ಕಣ್ಣೀರು ಚೆಲ್ಲಬೇಡಮೊಳಕೆಯೊಂದು ನಾಳೆಯಿಂದ ನಿನ್ನಕಣ್ಣೀರನ್ನೇ ಬಯಸೀತುಕಣ್ಣೀರು ಚೆಲ್ಲಬೇಡಅದನ್ನೇ ಹೀರಿದ ನೆಲ ದಿನ ಕಳೆದಂತೆಬಂಜರು ಭೂಮಿಯಾದೀತುಸಾಧ್ಯವಾದರೆ ನೀನೊಮ್ಮೆ ನಕ್ಕುಬಿಡುದ್ವೇಷದ ಬೀಜ ಬಿತ್ತಿದವರೆಲ್ಲ ಒಳಗೊಳಗೇಕುದ್ದು ಬೆಂದು ಹೋಗಲಿಇಲ್ಲವಾದರೆ ಅಂತೆಯೇ ಸುಮ್ಮನಿದ್ದುಬಿಡುನಿನ್ನ ಕೆಣಕಿದವರಿಗೆಲ್ಲ ನೀನೊಂದು ಬಂಡೆಯೆಂದುಗೊತ್ತಾಗಿ ಸುಮ್ಮನಾಗಿಹೋಗಲಿಶಸ್ತ್ರ ಹೋರಾಟ ಗೊತ್ತಿರಲೇ ಬೇಕಾಗಿಲ್ಲ ಗೆಲ್ಲಲುಸುಮ್ಮನೆ ಬಂದೂಕನ್ನೆತ್ತಿಕೋ, ಗುರಿಯಿಡುಕುದುರೆಯ ಮೇಲೆ ಬೆರಳಿರಲಿಎದುರಿನವನು ಖಡ್ಗ ಕೆಳಗಿಡಬಹುದು ಅಥವಾಬಿಳಿ ಪತಾಕೆ ಹಾರಿಸಿಯಾನುಸುಮ್ಮನೆ ಬಂದೂಕಿನ ಕುದುರೆಯನ್ನೆಳೆದು ಬಿಡುನಳಿಕೆಯಿಂದ ಕೆಂಗುಲಾಬಿಯೇ ಚಿಮ್ಮಲಿಸೋತರೂ ಜಯ ನಿನ್ನದಾಗಬಹುದುಬಾನಿಂದ ಹನಿಯೊಂದು ಚೆಲ್ಲಬಹುದುಮೊಳಕೆ ಚಿಗುರಲೂ ಬಹುದು ಕಿಗ್ಗಾಲು ಜಿ. […]
Category: ಕವನ/ಹನಿಗವನ
ಕನಸುಗಳು ಮಾರಾಟವಾಗಿದೆ…!
ಕನಸುಗಳು ಮಾರಾಟವಾಗಿದೆ…! ಏಳು ಸುತ್ತಿನ ಕೋಟೆಯಲಿ ….ಕನಸುಗಳು ಇದೆ ನೂರಾರುಸಾಗುತಿದೆ ಕಾವಲುದಾರಿಯಲ್ಲಿ ಗುರಿ, ಗುರು ಮರೆತು ಬೇಕಾಗಿದ್ದಾರೆ… ಕನಸುಗಳಿಗೆ ಬಣ್ಣ ಹಚ್ಚುವವರು ಬೇಕು… ಆಸೆಗಳಿಗೆ ದಾರಿ ತೋರಿಸುವವರುಕನಸು ಮಾರಿ ಹೊರಟಿದೆ ಜೀವಗಳುಬಿಳಿ ಬಟ್ಟೆ ಹೊದ್ದು, ಬಣ್ಣದ ಬಟ್ಟೆ ಮರೆತು. ಸಾವುವೆಂಬ ಕಠಿಣ ಶಬ್ದ ಮೆಲ್ಲನೆ ಹೇಳಿ ಸೂಚನೆ ಕೊಡದೆ ಹೊರಟು ನಿಂತಿದ್ದಾರೆಯಾರಿಗೂ ಹೇಳದೇ…. ಏನನು ಕೇಳದೆ ಯಾರನು ಕಾಯದೆ… ಬಾರದ ಲೋಕದಡೆ …ಕನಸು ಹೊತ್ತವನ ಪ್ರಯಾಣ…! ಈಶ್ವರ ಸಿ ನಾವುಂದ
ಕಾಣದ ಜೀವಿಯ ಕಣ್ಣಾಮುಚ್ಚಾಲೆ
