ಭದ್ರಾವತಿ(ಡಿ,20): ”ಸ್ವರಾಜ್ಯ 75″ ಇವರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅನಾವರಣ ಅಭಿಯಾನದ 21ನೇ ಮನೆಯ ಕಾಯ೯ಕ್ರಮ ಭದ್ರಾವತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಮ್ ನಾಗಪ್ಪ ರವರ ಮನೆಗೆ ನಾಮ ಫಲಕ ಅಳವಡಿಸುವ ಮೂಲಕ ಹಮ್ಮಿಕೊಳ್ಳಲಾಯಿತು . ವೈದ್ಯಾಧಿಕಾರಿ ಡಾ.ಮಂಜುನಾಥ್ ನಾಮ ಫಲಕ ಅನಾವರಣ ನೆರವೇರಿಸಿ ಮಾತನಾಡಿದರು.
ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಗೈದು ಭದ್ರಾವತಿ ಎಮ್ ನಾಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಯ೯ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಕರಾದ ನಾಗೇಶ್ ಭದ್ರಾವತಿ ಯವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಕೊಡುಗೆಯ ಬಗ್ಗೆ ವಿಚಾರ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ್ ನರಸಿಂಹ ಐತಾಳ್ ಇವರು ವಹಿಸಿದ್ದರು.ವೇದಿಕೆಯಲ್ಲಿ ಡಾ.ಕವಿತಾ ಭದ್ರಾವತಿ ಉಪಸ್ಥಿತರಿದ್ದರು. ಸ್ವಾತಂತ್ರ್ಯ ಹೊರಾಟಗಾರರಾದ ಭದ್ರಾವತಿ ಎಮ್.ನಾಗಪ್ಪ ಇವರಿಗೆ ಗೌರವದ ಸನ್ಮಾನ ಕಾಯ೯ಕ್ರಮ ನಡೆಯಿತು.

ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ ,ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ,ರಾಷ್ಟ್ರೀಯ ಸೇವಾ ಯೋಜನೆ ಎಮ್.ಎಸ್.ಆರ್.ಎಸ್.ಕಾಲೇಜು ಶಿವ೯ ,ಯುವಾ ಬ್ರೀಗೇಡ್ ಭದ್ರಾವತಿ,ಸುಜೀತ್ ಶೆಟ್ಟಿ ಹಿಲಿಯಾಣ ಹಾಗೂ ಗ್ರಾಮಸ್ಥರ ಸಹಕಾರದಿಂದ ಕಾಯ೯ಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಾದ ಪ್ರವೀಣ್ ಭದ್ರಾವತಿ ,ಶ್ರೀಮತಿ ಮಾಲಿನಿ ಜೆ,ಪ್ರೇಮಾವತಿ ಟಿ.ಕೆ,ಅಶ್ವಿನಿ ಶಿವಮೊಗ್ಗ,ಶ್ರೀಮತಿ ಪದ್ಮ ಶಿವಮೊಗ್ಗ,ನಾಗರಾಜ್ ಶಿವಮೊಗ್ಗ,ಪ್ರದೀಪ್ ಭದ್ರಾವತಿ , ಚಂದನ್ ಗೌಡ, ಮತ್ತಿತ್ತರ ಗಣ್ಯರು ಉಪಸ್ಧಿತರಿದ್ದರು.
ಸ್ವರಾಜ್ಯ ೭೫ ಕಾಯ೯ಕ್ರಮ ಸಂಚಾಲಕರು ಆಗಿರುವ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಸಿದರು . ಭಾನುಪ್ರಕಾಶ್ ಎಸ್ ಆಚಾಯ೯ ಭದ್ರಾವತಿ ಧನ್ಯವಾದಗೈದರು .ಅಕ್ಷತಾ ಗಿರೀಶ್ ಐತಾಳ್ ಕಾಯ೯ಕ್ರಮ ನಿರೂಪಣೆಗೈದರು.










