ಒಂದು ಕುರ್ಚಿಒಂದು ಸಿಸ್ಟಮ್…. .ಆಗೊಮ್ಮೆ ಇಗೊಮ್ಮೆ ಹೈ ಸ್ಪೀಡ್ ನಲ್ಲಿ ಕೆಲಸ ಮಾಡೋ ಇಂಟರ್ನೆಟ್ಟು…. ಬೆನ್ನು ನೋವಾಗದಿರಲಿ ಎಂದು ಬೆನ್ನು ಹಿಂದೊಂದು ತಲೆದಿಂಬು…. ಯಾಕಂದ್ರೆ ನನ್ನದು ವರ್ಕ್ ಫ್ರಮ್ ಹೋಮ್ ಸ್ವಾಮಿ..!ಹಿಂದೆ ಆಫೀಸಿನಲ್ಲಿ ಕೇಳಿಸುತ್ತಿದ್ದ ಮಾತಿನ ಸದ್ದಿಲ್ಲ….. ಮೈ ಮರೆತು ನಕ್ಕ ನಗುವಿನ ಅಲೆಯಿಲ್ಲ…… ಸೂರ್ಯೋದಯ ಕಾಣೋಲ್ಲ ,ಸೂರ್ಯಾಸ್ತಮವೂ ಕಂಡಿಲ್ಲ….. ಸಮಯದ ಅರಿವಿಲ್ಲ, ಹಸಿವಿನ ಪರಿವಿಲ್ಲ ………ಯಾಕೆ ಅಂದ್ರೆ ನಮ್ದು ವರ್ಕ್ ಫ್ರಮ್ ಹೋಮ್ ಸ್ವಾಮಿ.. ಸಂಬಂಧಗಳು ಹಳಸಿವೆ,ಭಾವನೆಗಳ ತಿಳಿಯಲು ಸಮಯವಿಲ್ಲ………..ಮನೆಯೊಳಿದ್ದರೂ ಮನೆಯ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಬಿಜೆಪಿ ಕುಂದಾಪುರ ಮಂಡಲ ಎಸ್ಸಿ ಮೋರ್ಚಾವತಿಯಿಂದ ಡಾ.ಬಿ. ಆರ್ .ಅಂಬೇಡ್ಕರ್ ಜಯಂತಿ ಆಚರಣೆ
ಕುಂದಾಪುರ (ಏ.26): ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಕುಂದಾಪುರ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಕಾಳಾವರ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಯವರು ಮಾತನಾಡಿ ಹುಟ್ಟಿನಿಂದಲು ಅಸ್ಪ್ರಶ್ಯತೆ ಅಸಮಾನತೆಯಿಂದ ಶೋಷಣೆಗೆ ಒಳಪಟ್ಟು ನಂತರ ದಿನದಲ್ಲಿ ಅದನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಪಟ್ಟ ಶ್ರಮ ಅವೀಸ್ಮರಣೀಯ, ಅವರ ಕಾರಣದಿಂದಾಗಿಯೇ ಇಂದು […]
ಅಂಪಾರು: ನಮ್ಮೂರ ಸಂಭ್ರಮದ ಪೋಸ್ಟರ್ ಅನಾವರಣಗೊಳಿಸಿ ಶುಭ ಹಾರೈಸಿದ ಡಾ.ಡಿ.ವೀರೇಂದ್ರ ಹೆಗ್ಡೆ
ಕುಂದಾಪುರ (ಏ,14):ಇಲ್ಲಿನ ಅಂಪಾರು ಗ್ರಾಮ ಮೂಡುಬಗೆಯಲ್ಲಿ ಮೇ, 11 ರಂದು ಜರುಗಲಿರುವ ಧಾರ್ಮಿಕ -ಸಾಮಾಜಿಕ- ಸಾಂಸ್ಕೃತಿಕ ಸಮಾಗಮ ”ನಮ್ಮೂರ ಸಂಭ್ರಮ’‘ದ ಪೋಸ್ಟರ್ ನ್ನು ಧರ್ಮಸ್ಥಳದ ಧರ್ಮದರ್ಶಿಗಳಾದ ಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಧರ್ಮಸ್ಥಳಕ್ಕೆ ಭೇಟಿ ನೀಡಿದ ಅಂಪಾರಿನ ನಮ್ಮೂರ ಸಂಭ್ರಮದ ತಂಡದ ಬಳಿ ಮಾತನಾಡಿ ಡಾ. ಡಿ. ವೀರೇಂದ್ರ ಹೆಗಡೆಯವರು ಕಾರ್ಯಕ್ರಮದ ಉದ್ದೇಶಗಳನ್ನು ರೂಪು ರೇಷೆಗಳನ್ನು ತಿಳಿದುಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶುಭಕೋರಿದರು.ಕಾರ್ಯಕ್ರಮದ ಬಗ್ಗೆ ವಿವರಣೆ ಪಡೆದು ಸಂತೃಪ್ತರಾದ […]
ಸಮುದಾಯದತ್ತ ಶಾಲೆಯಲ್ಲಿ ಸಂಜಿತ್ ಸ್ಯಾಕ್ಸೋಫೋನ್ ವಾದನ
