ಕೋಟೇಶ್ವರ (ಮೇ, 17): ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಪಡು ಗೋಪಾಡಿಯಲ್ಲಿ ಸತತ ಎರಡು ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿದ್ದು ಗ್ರಾಮಸ್ಥರಿಗೆ ದಿನನಿತ್ಯದ ಕಾರ್ಯಚಟುವಟಿಕೆಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕಾಂಚನ್ ನೇತೃತ್ವದ ತಂಡ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡರು. ಈ ತಂಡ ಇಡೀ ದಿನ ವಿದ್ಯುತ್ ಕಂಬಗಳ ಸುತ್ತ ಬೆಳೆದಿರುವ ಮರ-ಗಿಡಗಳ ಗೆಲ್ಲುಗಳನ್ನು ಕತ್ತರಿಸಿ ಮೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಿ ಗ್ರಾಮಸ್ಥರಿಂದ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ತೆರೆಯೊಂದಿಗೆ ಲೀನವಾದ ನೆನಪು
ಇಪ್ಪತ್ತು ವರ್ಷಗಳ ಹಿಂದೆ ನಾನು SSLC ಯಲ್ಲಿ ಇರುವಾಗ ನನ್ನ ಹಿರಿಯಣ್ಣ ಒಂದು ಸಣ್ಣ ದೋಣಿ ತಂದಿದ್ರು. ನಾನು, ಅಣ್ಣ ಮತ್ತು ನನ್ನ ಗೆಳೆಯ ಹರೀಶ ಸೇರಿ ದಿನಾಲೂ ಮೀನುಗಾರಿಕೆಗೆ ಹೋಗುತ್ತಿದ್ದೆವು. ಬೆಳಿಗ್ಗೆ ಮೂರಕ್ಕೆ ಹೊರಟು ಒಂಬತ್ತು ಗಂಟೆಗೆ ವಾಪಸಾಗುತ್ತಿದ್ದೆವು. ನನಗೆ ಹತ್ತು ಗಂಟೆಗೆ ಶಾಲೆಗೆ ಮುಟ್ಟಬೇಕಿದ್ದ ಕಾರಣ, ಬೇಗ ಬರುತ್ತಿದ್ದೆವು. ಶಾಲೆಗೆ ರಜೆ ಇರುವ ದಿನ ಮಧ್ಯಾಹ್ನದವರೆಗೆ ಫಿಶಿಂಗ್. ಕೆಲವು ದಿನ ಸಂಜೆ ಹೋದರೆ, ರಾತ್ರಿ ವಾಪಸ್ಸು ಬರುತ್ತಿದ್ದೆವು. […]
ದಡವಿಲ್ಲದ ದೋಣಿಗಳು
ಇನ್ನೂ ಅರ್ಧಗಂಟೆ ಅಂದಿದ್ದರೆ ಆದಷ್ಟು ದೋಣಿಗಳು ಹೇಳಹೆಸರಿಲ್ಲದಂತೆ ಸಮುದ್ರದ ಒಡಲು ಸೇರುತ್ತಿದ್ದವು. “ತೀರ” ಅನ್ನುವಂತಿದ್ದ ಕಡಲ ದಂಡೆ ರಕ್ಕಸ ಅಲೆಗಳಿಗೆ ರಕ್ಷಣೆಯಿಲ್ಲದೆ ತಾವಾಗೇ ಸೋಲನ್ನಪ್ಪಿದ್ದವು. ಕೊರೆತಕ್ಕೆ ಸವೆಯುತ್ತಿದ್ದ ಮರಳನ್ನು ಹಿಡಿದಿಡಲಾಗದೆ ಕರಾವಳಿಗುಂಟ ಮರಗಿಡಗಳು ನೀರುಪಾಲಾದವು. ಕೋಟಾದ ಮಣೂರು ಪಡುಕರೆಯಲ್ಲಿ ಕಂಡುಬಂದ ದೃಶ್ಯಗಳಿವು. ಕರಾವಳಿಯುದ್ದಕ್ಕೂ ಇಂದು ಇದೇ ಗೋಳು. ಹರೀಶ್ ಕಾಂಚನ್, ಮುದ್ದುರಾಧ
ತೌಖ್ತೆ ಚಂಡಮಾರುತದ ತೀವ್ರತೆಯಿಂದ ಕಡಲ್ಕೊರೆತಕ್ಕೆ ಒಳಗಾದ ಪ್ರದೇಶಕ್ಕೆ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ
ಬೈಂದೂರು (ಮೇ, 15) : ತೌಖ್ತೆ ಚಂಡಮಾರುತದ ತೀವ್ರತೆಯಿಂದ ಕಡಲ್ಕೊರೆತಕ್ಕೆ ಒಳಗಾದ ಬೈಂದೂರು ಕ್ಷೇತ್ರದ ಕಡಲ ತೀರದ ಭಾಗಗಳಿಗೆ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ನೀಡಿದರು. ಚಂಡ ಮಾರುತದಿಂದಾಗಿ ಸಂಭವಿಸಿದ ಹಾನಿಗಳ ಕುರಿತು ಪರಿಶೀಲನೆ ನಡೆಸಿ ಮುಖ್ಯಮಂತ್ರಿಗಳು ಮತ್ತು ಸಂಸದ ಬಿ.ವೈ ರಾಘವೇಂದ್ರರ ಗಮನಕ್ಕೆ ತಂದು ಸಂತ್ರಸ್ತರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಜೆಸಿಐ ಕುಂದಾಪುರ ಸಿಟಿ : 17 ನೇ ದಿನದ ಲಾಕ್ ಡೌನ್ ಊಟ ವಿತರಣೆ
ಕುಂದಾಪುರ (ಮೇ,15) :ಜೆಸಿಐ ಕುಂದಾಪುರ ಸಿಟಿ ಘಟಕ ಸತತ 17 ನೇ ದಿನದ ಲಾಕ್ ಡೌನ್ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಡಾ|ಉಮೇಶ್ ಪುತ್ರನ್ ರವರ ಪ್ರಾಯೋಜತ್ವ ದಲ್ಲಿ ಕುಂದಾಪುರ ಪರಿಸರದ ಕೂಲಿಕಾರ್ಮಿಕರಿಗೆ ಆಸ್ಪತ್ರೆಯ ರೋಗಿಗಳಿಗೆ, ಲಾರಿ ಚಾಲಕರು ಸೇರಿದಂತೆ ಸುಮಾರು 220 ಕ್ಕಿಂತಲೂ ಹೆಚ್ಚು ಜನ ಹಸಿದವರಿಗೆ ಊಟ ವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ವಿಜಯ ಭಂಡಾರಿ […]
ತೌಖ್ತೇ ಚಂಡಮಾರುತ ಅಬ್ಬರ – ಗೋಪಾಡಿ ಕಡಲತೀರದ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಕುಂದಾಪುರ (ಮೇ. 15) : ತೌಖ್ತೇ ಚಂಡಮಾರುತ ಅಬ್ಬರ ಕರಾವಳಿ ಭಾಗದ ಕಡಲ ತೀರದಲ್ಲಿ ಅಪಾರ ಹಾನಿಯನ್ನು ಉಂಟುಮಾಡಿದ್ದು,ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಕಡಲ ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.. ದಿನದಿಂದ ದಿನಕ್ಕೆ ಸಮುದ್ರದ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು ಕಡಲತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಚಿಂತನೆ ನಡೆಯುತ್ತಿದೆ. ಮೇ 15ರ ಸಂಜೆ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜ ಪೂಜಾರಿ ಹಾಗೂ ಸದಸ್ಯ ಪ್ರಭಾಕರ್ ಯಾನೆ ಪ್ರಕಾಶ್ […]
ಜೆಸಿಐ ಕುಂದಾಪುರ ಸಿಟಿ : 16 ನೇ ದಿನದ ಲಾಕ್ ಡೌನ್ ಉಚಿತ ಮಧ್ಯಾಹ್ನ ಊಟ ವಿತರಣೆ
ಕುಂದಾಪುರ (ಮೇ, 14) : ಜೆಸಿಐ ಕುಂದಾಪುರ ಸಿಟಿ ಘಟಕದ ಸತತ 16 ನೇ ದಿನದ ಲಾಕ್ ಡೌನ್ ಮಿಡ್ ಡೇ ಮಿಲ್ಸ್ ಮೇ13 ರಂದು ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗು ಮಿಲ್ಲತ್ ಫೌಂಡೇಶನ್ ಕುಂದಾಪುರ ತಾಲೂಕು ಇವರ ಸಹಕಾರ ದೊಂದಿಗೆ ನಡೆಯಿತು. ಕುಂದಾಪುರ ಪರಿಸರದಲ್ಲಿ ಲಾರಿ ಚಾಲಕರಿಗೆ, ಕೂಲಿಕಾರ್ಮಿಕರಿಗೆ ,ಆಸ್ಪತ್ರೆ ರೋಗಿ ಗಳಿಗೆ,ಭಿಕ್ಷುಕರಿಗೆಹಾಗೂ ವೃದ್ದರಿಗೆ ಸುಮಾರು 280 ಕ್ಕಿಂತಲೂ ಹೆಚ್ಚು ಹಸಿದವರಿಗೆ ಊಟ ವನ್ನು ನೀಡಲಾಯಿತು. ಈ […]
