ಚಿತ್ರದುರ್ಗ (ಜೂ, 11) : ಕರೋನ ಮಹಾಮಾರಿ ಎರಡನೇ ಅಲೆ ತಡೆಗಟ್ಟುವ ಸಲುವಾಗಿ ಚಿತ್ರದುರ್ಗ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಜಿಲ್ಲೆ ಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತಿದ್ದು, ನಗರದಲ್ಲಿ ವ್ಯಾಕ್ಸಿನ್ ಸಹಾಯವಾಣಿ Vaccine Helpline 24*7 ನ್ನು ನಿರ್ದೇಶಕರಾದ ಶ್ರೀ ಯು ಸಿ ಗಿರೀಶ್ ನೇತೃತ್ವದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸಾರ್ವಜನಿಕರಿಗೆ ಕೋವಿಡ್ -19 ಲಸಿಕಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಾ, ಲಸಿಕಾ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಯುವಾ ಬ್ರಿಗೇಡ್ ಕುಂದಾಪುರ : ಖಾಸಗಿ ಶಾಲಾ ಶಿಕ್ಷಕರಿಗೆ ರೇಷನ್ ಕಿಟ್ ವಿತರಣೆ
ಕುಂದಾಪುರ (ಜೂ, 10): ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ವತಿಯಿಂದ “ಗುರು ಗೌರವ” ಎನ್ನುವ ಶೀರ್ಷಿಕೆಯಡಿಯಲ್ಲಿ ವೇತನವಿಲ್ಲದ, ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ರೇಷನ್ ಕಿಟ್ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿಯ ತನಕ ಸುಮಾರು 13000 ಕಿಟ್ ಗಳನ್ನ ವಿತರಿಸಲಾಗಿದೆ. ಹಾಗೆಯೇ ಯುವಾಬ್ರಿಗೇಡ್ ಕುಂದಾಪುರ ತಂಡದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಕರೋನಾ ಕಾರಣದಿಂದ ಶಾಲೆಗಳು ನಡೆಯದೆ, ಅನೇಕ ಖಾಸಗಿ ಶಿಕ್ಷಕರು ಸಂಬಳ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಗುರುತಿಸಿ , ಸರಿ ಸುಮಾರು […]
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ : ದಾನಿಗಳ ಸಹಕಾರದಿಂದ ಆಶ್ರಮದ ಮಕ್ಕಳಿಗೆ ದಿನಬಳಕೆಯ ಸಾಮಾಗ್ರಿ ಹಾಗೂ ತಿಂಡಿ ತಿನಿಸುಗಳ ಹಸ್ತಾಂತರ
ಕುಂದಾಪುರ (ಜೂ, 10): ಬ್ರಹ್ಮಾವರದ ಅಪ್ಪ -ಅಮ್ಮ ಅನಾಥಾಶ್ರಮ ಹಾಗೂ ಮಣಿಪಾಲ ಹೊಸ ಬೆಳಕು ಆಶ್ರಮಕ್ಕೆ ಕೊಡುಗೈ ದಾನಿಗಳು ಹಾಗೂ ಸಮಾಜ ಸೇವಕರಾದ ಶ್ರೀಕಾಂತ್ ಶೆಣೈ ಕೋಟ ಹಾಗೂ ಕರಾವಳಿಯ ಪ್ರಸಿದ್ಧ ಮೊಬೈಲ್ ಮಳಿಗೆಯಾದ ಶ್ರೀ ಶಾಸ್ತ ಮೊಬೈಲ್ ಕೋಟ ಇದರ ಮಾಲಿಕರಾದ ಆದಿತ್ಯ ಕೋಟ ಇವರು ನೀಡಿದ ಸರಿಸುಮಾರು 18ಸಾವಿರ ದಿಂದ 20ಸಾವಿರ ಮೌಲ್ಯದ ದಿನಬಳಕೆಯ ಸಾಮಾಗ್ರಿ ಮತ್ತು ತಿಂಡಿ ತಿನಿಸುಗಳನ್ನು ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. […]
ದೈವದ ಚಾಕ್ರಿ ವರ್ಗಕ್ಕೆ ಕೋವಿಡ್ ಪರಿಹಾರ ಘೋಷಿಸಲು ಮಹೇಶ್ ಪೂಜಾರಿ ಹೂಡೆ ಆಗ್ರಹ
ಉಡುಪಿ (ಜೂ, 10): ಪರಶುರಾಮ ಸೃಷ್ಟಿಯ ತುಳುನಾಡಿನ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನಗಳು ಹಲವಾರು ಇದೆ. ಆಯಾಯ ಗ್ರಾಮಗಳ ದೈವ ಸ್ಥಾನದಲ್ಲಿ ದೈವ ಚಾಕ್ರಿ ಮಾಡುವ ವರ್ಗಗಳು ಹಲವು ವರ್ಷಗಳಿಂದ ದೈವಾರಾಧನೆಯಲ್ಲೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆಈ ಕರೋನಾ ಮಹಾಮಾರಿಯಿಂದಾದ ದೀರ್ಘಾವಧಿಯ ಲಾಕ್ಡೌನ್ನಿಂದಾಗಿ ಧಾರ್ಮಿಕ ಕ್ಷೇತ್ರಗಳ ಉತ್ಸವ, ಜಾತ್ರೆ, ವಾರ್ಷಿಕೋತ್ಸವಗಳನ್ನು ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದಾಗಿ ಸರ್ಕಾರ ರದ್ದು ಮಾಡಿದೆ. ಆದರೆ ಇದು ದೈವ ಚಾಕ್ರಿ ಸದಸ್ಯರ ಬದುಕಿನ ಮೇಲೆ ನೇರ […]
ಕಮಲಶಿಲೆ ದೇವಳದ ಸೆಕ್ಯೂರಿಟಿ – ಗಾನ ಪ್ರತಿಭೆ – ಮಂಜುನಾಥ್ ಮೊಗವೀರ
ಪ್ರತಿಭೆ ಅನ್ನೋದು ಯಾರ ಸೊತ್ತೂ ಅಲ್ಲ. ಪ್ರತಿಭೆಗೆ ಬಡವ-ಬಲ್ಲಿದ, ಹೆಣ್ಣು-ಗಂಡು ,ಜಾತಿ-ಧರ್ಮದ ತಾರತಮ್ಯ ಇಲ್ಲ. ಪ್ರತಿಯೊಂದು ಪ್ರತಿಭೆ ಅರಳಲು- ಬೆಳೆಯಲು ಬೇಕಾಗಿರುವುದು ಸ್ವ ಆಸಕ್ತಿ, ಛಲ, ಕಾಯಕ, ಪ್ರೀತಿ ಹಾಗೂ ಬೆಂಬಲ. ಗಿಡವೊಂದು ಬಲಿತು ಹೆಮ್ಮರವಾಗಿ ಬೆಳೆಯ ಬೇಕಾದರೆ ಅದಕ್ಕೆ ಪ್ರಕೃತಿಯ ಪಂಚಭೂತಗಳು ಎಷ್ಟು ಮುಖ್ಯವೋ, ಒಬ್ಬ ಪ್ರತಿಭಾವಂತನ ಪ್ರತಿಭೆ ಬಾಹ್ಯ ಪ್ರಪಂಚಕ್ಕೆ ಪಸರಿಸಲು ಸಹೃದಯದವರು ಕೂಡ ಅಷ್ಟೇ ಮುಖ್ಯವಾಗುತ್ತಾರೆ. ಅದೆಷ್ಟೋ ಪ್ರತಿಭೆ ಗಳಿಗೆ ಸೂಕ್ತ ವೇದಿಕೆ ಸಿಗದೇ, ಬೇಲಿಯೊಳಗಿನ […]
ಕರೋನಾ ಕಂಟಕ – ಬದುಕಿನ ತಲ್ಲಣ
ಕಣ್ಣಿಗೆ ಕಾಣದ ಒಂದು ಸಣ್ಣ ವೈರಾಣು ಇಡೀ ಪ್ರಪಂಚದ ಮೂಲೆಮೂಲೆಗಳಲ್ಲಿ ಸಂಚರಿಸಿ ಜನರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ. ಕೆಲವೆ ಕೆಲವೇ ದಿನಗಳಲ್ಲಿ ಕರೋನ ಎನ್ನುವ ಹೆಮ್ಮಾರಿ ಹಲವಾರು ಸಾವು ನೋವುಗಳಿಗೆ ಕಾರಣವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ತನ್ನ ಕಬಂಧಬಾಹುವನ್ನು ಭಾರತದಾದ್ಯಂತ ಅವರಿಸುವುದರ ಜೊತೆಗೆ ರಾಜ್ಯದ ಮೂಲೆ ಮೂಲೆಗೆ ಸಂಚಾರ ಮುಂದುವರಿಸಿ ಹಲವಾರು ಜನರ ಜೀವನದ ದಾರಿಯನ್ನು ಮುಚ್ಚಿದೆ. ಈ ಕರೋನ ಎನ್ನುವ ರೋಗದಿಂದಾಗಿ ನಮ್ಮ ಬದುಕು ಕಬ್ಬಿಣದ ಕಡಲೆಯಂತೆಯಾಗಿದೆ. ದುಡಿದು […]
ಐಎಸ್ಎಸಿ : ಸೈಬರ್ ಭದ್ರತಾ ತರಬೇತಿ ಕೋರ್ಸ್ಗಳಿಗೆ ನೋಂದಣಿ ಪ್ರಾರಂಭ
