ಕರೋನಾ ಲಾಕ್ಡೌನಿನ ಕಳೆದೆರಡು ಅವಧಿಯಲ್ಲಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು, ಸರಕಾರದ ಪ್ಯಾಕೇಜುಗಳು ಸರಿಯಾಗಿ ಸಿಗದೆ ಬದುಕು ಸಾಗಿಸಿದ ಮೀನುಗಾರರು ಮತ್ತೆ ಕಡಲಿಗೆ ಇಳಿಯಲು ಸಜ್ಜಾಗುತ್ತಿದ್ದಾರೆ. ಕರೋನಾ ಮೂರನೆ ಅಲೆಯ ಭಯದ ನಡುವೆ ಹೊಟ್ಟೆಪಾಡಿಗಾಗಿ ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸರ್ಕಾರದ ನಿಯಮದಂತೆ ಮೀನು ಹಿಡಿಯಲು ಹೊರಡುತ್ತಿರುವ ಬಹುತೇಕ ಮೀನುಗಾರರಿಗೆ ಕರೋನಾ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಕರೋನಾ ಲಸಿಕಾಕರಣ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಜೊತೆಗೆ ಸರ್ಕಾರ ಮೀನುಗಾರರನ್ನು ಕರೋನ ಲಸಿಕೆಯ […]
Category: ಲೇಖನ
ಶ್ರೀ ಗೋವಿಂದ ಬಾಬು ಪೂಜಾರಿಯವರು ಬಡ ಕುಟುಂಬಗಳಿಗೆ ನಾಲ್ಕನೇ ಮನೆ ನಿರ್ಮಿಸಿ, ಹಸ್ತಾಂತರಿಸುವ ಶುಭ ಘಳಿಗೆಯಲ್ಲಿ ….
ತನ್ನ ದುಡಿಮೆಯ ಒಂದು ಭಾಗವನ್ನು ಅಶಕ್ತರ ಪಾಲಿಗೆ ಮೀಸಲಿಟ್ಟು, ನಿರಂತರವಾಗಿ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ್ನು ಹುಟ್ಟುಹಾಕಿ, ಆ ಮೂಲಕ ಕಡು ಬಡವರ ಬದುಕಿನಲ್ಲಿ ಆಶ್ರಯದಾತ, ಅನ್ನದಾತ ಮತ್ತು ಆರೋಗ್ಯದಾತರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಆಶ್ರಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಹಿನ್ನೆಲೆಯಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು […]
ಸೋಶಿಯಲ್ ಮೀಡಿಯಾದ ಒಳ-ಹೊರಗು
ಬೆಂಕಿಯನ್ನು ಮನೆಯೊಳಗೆ ಚಿಕ್ಕದಾಗಿ ಹಚ್ಚಿಟ್ಟರೆ ದೀಪವಾಗಿ ಮನೆ ಬೆಳಗುತ್ತದೆ. ಅದೇ ಮನೆಗೆ ಹಚ್ಚಿದರೆ ಮನೆಯನ್ನೇ ಸುಟ್ಟು ನಾಶ ಮಾಡುತ್ತದೆ. ಇಡೀ ಜಗತ್ತನ್ನೇ ತನ್ನತ್ತ ಸೆಳೆಯುತ್ತ ,ವಿಷಯ ,ವಿಚಾರ ಹಾಗೂ ಭಾವನೆಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಬಹುಬೇಗನೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಫೇಸ್ ಬುಕ್ ಹಾಗೂ ಇತರ ಸೋಶಿಯಲ್ ಮೀಡಿಯಾಗಳು ಇಂದು ಇಡೀ ಜಗತ್ತನ್ನೇ ಆವರಿಸಿದೆ. ಆದರೆ ಈ ಸೋಶಿಯಲ್ ಮೀಡಿಯಾಗಳನ್ನು ನಾವು ದೀಪದಂತೆ ನಾವು ಆರೋಗ್ಯಕರವಾಗಿ ಬಳಸುವುದು ಉತ್ತಮ. ಇಲ್ಲವಾದರೆ ಇದು […]
ಬಕ್ರೀದ್ ಹಬ್ಬದ ಆಚರಣೆಯ ಹಿನ್ನೆಲೆ
ಮುಸ್ಲಿಂ ಸಮುದಾಯ ಆಚರಿಸುವ ಹಬ್ಬಗಳಲ್ಲಿ ರಂಜಾನ್ ಮತ್ತು ಬಕ್ರೀದ್ ಪ್ರಮುಖವಾದುದು. ರಂಜಾನ್, ಮುಸ್ಲಿಂ ಸಮುದಾಯ ತಮ್ಮ ಬದುಕಿನಲ್ಲಿ ಅನುಸರಿಸಬೇಕಾದ 5 ಪ್ರಮುಖ ತತ್ವಗಳಲ್ಲಿ ಒಂದಾದರೆ, ಬಕ್ರೀದ್ ತ್ಯಾಗದ ಪ್ರತೀಕವಾಗಿ ಆಚರಿಸಲಾಗುತ್ತದೆ. ಬಕ್ರೀದ್ ನ್ನು ಈದ್-ಉಲ್-ಅದಾ ಎಂದು ಸಹ ಕರೆಯುತ್ತಾರೆ. ಈದ್-ಉಲ್-ಅದಾ(ಬಕ್ರೀದ್) ಇದರ ಹಿಂದೆ ಒಂದು ರೋಚಕ ಇತಿಹಾಸವೇ ಇದೆ. ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹು ಯಾರನ್ನು ಹೆಚ್ಚು ಪ್ರೀತಿಸುತ್ತಾನೋ ಅಂತಹ ವ್ಯಕ್ತಿಗಳಿಗೆ ಕಷ್ಟ ಕೊಟ್ಟು ಅವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾನೆ […]
ಸಂಬಂಧ
ಮಾನವ ಸಂಬಂಧಗಳ ನಿರ್ವಹಣೆ ಇದು ಅತ್ಯಂತ ಕಷ್ಟಕರ ಹಾಗೂ ನಿರಂತರ ಪ್ರಕ್ರಿಯೆಯಾಗಿದೆ. ಏಕೆಂದರೆ ಆಧುನಿಕತೆಯ ಬದುಕಿನಲ್ಲಿ ಸಂಬಂಧಗಳು ವಿಮುಖ ಗೊಳ್ಳುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಜಾಗತೀಕರಣದ ನಾಗಾಲೋಟಕ್ಕೆ ಸಿಲುಕಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಆತಂಕ ನಮ್ಮೆಲ್ಲರನ್ನು ಕಾಡತೊಡಗಿದೆ. ಭಾರತೀಯ ಸಂಸ್ಕೃತಿಯಲ್ಲಿನ ಮಾನವ ಸಂಬಂಧಗಳ ಮೌಲ್ಯತೆಗೆ ಮತ್ತು ಪಾವಿತ್ರ್ಯತೆಗೆ ಇದ್ದ ಬೆಲೆ ಇವತ್ತು ಪಾಶ್ಚಾತೀಕರಣ ಜೀವನ ಶೈಲಿಯಿಂದಾಗಿ ಪ್ರವಾಹದ ಹರಿದು ಹೋಗುತ್ತಿರುವ ಕೊಳಕು ನೀರಿನಂತಾಗಿದೆ. ವಾಸ್ತವವಾಗಿ ಇಂದಿನ ದಿನಗಳಲ್ಲಿ ನೆನಪಿಗೆ […]
