ಕೋಟೇಶ್ವರ(ಅ,22): ಇಲ್ಲಿನ ಪದವಿ ಕಾಲೇಜು ಸಮೀಪದ ಬಸ್ ನಿಲ್ದಾಣ ಒಂದರಲ್ಲಿ ಪ್ರತಿ ರಾತ್ರಿ ಮಧ್ಯಪಾನ ಸೇವಿಸುತ್ತಿದ್ದ ತಮ್ಮ ತಂದೆ ತಾಯಿಯೊಂದಿಗೆ ಅಸುರಕ್ಷತೆಯಿಂದ ಮಲಗುತ್ತಿದ್ದ ಹನ್ನೊಂದು ವರ್ಷ ಮತ್ತು ಒಂದುವರೆ ವರ್ಷದ ಇಬ್ಬರು ಅಬಲೆಯರನ್ನು ಗಮನಿಸಿದ ಸ್ಥಳೀಯ ಆಶಾಕಾರ್ಯಕರ್ತೆಯರು ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರ ಗಮನಕ್ಕೆ ತಂದು ರಕ್ಷಿಸುವಂತೆ ಕೋರಿದ್ದರು. ಆ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲೋಕೇಶ್ ಅಂಕದಕಟ್ಟೆ ಮಾಹಿತಿ ನೀಡಿ ತುರ್ತು ರಕ್ಷಣೆಗೆ ಮನವಿ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಅವಳೆಂದರೆ….
ಸೊ೦ಟಕ್ಕೆ ಸೆರಗು ಸಿಕ್ಕಿಸಿಕೊಂಡು, ಅತ್ತಿತ್ತ ಗಡಿಬಿಡಿ ಮಾಡಿಕೊಂಡು ಓಡಾಡುತ್ತಿದ್ದ ಆಕೆ ಇತ್ತ ಮನೆಯವರ ಮಾತಿಗೆ ಹೂ ಗುಡುತ್ತಾ, ಮಕ್ಕಳಿಗೆ ಹಾಗೆ ಮಾಡು,ಹೀಗೆ ಮಾಡು ಎಂದು ಮಾರ್ಗಸೂಚಿ ನೀಡುತ್ತಾ ,ಅಡುಗೆ ಕೋಣೆಯಲ್ಲೇ ಇದ್ದು ಮನೆಯವರ ಬೇಕು ಬೇಡಗಳ ದಿನಚರಿಯನ್ನ ಅವಳೇ ಸರಿದೂಗಿಸಿಕೊಂಡು ತನ್ನ ಕೆಲಸ ಮುಂದುವರೆಸುತ್ತಿದ್ದಳು. “ನೀರಿನಲ್ಲಿರೋ ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು ಆದರೆ,ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ”ಎನ್ನೋ ಮಾತಿನ ಅರ್ಥ ತಿಳಿದದ್ದು ಸಂಸಾರಸ್ಥರಾದಾಗಲೇ ..!?ಅವಳೆಂದರೆ,ಮಾಟಗಾತಿಯೋ ! ಜಾದುಗಾರ್ತಿಯೋ ನಾ ಕಾಣೆ, […]
ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ರೋಟರಾಕ್ಟ್ ಕ್ಲಬ್ ಉದ್ಘಾಟನೆ
ಗಂಗೊಳ್ಳಿ( ಅ,22): ವ್ಯಕ್ತಿತ್ವದ ಬೆಳವಣಿಗೆ, ನಾಯಕತ್ವ ಗುಣ ಕಲಿಕೆ, ಸಮಾಜದ ಆಗುಹೋಗುಗಳ ಬಗ್ಗೆ ಸ್ಪಂದಿಸುವ ಗುಣ, ಪರಿಸರ ಸಂರಕ್ಷಣೆ ಮುಂತಾದ ಸೃಜನಾತ್ಮಕ ಹವ್ಯಾಸಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ಬೆಳೆಸುವ ಉದ್ದೇಶವನ್ನು ರೋಟರಾಕ್ಟ್ ಕ್ಲಬ್ ಹೊಂದಿದೆ ಎಂದು R I district 3182 ಜಿಲ್ಲಾ ಗವರ್ನರ್ ಎಂ ರಾಮಚಂದ್ರಮೂರ್ತಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಆರಂಭಗೊಂಡ ರೋಟರ್ಯಾಕ್ಟ್ ಕ್ಲಬ್ ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ರೋಟರಾಕ್ಟ್ ಕ್ಲಬ್ […]
ಯುವ ಬ್ರಿಗೇಡ್ ಕುಂದಾಪುರ: ಅ,23ರಂದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ಪಂಜಿನ ಮೆರವಣಿಗೆ
