ಬಗ್ವಾಡಿ (ಜು, 15) : ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಬಗ್ವಾಡಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿರುವುದರ ಜೊತೆಗೆ ವಾಸಯೋಗ್ಯ ಮನೆಇಲ್ಲದೆ ತೀರ ಕಷ್ಟದಲ್ಲಿರುವುದನ್ನು ಗಮನಿಸಿದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಸ್ವತಃ ಕಲಾವಿದ ಸುಬ್ರಹ್ಮಣ್ಯನ ಮನೆಗೆ ಭೇಟಿ ನೀಡಿ ನೂತನ ಮನೆ ನಿರ್ಮಾಣಕ್ಕೆ 50,000 ರೂಪಾಯಿ ಚೆಕ್ ಹಸ್ತಾಂತರಿಸಿದರು. ಅಮ್ಮಾ ವೇದಿಕೆಯ ಸದಸ್ಯರ ಜೊತೆ ಸೇರಿ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಬದುಕು
ಹುಟ್ಟು ಸಾವಿನ ಮಧ್ಯದಲ್ಲಿಅಲ್ಪ ದಿನದ ಈ ಬದುಕಿನಲ್ಲಿಬಂದು ಹೋಗುವವರು ಹಲವರುಕೊನೆ ತನಕ ಉಳಿಯುವವರು ಕೆಲವರು ತಂದೆ ತಾಯಿಗೆ ತಕ್ಕ ಮಕ್ಕಳಾಗಿಗುರು ಹಿರಿಯರಿಗೆ ಗೌರವಿಸಿಸಮಾಜಕ್ಕೆ ಮಾದರಿಯಾಗಿಬದುಕ ಬೇಕೆನ್ನುವ ಬಯಕೆ ಬದುಕ ಪುಟಗಳು ನಮಗರಿವಿಲ್ಲದೇ ಸರಿಯುತಿದೆಕಾಲಚಕ್ರದ ಸುಳಿಯಲಿಬದುಕ ಪಯಣವ ನಿಲ್ಲಿಸಲು!ಹೆದರಬೇಕಿಲ್ಲ! ಅದು ಪ್ರಕ್ರತಿಯ ನಿಯಮ ಇರುವಷ್ಟು ದಿನ ಆಗ ಬಯಸುವ ವಿಶ್ವ ಮಾನವಎಲ್ಲರಿಗೂ ಹಂಚುವ ಪ್ರೀತಿ ಸ್ನೇಹವಸಾರ್ಥಕ ಜೀವನದ ನಿರೀಕ್ಷೆಯಲಿ ಪ್ರತಿ ಕ್ಷಣವಬನ್ನಿ, ಇರುವಷ್ಟು ದಿನ ಉತ್ಸಾಹದಿ ಬದುಕುವ .. ಎ ಎಸ್ […]
ಮಂಗಳೂರು ವಿಶ್ವವಿದ್ಯಾನಿಲಯ : ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆ ನಡೆಸಲು ಚಿಂತನೆ
ಮಂಗಳೂರು (ಜು,13) : ಕೋವಿಡ್ ಕಾರಣದಿಂದಾಗಿ ಬಾಕಿ ಉಳಿದಿರುವ ಮಂಗಳೂರು ವಿ.ವಿ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ,ತ್ರತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಮಂಗಳೂರು ವಿಶ್ವವಿದ್ಯಾನಿಯ ಚಿಂತನೆ ನಡೆಸಿದೆ. ಬಾಕಿ ಉಳಿದ ಪರೀಕ್ಷೆಗಳನ್ನು ನಡೆಸುವ ಕುರಿತಾದ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಿ ಅನುಮತಿ ಪಡೆಯಲು ವಿ.ವಿ. ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ನಿರ್ಧರಿಸಿದ್ದಾರೆ. ಬಾಕಿ ಉಳಿದ ಪರೀಕ್ಷೆಗಳನ್ನು ಆದಷ್ಟು ಬೇಗ ನಡೆಸಿ ಮೌಲ್ಯಮಾಪನ ನಡೆಸಲು ಚಿಂತನೆ ನಡೆಸಲಾಗಿದೆ. ಆಗಸ್ಟ್ […]
ಮಹಾನಗರ ಮತ್ತು ಅವನು
