ಬೆಂಗಳೂರು (ಏ. 26) : ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಏಪ್ರಿಲ್ 27 ರಿಂದ 14 ದಿನಗಳ ಕಾಲ ಕರ್ನಾಟಕವನ್ನು ಲಾಕ್ ಡೌನ್ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸಚಿವರೂ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರ ಸಂಜೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ […]
Month: April 2021
ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಮುಂದಿನ ವಾರವೂ ಇದೆ – ಸಚಿವ ಜಗದೀಶ್ ಶೆಟ್ಟರ್
ಹುಬ್ಬಳ್ಳಿ (ಏ, 25) : ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಮುಂದಿನ ವಾರವೂ ಇದೆ. ಲಾಕ್ಡೌನ್ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಏಪ್ರಿಲ್ 26 ರ ಬೆಳಿಗ್ಗೆ 11 ಗಂಟೆಗೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಕ್ಯಾಬಿನೆಟ್ನಲ್ಲಿ ಸಿಎಂ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶಿಶಿರ್ ಸುವರ್ಣ : ಶಿಖರದಷ್ಟೇ ಅಚಲ – ಸುವರ್ಣದಷ್ಟೇ ಮೆರುಗಿನಂತಹ ಪ್ರಖರ ವ್ಯಕ್ತಿತ್ವ
ಕಳೆದ ಅಕ್ಟೋಬರ್ 10, 2020 ರಿಂದ ಆರಂಭಗೊಂಡು ಜನವರಿ 15, 2021ರ ವರೆಗೂ ನಡೆದ ಇಂಡಿಯನ್ ಏರ್ ಫೋರ್ಸ್ ನ ಔದ್ಯೋಗಿಕ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಡೆದ ಎರಡು ಹಂತದಲ್ಲಿನ ( Phase 1: Physical, Written. Phase 2; GD, Psychological and Medical Test) ವಿವಿಧ ಪರೀಕ್ಷೆಗಳಲ್ಲಿ ಸಫಲರಾಗಿ ಇಂಡಿಯನ್ ಏರ್ ಫೋರ್ಸ್ ನ ಏರ್ ಮನ್ (ಟೆಕ್ನಿಕಲ್) ಹುದ್ದೆಗೆ ಆಯ್ಕೆಯಾಗಿ, ಪ್ರಸ್ತುತ ಬೆಳಗಾಂನಲ್ಲಿ ತರಬೇತಿಯಲ್ಲಿರುವ ಶಿಶಿರನ […]
ಕುಂದಾಪುರದ ಅಮಾಸೆಬೈಲು ಗ್ರಾಮದ ಯುವಕ ಸುದೀಪ ಶೆಟ್ಟಿ ಭಾರತೀಯ ಸೈನ್ಯಕ್ಕೆ ಆಯ್ಕೆ
ಕುಂದಾಪುರ (ಏ, 25): ತಾಲೂಕಿನ ಅಮಾಸೆಬೈಲು ಗ್ರಾಮದ ಯುವಕ ಸುದೀಪ ಶೆಟ್ಟಿ ಭಾರತೀಯ ಭೂ ಸೈನ್ಯಕ್ಕೆ ಆಯ್ಕೆ ಆಗಿರುತ್ತಾರೆ. ಅಮಾಸೆಬೈಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿರುವ ಇವರು ಬಿದ್ಕಲ್ಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುತ್ತಾರೆ. ಅಮಾಸೆಬೈಲಿನ ದೇವಿಕಾನು ಒಳಬೈಲು ಗ್ರಾಮದ ಹೊಳೆಬಾಗಿಲು ಮನೆ ಶೇಖರ ಶೆಟ್ಟಿ ಹಾಗೂ ಹೇಮಾ ಶೆಡ್ತಿ ಯವರ ಪುತ್ರ .
ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಗೆ ಮಲ್ಟಿಪಲ್ ಯಂಗ್ ಲಯನ್ ಪ್ರಶಸ್ತಿ
ಉಡುಪಿ (ಏ, 25) : ಇತ್ತೀಚೆಗೆ ನಡೆದ ಲಯನ್ಸ್ ಮಲ್ಟಿಪಲ್ ಅವಾರ್ಡ್ ನಲ್ಲಿ ಗೋವಾ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳನ್ನೊಳಗೊಂಡ ಲಯನ್ಸ್ ಮಲ್ಟಿಪಲ್ ಜಿಲ್ಲೆ 317 ನ “ಮಲ್ಟಿಪಲ್ ಯಂಗ್ ಲಯನ್ “ ಪ್ರಶಸ್ತಿ ಯನ್ನು ಲಯನ್ಸ್ ಕ್ಲಬ್ ಬಸರೂರು ಮೂಡ್ಲಕಟ್ಟೆಯ ಅಧ್ಯಕ್ಷ ಹಾಗೂ ಲಯನ್ಸ್ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳ ಜಿಲ್ಲಾಧ್ಯಕ್ಷ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕರಾದ ಆರ್. […]
ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಂ ಐ ಟಿ ಮೂಡ್ಲಕಟ್ಟೆಯ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ
ಕುಂದಾಪುರ (ಏ, 23) : ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತೆಯ ಕೇಂದ್ರ, ಕರ್ನಾಟಕ ಮತ್ತು ರಾಷ್ಟ್ರೀಯ ಸಾಫ್ಟ್ವೇರ್ & ಸರ್ವಿಸ್ ಕಂಪನಿಗಳ ಅಸೋಸಿಯೇಷನ್ ವತಿಯಿಂದ ನಡೆಸಲ್ಪಟ್ಟ ‘ಮಾರ್ಚ್ ಫಾರ್ ಸೆಕ್ಯೂರ್ ಕೋಡ್’ ಎಂಬ ಅತೀ ಬೇಗ ಕೋರ್ಸ್ ಮುಗಿಸುವ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದು ಅಗ್ರ ಹತ್ತು ವಿಜೇತರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ […]
ಸೋಂಕಿತರು… ನೀವಂದುಕೊಂಡಷ್ಟೇ ಬದುಕಲ್ಲ
ಪ್ರಪಂಚವನ್ನೇ ಗೆಲ್ಲುತ್ತೇನೆ ಎಂದು ಹೊರಟಿದ್ದ ಮಗ, ಸೋಂಕಿಗೆ ಭಯಗೊಂಡು, ಇಂದು ಊರ ದಾರಿ ಹಿಡಿದಿದ್ದ.. ದೂರದಲ್ಲೆ ಕಂಡ ಚಿಂಟು, ಗುರುತು ಹಚ್ಚಿ ಕುಂಯ್ ಗುಡುತ್ತಾ ಓಡಿ ಬಂದು ಕಾಲು ನೇವರಿಸುತಿತ್ತು.. ಅದು ಸುಮಾರು ಆರು ವರ್ಷದ ಹಿಂದಿನ ಮಾತು, ಚಿಂಟುವಿಗಾಗ ನಾಲ್ಕೇ ತಿಂಗಳು.. ಅದರ ನೆನಪಲ್ಲಿ ಇವನ ಮುಖ ಮಾಸಿರಲಿಲ್ಲ.. ಬಾಲ ಅಲ್ಲಾಡಿಸುತಿತ್ತು…. ಚಿಂಟು ಓಡಿದ್ದನ್ನು ಕಂಡು, ಅದಾಗಲೇ ಒಲೆ ಪಕ್ಕ ಇಟ್ಟ ಬಟ್ಟಲಿಗೆ ಒಂದಷ್ಟು ನೀರು ಸುರಿದು, ಅರಸಿನ […]
