ಕುಂದಾಪುರ (ಮಾ, 25) : ರಾಷ್ಟ್ರೀಯ ಶಿಕ್ಷಣ ನೀತಿಯೇ ತಿಳಿಸಿರುವಂತೆ ಪದವಿಯ ಸಂದರ್ಭದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಿಂತ ಮೊದಲು ಉಪನ್ಯಾಸಕರು ಹೆಚ್ಚು ಸಂಶೋಧನೆಯಲ್ಲಿ ತೊಡಗುವಂತಾಗಬೇಕು. ಸಂಶೋಧನಾತ್ಮಕ ಲೇಖನಗಳನ್ನು ಹೇಗೆ ಮತ್ತು ಎಲ್ಲಿ ಪ್ರಕಟಿಸಬೇಕು ಎನ್ನುವುದನ್ನು ಉಜಿರೆಯ ಎಸ್.ಡಿ.ಎಮ್. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ|.ನಾಗೇಂದ್ರ ಎಸ್ ತಿಳಿಸಿಕೊಟ್ಟರು. ಅವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಮಾರ್ಚ್ 24ರಂದು ನಡೆದ “ಪ್ರಾಧ್ಯಾಪಕರ […]
Month: March 2021
ಇ. ಸಿ. ಆರ್. ಕಾಲೇಜು : ಕರೋನ ಜಾಗೃತಿ ಜಾಥಾ
ಮಧುವನ (ಮಾ, 25 ): ಕರೋನ ಎರಡನೆ ಅಲೆ ನಿಯಂತ್ರಿಸುವಲ್ಲಿ ನಾಗರಿಕರ ಪಾತ್ರ ಹಾಗೂ ಕರ್ತವ್ಯದ ಕುರಿತು ಅರಿವು ಮೂಡಿಸಲು ಇಲ್ಲಿನ ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಎನ್.ಎಸ್.ಎಸ್. ಮತ್ತು ರೆಡ್ ಕ್ರಾಸ್ ಘಟಕದ ವತಿಯಿಂದ ಮಾರ್ಚ್ 24 ರಂದು “ಕರೋನ ಜನ ಜಾಗೃತಿ ಜಾಥಾ”ವನ್ನು ಕಾಲೇಜಿನ ಸಮೀಪದ ಸೈಬ್ರಕಟ್ಟೆಯ ಸುತ್ತಲಿನ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ ಸಾವಳಸಂಗ್, ಏವಿಯೇಷನ್ ವಿಭಾಗದ ಮುಖ್ಯಸ್ಥರಾದ […]
ಶಿರ್ವ ಸಂತ ಮೇರಿ ಕಾಲೇಜು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾಲ್ಕನೇ ರ್ಯಾಂಕ್
ಶಿರ್ವ (ಮಾ. 25) : ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆ, ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸತ್ಯ ಸುಬ್ರಹ್ಮಣ್ಯ ವಿ.ಎಸ್. ರವರು ಮಂಗಳೂರು ವಿಶ್ವವಿದ್ಯಾನಿಲಯ 2020 ರ ಸಪ್ಟೆಂಬರ್ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಗಣಕ ವಿಜ್ಞಾನ ವಿಭಾಗ ಬಿ.ಸಿ.ಎ. ದಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಕಾಸರಗೋಡಿನ ಶ್ರೀ. ವೆಂಕಟೇಶ್ವರ ಭಟ್ ಮತ್ತು ಶ್ರೀಮತಿ ಗೌರಿ ಅವರ ಪುತ್ರರಾದ ಇವರು ಶೇಕಡಾ 95.72% ಅಂಕಗಳೊಂದಿಗೆ ನಾಲ್ಕನೇ […]
ಇಳಿಸಂಜೆ
ಇಳಿಸಂಜೆಯ ಹೊತ್ತು , ಅದು ನೀನಿಳಿದು ಹೋಗುವ ಹೊತ್ತು ನೀನೆಂದರೆ ಮಸ್ತಕಕ್ಕೇರುವ ಮತ್ತು , ವಾಸ್ತವಕ್ಕೆ ಬರಲೆಂದೇ ನಿತ್ಯ ನೀನಿಳಿದು ಹೋಗುವೆ ಎನ್ನುವುದು ಗೊತ್ತು ಕಾದಿರುವೆ ಬಹಳ ಕಾತುರವ ಹೊತ್ತು , ಕಳೆದುಕೊಂಡಿರುವುದೂ ಬಹಳವೇ ಇತ್ತು #ಏನೇ_ಹೇಳಿ , ಈ ಮರುಳನಿಗೇನು ಗೊತ್ತು , ಮರಳಿನ ಮೇಲೆ ಮೂಡುವುದಿಲ್ಲವೆಂದು ನಿನ್ನ ಆ ಹೆಜ್ಜೆಯ ಒತ್ತು.
