ದಾವಣಗೆರೆ (ಏ, 11) : ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ದಾವಣಗೆರೆಯಲ್ಲಿ ನಡೆದ ಮಾಸ್ಟರ್-1 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಿರಿಯ ಪವರ್ ಲಿಫ್ಟ್ ರ್ ಅಶೋಕ್ ಜಿ.ವಿ. ಯವರು 84 ಕೆ.ಜಿ ವಿಭಾಗದಲ್ಲಿ 100 ಕೆ.ಜಿ .ಭಾರ ಎತ್ತುವುದರ ಮೂಲಕ ಮೊದಲ ಸ್ಥಾನ ದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆಯ ಬ್ಯಾಂಕ್ ಮ್ಯಾನೇಜರ್ ರಾಗಿ ಸೇವೆ ಸಲ್ಲಿಸಿ ನಿವ್ರತ್ತಿ ಹೊಂದಿರುವ ಅಶೋಕ್ […]
Year: 2021
ವೀಲ್ ಚೇರ್ ರೋಮಿಯೋ ಚಿತ್ರದ ನಾಯಕನಾಗಿ ಮಲೆನಾಡ ಯುವ ಪ್ರತಿಭೆ ರಾಮ್ ಚೇತನ್
ಬೆಂಗಳೂರು (ಏ, 13): ಟ್ರೇಲರ್ ಮೂಲಕ ಬಾರೀ ಸದ್ದು ಮಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷೆಗೂ ಮೀರಿ ಪ್ರೇಕ್ಷಕ ವರ್ಗದ ಮನಗೆದ್ದು ಬಿಡುಗಡೆಗೆ ಸಜ್ಜಾಗುತ್ತಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷೇಯ ಚಿತ್ರ “ವೀಲ್ ಚೇರ್ ರೋಮಿಯೋ”. ಶ್ರೀ ತಿಮ್ಮಪ್ಪ ವೆಂಕಟಾಚಲಯ್ಯ ರವರ ನಿರ್ಮಾಣದ ಅಗಸ್ತ್ಯ ಕ್ರೀಯೇಷನ್ಸ್ ಬ್ಯಾನರ್ ನಡಿ ,ಸ್ಯಾಂಡಲ್ವುಡ್ ನ ಹಲವು ಯಶಸ್ವಿ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವುದರ ಜೊತೆಗೆ ಪ್ರೇಕ್ಷಕರ ಗಮನಸೆಳೆದ ಯುವ ಪ್ರತಿಭೆ ನಟರಾಜ್ ಜಿ. ರವರು ಪೂರ್ಣ ಪ್ರಮಾಣದ ನಿರ್ದೇಶಿಸಿರುವ […]
ಮಂಗಳೂರು ವಿ. ವಿ. ಸ್ನಾತಕೋತ್ತರ ಪರೀಕ್ಷೆಯಲ್ಲಿ ಕುಂದಾಪುರದ ಸಂದೇಶ್ ಶೆಟ್ಟಿ ನಾಲ್ಕನೇ ರ್ಯಾಂಕ್
ಮಂಗಳೂರು (ಏ, 13) : ಮಂಗಳೂರು ವಿಶ್ವವಿದ್ಯಾನಿಲಯ 2019-20 ರಲ್ಲಿ ನಡೆಸಿದ ಎಮ್.ಬಿ.ಎ. ಸ್ನಾತಕೋತ್ತರ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಎಸ್.ಡಿ.ಎಮ್. ಉದ್ಯಮಾಡಳಿತ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕುಂದಾಪುರ ಮೂಲದ ಸಂದೇಶ್ ಶೆಟ್ಟಿ ನಾಲ್ಕನೇ ರ್ಯಾಂಕ್ ಪಡೆದಿರುತ್ತಾರೆ.ಇವರು ಕುಂದಾಪುರ ತಾಲೂಕಿನ ಇಡೂರು-ಕುಂಜ್ಞಾಡಿ ಗ್ರಾಮದ ನಿವಾಸಿ ಶ್ರೀಮತಿ ಮುಕಾಂಬು ಮತ್ತು ಪ್ರಭಾಕರ ಶೆಟ್ಟಿಯವರ ಪುತ್ರ.
