಆರ್. ಶೆಟ್ಟಿ,ಹದ್ದೂರು(ಕ್ರಷಿ) ಲಿರಾ ಜೂಲಿಯೆಟ್ (ವ್ಯವಹಾರಿಕ), ಡಾ.ಸರೋಜಿನಿ (ಶಿಕ್ಷಣ) ಕಾಲೇಜಿನ ವಿದ್ಯಾರ್ಥಿನಿಯರಾದ ನಿವೇದಿತ (ಕ್ರೀಡೆ) ಶುಭಲಕ್ಷ್ಮಿ (ಶಿಕ್ಷಣ) ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. […]
ಬಿಡುಗಡೆಗೆ ಸಜ್ಜಾಗುತ್ತಿದೆ ಕುಂದಗನ್ನಡದ ಅಲ್ಬಂ ಹಾಡು “ಹೇಳ್ವರಿಲ್ಲ ಕೇಂಬರಿಲ್ಲ”
ಹಲವು ಅಲ್ಬಂ ಹಾಡು, ಕಿರುಚಿತ್ರ ನಿರ್ಮಿಸಿ ಕರಾವಳಿ ಭಾಗದಲ್ಲಿ ಹೆಸರು ಮಾಡಿರುವ ಅಶ್ನಿಗ್ಧ ಕ್ರಿಯೇಶನ್ಸ್ ತಂಡದ ಮುಂದಿನ ಪ್ರಯತ್ನ ಹೇಳ್ವರಿಲ್ಲ ಕೇಂಬರಿಲ್ಲ. ಈ ಹಾಡಿಗೆ ಸಂಗೀತ ನಿರ್ದೇಶಿಸಿ, ಬರೆದು ಹಾಡಿರುವುದು ಕರಾವಳಿಯ ಹೆಸರಾಂತ ಗಾಯಕ ಅಕ್ಷಯ್ ಬಡಾಮನೆ. ಹಾಡಿನ ಸಂಪೂರ್ಣ ನಿರ್ದೇಶನದ ಹೊಣೆ ಹೊತ್ತವರು ರಿಶಿತ್ ಶೆಟ್ಟಿ ಹಾಗೂ ರಾಘು ಶಿರೂರು. ಹಾಡಿನ ಸಂಪೂರ್ಣ ಚಿತ್ರೀಕರಣ ಗಂಗೊಳ್ಳಿಯ ಕಡಲ ತೀರದಲ್ಲಿ ಮುಗಿಸಿದ್ದು, ಚಿತ್ರೀಕರಣದ ಹೊಣೆ ಹೊತ್ತವರು ಆವರಿಸಿದೆ ಹಾಡಿನ ಖ್ಯಾತೀಯ […]
ಮಾರ್ಚ್, 9 ರಂದು ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ
ಉಡುಪಿ (ಮಾ.7): ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ “ಜ್ಞಾನವಾಹಿನಿ” ಹಾಗೂ ಉಡುಪಿ ವಲಯ ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ಇದೇ ಮಾರ್ಚ್ 9ರಂದು ಪರ್ಕಳ ಶ್ರೀ ಸುರಕ್ಷಾ ಸಭಾ ಭವನದಲ್ಲಿ ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ಯವರ ದಿವ್ಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿ ಅಭ್ಯಾಗತರಾಗಿ […]
ಸ್ವಾವಲಂಬಿ ಬದುಕಿಗೆ ಹಿಡಿದ ಕೈಗನ್ನಡಿ – ದೈಹಿಕ ನ್ಯೂನತೆಗೆ ಸವಾಲೆಸೆದ ದಿಟ್ಟ ಮಹಿಳೆ ಲಲಿತಾ ಕೊರವಾಡಿ
ಆಗದು ಎಂದು… ಕೈಲಾಗದು ಎಂದು … ಕೈಕಟ್ಟಿ ಕುಳಿತರೇ… ಸಾಗದು ಕೆಲಸವು ಮುಂದೆ…. ಮನಸೊಂದಿದ್ದರೆ ಮಾರ್ಗವು ಉಂಟು… ಕೆಚ್ಚೆದೆ ಇರಬೇಕೆಂದು …ಕೆಚ್ಚೆದೆ ಇರಬೇಕೆಂದು… ಈ ಮಾತನ್ನು ಅಕ್ಷರಶಃ ಪಾಲಿಸಿ ಶಾರೀರಿಕ ನ್ಯೂನತೆಗೆ ಸವಾಲೆಸೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ದಿಟ್ಟ ಮಹಿಳೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರವಾಡಿ ಗ್ರಾಮದ ಲಲಿತಾ ಕೊರವಾಡಿ.ಚಿಕ್ಕವರಿರುವಾಗ ಅನಿರೀಕ್ಷಿತ ಜ್ವರದಿಂದ ಬಳಲುತ್ತಿದ್ದ ಇವರು ಕ್ರಮೇಣ ಕೈ- ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಯಲ್ಲೇ ಇರುವಂತಾಯಿತು. ದುರದ್ರಷ್ಟಷಾತ್ ಬಾಲ್ಯದಲ್ಲಿಯೇ […]
ಶಿಕ್ಷಣದಿಂದಲೇ ಸಮಾಜದ ಪರಿವರ್ತನೆ ಸಾಧ್ಯ – ಶಾಸಕ ಬಿ .ಎಂ. ಸುಕುಮಾರ್ ಶೆಟ್ಟಿ
ಶಿಕ್ಷಣ ಪ್ರತಿಯೊಂದು ಮಗುವಿಗೂ ಅವಶ್ಯಕ. ಶಿಕ್ಷಣ ಎಂದೆಂದಿಗೂ ನನ್ನ ಮೊದಲ ಆದ್ಯತೆ, ಸದೃಡ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಮೂಲ ಅಡಿಪಾಯ ಎಂದು ಬೈಂದೂರಿನ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಹೇಳಿದರು.