ಮ್ಯಾಪಥಾನ್ 2021 ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್ ಪ್ರಶಸ್ತಿ
ಉಡುಪಿ (ಮಾ.23): ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಡಾ. ನಾಗರಾಜ ಭಟ್ ಹಾಗೂ ಡಾ. ಸಚಿನ್ ಭಟ್ ಇವರು ಇಸ್ರೋ-ಐ.ಐ.ಟಿ ಬಾಂಬೆ ವಿ.ಐ.ಸಿ.ಟಿ.ಇ ಇವರ ಜಂಟಿ ಸಹಭಾಗಿತ್ವದಲ್ಲಿ ಆಯೋಜನೆಗೊಂಡ ಮ್ಯಾಪಥಾನ್- 2021 ರ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇವರ ತಂಡದ ‘ಸಮುದ್ರಸೀಮಾ ಕೋಸ್ಟಲ್ ಕರ್ನಾಟಕ ಶೋಲೈನ್ ಡೈನಮಿಕ್ಸ್’ ಎಂಬ ಸಂಶೋಧನೆಗೆ ಈ ಪುರಸ್ಕಾರ ಲಭಿಸಿದೆ. ಡಾ. ನಾಗರಾಜ ಭಟ್ ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ […]
ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ
ಉಡುಪಿ (ಮಾ, 23) :ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು, ಕಲ್ಯಾಣಪುರ ಇದರ ವಾರ್ಷಿಕೋತ್ಸವ ಮಾರ್ಚ್ 19 ರಂದು ನಡೆಯಿತು. ಪಾಂಪೈ ಕಾಲೇಜು, ಐಕಳ ಇದರ ಪ್ರಾಂಶುಪಾಲರಾದ ಶ್ರೀ ಪುರುಷೋತ್ತಮ ಕೆ.ವಿ ಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳ ಮುಂದಿರುವ ಪ್ರಸ್ತುತ ಸವಾಲುಗಳು ಹಾಗೂ ಅವುಗಳನ್ನು ಎದುರಿಸುವ ಬಗೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಚಾಲಕರಾದ ವೆ.ರೆ.ಫಾ ವಲೇರಿಯನ್ ಮೆಂಡೊನ್ಸಾ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಾಂಶುಪಾಲೆ ಶ್ರೀಮತಿ ಸವಿತ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಸಂಘದ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಅಂತರ್ ಕಾಲೇಜು ಸಾಂಪ್ರದಾಯಿಕ ಕ್ರೀಡೆಗಳ ಸಂಪನ್ನ
ಕುಂದಾಪುರ (ಮಾ,22): ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಸಾಂಪ್ರದಾಯಿಕ ಕ್ರೀಡೆಗಳ ಸಮಾರೋಪ ಸಮಾರಂಭ ಮಾರ್ಚ್ 19ರಂದು ನಡೆಯಿತು. ಕಾರ್ಯಕ್ರಮದಲ್ಲಿ ಬ್ರಹ್ಮಾವರದ ಎಸ್.ಎಮ್.ಎಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್, ಕುಂದಾಪುರದ ಭಂಡಾರ್ಕಾರ್ ಆರ್ಟ್ಸ್ ಎಂಡ್ ಸಾಯನ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಶಂಕರನಾರಾಯಣ, ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ […]
