ಗೋಪಾಡಿ (ಜೂ, 08): ಗೋಪಾಡಿ ಗ್ರಾಮದ ಗಣೇಶ್ ಕಾಂಚನ್ ಪಡುಚಾವಡಿ ಬೆಟ್ಟು ಇವರ ಮನೆಯಲ್ಲಿ ಒಂದೇ ಬಾರಿಗೆ 80 ಬ್ರಹ್ಮಕಮಲ ಹೂವುಗಳು ಅರಳಿದೆ. ವರ್ಷಕ್ಕೊಮ್ಮೆ ಅರಳುವ ಈ ಸುಂದರ ಹೂವುಗಳು ರಾತ್ರಿ ಸುಮಾರು 9 ಗಂಟೆಗೆ ಅರಳಲು ಶುರುವಾಗಿ 12 ಗಂಟೆವರಗೆ ಸಂಪೂರ್ಣವಾಗಿ ಅರಳುತ್ತದೆ. ಹಾಗೆಯೇ ಬೆಳಗ್ಗಿನ ಜಾವದಲ್ಲಿ ಮುದುಡಿಹೋಗುತ್ತದೆ. ಹೂ ಅರಳುವಾಗ ಸುತ್ತಲೂ ಸುವಾಸನೆ ಬೀರುವುದು ಇದರ ವಿಶೇಷ .
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಮಾರಣಕಟ್ಟೆ : ಕೊರೊನಾ ವಾರಿಯರ್ಸ್ಗಳಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
ಹೆಮ್ಮಾಡಿ (ಜೂ, 07): ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಎಜುಕೇಶನಲ್ ಟ್ರಸ್ಟ್ (ರಿ) ಶಿವಮೊಗ್ಗ ಹಾಗೂ ಕುಂದಾಪುರ ಎಜುಕೇಶನಲ್ ಸೊಸೈಟಿ (ರಿ) ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜೂನ್ 07 ರಂದು ಮಾರಣಕಟ್ಟೆಯಲ್ಲಿ ಚಾಲನೆ ನೀಡಲಾಯಿತು. ಧಾರ್ಮಿಕ ದತ್ತಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಸದರಾದ ಬಿ. ವೈ. ರಾಘವೇಂದ್ರ, ಬೈಂದೂರು ಶಾಸಕ ಶ್ರೀ ಬಿ. ಎಂ. […]
ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಪತ್ತೆ – ಸಮಾಜ ಸೇವಕ ಸುರೇಂದ್ರ ಸಂಗಮ್ ನೇತ್ರತ್ವದ ತಂಡದಿಂದ ರಕ್ಷಣೆ
ಕುಂದಾಪುರ (ಜೂ, 7):ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಮಾಜ ಸೇವಕ ಸುರೇಂದ್ರ ಕಾಂಚನ್ ಸಂಗಮ್, ಕುಂದಾಪುರ ಪುರಸಭೆಯ ಉಪಾಧ್ಯಕ್ಷ ಸಂದೀಪ ಖಾರ್ವಿ, ಪತ್ರಕರ್ತ ಕಿರಣ್ ಪೂಜಾರಿ ಮದ್ದುಗುಡ್ಡೆಯವರು 108 ಸಿಬ್ಬಂದಿಯ ಸಹಕಾರದಿಂದ ಸಮೀಪದ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು. ಇವರ ಮಾನವೀಯ ನೆಲೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ : ವಿಶ್ವ ಪರಿಸರ ದಿನಾಚರಣೆ