ಹೆಣ್ಣು
ಹೆಣ್ಣು ಸಂಸಾರದ ಕಣ್ಣು ಹೆಣ್ಣುಸಂಸ್ಕಾರದ ಹೊನ್ನು ಹೆಣ್ಣುಮಣ್ಣಿಗೆ ಉಪಮಾನ ಹೆಣ್ಣುಮನೆಗೆ ಸಮಾಧಾನ ಹೆಣ್ಣುಶಕ್ತಿಗೆ ಉಪಮೆಯ ಹೆಣ್ಣುಭಕ್ತಿಗೆ ಪ್ರಮೇಯ ಹೆಣ್ಣುಪುಷ್ಟಿಯ ಪ್ರಮಾಣ ಹೆಣ್ಣುಸೃಷ್ಟಿಯ ನಿರ್ಮಾಣ ಹೆಣ್ಣುಮುಕ್ತಿಯ ನಿರ್ವಾಣ ಹೆಣ್ಣುಯುಕ್ತಿಯ ವ್ಯವಧಾನ ಹೆಣ್ಣುಹೆಣ್ಣು, ಸ್ವಾಭಿಮಾನ ಹೆಣ್ಣುಹೆಣ್ಣು, ಅಭಿಮಾನ ಹೆಣ್ಣು. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಯಡ್ತರೆ ಮೊಗವೀರ ಗರಡಿ ಕಿರು ಸೇತುವೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ
ಬೈಂದೂರು (ಮಾ.5) ಯಡ್ತರೆ ಮೊಗವೀರ ಗರಡಿಯು ಮೊಗವೀರ ಸಮಾಜ ಬಾಂಧವರ ಅತ್ಯಂತ ಪೂಜನೀಯ ಮತ್ತು ಪ್ರತಿಷ್ಠಿತ ಗರಡಿಗಳಲ್ಲಿ ಒಂದಾಗಿದೆ. ಈ ಗರಡಿಗೆ ಕಳೆದ ಬಾರಿ ಭೇಟಿ ನೀಡಿದಾಗ ಸುಗಮ ಸಂಚಾರಕ್ಕೆ ಕಿರು ಸೇತುವೆಯ ಅವಶ್ಯಕತೆ ಇದೆ ಎನ್ನುವುದಾಗಿ ನನಗೆ ಬೇಡಿಕೆಯನ್ನು ಈ ಭಾಗದ ಜನತೆ ಸಲ್ಲಿಸಿದ್ದರು. ಅದನ್ನು ಗಮನದಲ್ಲಿ ಇರಿಸಿಕೊಂಡು ಈ ಬಾರಿ ಕಿಂಡಿ ಅಣೆಕಟ್ಟು ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದರು. ಅವರು ಯಡ್ತರೆ […]
ಶ್ರೀ ಧವಲಾ ಕಾಲೇಜು ಮೂಡಬಿದ್ರೆ : ನಾಯಕತ್ವ ತರಬೇತಿ ಶಿಬಿರ
ಉಡುಪಿ (ಮಾ.6) ಶ್ರೀ ಧವಲಾ ಕಾಲೇಜಿನಲ್ಲಿ ವಿಧ್ಯಾರ್ಥಿ ನಾಯಕರಿಗೆ ಒಂದು ದಿನದ ನಾಯಕತ್ವ ತರಬೇತಿ ಶಿಬಿರವು ಮಾರ್ಚ್ 4 ರಂದು ಜರುಗಿತು. ಈ ಶಿಬಿರವನ್ನು ಕಾಲೇಜಿನ ಹಳೆ ವಿಧ್ಯಾರ್ಥಿ ಹಾಗೂ ಶ್ರೀ ನವದುರ್ಗ, ಇಂಡಸ್ಟ್ರೀಸ್ ಸಚ್ಚರಿಪೇಟೆ ಇದರ ಮಾಲಕರಾದ ಶ್ರೀಯುತ ಶ್ರೀಕಾಂತ್ ಕಾಮತ್ರವರು ಉದ್ಘಾಟಿಸಿದರು. ವಿಧ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತಿಳಿದುಕೊಂಡರೆ ಮುಂದೆ ದೇಶದ ನಾಯಕರಾಗುವ ಸೌಭಾಗ್ಯವಂತರಾಗಬಹುದು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಮಾತನಾಡಿದರು. ಶಿಬಿರದ […]