ಹಿರಿಯ ನಾಗರಿಕರಿಗೆ ಕರೋನಾ ಲಸಿಕೆ ಹಾಕಿಸಲು ಸೇವಾ ನಿರತರಾದ ಶ್ರೀಮತಿ ರೂಪಾ ಪೈ
ಕುಂದಾಪುರ (ಮಾ. 22) ಕುಂದಾಪುರದ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಪೈಯವರು ತಮ್ಮ ಸದಸ್ಯರ ಜೊತೆಗೂಡಿ 65 ವರ್ಷ ಮೇಲ್ಪಟ್ಟ ವಯೋವೃದ್ಧರನ್ನು ಕೋಟೇಶ್ವರ- ಕುಂಭಾಶಿ -ಗೋಪಾಡಿ ಮೂರು ಗ್ರಾಮಗಳಲ್ಲಿ ಕರೋನಾ ಲಸಿಕೆಯನ್ನು ಹಾಕಿಸಲು ಸಹಕರಿಸಿದರು. ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ : ಮಾರ್ಚ್ 26 ರಂದು ಕನ್ನಡ ನಾಟಕ ಅಧ್ವಾನಪುರ ಪ್ರದರ್ಶನ
ಉಡುಪಿ (ಮಾ. 23) ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಉಡುಪಿ ಇದರ ಲಲಿತ ಕಲಾ ಸಂಘದ ಆಶ್ರಯದಲ್ಲಿ ಅಧ್ವಾನಪುರ ಎನ್ನುವ ಕನ್ನಡ ನಾಟಕ ಇದೇ ಮಾರ್ಚ್ 26 ರ ಸಂಜೆ 6.30ಕ್ಕೆ ಕಾಲೇಜಿನ ಬಯಲು ರಂಗಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವಿ ಹೆಚ್. ಡುಂಡಿರಾಜ್ ರಚನೆಯ, ವಿಘ್ನೇಶ್ ತೆಕ್ಕಾರು, ವಿನ್ಯಾಸ -ನಿರ್ದೇಶನದ ಈ ನಾಟಕಕ್ಕೆ ರೋಹಿತ್ ಎಸ್. ಬೈಕಾಡಿ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಹಾಗೆಯೇ ರವಿ ಕಾರಂತ್ ಕೋಟ ರಾಗ ಸಂಯೋಜನೆ ಮಾಡಿದ್ದು, […]
ವಿಶ್ವ ಜಲ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಗಾರ
ಉಡುಪಿ (ಮಾ. 23) : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪರಿಸರ ಕ್ಲಬ್ ಮತ್ತು ಸಂಸ್ಥೆಯ ಸಿವಿಲ್ ವಿಭಾಗದ ಸ್ಥಪತಿ ಘಟಕದ ಸಹಯೋಗದೊಂದಿಗೆ ವಿಶ್ವ ಜಲದಿನಾಚರಣೆಯ ಅಂಗವಾಗಿ 22 ಮಾರ್ಚ್ 2021 ರಂದು “ಮಾನವನ ಆಧುನಿಕ ಚಟುವಟಿಕೆಗಳು ನೀರಿನ ಕೊರತಗೆ ಕಾರಣವಾಗಿವೆಯೇ” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಜಿಲ್ಲಾ ಜಲಸಂಪನ್ಮೂಲ ವ್ಯಕ್ತಿ ಶ್ರೀ ಜೋಸೆಫ್ ರೆಬೆಲ್ಲೊ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜಗತ್ತು ಎದುರಿಸುತ್ತಿರುವ ಪ್ರಸ್ತುತ […]