ಕಾಣದ ಜೀವಿಯ ಕಣ್ಣಾಮುಚ್ಚಾಲೆ ಭಯವನು ಹೂಡಿ ಆವರಿಸಿಹುದು ಕತ್ತಲೆಅಪರಿಚಿತರ ಅಪರಾಧಕೆ ಬಲಿಯಾಗಿದೆ ಇಡೀ ವಿಶ್ವವೇ!ನಾಳೆಗೆಂದೂ ಕೂಡಿಟ್ಟ ಕನಸೆಲ್ಲಾ ಕುಸಿದು ಮಣ್ಣಾಯಿತೇ?ಬಿಡದ ಅನಿವಾರ್ಯತೆ ಹುಡುಕುತಿದೆ ಪರಿಹಾರಸ್ವಾಭಿಮಾನ ನಲುಗಿ ಕೈಯೊಡ್ಡುತಿರುವಾಗ, ಆಗೋ ತಿರಸ್ಕಾರಆ ಅಸಹಾಯಕತೆಯಲ್ಲೂ ಸೋತು ಬಡತನ ಮತ್ತಷ್ಟು ಅನುಭವಿಸುತಿದೆ ಬಹಿಷ್ಕಾರದಾರಿ ಕಂಗೆಟ್ಟು ದಾರಿದೀಪವನು ಹುಡುಕಾಡುತಿದೆ.ಬಡವಾಯ್ತು ಬದುಕುಆಶಾವಾದವಷ್ಟೇ ಇನ್ನುಳಿದ ಬೆಳಕು-ಕೊರೊನಾ ಕಥೆ. -ಅರ್ಚನಾ .ಆರ್. ಕುಂದಾಪುರ
“ಸೋಲದಿರು ಎಂದೆಂದೂ”
“ಸೋಲದಿರು ಎಂದೆಂದೂ” ಓ ಮನಸೇ, ನೀ ವಿಶ್ವಬಂಧುಸಾಧನೆಯ ಪಣವ ಸ್ವೀಕರಿಸು ಇಂದು.ಬಾನೇ ಬೀಳಲಿ, ಭುವಿಯೇ ಸೀಳಲಿಸೋಲನ್ನು ಕಂಡು ಕುಸಿಯದಿರು ಎಂದು.ಧೈರ್ಯವ ಬಿತ್ತಿ, ಸಹನೆಯ ಹೊತ್ತಿಸಾಗುತಿರು ಮುಂದೆಂದು, ಸಾಗುತಿರು ಮುಂದೆಂದು.ನೋವಿದ್ದರೆ ಇಂದು, ನಲಿವಿರುವುದು ಮುಂದುನುಗ್ಗುತಿರು ನುಗ್ಗುತಿರು, ಸೋಲದಿರು ಎಂದೆಂದೂ. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಎಲ್ಲಿರುವೆ ಮನವ ಕಾಡುವ ರೂಪಸಿಯೇ
ದೂರ ಇದ್ದರೂ, ಹತ್ತಿರವೇ ಇದ್ದಂತೆಅನಿಸುತಿದೆ ಮನದೊಳಗೆ…ನೀ ಮನದೊಳಗೆ…. ನೀ ಮರೆಯಲಿ…ಎಲ್ಲೋ ನಿಂತು ನೋಡುತ್ತಿರುವಂತೆಎಲ್ಲಿರುವೆ ನೀನು …..? ಮನದ ಮೂಲೆಯಲಿಎಲ್ಲೋ ಸುಪ್ತವಾಗಿ ಕುಳಿತ ಸವಿ ನೆನಪುಗಳುಗೂಡು ಕಟ್ಟಿ ಹಾರಲು ಕಾಯುತಿದೆಎಲ್ಲಿರುವೆ ನೀನು …..? ಬಯಕೆಗಳ ಭಾಗ್ಯವಿಧಾತೆಬಾಳಿನ ಪ್ರೇಮದೇವತೆಯೇನನ್ನ ಕನಸುಗಳ ಕನಸುಗಾರ್ತಿಯೇಎಲ್ಲಿರುವೆ ನೀನು……..? ನೆನಪಾಗಿ ಕಾಡುವ ಭಾವನಾಮನಸಿನ ಕದ ತಟ್ಟುವ ಕವನಮನದೊಳಗೆ ನೆನಪುಗಳ ಕದನಎಲ್ಲಿರುವೆ ನೀನು, ….? ರೂಪಸಿಯೇ …ಕನಸುಗಾರ್ತಿಯೇಕವನದ ಒಡತಿಯೇಕಾಮನೆಯು ಹೆಪ್ಪುಗಟ್ಟಿಲು ಕಾಯುತಿದೆ ನಿನಗಾಗಿಎಲ್ಲಿರುವೆ ನೀನು….? ಮನವ ಕಾಡುವ ರೂಪಸಿಯೇ……ಎಲ್ಲಿರುವೆ ನೀನು….? […]
