ಕುಂದಾಪುರ(ಜ.02): ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ 2023-2024ನೇ ಸಾಲಿನ ಕಲೋತ್ಸವದ ಭರತನಾಟ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ದೇವಲ್ಕುಂದದ ಅಶೋಕ ಮತ್ತು ನಾಟ್ಯ ಗುರು ವಿದೂಷಿ ಪ್ರವಿತಾ ಇವರ ಪುತ್ರಿ
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಕುಂದಾಪುರ ವಿ. ಕೆ. ಆರ್. ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ಕುಂದಾಪುರ ( ಜ.02): ವಿದ್ಯಾರ್ಥಿಗಳ ಜೀವನದಲ್ಲಿ ಹಲವಾರು ಅವಕಾಶಗಳು ಬರುತ್ತವೆ. ಕೇವಲ ಒಂದೇ ಗುರಿ ನಮ್ಮದಾಗಬಾರದು. ನಮ್ಮ ಆಯ್ಕೆ ಮುಕ್ತವಾಗಿರಬೇಕು ಎಂದು ಮಣಿಪಾಲ ಡಾಟ್ ನೆಟ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ಶ್ರೀ ನಾಗರಾಜ ಕಟೀಲ್ ಹೇಳಿದರು. ಅವರು ಕುಂದಾಪು ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ […]
ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ: ಕಲಾಂ ಜೀವನ ಧರ್ಮ ಮತ್ತು ಮಿಷನ್ ಇಂಡಿಯಾ 2020 ಉಪನ್ಯಾಸ
ಕುಂದಾಪುರ ( ಜ,02): ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಕಲಾಂ ಜೀವನ ಧರ್ಮ ಮತ್ತು ಮಿಷನ್ ಇಂಡಿಯಾ 2020 ರ ಕುರಿತಾಗಿ ಹಿರಿಯ ಸಾಹಿತಿ DRDO ಕೇಂದ್ರ ರಕ್ಷಣಾ ಸಂಶೋಧನಾ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಬ್ದುಲ್ ಕಲಾಂ ಒಡನಾಡಿನಾಗಿದ್ದ ಶ್ರೀ ಜಯಪ್ರಕಾಶ ಪುತ್ತೂರುವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಹಿರಿಯ ಉಪನ್ಯಾಸಕರಾದ ಶ್ರೀ ಭುಜಂಗ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀರಾಮಕೃಷ್ಣ […]
ಬಂಟರ ಯಕ್ಷ ಸಂಭ್ರಮ -ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ
ಕುಂದಾಪುರ. (ಡಿ,30) : ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಲ್ಲಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಶನಿವಾರ ಬಂಟರ ಯಕ್ಷ ಸಂಭ್ರಮ ಹಾಗೂ ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಸಮಾರಂಭವನ್ನು ಆಸ್ಟ್ರೇಲಿಯಾದ ಉದ್ಯಮಿ ಶ್ರೀ ದಯಾನಂದ ಶೆಟ್ಟಿ ಉದ್ಘಾಟಿಸಿದರು. ಇಂಗ್ಲೆಂಡ್ ನ ವೈದ್ಯ ಡಾ.ಅಸೋಡು ಅನಂತರಾಮ್ ಶೆಟ್ಟಿ ಅವರು 10 ಮಂದಿ ಸಾಧಕರಿಗೆ ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ ಮಾಡಿದರು. ಯಕ್ಷದ್ರುವ […]
ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ವಿಸ್ತರಣಾ ಚಟುವಟಿಕೆ
ಕುಂದಾಪುರ (ಜ.01) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ನೇಚರ್ ಕ್ಲಬ್ ಆಶ್ರಯದಲ್ಲಿ ಆಲೂರಿನ ಗುರುವಂದನ ಪೊಟರಿಯಲ್ಲಿ ವಿಸ್ತರಣಾ ಚಟುವಟಿಕೆ ಜರುಗಿತು. ಸಂಸ್ಥಾಪಕರಾದ ಶ್ರೀ ರಘುರಾಮ್ ಕುಲಾಲ್ ವಿದ್ಯಾರ್ಥಿಗಳಿಗೆ ಕುಂಬಾರಿಕೆಯ ಮೇಲೆ ಆಧುನಿಕತೆಯ ಪರಿಣಾಮವನ್ನು ವಿವರಿಸುವ ಜೊತೆಗೆ, ಸರ್ಕಾರ ಒದಗಿಸುವ ಹಲವಾರು ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ವರ್ತಮಾನದ ಪ್ಲಾಸ್ಟಿಕ್ ಯುಗದಲ್ಲಿ ಅಳಿಯುವಿಕೆಯ ಅಂಚಿನಲ್ಲಿರುವ ಕುಂಬಾರಿಕೆಗೆ ವಿಶ್ವಮಾನ್ಯತೆ ದೊರೆಯುವಂತೆ ಮಾಡುವ […]
ಎಚ್ ಎಮ್ ಎಮ್, ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ: ಕ್ರಿಸ್ಮಸ್ ಆಚರಣೆ