ಕಲೆಗೆ ನೆಲೆ ಸಿಗಲಿ, ಕಲಾವಿದರಿಗೆ ಬೆಲೆ ಸಿಗಲಿ ಕಲೆಯಲ್ಲೇ ಉಸಿರಾಡ ಬಯಸುವರಿಗೆ ಅವಕಾಶ ದೊರಕಲಿ
ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತೆ. ಕೆಲವರದ್ದು ಸುಪ್ತವಾಗಿರುತ್ತೆ, ಇನ್ನೂ ಕೆಲವರದ್ದು ಹುಟ್ಟುವಾಗಲೇ ರಕ್ತಗತವಾಗಿರುತ್ತದೆ. ಇನ್ನು ಕೆಲವು ಪ್ರತಿಭೆಗಳು ಯಾರ ಕಣ್ಣಿಗೂ ಕಾಣದೆ ಸುಪ್ತವಾಗಿಯೇ ಇದ್ದು ಎಲ್ಲೋ ಅಡಗಿ ಮರೆಯಾಗಿ ಹೋಗುತ್ತದೆ. ಮತ್ತೆ ಕೆಲವರದ್ದು ಕಲೆ ಪರಿಚಯಸುವವರ ಕಣ್ಣಿಗೆ ಬಿದ್ದು ಅದಕ್ಕೊಂದು ರೂಪ ಬಂದು ಅದು ಜಗಕ್ಕೆ ತೋರ್ಪಡಿಸುವಂತಗುತ್ತದೆ.ಕಲೆಯೇ ಉಸಿರು, ಜೀವಾಳ ಎಂದು ಬದುಕಿನೂದ್ದಕ್ಕೂ ಕಲಾ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ಎಂಬ ಗಿಡಕ್ಕೆ […]
ಮೊಬೈಲ್ ಪ್ರಪಂಚ
ಕರೋನಾ ಮಹಾಮಾರಿಗೆ ಸಿಲುಕಿ ಬದುಕು ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿಯೂ ಕೂಡ ಕರೋನಾದಿಂದಾಗಿ ನಮ್ಮ ಮೇಲೆ ಬೀರಿದ ಸಕಾರಾತ್ಮಕ ವಿಷಯಗಳ ಕುರಿತು ನಾವು ಹಲವು ಲೇಖನಗಳಲ್ಲಿ ಓದಿದ್ದೇವೆ. ಹೊಟ್ಟೆಪಾಡಿಗಾಗಿ ನಮ್ಮವರನ್ನೆಲ್ಲಾ ಬಿಟ್ಟು ಎಲ್ಲೆಲ್ಲೋ ದುಡಿಯುತ್ತಿದ್ದವರು ಇಂದು ಕುಟುಂಬದ ಜೊತೆ ಸೇರಿ ಸಂತೋಷದಿಂದಿರಲು ಕರೋನಾ ಲಾಕ್ಡೌನ್ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಮಾತು ಎಷ್ಟರ ಮಟ್ಟಿಗೆ ನಿಜ? ಎಷ್ಟೇ ಸಮಯವಿದ್ದರೂ, ನಮ್ಮವರೆಲ್ಲಾ ಕಣ್ಣೆದುರಿಗಿದ್ದರು, ಅವರೊಂದಿಗೆ ಮಾತನಾಡದೆ ಮೊಬೈಲ್ ನಲ್ಲಿ ಮುಳುಗಿರುವವರ ಸಂಖ್ಯೆ ಹೆಚ್ಚು. […]
ಹೇಳದೆ ಹೋದ ಅಪ್ಪನಿಗಾಗಿ…