ಗೋಪಾಡಿ (ಜೂ, 07): ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಂದ್ರ ಕಾಂಚನ್ ಸಂಗಮ್ ಹಾಗೂ ಅಂಗನವಾಡಿ ಶಿಕ್ಷಕಿ ಶ್ರೀಮತಿ ಜಯಂತಿ ರವರು ಸರಿ ಸುಮಾರು 15 ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.ಕೋವಿಡ್ ನಿಯಮದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗೌರವ – ಧನ
ಮೌನ ಮನೆ ಮಾಡಿದೆ. ಹೊರಗೆ ಮೊದಲ ಮುಂಗಾರು ಮಳೆ. ಸಿಡಿಲು, ಗುಡುಗಿನ ಜೊತೆಗೆ ಅ ನಿಮಿತ್ತ ಕೆ.ಇ.ಬಿ. ಯವ ಕರೆಂಟ್ ಬೇರೆ ತೆಗೆದಿದ್ದ. ಮಾತಿಲ್ಲ ಕತೆಯಿಲ್ಲ, ಮಳೆ ಆರ್ಭಟ ಬಿಟ್ಟು ಮಳೆಯನ್ನೇ ನೋಡುತ್ತಾ ಕುಳಿತ ನನಗೆ ಮಧ್ಯಾಹ್ನ ವಿಕಾಸ್ ಹೇಳಿದ ಮಾತು ತಲೆಯಲ್ಲಿ ಕೊರೆಯುತ್ತಾ ಇತ್ತು. ವಿಕಾಸ್ ಯಾರು ಅಂತ ನಿಮಗೆ ಹೇಳಲಿಲ್ಲ! ವಿಕಾಸ್ ಬೆಂಗಳೂರನಲ್ಲಿ ಪರಿಚಯವಾದ ನಟನೆಯಲ್ಲಿ ಆಸಕ್ತಿ ಇರುವ ಹುಡುಗ. ಸಮಾನ ಅಭಿರುಚಿ ಇರುವುದರಿಂದ ಬೇಗನೆ ಗೆಳೆತನವಾಯಿತು. […]
ಭವಿಷ್ಯದ ನಿರೀಕ್ಷೆಯಲ್ಲಿರುವ ಕಂದಮ್ಮಳಿಗೆ ಆಸರೆಯಾಗಿ ನಿಂತ ಸಾಮಾಜಿಕ ಕಳಕಳಿಯ ಸಮಾನ ಮನಸ್ಕರ ಸೇವಾ ತಂಡ
ಉಡುಪಿ (ಜೂ, 06) : ಕಾಡೂರು ಗ್ರಾಮದ ಮುಂಡಾಡಿ ಬಡಾಬೆಟ್ಟು ನಿವಾಸಿ ಚಂದ್ರಾವತಿ ಶೆಟ್ಟಿ ಯವರ ಮಗಳು 10 ವರ್ಷ ಪ್ರಾಯದ ಬಾಲಕಿ ಯುಕ್ತಿ ಶೆಟ್ಟಿ ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದು, ಖಾಯಿಲೆಯ ಅರಿವೂ ಇಲ್ಲದ ಈ ಮಗುವಿನ ನೆರವಿಗಾಗಿ ಕೊಕ್ಕರ್ಣೆ – ಕಾಡೂರು ಸ್ಥಳೀಯ ಪರಿಸರದ ಸಂತೋಷ್ ಶೆಟ್ಟಿ ಮುಂಡಾಡಿ ಅವರ ನೇತೃತ್ವದಲ್ಲಿ ಹಾಗೂ ಅವರ ಆಪ್ತ ಸ್ನೇಹಿತ ವರ್ಗದವರಾದ ಅಶೋಕ್ ಕುಂದರ್ ಮಂದಾರ್ತಿ, ವಸಂತ್ ಕುಮಾರ್ ನುಕ್ಕೂರು, […]
ಕರೋನಾದ ಕಾರ್ಮೋಡದಲ್ಲಿ ಕಾಲೇಜಿನ ಆ ದಿನಗಳು
ಸುಂದರ ಪ್ರಪಂಚದಲ್ಲಿ ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡುತ್ತಿದ್ದ ನಾವುಗಳು ಕರೋನ ಮಹಾಮಾರಿಗೆ ಸಿಲುಕಿ ನೆಲೆ ಇಲ್ಲದ ನಡುಗಾಟದ ಜೀವನಕ್ಕೆ ವಿಲವಿಲ ಒದ್ದಾಡುವಂತಹ ಪರಿಸ್ಥಿತಿ. ಅತ್ತ ಕಾಲೇಜಿನ ಸವಿ-ಸಡಗರ ಇಲ್ಲ, ಇತ್ತ ಮುಂದಿನ ಜೀವನದ ಸ್ಪಷ್ಟತೆ ಕಣ್ಣೆದುರಿಗಿಲ್ಲ. ಎಲ್ಲವೂ ಸರಿ ಇದ್ದಿದ್ದರೆ ಅಂತಿಮ ವರ್ಷದ ಪದವಿ ಮುಗಿಸಿ ಎಲ್ಲೋ ಒಂದು ಕಡೆ ನೆಲೆ ಕಂಡುಕೊಳ್ಳುತ್ತಾ ಇದ್ದೇವು. ಆದರೆ ಈ ಕಾಣದ ಕರೋನ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿ ಬಿಟ್ಟಿದೆ. ತರಗತಿ ಗೋಡೆಗಳ […]