ಉಡುಪಿ (ಜೂ, 09): ಸೈಬರ್ ಉಲ್ಲಂಘನೆಗಳು ಬಹಳ ಗಂಭೀರ ವಿಷಯವಾಗಿದೆ. ಜಗತ್ತಿನಾದ್ಯಂತ ವ್ಯಾಪಿಸಿರುವ ಸೈಬರ್ ಉಲ್ಲಂಘನೆಗಳ ಘಟನೆಗಳನ್ನು ವಿಶ್ವಸಂಸ್ಥೆಯ ಬಹಳ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ತನ್ನ ನಿರ್ಣಯಗಳ ಮೂಲಕ ಸದಸ್ಯ ರಾಷ್ಟ್ರಗಳು ಜಾಗೃತಿ ಅಭಿಯಾನಗಳನ್ನು ನಡೆಸಬೇಕೆಂದಿದೆ. ಸದಸ್ಯ ರಾಷ್ಟ್ರಗಳು ಸೈಬರ್ ಭದ್ರತಾ ಸಾಮರ್ಥ್ಯದ ಹೆಚ್ಚಿಸಿಕೊಳ್ಳಲು ನೆಟಿಜನ್ಗಳಿಗೆ ತರಬೇತಿ ನೀಡುವುದು ಅಂತರರಾಷ್ಟ್ರೀಯ ಆದೇಶವಾಗಿದೆ. ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿ ಮತ್ತು ಮಾನ್ಯ ಅಪೆಕ್ಸ್ ನ್ಯಾಯಾಲಯವು ಹೆಚ್ಚಿನ ಜಾಗೃತಿಯ […]
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ : ದಾನಿಗಳ ಸಹಕಾರದಿಂದ ಆಶ್ರಮದ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ
ಕುಂದಾಪುರ (ಜೂ, 8) : ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ತಂಡದ ವತಿಯಿಂದ ಜೂನ್ 6 ರಂದು ಸಂತೆಕಟ್ಟೆಯ ಕೃಷ್ಣಾನುಗ್ರಹ ಆಶ್ರಮ ಹಾಗೂ ಉಪ್ಪೂರಿನ ಸ್ಪಂದನ ಆಶ್ರಮದ ಮಕ್ಕಳಿಗೆ ದಾನಿಗಳಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ಇದರ ಗೌರವ ಸಲಹೆಗಾರ ದಿನೇಶ್ ಗಾಣಿಗ ಕೋಟ ಹಾಗೂ ಕೋಟೇಶ್ವರದ ಬ್ರಹ್ಮಶ್ರೀ ಡಿಸ್ಟ್ರಿಬ್ಯೂಟರ್ ನ ಮಾಲಿಕರಾದ ಸಂತೋಷ್ ಶೆಟ್ಟಿನೀಡಿದ ಸಹಾಯಹಸ್ತದಿಂದ ದಿನಬಳಕೆಯ ಸಾಮಾಗ್ರಿ ಹಾಗೂ ತಿಂಡಿ ತಿನಿಸುಗಳನ್ನು […]
ಪ್ರಾಸ – ತ್ರಾಸಗಳ ಮಧ್ಯೆ
ಎಳೆಯೊಂದು ಸಿಕ್ಕಿತುಬರೆಯುವ ತವಕದಲಿದ್ದೆಮಳೆ ಹೊರಗೆ ಸುರಿಯುತಲಿತ್ತು ಶಬ್ದಗಳ ಕದನದಲ್ಲಿ ಎಳೆ ಕಳೆದು ಹೋಗುವುದರಲ್ಲಿತ್ತುಮತ್ತೆ ಎಳೆಯನ್ನು ಒಳಗೆ ಕರೆ ತಂದೆ ಯಾಕೆಂದರೆ ಹೊರಗೆ ಮಳೆ ತುಂಬಾ ಇತ್ತು ಪ್ರಾಸ -ತ್ರಾಸಗಳ ನಡುವೆ ಗೊಂದಲ ಇತ್ತು ! ಕವನಕೆ ವಸ್ತುವಾಗುವ ಎಳೆ ಮಾಯವಾಗಿತ್ತುನನ್ನ ಒಳಗೆ ಒಂದು ಚಂಚಲತೆ ಇತ್ತು ಅದಕ್ಕೊಂದು ರೂಪ ಕೊಡಲಾಗದ ನೋವಿತ್ತು ಕವನ ಹುಟ್ಟದಿರುವ ಆಕ್ರೋಶ ಇತ್ತು . ಅ ಎಳೆಗೂ ನನ್ನ ಮೇಲೆ ಅಸಹನೆ ಇತ್ತು ಏಕೆಂದರೆ ರಸಿಕತೆ […]
ಮೂಡ್ಲಕಟ್ಟೆ ಎಂ ಐ ಟಿ : ವಿಶ್ವ ಪರಿಸರ ದಿನಾಚರಣೆ
ಕುಂದಾಪುರ (ಜೂ, 06): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಪರಿಸರದ ದಿನದ ಪ್ರಯುಕ್ತ ಆನ್ಲೈನ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪರಿಸರ ಸಂರಕ್ಷಣೆ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೋ. ದೀಪಕ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಪರಿಸರವನ್ನು ಸ್ವಚ್ಚ ವಾಗಿಡುವುದರ ಕುರಿತು ಮಾಹಿತಿ ನೀಡಿದರು. ಗಿಡ- ಮರಗಳನ್ನು ಬೆಳೆಸುವುದು ನಾವು ಸಮಾಜಕ್ಕೆ ನೀಡುವ ಮಹತ್ತರವಾದ ಕೊಡುಗೆಯಾಗಿದ್ದು […]