ಮಹಾನಗರದ ಬೀದಿಗಳಲ್ಲಿ ನಡೆಯುತ್ತಿದ್ದಾನೆಬಟ್ಟೆಯಂಗಡಿಯ ಮುಂದೆ ಬೊಂಬೆಗಳ ಮೈತುಂಬವಿಧವಿಧವಾದ ಬಟ್ಟೆಗಳುಹೋಟೆಲಿನೆದುರಲ್ಲಿ ಬಗೆಬಗೆಯ ತಿಂಡಿಯ ಚಿತ್ರಗಳುಇಂದ್ರನ ರಥವನ್ನೂ ಮೀರಿಸುವ ಹೊಸಬಗೆಯ ಕಾರುಗಳುಹೊಸ ಫ್ಯಾಷನ್ನಿನ ಹರಿದ ಜೀನ್ಸ್ ತೊಟ್ಟ ಯುವಪಡೆಮಾಲುಗಳ ಮುಂದೆ ಬೆಳಗುವ ಬಣ್ಣಬಣ್ಣದ ಲೈಟುಗಳೆದುರುಚಂದ್ರನ ಬೆಳದಿಂಗಳು ಯಾವ ಲೆಕ್ಕ?ನಟನ ಅರವತ್ತಡಿ ಎತ್ತರದ ಕಟೌಟಿನ ಮುಂದೆ ಅವನು ಕುಬ್ಜ ಮಾಲ್ ನೆದುರಿನ ಸುಸಜ್ಜಿತ ಬಸ್ ಸ್ಟಾಪ್ ನಲ್ಲಿ…ನಗರ ಸಾರಿಗೆ ಬಸ್ ಗಾಗಿ ಕಾದುಹೆಚ್ಚೂ ಕಡಿಮೆ ಕೊಳಗೇರಿಯಂತಿರುವ ಪ್ರದೇಶದತಗಡಿನ ಮಾಡಿನ ಶೆಡ್ ಸೇರುತ್ತಾನೆತೇಪೆ ಹಚ್ಚಿದ ಜೀನ್ಸ್ […]
ಕೋಟೇಶ್ವರ : ಸಹಾಯಹಸ್ತ ಅಂಕದಕಟ್ಟೆ ಹಾಗೂ ಕಟ್ಟೆ ಫ್ರೆಂಡ್ಸ್ ಅಂಕದಕಟ್ಟೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಣೆ
ಕೋಟೇಶ್ವರ (ಜು,13) : ಕರೋನಾ ಮೊದಲ ಅಲೆಯ ದಿನಗಳಿಂದ ಇಲ್ಲಿಯವರೆಗೂ ಮತ್ತು ಕರೋನಾ ನಿರ್ನಾಮವಾಗುವವರೆಗೂ ಮುಂದಿನ ಸರತಿಯಲ್ಲಿ ನಿಂತು ಕರೋನಾ ವಿರುದ್ದ ಹೋರಾಡುವುದರ ಜೊತೆಗೆ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ನಿಸ್ವಾರ್ಥವಾಗಿ ಸೇವೆಗೈಯುತ್ತಿರುವ ಆಶಾ ಕಾರ್ಯಕರ್ತರ ಸೇವೆಗೆ ಈ ಸಮಾಜದ ಋಣ ಸಾಗರದಷ್ಟಿದೆ. ಆ ದಿಸೆಯಲ್ಲಿ ಸಾಸಿವೆಯಷ್ಟಾದರು ಋಣ ತೀರಿಸುವ ಶಕ್ತಿ ಭಗವಂತ ನಮ್ಮ ಬಳಗಕ್ಕೆ ನೀಡಿದ್ದಾನೆ ಎಂಬ ಆಶಯದೊಂದಿಗೆ ಜುಲೈ 13 ರಂದು ಕೋಟೇಶ್ವರ ಸಮೀಪದ ಅಂಕದಕಟ್ಟೆಯಲ್ಲಿ ಸಹೃದಯಿ ದಾನಿಗಳ […]
“ಹ್ಯಾಕೋತ್ಸವ” – ರಾಷ್ಟ್ರಮಟ್ಟದ ಹ್ಯಾಕಥಾನ್ ಸಮಾರೋಪ ಸಮಾರಂಭ
ಉಡುಪಿ (ಜು, 13) : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗದ ಆಶ್ರಯದಲ್ಲಿ ಕೋಡ್ ಟ್ರೂಪರ್ ಕ್ಲಬ್ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಭಾಗಿತ್ವದಲ್ಲಿ ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ಅಂತರ್ಜಾಲ ಹ್ಯಾಕಥಾನಿನ ಸಮಾರೋಪ ಸಮಾರಂಭವು ಜುಲೈ 11ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಟ್ಟಗೆಯನ್ನು ಮಥನ ಮಾಡಿದರೆ ಬೆಂಕಿಯ ಉತ್ಪನ್ನವಾಗುವಂತೆ, ಭೂಮಿಯ […]
ಗಂಗೊಳ್ಳಿ : ಸತೀಶ್ ಜಂಟ್ಸ್ & ಲೇಡೀಸ್ ಫಿಟ್ನೆಸ್ ಜಿಮ್ ಉದ್ಘಾಟನೆ
ಗಂಗೊಳ್ಳಿ (ಜು, 12) : ಸಾಧಕ ಹರೀಶ್ ಖಾರ್ವಿ ಮಾಲಿಕತ್ವದ ಸತೀಶ್ ಜಂಟ್ಸ್ & ಲೇಡೀಸ್ ಫಿಟ್ನೆಸ್ ಜಿಮ್ ಜುಲೈ 11 ರಂದು ಗಂಗೊಳ್ಳಿಯ ಮುಖ್ಯರಸ್ತೆಯ ತತ್ವಮಸಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು. ಆಧುನಿಕ ಶೈಲಿಯ ಸುಸಜ್ಜಿತವಾದ ಈ ಜಿಮ್ ನ್ನು ಮಿಸ್ಟರ್ ಕರ್ನಾಟಕ ಖ್ಯಾತಿಯ ದೇಹದಾಡ್ಯಪಟು ಶ್ರೀನಿವಾಸ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಮಿಸ್ಟರ್ ಕರ್ನಾಟಕ ಖ್ಯಾತಿಯ ದೇಹದಾಡ್ಯಪಟು ಸೋಮಶೇಖರ್ ಖಾರ್ವಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ […]
ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ
ಕುಂದಾಪುರ (ಜು, 12) : ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಜ್ಯೇಷ್ಠ ಇನ್ಫೋಟೆಕ್ ಸಂಸ್ಥೆ ಜುಲೈ 10ರಂದು ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿತ್ತು . ಸಂದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ 05 ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ. ಉಮೇಶ್ ಶೆಟ್ಟಿಯವರು ನೇಮಕಾತಿ ಪತ್ರವನ್ನು ನೀಡಿದರು. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ಕೋರಲಾಗಿದೆ.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ : ಜುಲೈ 16 ರಂದು ‘ಶ್ರೀ ವರಲಕ್ಷ್ಮೀ ನಿಲಯ’ ಪ್ರವೇಶೋತ್ಸವ – ಬಡ ಕುಟುಂಬವೊಂದಕ್ಕೆ ನೂತನ ಮನೆ ಹಸ್ತಾಂತರ ಕಾರ್ಯಕ್ರಮ
ಬೈಂದೂರು (ಜು, 12): ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಪುತ್ರ ಮಾಸ್ಟರ್ ಪ್ರಜ್ವಲ್ ಜಿ. ಪೂಜಾರಿ ಯವರ ಜನ್ಮದಿನದ ಶುಭಸಂದರ್ಭದಲ್ಲಿ ಕೊಡೇರಿ ರವಳುಮನೆ ನಾಗಮ್ಮ ಎನ್ನುವ ಬಡ ಮಹಿಳೆಯ ಕುಟುಂಬಕ್ಕೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಮೂಲಕ ಸಂಪೂರ್ಣವಾಗಿ ನೂತನ ಮನೆಯೊಂದನ್ನು ನಿರ್ಮಿಸಿಕೊಡಲಾಗಿತ್ತಿದ್ದು, ಆ ಕುಟುಂಬಿಕರ ನಿರ್ಣಯದಂತೆ ಇದೇ ಜುಲೈ 16 ರ ಶುಕ್ರವಾರದಂದು ನಾಗೂರು ಸಮೀಪದ ಕೊಡೇರಿಯಲ್ಲಿ ಸರಳವಾಗಿ ನೂತನ ಗೃಹದ ಪ್ರವೇಶೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯ : ಗದ್ದೆ – ನಾಟಿ ಕ್ರಷಿ ಕಾರ್ಯಕ್ರಮ
ಶಿವ೯(ಜು, 12): ಕೃಷಿ ಮಾನವನ ಕುಲ ಕಸುಬು. ಆಧುನಿಕತೆ ಬೆಳೆದಂತೆ ಮನುಷ್ಯ ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರಣ ಇಂದು ಕೃಷಿಯಲ್ಲಿ ಯುವ ಜನತೆಗೆ ಆಸಕ್ತಿ ಕಡಿಮೆಯಾಗಿದೆ.ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕಾರ್ಯ ಇಂದು ಸಾಗುತ್ತಿದೆ.ಈ ನಿಟ್ಟಿನಲ್ಲಿ ಯುವಜನತೆ ಕ್ರಷಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ನೆಲ-ಜಲ ಭೂಮಿಯ ಸಂರಕ್ಷಣೆಯ ಜೊತೆಗೆ ಭೂಮಿಯನ್ನು ಹಸಿರಾಗಿಸಿ ಮುಂದಿನ ಜನಾಂಗಕ್ಕೆ ಹೆಚ್ಚು ಅನುಕೂಲವಾಗಲಿ ಎನ್ನುವ ಸದುದ್ದೇಶದೊಂದಿಗೆ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ […]