ಗಂಗೊಳ್ಳಿ( ಏ.13): ಇಲ್ಲಿನ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿಯಲ್ಲಿ ಕಳೆದ ಶನಿವಾರ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಈ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ ದೇವಾಡಿಗನಿಂದ ಸ್ಯಾಕ್ಸೋಪೋನ್ ವಾದನದ ಕರ್ಯಕ್ರಮ ನಡೆಯಿತು. ಭಕ್ತಿಗೀತೆ, ದೇಶಭಕ್ತಿ ಗೀತೆ, ಭಾವಗೀತೆ, ಚಲನಚಿತ್ರ ಗೀತೆಯ ಜೊತೆಗೆ ರಾಷ್ಟ್ರಗೀತೆಯನ್ನು ನುಡಿಸಿ ಮೆಚ್ಚುಗೆ ಗಳಿಸಿದ ಸಂಜಿತ್ ಎಂ ದೇವಾಡಿಗನನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಸ್. […]
ಡಾ.ಗೋವಿಂದ ಬಾಬು ಪೂಜಾರಿ ಯವರಿಗೆ ದಿ. ಕೆ.ಸಿ ಕುಂದರ್ ಸ್ಮಾರಕ ದತ್ತಿ ಪ್ರಶಸ್ತಿ
ಕುಂದಾಪುರ(ಏ.13): ಯಶಸ್ವಿ ಉದ್ಯಮಿ,ಸಮಾಜ ಸೇವಕ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಇದರ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಯವರು ಡಾ.ಕಾರಂತ ಪ್ರತಿಷ್ಠಾನ ಕೋಟ, ಡಾ. ಕಾರಂತ ಟ್ರಸ್ಟ್ ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ನೀಡುವ ಕರಾವಳಿಯ ಮೀನುಗಾರ ಮುಖಂಡರಾಗಿದ್ದ ದಿ.ಕೆ.ಸಿ ಕುಂದರ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಯಾವುದೇ ಜಾತಿ, ಮತ,ಧರ್ಮ ತಾರತಮ್ಯ ಇಲ್ಲದೆ ನೋಂದವರಿಗೆ ಸಹಾಯ ಹಸ್ತ ಚಾಚುವ ಡಾ.ಗೋವಿಂದ […]
ದಿ.ಸದಿಯ ಸಾಹುಕಾರ್ ರವರ ಹ್ರದಯ ವೈಶಾಲ್ಯತೆಗೆ ಶರಣು ಶರಣಾರ್ತಿ
ಯಪ್ಪಾ..ಬರೋಬ್ಬರಿ 16.50 ಎಕ್ರೆ ಜಾಗ…ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಕೋಟಿ – ಕೋಟಿ ಬೆಲೆ ಬಾಳುವ ಆಸ್ತಿ ಎಂದು ಹುಬ್ಬೆರಿಸಿ ಆಶ್ಚರ್ಯ ಚಿಕಿತರಾಗಿ ಅಕ್ಕ ಪಕ್ಕದವರ ಜೊತೆ ಮಾತನಾಡುವ ಜನರನ್ನು ಕಂಡು ಹೀಗೆ ಸುಮ್ಮನೆ ಆಲೋಚಿಸತೋಡಗಿದೆ. ಆಧುನಿಕ ಬದುಕಿನ ಈ ನಾಗಾಲೋಟದಲ್ಲಿ ತಾನು,ತನ್ನದು,ತನ್ನದಷ್ಟಕ್ಕೆ ಎನ್ನುವ ಸ್ವಾರ್ಥಪರತೆಗೆ ಒಳಗಾದ ಜನತೆ ಇಂದು ಪರರ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತು ಕೊಡುತ್ತೀರುವುದು ವಾಸ್ತವ.ಈ ಸ್ವಾರ್ಥ ತುಂಬಿದ ಜಗತ್ತೀನಲ್ಲಿ ಒಂದಿಂಚು ಭೂಮಿಗೂ ಹೊಡೆದಾಡುವ ಮನುಷ್ಯರ […]
ಬಾರ್ಕೂರು ಶ್ರೀ ಪಂಚ ಲಿಂಗೇಶ್ವರ ದೇವಾಲಯದ ರಥೋತ್ಸವ: ಗಾಯಕ ಡಾ.ಗಣೇಶ್ ಗಂಗೊಳ್ಳಿ ಹಾಗೂ ಬಳಗದಿಂದ ಜಾನಪದ ವೈಭವ
ಬಾರ್ಕೂರು( ಏ.8): ಬಾರ್ಕೂರಿನ ಶ್ರೀ ಪಂಚ ಲಿಂಗೇಶ್ವರ ದೇವಾಲಯದ ರಥೋತ್ಸವದ ಸಂದರ್ಭದಲ್ಲಿ ಪಿ ಕಾಳಿಂಗ ರಾವ್ ಪ್ರತಿಷ್ಠಾನ ಬೆಂಗಳೂರು ಇವರು ಏರ್ಪಡಿಸಿದ “ಜಾನಪದ ವೈಭವ” ಕಾರ್ಯಕ್ರಮ ಏ.08 ರಂದು ನಡೆಯಿತು. ಈ ಕಾರ್ಯಕ್ರಮವನ್ನು ನಾಡಿನ ಖ್ಯಾತ ಸುಗಮ ಸಂಗೀತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಹಾಗೂ ಬಳಗದವರು ಜಾನಪದ ವೈಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಕಾಳಿಂಗ ರಾವ್ ಪ್ರತಿಷ್ಠಾನದ ವತಿಯಿಂದ ಶ್ರೀ ರಾಮಚಂದ್ರ ನಾಯಕ್ ಸರ್ಕಲ್ […]
