ಜಯ ಪ್ರಕಾಶ್ ಹೆಗ್ಡೆ…ಈ ಹೆಸರು ಕರ್ನಾಟಕ ಜನತೆಗೆ ಚಿರಪರಿಚಿತ ಮತ್ತು ಸ್ವಚ್ಚಾರಿತ ರಾಜಕಾರಣಿ,ವಿಶೇಷವಾಗಿ ಅವಿಭಜಿತ ಉಡುಪಿ ಜಿಲ್ಲೆಯ ಉದ್ಭವಕ್ಕೆ ಕಾರಣಿಕರ್ತರುಇಂದು ಉಡುಪಿ ಜಿಲ್ಲೆಯ ಹತ್ತು ಹಲವು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿದ ಕೀರ್ತಿ ಸಲ್ಲಬೇಕಾದ್ದು ಅದು ಜೆ.ಪಿ ಹೆಗ್ಡೆ ಅವರಿಗೆ ಎಂದರೆ ಅದು ಅತೀಶಯೊಕ್ತಿ ಅಲ್ಲ. ಅಧಿಕಾರ ಇರಲಿ ,ಇಲ್ಲದಿರಲಿ ತನ್ನತ್ವ ಮತ್ತು ತನ್ನ ಸಿದ್ಧಾಂತ ಎಂದಿಗೂ ಬಿಟ್ಟುಕೊಟ್ಟ ಮನುಷ್ಯ ಅಲ್ಲಎಂಬತ್ತರ ದಶಕಗಳಲ್ಲಿ ಎರಡು ಬಾರಿ ವಿದೇಶಿ ಸಂಸತ್ತಿನಲ್ಲಿ ಸೆನೆಟ್ ಅಧ್ಯಕ್ಷರಾಗಿ […]
Tag: raghavendra harman
ನೀನ್ಯಾರು?
ನೀನು ನನ್ನ ದೀಪವಾ …?ಇಲ್ಲ ಬಾಳಿನ ಬೆಳಕೆ…?ದೀಪ ಕಡಿಮೆ ಮಾತನಾಡುತ್ತದೆ.ಬೆಳಕು ಜಗಜಗಿಸುತ್ತದೆ…ದೀಪದ ಕೆಳಗಿನ ಕತ್ತಲು ನಾನಗಲಾರೆ.ಬೆಳಕಿನ ಆರತಿ ನಿನಾಗಿರುವೆ..ಕುಣಿಯೆಲಾರೆನು ನಾ.ನೆಲ ಅಂಕು ಡೊಂಕು..ಹೇಳಲಾರೆನು ನಾ ಈ ಜಗವೇ ಅಂಕು ಕೊಂಕು..ಗಾಳಿ, ದೀಪ, ಎರಡೂ ನೀನೆ.ಆರದಿರಲಿ ನನ್ನ ನಿನ್ನ ದೀಪ… ರಾಘವೇಂದ್ರ ಹಾರ್ಮಣ್, ಇಡೂರು ಕುಂಜ್ಞಾಡಿ
ಹೆಣ್ಣು – ಮಣ್ಣು
ಇಡೀ ಭೂಮಂಡಲದಲ್ಲಿ ಸೃಷ್ಟಿಸುವ ಶಕ್ತಿ ಇರುವುದು ಹೆಣ್ಣಿಗೆ ….. ನಾನು ಅನ್ನುವ ಈ ಚರ್ಮದ ಹೊದಿಕೆಯ ದೇಹವು ಒಂದಲ್ಲ ಒಂದು ದಿನ ಸೇರಬೇಕು ಮಣ್ಣಿಗೆ….. ಜಗತ್ತು ಮಾಯಾಲೋಕದಂತೆ ಕಂಡಿರಬಹುವುದು ನಿನ್ನ ಕಣ್ಣಿಗೆ …… ಕೊನೆತನಕ ಚಿರಋಣಿಯಾಗಿರು ನಿನ್ನ ಸ್ರಷ್ಠಿಸಿದ ಹೆಣ್ಣಿಗೆ….. ತಾಯ್ನೆಲದ ಮಣ್ಣಿಗೆ ✒️ ರಾಘವೇಂದ್ರ ಹಾರ್ಮಣ್ಇಡೂರು ಕುಂಜ್ಞಾಡಿ
ಅದ್ಯಾವ ಸೀಮೆಯ ಮಾಯಗಾತಿ ನೀನು..!
