ಗಾಳದ ತುದಿಗೆಎರೆಹುಳವನ್ನು ಸಿಕ್ಕಿಸಿಇನ್ನೊಂದು ತುದಿಗೆ ಉದ್ದ ಹಗ್ಗವನ್ನು ಕಟ್ಟಿಹೊಳೆಗೆಸೆದು, ಹರಿವ ತಂಪಾದ ನೀರಲ್ಲಿಕಾಲಿಳಿಸಿ ಕುಳಿತಿದ್ದೇನೆಯಾವುದೋ ಹೆಸರಿನ ಮೀನೊಂದುಎರೆಹುಳಕ್ಕೆ ಬಲಿಯಾದ ತಕ್ಷಣಮೇಲಕ್ಕೆಳೆದುಕೊಳ್ಳಬೇಕು ಆದರೇನು?ನನ್ನ ಪಾದಗಳಿಗೆ ಕಚಗುಳಿ ಇಟ್ಟುನೀರಿನಾಳಕ್ಕೆ ಜಾರಿಬಿಡುವ ಮೀನುಗಾಳದ ಹತ್ತಿರವೂ ಸುಳಿಯುತ್ತಿಲ್ಲ ಆ ಕ್ಷಣಕ್ಕೆ ಒಂದು ಆಲೋಚನೆ!ಮೇಲಿನವನೂ ಇಳಿಬಿಟ್ಟರಬಹುದಲ್ಲನನಗೂ ಯಾವುದಾದರೊಂದು ಗಾಳವನ್ನುಒಂದಲ್ಲದಿದ್ದರೆ ಹತ್ತಾರು ಗಾಳಗಳನ್ನುಇಲ್ಲವಾದರೆ ಬಲೆಯನ್ನೇ ಬೀಸಿರಬಹುದಲ್ಲವೇ?ಮೂರ್ಖ ಸಿಕ್ಕಿಹಾಕಿಕೊಳ್ಳಲಿಯೆಂದು? ಬಹುಶಃ ನದಿಯೂ ಬಲೆ ಇರಬಹುದುಪುಟ್ಟ ಮೀನೊಂದು ಪಾಶವಿರಬಹುದುಮೀನಿನ ಬದಲು ಮೊಸಳೆಯೇ ಬರಬಹುದು ಹಣೆಯ ಮೇಲೆ ಬೆವರಿನ ಹನಿಗಳುಪಕ್ಕನೆ ಗಾಳವನ್ನು ಮೇಲೆಳೆದು […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
“ಮಳೆ ಹನಿ”
ಬಾನಿಂದ ಜಾರಿ ಹಂಚಿನ ಮೇಲೆರಗಿ ಯಾರಿಗೂ ಕಾಯದೆನನ್ನ ಬಳಿ ಬಂದು ಉಲ್ಲಾಸ ನೀಡಿದ್ದುಯಾರಿಗೂ ಗೊತ್ತಾಗಲಿಲ್ಲಕೆಲಸವಿಲ್ಲದೆ ಕುಳಿತ ನನ್ನೊಬ್ಬನನ್ನು ಬಿಟ್ಟು … ವರ್ಣಿನೆಗೂ ಮೀರಿದ ನಿನ್ನ ಮಾಯೆನಿನ್ನ ಕಿರು ಹನಿಯೇ ಪ್ರಕ್ರತಿಗೆ ಛಾಯೆ ಗೊತ್ತಾಗುತ್ತಿಲ್ಲವಲ್ಲಾ ನಿನ್ನ ತುಂತುರು ಹನಿಗಳ ಲೀಲೆ ಆಕಾಶ ಬಿರಿದು ಹೊರ ಬರಲು ಸಾಲು ನಿಂತ ಹನಿಗಳ ಸರದಿ.ನೀ ಹಿತ ಮಿತವಾಗಿ ಬಂದರಷ್ಟೇ ಜಗಕೆ ನೆಮ್ಮದಿಜೋರಾಗಿ ಸುರಿದರೆ ಮಾಡಬೇಕಾದಿತು ನಿನ್ನ ಮೇಲೆ ವರದಿ ✍️ಈಶ್ವರ ಸಿ. ನಾವುಂದ
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೊಸ ಇಂಜಿನಿಯರಿಂಗ್ ಕೋರ್ಸ್ ಆರಂಭ
ಮೂಡ್ಲಕಟ್ಟೆ (ಜು, 9): ಕುಂದಾಪುರದ ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು (ಎಮ್.ಐ.ಟಿ.) ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಧುನಿಕ ತಂತ್ರಜ್ಞಾನ ಭರಿತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ತಂತ್ರಜ್ಞಾನ ದ ಹೊಸ ಕೋರ್ಸ್ ಅನ್ನು ಪ್ರಾರಂಭಿಸಲು ಅನುಮೋದನೆ ದೊರಕಿದ್ದು, ಇದೇ ಸಾಲಿನಲ್ಲಿ ಪ್ರವೇಶ ಪಡೆಯಲು ಅವಕಾಶವಿರುತ್ತದೆ. ಪ್ರಸ್ತುತ ಆಧುನಿಕ ಯುಗದಲ್ಲಿ ಇಂಜಿನಿಯರಿಂಗ್ ಒಳಗೊಳ್ಳುವಿಕೆ ಇಲ್ಲದಿರುವುದನ್ನು ಊಹಿಸಲು ಕಷ್ಟವಾಗಿದ್ದು, ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಉತ್ಪನ್ನಗಳಿಗೆ ಬಹಳ ಬೇಡಿಕೆ ಇರುವುದರಿಂದ ಕೃತಕ ಬುದ್ದಿಶಕ್ತಿ ತಂತ್ರಜ್ಞಾನ […]
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ : “ಬ್ಲಾಕ್ ಚೈನ್ ತಂತ್ರಜ್ಞಾನದ ಸಂಶೋಧನಾ ದೃಷ್ಟಿಕೋನ” ಎಂಬ ವಿಷಯದ ಕುರಿತು ತಾಂತ್ರಿಕ ಕಾರ್ಯಗಾರ
ಉಡುಪಿ (ಜು,8) : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ಮತ್ತು ಎಂಜಿನಿಯರಿಂಗ್ ವಿಭಾಗವು ಸಂಶೋಧನಾ ವಿಮರ್ಶೆ ಘಟಕದ ಸಹಯೋಗದೊಂದಿಗೆ “ಬ್ಲಾಕ್ ಚೈನ್ ತಂತ್ರಜ್ಞಾನದ ಕುರಿತು ಒಂದು ಸಂಶೋಧನಾ ದೃಷ್ಟಿಕೋನ” ಎಂಬ ವಿಷಯದ ಕುರಿತು ಆನ್ಲೈನ್ ಕಾರ್ಯಗಾರವನ್ನು ಜುಲೈ 7 ರಂದು ಆಯೋಜಿಸಲಾಗಿತ್ತು. ಟೆಕ್ವೆಡ್ ಲ್ಯಾಟ್, ಎ.ಎಸ್.ಕ್ಯೂ.ಆರ್ ಟೆಕ್ನಾಲಜಿ ಇದರ ಸಹ ಸಂಸ್ಥಾಪಕ ಶ್ರೀ ಆದಿತ್ಯ ಎಸ್ ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಶ್ರೀ ಆದಿತ್ಯ ಅವರು ಕ್ರಿಪ್ಟೋ […]
ಬೆಳ್ಕಲ್ ತೀರ್ಥದ ಪಾವಿತ್ರ್ಯತೆ ಉಳಿವಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಲ್ಲಿಸಿದ ಮನವಿಗೆ ಶಾಸಕ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಸ್ಪಂದನೆ
ವಂಡ್ಸೆ (ಜೂ, 8): ಹಿಂದು ಜಾಗರಣ ವೇದಿಕೆ ಬೈಂದೂರು ತಾಲೂಕಿನ ಕಾರ್ಯಕರ್ತರುಬೆಳ್ಕಲ್ ತೀರ್ಥದ ಪಾವಿತ್ರ್ಯತೆಯ ಉಳಿವಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಲ್ಲಿಸಿದ ಮನವಿಗೆಬೈಂದೂರು ಶಾಸಕ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಸ್ಪಂದಿಸಿದ್ದಾರೆ. ಮನವಿಗೆ ಸ್ಪಂದಿಸಿದ ಶಾಸಕರು ಬೆಳ್ಕಲ್ ತೀರ್ಥದ ಕ್ಷೇತ್ರದ ಪಾವಿತ್ರ್ಯತೆ ಉಳಿವಿಗಾಗಿ ಸೂಕ್ತ ವ್ಯವಸ್ಥೆ ಕಲ್ಪಸಿ, ತೀರ್ಥ ಸ್ಥಾನಕ್ಕೆ ಹೋಗುವವರು ಯಾವುದೇ ಮಾಂಸದ ಊಟ,ಪ್ಲಾಸ್ಟಿಕ್ ಬಾಟಲಿ,ಮದ್ಯ ತೆಗೆದುಕೊಂಡು ಹೋಗದಂತೆ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ […]
ಅಪಘಾತಗೊಂಡ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಮನೆಗೆ ಬೈಂದೂರು ಶಾಸಕರ ಭೇಟಿ
ವಂಡ್ಸೆ (ಜು, 8) : ಇತ್ತೀಚೆಗೆ ಬೈಕ್ ಅಪಘಾತಕ್ಕೆ ಒಳಗಾದ ಯಕ್ಷಗಾನ ಕಲಾವಿದ ಬಗ್ವಾಡಿಯ ಸುಬ್ರಹ್ಮಣ್ಯ ಮೊಗವೀರ ನ ಮನೆಗೆ ಬೈಂದೂರಿನ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿಯವರು ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಮೀನುಗಾರಿಕೆ ಇಲಾಖೆಯಿಂದ ಶೀಘ್ರವಾಗಿ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿ, ತಕ್ಷಣವೇ ಸಂಬಂಧಪಟ್ಟವರಿಗೆ ಶಾಸಕರು ಮಾತನಾಡಿದರು. ಜೊತೆಗೆ ಕಿರು ಮೊತ್ತದ ಆರ್ಥಿಕ ಸಹಾಯಧನ ನೀಡಿ ಧೈರ್ಯ ತುಂಬಿದ ಶಾಸಕರು ಮನೆ ನಿರ್ಮಿಸಲು ಬೇಕಾಗುವ ಹಂಚುಗಳನ್ನು […]
ಹೆಣ್ಣು – ಮಣ್ಣು
ಇಡೀ ಭೂಮಂಡಲದಲ್ಲಿ ಸೃಷ್ಟಿಸುವ ಶಕ್ತಿ ಇರುವುದು ಹೆಣ್ಣಿಗೆ ….. ನಾನು ಅನ್ನುವ ಈ ಚರ್ಮದ ಹೊದಿಕೆಯ ದೇಹವು ಒಂದಲ್ಲ ಒಂದು ದಿನ ಸೇರಬೇಕು ಮಣ್ಣಿಗೆ….. ಜಗತ್ತು ಮಾಯಾಲೋಕದಂತೆ ಕಂಡಿರಬಹುವುದು ನಿನ್ನ ಕಣ್ಣಿಗೆ …… ಕೊನೆತನಕ ಚಿರಋಣಿಯಾಗಿರು ನಿನ್ನ ಸ್ರಷ್ಠಿಸಿದ ಹೆಣ್ಣಿಗೆ….. ತಾಯ್ನೆಲದ ಮಣ್ಣಿಗೆ ✒️ ರಾಘವೇಂದ್ರ ಹಾರ್ಮಣ್ಇಡೂರು ಕುಂಜ್ಞಾಡಿ
ನೆನಪು
ಅದೆಷ್ಟೋ ರಾತ್ರಿ ನಿನ್ನ ನೆರಳ ಚಾದರ ಹೊದ್ದು ಮಲಗಿದ್ದೆ ನಾನು….ಕನಸು ಮಾರಿಕೊಂಡು ನಿನ್ನ ಸವಿನೆನಪ ಮೆರವಣಿಗೆಯಲ್ಲಿ….ಕಳೆದು ಹೋದ ಬಯಕೆಗಳ ಹುಡುಕಾಟದಲ್ಲಿ ಹುಟ್ಟಿದ ಭಾವನೆಗಳಿಗೆ ಲೆಕ್ಕವೇ ಇಲ್ಲ …ಚಾದರದ ಮುಸುಕಿನೊಳಗಿನ ಗುದ್ದಾಟಗಳಿಗೆ ಅರ್ಥವೇ ಇಲ್ಲ ….ಬರಿ ಹಸಿ, ಹಸಿ ನೆನಪುಗಳ ನೆಪದಲ್ಲೇ ಉಳಿದುಸಮಯ ಸಿಕ್ಕರೆ ಕನಸಲ್ಲೂ ಬಂದು ಬಿಡುನಿನ್ನ ಮರೆತು ಬಿಡುವ ಮೊದಲು…! ನೆನಪಲ್ಲೇ ಬೆಂದು ಸಾಕಾಗಿದೆ ನನಗೆ…!!! ✍️ಕಲ್ಪನೆ : ಈಶ್ವರ ಸಿ ನಾವುಂದ