ಮೇಲ್ ಗಂಗೊಳ್ಳಿ: ಏ.20 ರಂದು ವಿಶೇಷ ಕಾರ್ಯಕ್ರಮ
ಗಂಗೊಳ್ಳಿ (ಏ .11): ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್ ಗಂಗೊಳ್ಳಿ ಇದರ 35 ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿಯ 29 ನೇ ವಾರ್ಷಿಕೋತ್ಸವ ಹಾಗೂ ಡಾ. ಬಿ ಆರ್. ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯ ಕಾರ್ಯಕ್ರಮವು ಮೇಲ್ ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ಏ.20 ರ ಬುಧವಾರದಂದು ಜರಗಲಿರುವುದು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ […]
ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ.ಬಿ.ಬಿ ಹೆಗ್ಡೆ ಕಾಲೇಜಿಗೆ ಪ್ರಥಮ ಸ್ಥಾನ
ಕುಂದಾಪುರ (ಏ.10): ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಛೇರಿ- ಕ್ಷಯ ಘಟಕ ಕುಂದಾಪುರ, ತಾಲ್ಲೂಕು ಆರೋಗ್ಯ ಕೇಂದ್ರ ಕುಂದಾಪುರ ಇವರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕ್ಷಯ ರೋಗದ ಕುರಿತಾದ ಆಯ್ದ ಪದವಿ ಕಾಲೇಜುಗಳ ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ.ಬಿ.ಬಿ.ಹೆಗ್ಡೆ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ. ವಿಜೇತರಿಗೆ ಕುಂದಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಶ್ವರಿಯವರು ಪ್ರಶಸ್ತಿ ನೀಡಿ ಗೌರವಿಸಿದರು. ತಂಡದಲ್ಲಿ ಭಾಗಿಯಾದ ಅಕ್ಷಯ್ ಶೆಟ್ಟಿ, ಅಕ್ಷತ್ , ಶ್ವೇತಾ,ಮೇಘನಾ […]
ಬೈಂದೂರು :ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ಬೈಂದೂರು (ಏ,10): ಸ್ವಾತಂತ್ರ್ಯ ಹೋರಾಟಗಾರ ಬಾಡಾ ದಿ.ಮಂಜುನಾಥ ಜೋಶಿ ಯವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎನ್ನುವ ನಾಮಫಲಕ ಅಳವಡಿಕೆ ಕಾರ್ಯಕ್ರಮ ಇತ್ತೀಚೆಗೆ ಬೈಂದೂರು ತಾಲೂಕು ವ್ಯಾಪ್ತಿಯ ಬಾಡಾದಲ್ಲಿ ನಡೆಯಿತು. ನಾಮ ಫಲಕ ಅನಾವರಣವನ್ನು ಉದ್ಯಮಿ ಶ್ರೀ ಸುಜೀತ್ ಶೆಟ್ಟಿ ಹಿಲಿಯಾಣ ರವರು ನೆರವೇರಿಸಿದರು. ಕಾರ್ಯಕ್ರಮದ ಅತಿಥಿಯಾಗಿ ಶ್ರೀ ಜಯಾನಂದ ಹೋಬಳಿದಾರ್, ನಾಗರತ್ನ ಹೇರಳೆ,ಶ್ರೀ ಜಯದೇವಿ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅರುಣ ಶಿರೂರು ರವರು ವಹಿಸಿದ್ದರು.ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ […]