ಅದ್ಯಾವ ಸೀಮೆಯ ಮಾಯಗಾತಿ ನೀನು..ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ..ಸುಮ್ಮನಿರಲು ಈ ಹೃದಯ ಬಿಡಬೇಕಲ್ಲ.. ಅರೇ ! ಇದೇನು ನಿನ್ನ ಹುಚ್ಚಾಟ ಅನ್ನುವುದು ನೀನುನೀನಿಲ್ಲದೆ ಬದುಕೆನು ನಾನು..ನನಗೆ ನೀನೆ ವ್ಯಾಕ್ಸಿನ್ನು… ಬಿಸಿರಕ್ತ ಹರಿಯುವ ಈ ದೇಹಕ್ಕೆ ..ಅಣು ಕಣದಿ ನಿನ್ನದೆ ಛಾಯೆ..ಈ ನನ್ನ ಬದುಕೆಲ್ಲಾ ನಿನ್ನದೆಯಾ ಮಾಯೆ. ನಿನ್ನ ಪ್ರೀತಿ ಸಂಜೆಯಲಿ ಗುಂಯ್ಗುಡುವ ಸೊಳ್ಳೆಯಂತೆ..ಮಧ್ಯರಾತ್ರಿ ಕಚ್ಚುವ ತಿಗಣೆಯಂತೆಮುಂಜಾನೆಯಲ್ಲಿ ಮುದುಡುವ ಚಳಿಯಂತೆ..ಮಧ್ಯಾಹ್ನದಲ್ಲಿ ನೆತ್ತಿ ಸುಡುವ ಬಿಸಿಲಂತೆ.ಅದಕ್ಕೆ ನಾ ಹೇಳುವೆ ನೀ ನನ್ನಲೊವಿನವಳು..ಮುದ್ದು ಲವ್ ಯೂ…. […]
“ನೆಲೆ ಕಾಣದ ಬಂಡಿ”
ಬಹಳ ವರ್ಷದ ಹಿಂದೆ ಆ ಪುಟ್ಟ ಹಳ್ಳಿಯ ಎಲ್ಲ ಮನೆಯಲ್ಲೂ ಬಡತನವು ತಾಂಡವ ನರ್ತನ ವಾಡುತ್ತಿತ್ತು. ವಸಂತಗಳು ಕಳೆಯುತ್ತಾ ಹೋದಂತೆ ಆ ಹಳ್ಳಿಯಲ್ಲಿ ಹಲವಾರು ಸುಧಾರಣೆ ಕಾಣ ತೊಡಗಿದವು. ಇದರ ಪರಿಣಾಮ ಊರಿನ ಜನತೆ ಬೇರೆ ಬೇರೆ ಊರುಗಳಿಗೆ ತೆರಳಿ ಸ್ವಂತ ಉದ್ಯಮ ಪ್ರಾರಂಭಿಸಿ ತಕ್ಕಮಟ್ಟಿಗೆ ಬದುಕನ್ನು ಸುಧಾರಿಸಿಕೊಂಡಿದ್ದರು. ಸಾಲ ಕಡ ಮಾಡಿ ಅಕ್ಕ ತಂಗಿಯರ ಮದುವೆ ಮತ್ತು ಮನೆ ಕಟ್ಟಿಕೊಂಡು ಮಾಡಿದ ಸಾಲ ತೀರಿಸಿ ಎಲ್ಲವೂ ಒಂದು ಹಂತಕ್ಕೆ […]
ಮಕ್ಕಳಿಗೆ ಚಮಚ ಕೊಡಿ ಸಾಕು… ಚಿನ್ನದ ಚಮಚ ಬೇಡ
ಅಂದು ಗೋಪಾಲರಾಯರ ಪಾಲಿಗೆ ವಿಶೇಷ ದಿನವಾಗಿತ್ತು. ಅಂದು ಅವರಿಗೆ 72 ವರ್ಷವಾಗಿತ್ತು. ಬ್ಯಾಂಕಿಗೆ ಓಡೋಡಿ ಹೋಗಿದ್ದರು. ಅಂದು ಅವರ 25 ವರ್ಷದ ಕನಸು ನನಸಾಗುವುದರಲ್ಲಿತ್ತು. ಆ ದಿನಕ್ಕಾಗಿಯೇ ಅವರು 25 ವರ್ಷ ಕಾದಿದ್ದರು. ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ, ನಿವೃತ್ತಿಯ ನಂತರ ಸಮೀಪದ ದೇವಸ್ಥಾನದಲ್ಲಿ ಮೇಲ್ವಿಚಾರಕನಾಗಿ ತಾನು ಸಂಪಾದಿಸಿದ ಹಣದಲ್ಲಿ ಪ್ರತಿ ತಿಂಗಳು ಒಟ್ಟು 25 ವರ್ಷ ಅಂದರೆ 300 ತಿಂಗಳು 4000 ರೂ. ಜಮೆ ಮಾಡಲು ಅದೆಷ್ಟೊ ಕಷ್ಟ ಪಟ್ಟಿದ್ದರು. […]
ಅಕ್ಕ ಎರಡು ಸೇರು ಅಕ್ಕಿ ಇದ್ರೆ ಕೊಡಿ ಅಕ್ಕ……
ನಾನು ಬೆಂಗಳೂರಿನಿಂದ ಬಂದು ಸುಮಾರು ಹತ್ತು ದಿನ ಆಗಿದೆ. ಮನೆಯ ಮಹಡಿ ಮೇಲಿನ ಒಂದು ಕೋಣೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದೇನೆ. (Covid ಇಲ್ಲ ಆದರೂ ನಮ್ಮ ಜಾಗ್ರತೆ ). ಮನೆಯ ಗೇಟ್ ಹತ್ತಿರ ಒರ್ವ ಮಹಿಳೆಯ ಕೂಗು ಕೇಳಿಸಿತು. ನಮ್ಮ ಮನೆಯ ಎರಡು ನಾಯಿ ಬೌ ಬೌ ಎಂದು ಕೂಗುತ್ತಾ ಆಕೆಯ ಮೇಲೆ ದಾಳಿ ಮಾಡಲು ಮುಂದಾದವು. ನಾನು ಜೋರಾಗಿ ನಾಯಿಗಳನ್ನು ವಾಪಸು ಕರೆದೆ… ಅವು ಸುಮ್ಮನಾದವು.. ಆ ತಾಯಿಯ […]