ಕುಂದಾಪುರ (ಅ,22): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಅಕ್ಟೋಬರ್ 23,ರ ಶನಿವಾರ ಸಂಜೆ 7:00 ಗಂಟೆಯಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಪ್ರತಿಭಟನಾ ಮೆರವಣಿಗೆ ಚಾಲನೆ ಪಡೆದು ಕುಂದಾಪುರ ಬಸ್ ನಿಲ್ದಾಣ ಪುನಃ ಶಾಸ್ತ್ರಿ ಸರ್ಕಲ್ ನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಶಿರ್ವ: ಡಂಪಿಂಗ್ ಯಾರ್ಡ್ ಆಗುತ್ತಿದೆ ಶಾಂತಿಗುಡ್ಡೆ
ಶಿರ್ವ(ಅ,21): ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವುದರೊಂದಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಸುತ್ತ-ಮುತ್ತ ದಿನನಿತ್ಯ ಒಡಾಡುವ ನಾಗರಿಕರಿಗೆ ಕೆಟ್ಟ ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡೇ ಹೋಗ ಬೇಕಾದ ಪರಿಸ್ಥಿತಿ ಬಂದೊದಗಿದೆ. ಸುತ್ತಲ ಫಲಪತ್ತೆಯ ಭೂಮಿ ತ್ಯಾಜ ಮತ್ತು ಪ್ಲಾಸ್ಟಿಕ್ ನಿಂದ ತುಂಬಿದೆ. ಇದಕ್ಕೆ ಸಂಬಂದ […]
ಬಡ ಕುಟುಂಬಕ್ಕೆ ಮನೆ ಕಟ್ಟಿಸಿ ಕೊಡುವ ಸಂಕಲ್ಪ:ಸಮಾಜ ಸೇವಕಿ ಶ್ರೀ ಮತಿ ಗೀತಾಂಜಲಿ ಸುವರ್ಣ
ಉಡುಪಿ(ಅ,21) : ಉಷಾ ಪೂಜಾರಿಯವರ ಹಳೆಯದಾದ ಮನೆ ಮಳೆ ಮತ್ತು ಗಾಳಿಗೆ ಮೈಯೊಡ್ಡಿ ಸಂಪೂರ್ಣ ಕುಸಿದಿದ್ದು ,ಇದರ ಮಾಹಿತಿ ಪಡೆದ ಸಮಾಜ ಸೇವಕರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆಗಿರುವ ಶ್ರೀಮತಿ ಗೀತಾಂಜಲಿ ಸುವರ್ಣ ಉಷಾರವರ ಮನೆಗೆ ಭೇಟಿಕೊಟ್ಟು ಇವರ ಕಷ್ಟವನ್ನು ಆಲಿಸಿ ಈ ಬಡ ಕುಟುಂಬಕ್ಕೆ ಆಸರೆಯಾಗಲಿ ಎಂದು ಸ್ನೇಹ ಚಾರಿಟೇಬಲ್ ಟ್ರಸ್ಟ್ ಇದರ ಮುಖ್ಯಸ್ಥರಾದ ಶ್ರೀ ಶಿವಾನಂದ್ ಕೋಟ್ಯಾನ್ ರವರ ಸಂಪೂರ್ಣ ಸಹಕಾರದೊಂದಿಗೆ ಶ್ರೀಮತಿ ಗೀತಾಂಜಲಿ ಸುವರ್ಣ […]
ಯುವಾ ಬ್ರಿಗೇಡ್ ಶಂಕರನಾರಾಯಣ: “ನನ್ನ ಶಾಲೆಗೆ ನನ್ನ ಸೇವೆ” ಸ್ವಚ್ಚತಾ ಕಾರ್ಯಕ್ರಮ
ಕುಂದಾಪುರ(ಅ,20): ಯುವ ಬ್ರೀಗೇಡ್ ಶಂಕರನಾರಾಯಣ ಇವರ ಆಯೋಜನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು “ನನ್ನ ಶಾಲೆಗೆ ನನ್ನ ಸೇವೆ” ಎನ್ನುವ ಶೀರ್ಷಿಕೆಯಡಿಯಲ್ಲಿ ಶಂಕರನಾರಾಯಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಅಕ್ಟೋಬರ್,19 ಹಮ್ಮಿಕೊಳ್ಳಲಾಯಿತು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ತನ್ನ ಶಾಲೆಯ ಆವರಣವನ್ನು ಚಂದಗಾಣಿಸುವಲ್ಲಿ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ನ ಕಾರ್ಯಕರ್ತರಾದ ಸತೀಶ್ ಶಂಕರನಾರಾಯಣ, ಪ್ರಮೋದ್ ಶಂಕರನಾರಾಯಣ, ಕಿರಣ್ ಉಳ್ಳೂರು,ಚೇತನ್ ಶಂಕರನಾರಾಯಣ ಹಾಗೂ ಮುಖ್ಯ ಅತಿಥಿಗಳಾಗಿ […]