ಹೆಸಕತ್ತೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಶೈಲಿಯ ನಲಿಕಲಿ ಇಂಗ್ಲಿಷ್ ತರಗತಿ – ವಿಡಿಯೋ ನೋಡಿ
ತೆಕ್ಕಟ್ಟೆ (ಏ, 24) : ಕೋವಿಡ್ ಕಾರಣದಿಂದಾಗಿ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶಾಲೆಯ ಮುಖ ನೋಡದೆ ಅದೆಷ್ಟು ಅದೆಷ್ಟು ಅದೆಷ್ಟು ತಿಂಗಳುಗಳು ಕಳೆದು ಹೋಗಿದೆ. ಎಲ್ಲವೂ ಸರಿ ಹೋಗಬಹುದು,ಕೋವಿಡ್ ನಿಯಂತ್ರಣಕ್ಕೆ ಬರಬಹುದು ಅನ್ನುವ ಆಲೋಚನೆ ಯಲ್ಲಿದ್ದ ನಮಗಿಂದು ಕರೋನ ಎರಡನೇ ಅಲೆ ಬೆಚ್ಚಿಬೀಳಿಸಿದೆ.ಅದೆಷ್ಟೋ ಸರಕಾರಿ ಪ್ರಾಥಮಿಕ ಶಾಲೆಗಳು ಕರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗದೆ […]
ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಯವರಿಗೆ ಎಮರ್ಜಿಂಗ್ ಲಯನ್ ಪ್ರಶಸ್ತಿ
ಕುಂದಾಪುರ (ಏ, 24) : ಇತ್ತೀಚೆಗೆ ನಡೆದ 18 ನೇ ಲಯನ್ಸ್ ಜಿಲ್ಲಾ ಸಮ್ಮೇಳನದ 4 ನೇ ಲಯನ್ಸ್ ಜಿಲ್ಲಾ ಸಂಪುಟ ಸಭೆಯಲ್ಲಿ ಚಿತ್ರದುರ್ಗಾ, ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಸಿ ಯ “ಎಮರ್ಜಿಂಗ್ ಲಯನ್ ಆಫ್ ದ್ ಡಿಸ್ಟ್ರಿಕ್ಟ್ “ ಪ್ರಶಸ್ತಿ ಯನ್ನು ಲಯನ್ಸ್ ಕ್ಲಬ್ ಬಸರೂರು ಮೂಡ್ಲಕಟ್ಟೆಯ ಅಧ್ಯಕ್ಷ ಹಾಗೂ ಲಯನ್ಸ್ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳ ಜಿಲ್ಲಾಧ್ಯಕ್ಷ […]
ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ವತಿಯಿಂದ ರಕ್ತ ದಾನಿಗಳಿಗೆ ವಿಶೇಷ ಮನವಿ
ಕುಂದಾಪುರ (ಏ, 24): ರಕ್ತದಾನ ಶಿಬಿರ ಹಾಗೂ ತುರ್ತು ಸಂದರ್ಭದಲ್ಲಿ ರಕ್ತದಾನದ ಜೊತೆಗೆ ಬಡ ರೋಗಿಗಳ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ಜನಸೇವೆ ಗೈಯುತ್ತಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ರಕ್ತದಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದೆ. 18ವರ್ಷ ಮೇಲ್ಪಟ್ಟವರು ಮೇ ತಿಂಗಳಲ್ಲಿ ಕೊರೊನ ಲಸಿಕೆ ಪಡೆಯುವವರು ಮುಂದಿನ 28ದಿನ ರಕ್ತ ದಾನ ಮಾಡುವಂತಿಲ್ಲ .ಎರಡನೇ ಡೋಸ್ ಪಡೆದು ಒಟ್ಟು ಮುಂದಿನ 56 ದಿನಗಳತನಕ ರಕ್ತ ದಾನ ಮಾಡಲು ಅಸಾಧ್ಯ .ಆ ನಿಟ್ಟಿನಲ್ಲಿ […]