ಶ್ರೀ ನಾಗ ದೇವಸ್ಥಾನ ಬೆಣ್ಗೆರೆ – ಗುಜ್ಜಾಡಿ ಸ್ವಾಗತ ಗೋಪುರ ಉದ್ಘಾಟಿಸಿದ ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ
ಗಂಗೊಳ್ಳಿ (ಏ, 10) : ಕುಂದಾಪುರ ತಾಲ್ಲೂಕಿನ ಗುಜ್ಜಾಡಿ ಸಮೀಪದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ಸ್ವಾಗತ ಗೋಪುರವನ್ನು ಬೈಂದೂರಿನ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿಶ್ರೀ ನಾಗ ದೇವಸ್ಥಾನ ಮಂಡಳಿಯ ಅಧ್ಯಕ್ಷ ಉಮೇಶ್ ಮೇಸ್ತ, ಮಾಜಿ ಅಧ್ಯಕ್ಷ ಶಾಂತರಾಮ ಮೇಸ್ತ ಗುಜ್ಜಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಹರೀಶ ಮೇಸ್ತ , ದೇವಸ್ಥಾನದ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. […]
ಬೀಜಾಡಿ-ಗೋಪಾಡಿ : ಶ್ರೀ ರಾಮನವಮಿ ಪ್ರಯುಕ್ತ ಮನೆ – ಮನೆ ಭಜನೆ ಕಾರ್ಯಕ್ರಮ
ಕೋಟೇಶ್ವರ (ಏ, 12): ಶ್ರೀರಾಮ ಭಜನಾ ಮಂಡಳಿ(ರಿ) ಬೀಜಾಡಿ- ಗೋಪಾಡಿ ಇವರು ಶ್ರೀ ರಾಮನವಮಿ ಪ್ರಯುಕ್ತ ಪ್ರತಿವರ್ಷ ನಡೆಸುವ ನಗರ ಭಜನೆ ಮತ್ತು ಶ್ರೀರಾಮ ರಕ್ಷ ಹೋಮ ಧಾರ್ಮಿಕ ಕಾರ್ಯಕ್ರಮದ ಸಲುವಾಗಿ ಬೀಜಾಡಿ- ಗೋಪಾಡಿ ಗ್ರಾಮಗಳಲ್ಲಿ ಏಪ್ರಿಲ್ 9 ರಿಂದ 20 ರ ತನಕ ಮನೆ ಮನೆ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಗ್ರಾಮದ ಮನೆ – ಮನೆಗಳಿಗೆ ತೆರಳಿ ಶ್ರೀರಾಮ ದೇವರ ನಾಮ ಸ್ಮರಣೆಯೊಂದಿಗೆ ಕುಣಿತ ಭಜನೆ […]
ಖಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ನೆರವಾಗಲು ಯಕ್ಷಗಾನ ವೇಷ ಧರಿಸಿದ ಬೆಂಕಿಮಣಿ ಸಂತು ಅರೆಹೊಳೆ
ಕುಂದಾಪುರ (ಏ, 11): ಥಲಸ್ಸೇಮಿಯ ಎನ್ನುವ ಖಾಯಿಲೆಯಿಂದ ಬಳಲುತ್ತಿರುವ ಪಡುಕೋಣೆಯ ರಿಷಿಕ್ ಆಚಾರ್ಯ ಮಗುವಿನ ಚಿಕಿತ್ಸೆಗೆ ನೆರವಾಗಲು ಹೊಯ್ಸಳ ಟ್ರಸ್ಟ್ ನಾಡಾ ಇವರ ನೇತ್ರತ್ವದಲ್ಲಿ ಕುಂದಾಪುರ ವಾರದ ಸಂತೆಯ ಶನಿವಾರದಂದು ಸಹಾಯ ಧನ ಸಂಗ್ರಹಿಸಿದರು. ಯಕ್ಷಗಾನ ಕಲಾವಿದ ನಂದೀಶ್ ಜನ್ನಾಡಿಯವರ ಸಹಕಾರದೊಂದಿಗೆ ಹವ್ಯಾಸಿ ಯಕ್ಷಗಾನ ಕಲಾವಿದ ಬೆಂಕಿ ಮಣಿ ಸಂತು ಆರೆಹೊಳೆ ಮಹಿಷಾಸುರ ವೇಷ ಧರಿಸಿ ಕುಂದಾಪುರದ ವಾರದ ಸಂತೆ ಹಾಗೂ ಪೇಟೆಯಲ್ಲಿ ಸಹಾಯಧನ ಸಂಗ್ರಹ ಮಾಡಿದರು. ಬೆಂಕಿಮಣಿ ಸಂತು […]
ಜನತಾ ಸಂಸ್ಥಾಪಕರ ಮಾಸದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ
ಕೋಟ (ಏ, 12): ಜನತಾ ಸಂಸ್ಥಾಪಕರ ಮಾಸದ ಪ್ರಯುಕ್ತ ಅಯೋಜನೆಗೊಂಡ ಸರಣಿ ಕಾರ್ಯಕ್ರಮಗಳ ಮೊದಲ ದಿನದ ‘”ಸ್ಪೂರ್ತಿ” ಕಾರ್ಯಕ್ರಮದಲ್ಲಿ ಮಣೂರು ಕಡಲತೀರ ಹಾಗೂ ಸ್ಮಶಾನದ ಬಳಿ ಹಮ್ಮಿಕೊಂಡ ಸ್ವಚ್ಚತಾ ಅಭಿಯಾನದಲ್ಲಿ ಗೀತಾನಂದ ಫೌಂಡೇಶನ್ ಹಾಗೂ ಜನತಾ ಸಮೂಹ ಸಂಸ್ಥೆಗಳು ಇದರ ಪ್ರವರ್ತಕರಾದ ಆನಂದ್. ಸಿ. ಕುಂದರ್ ಭಾವಹಿಸಿದ್ದರು. ಕೋಟ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಕ್ಲೀನ ಕುಂದಾಪುರ ಪ್ರೋಜೆಕ್ಟ್ ತಂಡದ ಸದಸ್ಯರು, ಪಂಚವರ್ಣ ಯುವಕ ಮಂಡಲದ ಸದಸ್ಯರು, ನಿಸ್ವಾರ್ಥ […]
ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಸತೀಶ್ ಖಾರ್ವಿ ಯವರಿಗೆ ಚಿನ್ನದ ಪದಕ
ದಾವಣಗೆರೆ (ಏ, 11): ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ದಾವಣಗೆರೆಯಲ್ಲಿ ನಡೆದ ಮಾಸ್ಟರ್-1 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕುಂದಾಪುರದ ನ್ಯೂ ಹರ್ಕ್ಯೂಲಸ್ ಜಿಮ್ ನ ಸತೀಶ್ ಖಾರ್ವಿ ಯವರು 66 ಕೆ.ಜಿ. ವಿಭಾಗದಲ್ಲಿ ಮೊದಲ ಸ್ಥಾನ ದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ದೇಹದಾರ್ಡ್ಯ ಹಾಗೂ ಪವರ್ ಲಿಫ್ಟಿನಲ್ಲಿ ಲಿಫ್ಟಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ಈ ಸ್ಪರ್ಧೆಯಲ್ಲಿ 115 ಕೆಜಿ ಭಾರ ಲಿಫ್ಟ್ ಮಾಡುವುದರ ಮುಖಾಂತರ […]
ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಹಾ ರಥೋತ್ಸವ
ಬಂಟ್ವಾಳ (ಏ, 11): ಬಂಟ್ವಾಳ ತಾಲೂಕಿನ ಕರಿಯಂಗಳದ ಪುರಾಣ ಪ್ರಸಿದ್ದ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮಹಾ ರಥೋತ್ಸವವು ಏಪ್ರಿಲ್ 11 ರಂದು ನಡೆಯಿತು. ಭಕ್ತರ ಆರಾಧ್ಯ ದೇವತೆ ಪೊಳಲಿ ಶ್ರೀರಾಜರಾಜೇಶ್ವರಿ ದೇವರ ದರ್ಶನ ಪಡೆಯುವುದರೊಂದಿಗೆ ರಥೋತ್ಸವದಲ್ಲಿ ಭಕ್ತಿ ಪೂರ್ವಕವಾಗಿ ಪಾಲ್ಗೊಂಡರು.
ಪಶ್ಚಾತಾಪ
ಪಶ್ಚಾತಾಪ ನಾನಾಗ ಕೂಗಿ ಅದೆಷ್ಟೊ ಬೈದಿದ್ದೆಬಾಯಿಯೆ ಆಯುಧವಾಗಿನೀನೆ ನನ್ನ ಶತ್ರು ಎಂಬಂತೆನಿನ್ನನ್ನೆ ದಿಟ್ಟಿಸಿ ನೋಡುತಿದ್ದೆ ಬೖೆಗುಳವನು ಚೀಲದಲಿ ತುಂಬಿನಿನ್ನ ಮೈ ತುಂಬ ಸುರಿದಿದ್ದೆಕೋಪ ಎಂಬ ಕೆಂಡವನುನಿನ್ನ ಸುತ್ತಲು ಉದಿದ್ದೆ ಎಲ್ಲಾವನು ಮರೆತು ಪ್ರೀತಿ ಎಂಬಇಡೀ ಪರ್ವತ ವನ್ನು ಹೊತ್ತು ತಂದುಮತ್ತೆ ಮದ್ದಿಸುವ ಜೀವಿನೀನೊಬ್ಬನೆ ಅಪ್ಪ…. ತಪಾಯ್ತೆಂಬ ಸನ್ನೆ ನನ್ನ ಕಣ್ಣಿಂದತಪ್ಪಿಲ್ಲವೆಂಬ ಪ್ರೀತಿ ನಿನ್ನ ಕಣ್ಣಿಂದನನ್ನ ಮುಖ ನಿನ್ನ ಎದೆಗಂಟಿದಾಗಸತ್ತು ಬದುಕಿದ ಅನುಭವ… ✍ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)