ಅಂದು ಶಿವರಾತ್ರಿಯ ಅಮಾವಾಸ್ಯೆ, ಸಂಜೆ ಹೊತ್ತು ನನ್ನ ಬಾಲ್ಯದ ಸ್ನೇಹಿತರ ಜೊತೆ ಆಟ ಮುಗಿಸಿ ಮನೆಗೆ ಹೋಗುವಾಗ, ಗೆಳೆಯ ಅಶೋಕ್ ಹೇಳಿದ “ಇವತ್ತು ಕೋಟೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಇದೆ, ನನ್ನ ಬಳಿ ಹಣ ಇದೆ, ಈವಾಗಲೇ ಹೋಗಿ ಅಲ್ಲೇ ಏನಾದ್ರೂ ತಿಂದು ಯಕ್ಷಗಾನ ನೋಡಿಕೊಂಡು ಬರೋಣ” ಎಂದು ಹೇಳುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅವನೊಂದಿಗೆ ಯಕ್ಷಗಾನ ನೋಡಲು ಹೋಗಿದ್ದೆ. ಇತ್ತ ಊಟ ಸಿದ್ದಪಡಿಸಿಕೊಂಡು ಕಾದಿದ್ದ ಅಮ್ಮನಿಗೆ ಚಿಂತೆ ಹೆಚ್ಚಾಗಿ ಅಪ್ಪನಿಗೆ […]
ಬದುಕು ಮತ್ತು ಕಲೆ ಎರಡನ್ನು ಸಮಾನವಾಗಿ ಪ್ರೀತಿಸುವ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ
ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ, ಮಿತ್ರ ಬಳಗವನ್ನು ಬೆಳೆಸುತ್ತಾ, ತಮ್ಮ ಬದುಕಿನ ಇತಿಮಿತಿಯ ಒಳಗೆ ಉತ್ತಮ ಕೆಲಸ ಮಾಡುವುದರೊಂದಿಗೆ ಹ್ರದಯ ವೈಶಾಲ್ಯತೆಯನ್ನು ತೋರುವ ಒಬ್ಬ ಯುವಕನ ಬಗ್ಗೆ ನಿಮಗೆ ಹೇಳಲೇ ಬೇಕು. ಅವರೇ ಸರಳ ಸ್ವಭಾವದ ಸೇವಾ ಜೀವಿ,ಯುವ ಸಾಹಿತಿ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ. ಗೆಳೆಯರು ಇವರನ್ನು ಪ್ರೀತಿಯಿಂದ” ಜಗ್ಗು” ಎಂದು ಕರೆಯುತ್ತಾರೆ. ಶ್ರೀಯುತರು 1985ರ ಮಾರ್ಚ್ ,7 ರಂದು ಭದ್ರ ದೇವಾಡಿಗ & ಚಂದು ದೇವಾಡಿಗರ ಎರಡನೆಯ […]
“ಅದೃಷ್ಟವಂತರಲ್ಲ, ಆಶಾವಾದಿಯಾಗೋಣ”
ಅದೇನೋ ಹತಾಶೆ. ಯಾವುದೂ ಸರಿ ಇಲ್ಲ ಎನ್ನುವ ಭಾವ. ಮರಳಿ ಪ್ರಯತ್ನಿಸಲೂ ಅದೇನೋ ಭಯ .ಪದೇ ಪದೇ ಅದೇ ಕನಸು ಹಳ್ಳ ಹಿಡಿಯುತ್ತಿರುವುದನ್ನು ನೋಡಿ ಕುಸಿದು ಹೋಗಿದ್ದೆ.ಋಣಾತ್ಮಕ ಚಿಂತನೆ ತಲೆ ತುಂಬಾ ತುಂಬಿಕೊಂಡು ಬಿಟ್ಟಿದ್ದವು.ವಿಫಲವಾದ ಯೋಜನೆಯ ನೆನೆದು ಅತ್ತು ಅತ್ತು ಮಂಕಾಗಿಯೇ ಬಿಡುತ್ತಿದ್ದೆ.ಹೊರ ಬರುವ ದಾರಿಯ ಹುಡುಕಾಟ ಮರಳಿ ನನ್ನ ಋಣಾತ್ಮಕ ಚಿಂತನೆಗೆ ದೂಡಿ ಹಾಕುತ್ತಿತ್ತು.ಬದಲಾಗೋ ಆಸೆ ಅಲ್ಲ.ಕಳೆದುಕೊಂಡ ನನ್ನನ್ನು ಹುಡುಕಾಡೋ ಪ್ರಯತ್ನ ಅದಾಗಿತ್ತು.ಒಂದು ಸಣ್ಣ ವಿರಾಮ ತೆಗೆದುಕೊಂಡೆ.ಆ ವಿರಾಮದಲ್ಲಿ […]