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ : ನಿರ್ಮಾಣ ಕಾರ್ಯದಲ್ಲಿ ಆಧುನಿಕ ಪ್ರವೃತ್ತಿಗಳ ಕುರಿತ ಆನ್ಲೈನ್ ತರಬೇತಿ ಕಾರ್ಯಕ್ರಮ
ಉಡುಪಿ (ಜು, 6) : ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ “ನಿರ್ಮಾಣ ಕಾರ್ಯದಲ್ಲಿ ಆಧುನಿಕ ಪ್ರವೃತ್ತಿ” ವಿಷಯದ ಕುರಿತು ಐದು ದಿನಗಳ ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಜೂನ್ 28ರಿಂದ ಜುಲೈ 2ರವರೆಗೆ ಆಯೋಜಿಸಿಲಾಗಿತ್ತು. ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಡಾ.ರಾಘವೇಂದ್ರ ಹೊಳ್ಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಿವಿಲ್ ಇಂಜಿನಿಯರಿಂಗ್ನಲ್ಲಿ ಕಟ್ಟಡ ನಿರ್ಮಾಣದಲ್ಲಿ ಮಾದರಿ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು ಮತ್ತು ಕೌಶಲ್ಯವನ್ನು […]
ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ : ಜುಲೈ 9ರಿಂದ 11ರವರೆಗೆ ರಾಷ್ಟ್ರಮಟ್ಟದ ಹ್ಯಾಕಥಾನ್ – “ಹ್ಯಾಕೋತ್ಸವ”
ಉಡುಪಿ (ಜು, 6): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರವಿಭಾಗದ ಕೋಡ್ ಟ್ರೂಪರ್ಸ್ ಸಂಘ ಮತ್ತು ಐಇಇಇ ವಿದ್ಯಾರ್ಥಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ 48ಘಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ “ಹ್ಯಾಕೋತ್ಸವ”ವನ್ನು ಜುಲೈ 9ರಿಂದ 11ರವರೆಗೆ ಆಯೋಜಿಸಲಾಗಿದೆ. ಇದರ ಉದ್ಘಾಟನೆಯನ್ನು ಬೆಂಗಳೂರಿನ ವೋಲ್ವೋ ಸಮೂಹದ ಸುಧೀಂದ್ರ ಕೌಶಿಕ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ಸುಮಾರು 280ಕ್ಕೂ ಹೆಚ್ಚು ವಿದ್ಯಾರ್ಥಿಗಳು […]