ಹಂಗಳೂರು ಗ್ರಾಮ ಪಂಚಾಯತ್: ರಾಷ್ಟ್ರೀಯ ಆರೋಗ್ಯ ಯೋಜನೆಗಳ ಅಭಿಯಾನ
ಕುಂದಾಪುರ (ಅ,20): ಹಂಗಳೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆಗಳು ಅಭಿಯಾನ ಮತ್ತು ಕಾರ್ಯಕ್ರಮಗಳ ಎಲ್.ಇ.ಡಿ. ಸಂಚಾರಿ ವಾಹನಗಳ ಮೂಲಕ ಹಂಗಳೂರು ಗ್ರಾಮದ ಪ್ರತಿಯೊಂದು ವಾರ್ಡಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಒ ರಾಜೇಶ್ ಕೆ.ಸಿ, ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ, ಉಪಾಧ್ಯಕ್ಷೆ ಶ್ರೀಮತಿ ಶಾಲಿನಿ, ಸದಸ್ಯರಾದ ಸತೀಶ್ ಶೇರಿಗಾರ್ ಹಂಗಳೂರು, ಶ್ರೀಮತಿ ಜಲಜಾ ಚಂದನ್, ಶ್ರೀಮತಿ ವನಜ, ರೋಷನ್,ಕೋಡಿ ಪ್ರಾಥಮಿಕ […]
ಸ್ವಾತಂತ್ರ್ಯ ಹೋರಾಟಗಾರ ಉಪ್ಪುಂದ ಗೋವಿಂದ ಖಾವಿ೯ಯವರ ಮನೆಗೆ ನಾಮ ಫಲಕ ಅಳವಡಿಕೆ
ಉಪ್ಪುಂದ(ಅ,19): ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಸಂಕದ ಬಾಗಿಲು ದಿ.ಗೋವಿಂದ ಖಾರ್ವಿಯವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಅಕ್ಟೋಬರ್ 17 ರ ಭಾನುವಾರದಂದು ನಡೆಯಿತು. “ಸ್ವರಾಜ್ಯ ೭೫” ರ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ನಾಮಫಲಕ ಅಳವಡಿಕೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಸಾಹಿತಿಗಳಾದ ಉಪ್ಪುಂದ ಶ್ರೀ ರಮೇಶ್ ವೈದ್ಯರವರು ನಾಮಫಲಕ ಅನಾವರಣ ಮಾಡಿ ದಿ.ಗೋವಿಂದ ಖಾವಿ೯ಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ […]
ಅರಳುವ ಯುವ ಪ್ರತಿಭೆ ರವಿ ಮುಕ್ರಿ ಬೋರೋಳ್ಳಿ
ಸಂತೋಷ ಮತ್ತು ಸಂಗೀತ ಎರಡೂ ಒಂದನ್ನು ಬಿಟ್ಟು ಮತ್ತೊಂದು ಇರಲಾರದೇನೋ ಅನ್ನುವಷ್ಟು ಜೋಡಿಯಾಗಿದೆ. ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾಧಿಸುತ್ತೇವೆ. ಆದರೆ ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ ಎಂಬ ಮಾತಿದೆ. ಸಂತೋಷದ ಹಾಡುಗಳು ಹಾಗೆಯೇ ಸ್ವಲ್ಪ ವೇಗದ ಉತ್ಸಾಹದ ದಾಟಿರುತ್ತದೆ. ದುಃಖದ ಹಾಡುಗಳು ನಿಧಾನವಾಗಿ ಸಾಗುತ್ತದೆ. ಬದುಕೇ ಒಂದು ಸಂಗೀತ ಎಂದುಕೊಂಡರೆ ಖುಷಿಯಲ್ಲಿರುವಾಗ ಕ್ಷಣಗಳು ಬೇಗಬೇಗನೆ ಸರಿದು ಹೋಗುತ್ತದೆ. ದುಃಖದ ಸನ್ನಿವೇಶಗಳು ಬೇಗನೆ ಕರಗುವುದೇ ಇಲ್ಲ .ಕಷ್ಟಗಳು ಹಾಗೂ ದುಃಖ ನಮ್ಮ ಮನಸ್ಸನ್ನು ಕರಗಿಸಿ […]