ಪ್ರಾಸ – ತ್ರಾಸಗಳ ಮಧ್ಯೆ
ಎಳೆಯೊಂದು ಸಿಕ್ಕಿತುಬರೆಯುವ ತವಕದಲಿದ್ದೆಮಳೆ ಹೊರಗೆ ಸುರಿಯುತಲಿತ್ತು ಶಬ್ದಗಳ ಕದನದಲ್ಲಿ ಎಳೆ ಕಳೆದು ಹೋಗುವುದರಲ್ಲಿತ್ತುಮತ್ತೆ ಎಳೆಯನ್ನು ಒಳಗೆ ಕರೆ ತಂದೆ ಯಾಕೆಂದರೆ ಹೊರಗೆ ಮಳೆ ತುಂಬಾ ಇತ್ತು ಪ್ರಾಸ -ತ್ರಾಸಗಳ ನಡುವೆ ಗೊಂದಲ ಇತ್ತು ! ಕವನಕೆ ವಸ್ತುವಾಗುವ ಎಳೆ ಮಾಯವಾಗಿತ್ತುನನ್ನ ಒಳಗೆ ಒಂದು ಚಂಚಲತೆ ಇತ್ತು ಅದಕ್ಕೊಂದು ರೂಪ ಕೊಡಲಾಗದ ನೋವಿತ್ತು ಕವನ ಹುಟ್ಟದಿರುವ ಆಕ್ರೋಶ ಇತ್ತು . ಅ ಎಳೆಗೂ ನನ್ನ ಮೇಲೆ ಅಸಹನೆ ಇತ್ತು ಏಕೆಂದರೆ ರಸಿಕತೆ […]
ಬಾ ಮಳೆಯೇ…, ಬಾ…
ಬಾ ಮಳೆಯೇ…, ಬಾಭಾನು ಅಳುತಿದೆಕತ್ತಲಗೂಡಿನೊಳಗೆಕರಿಮೋಡಗಳ ತಿಕ್ಕಾಟಕೆ ಸಿಕ್ಕಿಕಣ್ಣೀರ ಧಾರೆಗಳು ಮಳೆಯಾಗಿ ಭೂಮಿಗೆ ಸೇರುವ ತವಕದಲಿಗಗನದಲಿ ಮಳೆ ಮೋಡಗಳ ಕದನಭೂಮಿಗೆ ಮಳೆಯ ತಂಪಾದ ನರ್ತನಯಾರಿಗೋ ನೋವಿನ ಅನುಭವ ಇನ್ನೂ ಯಾರಿಗೋ ಸುಖದ ತಾಂಡವಹಾಗಂತ ನೀ ಸುರಿಯದಿರ ಬೇಡನೀ ಚೆಲ್ಲಿದ ಹನಿಯ ಅಮೃತಧಾರೆಗಳುಕಾದ ಭೂಮಿಗೆ ಅದು ಪ್ರೀತಿ ಸಿಂಚನ ನಿರಂತರ ನಿನ್ನ ಪ್ರೇಮ ಹನಿ ಸುರಿಸುತ್ತಿರುಭೂಮಿಯ ಒಡಲು ಒಣಗಿದೆ ನಿನ್ನ ನಿರೀಕ್ಷೆಯಲಿ ಸಾಕು ಪರೀಕ್ಷೆ ಸುರಿಸಿ ಬೀಡು ಇಳೆಗೆ ಮಳೆಯಾಗಿನಿನಗೆ ನೋವು ಆದರೂ […]
ಕರಿನೆರಳು
ಇಂದು-ನಾಳೆ ಹೇಗೋಹಾಗೆ ದಿನ, ವಾರ, ತಿಂಗಳುಗಳುವರ್ಷಗಳು ಉರುಳುತ್ತಿವೆ ಗೊತ್ತೇ ಆಗದೆಬದುಕು ಸಹಜ ಅ ಸಹಜಗಳ ಇಂದು, ನಾಳೆಗಳ ಮಧ್ಯೆಈಗ ಎಲ್ಲಾ ಭರವಸೆಗಳ ಮೇಲೆ ಕಟ್ಟಿದ ಬದುಕುಗಾಜಿನ ಮನೆಯಂತಾಗಿದೆಕಾಯುತ್ತಿದ್ದೇವೆ ನಾವುಗಳು ಸರತಿಸಾಲಿನಲ್ಲಿ ಇಂದು, ನಾಳೆಯೂ ಮುಂದೆ ಏನೇನೊ ಎಂದುಮುಂದೆ ಹೋಗುವವರಿಗೆ ದಾರಿ ಮಾಡಿ ಕೊಡುತ್ತಾ ಕಂಡು ಕಾಣದ ಎಂದೂ ಮರೆಯದ ಈ ಹೆಮ್ಮಾರಿ ಕಾಯಿಲೆಗೆ ಶರಣಾಗಿಕೆಲವರ ಜೀವ ಪಂಚ ಭೂತಗಳಲ್ಲಿ ಲೀನವಾಗಿದೆಹೇಳದೆ ಕೇಳದೆ ಕನಸು ಮಾರಿ ಹೊರಟು ಬಿಟ್ಟಿದ್ದಾರೆ ಹೊಸ ಲೋಕ […]
ಅಮ್ಮ
ಹಸಿದು ಬಂದರೆ ತುತ್ತು ಕೊಡುವವಳುಬಾಯಾರಿ ಬಂದರೆ ನೀರು ನೀಡುವವಳುಅತ್ತು ಬಂದರೆ ಮಮತೆಯ ಮಳೆ ಗೈಯುವವಳು.. ನಿರ್ಸಗದ ಕೊಡುಗೆ ಆವಳುಸಹನೆಯ ಮೂರ್ತಿ ಅವಳುತ್ಯಾಗದ ಹೃದಯ ಆವಳು ಮಮತೆಯ ಗಣಿ ಆವಳುಆಸರೆಯ ಬಳ್ಳಿ ಅವಳುಪ್ರೀತಿಯ ಹೆಮ್ಮರ ಅವಳು ಕನಸಿನ ಶುರು ಆವಳುವಿದ್ಯೆಯ ಮೂಲ ಆವಳುಪ್ರೇಮದ ಸೆಲೆ ಆವಳು ಆಕಾಶದಷ್ಟು ಎತ್ತರ ಅವಳುಭೂಮಿಯಷ್ಟೆ ವಿಶಾಲ ಅವಳುಪ್ರಕೃತಿಯಷ್ಟೆ ಶಾಂತ ಅವಳು ತರ್ಕಕ್ಕೂ ಎಟುಕದ ಮನಸ್ಸಿನವಳುಮನು ಕುಲದ ಉಸಿರು ಅವಳುಮಗುವಿನ ಮೆಲುನಿಡಿಗೆ ಸಿಂಚಿನ ಅವಳು ಈಶ್ವರ. ಸಿ. […]
ತಾಯಿ ಎಂಬ ಮುಗಿಲು (ವಿಶ್ವ ತಾಯಂದಿರ ದಿನದ ಈ ಸಂದರ್ಭದಲ್ಲಿ)
ತಾಯೇ ನಿನದು ಪೊರೆವ ಮಡಿಲುಹಿತದಿ ಒರಗಿಕೊಳ್ಳುವೆಪ್ರೀತಿ ಮಳೆಯ ಹನಿಸೋ ಮುಗಿಲುತಂಪನುಣುತ ತಣಿಯುವೆ ಕೊನೆಯಿರದ ವಾತ್ಸಲ್ಯ ಕಡಲುಪ್ರತೀ ಹನಿಯದು ಅಮೃತನಿನ್ನ ಪ್ರೇಮದ ಜೀವಜಲವನೆಸವಿದು ಬದುಕುವೆನವಿರತ ಬೆಚ್ಚನೆ ಭಾವ ನೀ ಜೊತೆಗಿರಲುನಿನ್ನ ಸನಿಹವು ಅದ್ಭುತಅರಿವ ತೆರೆಯುತ ಪ್ರತೀ ಕ್ಷಣದಲುಬೆರಗಿನೊಳಿಡುವೆ ಸಂತತ ನೋವಿನಲ್ಲೂ ನಗುವ ಧರಿಸಿಹರುಷ ಹಂಚಿ ಉಣಿಸುವೆಕೋಪ ತಾಪ ಎರಗಿ ಬರಲಿಮಮತೆಯಲ್ಲೇ ಮಣಿಸುವೆ ನಿನ್ನ ರಕ್ಷೆಯು ಎದುರು ನಿಲಲುಜಗಕೆ ಜಗವೇ ಮೌನವುಕಾಡದೆಂದಿಗೂ ಭಯ – ದಿಗಿಲುನಿನ್ನ ಜೊತೆಯಿರೆ ಸೌಖ್ಯವು ನೀನೊಂದು ಮುಗಿಯದ ಕವಿತೆನನ್ನೆದೆಯೊಳಗಿನ […]