ಬಾಳ ಸಾರಥಿ
ಅಂದು ಆ ಶಾಲೆಯಲ್ಲೊಂದು ಸಂಭ್ರಮದ ವಾತಾವರಣ. ಎಲ್ಲರೂ ಸಡಗರದಿಂದ ಸಮಾರಂಭಕ್ಕಾಗಿ ತಯಾರಿ ನಡೆಸುವ ತರಾತುರಿಯಲ್ಲಿದ್ದರು. ಎಲ್ಲವೂ ಸಜ್ಜಾಗುವ ವೇಳೆಯಲ್ಲಿ ಗಣ್ಯರೂ ಆಗಮಿಸಲಾರಂಭಿಸಿದ್ದರು. ಕೆಲ ಕ್ಷಣದಲ್ಲೇ ಸಮಾರಂಭದ ಕೇಂದ್ರ ಬಿಂದುವಾದ “ದಿಶಾ ತ್ರಿವೇಣಿ” ತನ್ನ ಜೀವನದ ಅವಿಭಾಜ್ಯ ಅಂಗವಾದ ತಾಯಿಯೊಂದಿಗೆ ಸಮಾರಂಭದ ಸ್ಥಳಕ್ಕೆ ಆಗಮಿಸಿ ತನ್ನೆಲ್ಲಾ ಗುರುವೃಂದರನ್ನು ಮಾತನಾಡಿಸಿ ಆಶೀರ್ವಾದ ಪಡೆದಿದ್ದಳು. ಕೊಂಚ ಸಮಯದಲ್ಲೇ ಸಮಾರಂಭ ಆರಂಭವಾಗಿತ್ತು. ವೇದಿಕೆಯ ಮೇಲೆ ಗಣ್ಯಾತೀಗಣ್ಯರ ನಡುವೆ ತನ್ನ ಮಗಳನ್ನು ಕಂಡ ತ್ರಿವೇಣಿಯವರ ಕಣ್ಣಲ್ಲಿ ಆನಂದಬಾಷ್ಪ. […]
ಮೊದಲು ನೀ ಬದಲಾಗು
ವಾಸ್ತವದ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿದಾಗ ನನಗೆ ನೆನಪಿಗೆ ಬರುವುದು “ಮಾಡಿದ್ದುಣ್ಣೋ ಮಹಾರಾಯ” ಎಂಬ ಮಾತು. ನಮ್ಮ ದೇಶದಲ್ಲಿ ಪರಿಸರ ಕಾಳಜಿ ಬಗ್ಗೆ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಬೋಧಿಸುವ ನಮ್ಮ ಶಿಕ್ಷಣ ವ್ಯವಸ್ಥೆ ಭಾಗಶಃ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆಯೆನೋ ಎಂದೆನಿಸುತ್ತಿದೆ. ಎತ್ತ ನೋಡಿದರೂ ಹಸಿರು ಗಿಡಮರಗಳನ್ನು ಕಿತ್ತೆಸೆದು, ಜಲಮಾಲಿನ್ಯ, ವಾಯುಮಾಲಿನ್ಯ ಮಾಡಿ ಮನುಷ್ಯ ಅಹಂಕಾರದಲ್ಲಿ ಮೆರೆದ!. ಹಾಗಾಗಿ ಅದೇ ಪ್ರಕ್ರತಿ ಇಂದು ಮುನಿಸಿಕೊಂಡು ನಾವು ಆಕ್ಸಿಜನ್ ಗಾಗಿ ಪರದಾಡುವ ಸ್ಥಿತಿಯನ್ನು ತಂದೊಡ್ಡಿದೆ. […]
ಮರಣ ಬಲೆ
ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ “ಮರಣ ಬಲೆ” ಕೂಡಾ ಒಂದು. ಹೆಸರೇ ಅರ್ಥೈಸುವಂತೆ ಅಜಾಗರೂಕತೆ, ಮರಣ-ಮಸಣಕ್ಕೊಯ್ಯುವಂತದ್ದು. ಅಲೆಗಳಬ್ಬರ ಹೆಚ್ಚಿದ್ದಾಗ ಮಾತ್ರ ಬಲೆ ನೀರಿನಾಳಕ್ಕೆ ಇಳಿಯುತ್ತದೆ. ಬಲೆ ಹೊತ್ತು ಅಲೆ ದಾಟಿ ಕೈ ಸಡಿಲಿಸುವಲ್ಲಿ ಮೀನುಗಾರ ನಿಪುಣನಾಗಿರಲೇ ಬೇಕು. ಹೆಚ್ಚಾಗಿ ಆಳ ಸಮುದ್ರದ ಮೀನುಗಾರಿಕೆಗೆ ಮಳೆಗಾಲದ ರಜೆಯಿತ್ತಾಗ ಈ ‘ಮರಣಬಲೆ’ ಯನ್ನು ಅಣಿಗೊಳಿಸಲಾಗುತ್ತದೆ. ಮುಳ್ಳು ಬಿಡಿಸ ಬಲ್ಲವಗೆ ಯಾವ ಮೀನಾದರೇನು? ಅಲೆಗೆ ಎದೆಯೊಡ್ಡುವವಗೆ ಯಾವ ಬಲೆಯಾದರೇನು? ವೀರ ಕಳೆ ಮೊಗದಲ್ಲಿದ್ದರಷ್ಟೇ ಸಾಕು… ಅದೋ […]