ಸೈಬರ್ ಸುರಕ್ಷತೆ ಸುದ್ದಿ ಪತ್ರದ ಮೊದಲನೇ ಆವೃತ್ತಿಯಾದ “ಸೈಬರ್ ವಾರ್ತಿಕಾ” ಬಿಡುಗಡೆ
ಬೆಂಗಳೂರು (ಜೂ. 06): CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಇದು ತನ್ನ ದ್ವಿಭಾಷಾ ಸೈಬರ್ ಸುರಕ್ಷತೆ ಸುದ್ದಿಪತ್ರದ ಮೊದಲನೇ ಆವೃತ್ತಿಯಾದ “ಸೈಬರ್ ವಾರ್ತಿಕಾ” ವನ್ನು ನಿಮ್ಮೊಂದಿಗೆ ಹಂಚಿಕೊಂಡಿದೆ. ಈ ಸುದ್ದಿ ಪತ್ರದಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉಪಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ಸುದ್ದಿಪತ್ರವು ಆಸಕ್ತಿದಾಯಕ ಮಾಹಿತಿಗಳನ್ನು ಒಳಗೊಂಡಿದ್ದು, “ರಕ್ಷಕ ಮತ್ತು ಭಕ್ಷಕ” ಸೈಬರ್ ಮ್ಯಾಸ್ಕಾಟ್ಗಳ ಮಾರ್ಗದರ್ಶನಗಳನ್ನು ಇದು […]
ಬಾ ಮಳೆಯೇ…, ಬಾ…
ಬಾ ಮಳೆಯೇ…, ಬಾಭಾನು ಅಳುತಿದೆಕತ್ತಲಗೂಡಿನೊಳಗೆಕರಿಮೋಡಗಳ ತಿಕ್ಕಾಟಕೆ ಸಿಕ್ಕಿಕಣ್ಣೀರ ಧಾರೆಗಳು ಮಳೆಯಾಗಿ ಭೂಮಿಗೆ ಸೇರುವ ತವಕದಲಿಗಗನದಲಿ ಮಳೆ ಮೋಡಗಳ ಕದನಭೂಮಿಗೆ ಮಳೆಯ ತಂಪಾದ ನರ್ತನಯಾರಿಗೋ ನೋವಿನ ಅನುಭವ ಇನ್ನೂ ಯಾರಿಗೋ ಸುಖದ ತಾಂಡವಹಾಗಂತ ನೀ ಸುರಿಯದಿರ ಬೇಡನೀ ಚೆಲ್ಲಿದ ಹನಿಯ ಅಮೃತಧಾರೆಗಳುಕಾದ ಭೂಮಿಗೆ ಅದು ಪ್ರೀತಿ ಸಿಂಚನ ನಿರಂತರ ನಿನ್ನ ಪ್ರೇಮ ಹನಿ ಸುರಿಸುತ್ತಿರುಭೂಮಿಯ ಒಡಲು ಒಣಗಿದೆ ನಿನ್ನ ನಿರೀಕ್ಷೆಯಲಿ ಸಾಕು ಪರೀಕ್ಷೆ ಸುರಿಸಿ ಬೀಡು ಇಳೆಗೆ ಮಳೆಯಾಗಿನಿನಗೆ ನೋವು ಆದರೂ […]
ಕೋಟೇಶ್ವರ : ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ
ಕೋಟೇಶ್ವರ (ಜೂ, 05): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೋಟೇಶ್ವರ ಸರಕಾರಿ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಪೂರ್ಣಿಮಾ ಶೇಟ್, ಕೇಂದ್ರದ ನಿರ್ವಾಹಕ ಸುಹಾಸ್ ಪೈ ಜಿಲ್ಲಾಧಿಕಾರಿಗಳಿಗೆ ಲಸಿಕಾ ಕೇಂದ್ರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸೇವಾ ಭಾರತಿಯ ಸ್ವಯಂಸೇವಕರು ಉಪಸ್ಥಿತರಿದ್ದರು.