ಕುಂದಾಪುರ (ಡಿ.26) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದಆಚರಿಸಲಾಯಿತು. ವಿದ್ಯಾರ್ಥಿಗಳ ಕ್ರಿಸ್ಮಸ್ ನ ಸಂದೇಶವನ್ನು ಸಾರುವ ಗೀತಗಾಯನ ಮತ್ತು ನೃತ್ಯ ಗಮನ ಸೆಳೆಯಿತು. ಸಂಸ್ಥೆಯಅಕಾಡೆಮಿಕ್ ಕೋ ಆರ್ಡಿನೇಟರ್ ವಿಲ್ಮಾ ಡಿ ಸಿಲ್ವಾ ಕ್ರಿಸ್ಮಸ್ ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಅರುಹಿದರು. ಸಂಸ್ಥೆಯಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ […]
ಅಂತರ್ ಕಾಲೇಜು ಲಲಿತಕಲಾ ಸ್ಪರ್ಧೆ : ಡಾI ಬಿ.ಬಿ. ಹೆಗ್ಡೆ ಕಾಲೇಜಿಗೆ ದ್ವಿತೀಯ ಸಮಗ್ರ ಪ್ರಶಸ್ತಿ
ಕುಂದಾಪುರ (ಡಿ.27): ಮಂಗಳೂರಿನ ಮ್ಯಾಪ್ಸ್ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ನಡೆದ ಅಂತರ್-ಕಾಲೇಜು ಮಟ್ಟದ ಲಲಿತಕಲಾ ಸ್ಪರ್ಧೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವೈಯಕ್ತಿಕವಾಗಿ ತೃತೀಯ ಬಿ.ಬಿ.ಎ. ಸ್ವಸ್ತಿಕ್ ಕಾರ್ಟೂನಿಂಗ್ನಲ್ಲಿ ಪ್ರಥಮ ಸ್ಥಾನ, ತೃತೀಯ ಬಿ.ಕಾಂ. ಮನೀಷ್ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಹಾಗೂ ದ್ವಿತೀಯ ಬಿ.ಕಾಂ. ವಿನಾಯಕ ಫೋಟೋಗ್ರಾಫಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ದ್ವಿತೀಯ ಸಮಗ್ರ […]
ಕೊಡ್ಲಾಡಿ ಮ್ಯಾರಥಾನ್ 2023: ಕುಂದಾಪುರದ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಪಟುಗಳಿಂದ ಉತ್ತಮ ಸಾಧನೆ
ಕುಂದಾಪುರ (ಡಿ.25): ಕುಂದಾಪುರದ ಟ್ರ್ಯಾಕ್ ಮತ್ತು ಫೀಲ್ಡ್ ಮತ್ತು ಎಸ್ಎಂಟಿ ಹೈಸ್ಕೂಲ್ ಕೊಡ್ಲಾಡಿ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕೊಡ್ಲಾಡಿಯಲ್ಲಿ ನಡೆದ ಕೊಡ್ಲಾಡಿ ಮ್ಯಾರಥಾನ್ 2023 ರಲ್ಲಿ ಕುಂದಾಪುರದ ಟ್ರ್ಯಾಕ್ ಮತ್ತು ಫೀಲ್ಡ್ ಸಂಸ್ಥೆಯ ಕ್ರೀಡಾಪಟುಗಳು ಉತ್ತಮ ಸಾಧನೆಗೈದಿದ್ದಾರೆ. ಹುಡುಗರ ವಿಭಾಗದ 3 ಕಿಮೀ ಮ್ಯಾರಥಾನ್ ನಲ್ಲಿ ಪ್ರೇಕ್ಷಕ್ 2ನೇ ಸ್ಥಾನ ಸಮರ್ಥ 4ನೇ ಸ್ಥಾನ , 3 ಕಿಮೀ ಹುಡುಗಿಯರು ವಿಭಾಗದಲ್ಲಿ ಶರಣ್ಯ 3ನೇ ಸ್ಥಾನ ,ನವ್ಯಾ ಆಚಾರ್ […]
ಮಂಗಳೂರು ವಿ. ವಿ. ಚೆಸ್ ತಂಡದ ನಾಯಕಿಯಾಗಿ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ದಿವ್ಯಾ ಆಯ್ಕೆ
ಕುಂದಾಪುರ(ಡಿ.25): ತಮಿಳುನಾಡಿನ ಡಾ.ಅಂಬೇಡ್ಕರ್ ಲಾ ಯೂನಿವರ್ಸಿಟಿನಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಚೆಸ್ ಚಾಂಪಿಯನ್ ಶಿಪ್ ಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಚೆಸ್ ತಂಡದ ನಾಯಕಿಯಾಗಿ ಕುಂದಾಪುರದ ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ ಸಿ ಎ ವಿದ್ಯಾರ್ಥಿನಿ ದಿವ್ಯಾ ಆಯ್ಕೆಯಾಗಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ .ಎಂ ಸುಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಬೋಧಕ- […]
ಗಂಗೊಳ್ಳಿಯಲ್ಲಿ ಮನ ಸೆಳೆದ ಮೃಡ ನಾಟಕ
ಗಂಗೊಳ್ಳಿ(ಡಿ.22): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸಿದ “ಮೃಡ” – ಒಂದು ಸತ್ಯದ ಕಥೆ ನಾಟಕ ತನ್ನ ಭಿನ್ನವೆನಿಸುವ ಕಥಾ ವಸ್ತು ಮತ್ತು ವಿಶೇಷ ಪ್ರಸ್ತುತಿಯಿಂದ ಗಮನ ಸೆಳೆಯಿತು. ಮರಣ ಹೊಂದುವ ಮೊದಲು ಶಿವನನ್ನು ನೋಡಬೇಕು ಆ ಮೂಲಕ ಜನರ ಕಣ್ಣಲ್ಲಿ ಆರಾಧಿಸಲ್ಪಡಬೇಕು ಎನ್ನುವ ಬಯಕೆಯೊಂದಿಗೆ ಶಿವನನ್ನು ನೋಡ ಹೊರಟ ಚಾರುಕೀರ್ತಿ ಎನ್ನುವ ಧನಿಕ ಅಂತಿಮವಾಗಿ ತನ್ನ ತಪ್ಪುಗಳಿಗೆ ಅಹಂಕಾರಕ್ಕೆ ಬಲಿಯಾಗುವ […]










