ಗಂಗೊಳ್ಳಿ (ಆ, 30) : ಇಲ್ಲಿನ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಗೆ ಉಡುಪಿ ಜಿಲ್ಲಾ ಸನ್ಮಾನ್ಯ ಉಪ ನಿರ್ದೇಶಕರಾದ ಎನ್. ಹೆಚ್. ನಾಗೂರ್ ಭೇಟಿ ನೀಡಿ ಎಸ್.ಎಸ್ .ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೇ 625 ಅಂಕ ಗಳಿಸಿದ ಕುಮಾರಿ ಶ್ರೇಯ ಮೇಸ್ತ ಹಾಗೂ ಸಹೋದರ ಸಂಜಯ್ ಮೇಸ್ತ (625/600) ರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ವಲಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಪದ್ಮನಾಭ, ಕಾರ್ಮೆಲ್ ಸಂಸ್ಥೆಯ ಶಿಕ್ಷಣ ಕಾರ್ಯದರ್ಶಿ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಸಮಾಜ ಸೇವಕಿ ಶೈನಾ ಕಲ್ಯಾಣ ಪುರ
ಮಾನವೀಯ ನೆಲೆಯ ಸಮಾಜ ಸೇವೆ ಜಾತಿ ಮತ್ತು ಧರ್ಮಗಳನ್ನು ಮೀರಿದ್ದು. ಒಬ್ಬ ವ್ಯಕ್ತಿ ಸಮಾಜಸೇವೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ಸಮಾಜದ ದುರ್ಬಲ ವರ್ಗದವರ ಸೇವೆಯ ಕುರಿತಾದ ತುಡಿತ ಇರಬೇಕು ಜೊತೆಗೆ ಕಷ್ಟದಲ್ಲಿರುವವರಿಗೆ ಮಿಡಿಯುವ ಹ್ರದಯವನ್ನು ಹೊಂದಿರಬೇಕು. ಹೌದು ಆತ್ಮೀಯರೇ , ನಿಮಗೆ ಇಂದು ನಾವು ಸಮಾಜ ಸೇವೆಯಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಶಕ್ತರಿಗೆ ನೆರಳಾಗುತ್ತಿರುವ ಶೈನಾ ಕಲ್ಯಾಣ ಪುರ ರವರನ್ನು ಪರಿಚಯಿಸಲು ಇಚ್ಚಿಸುತ್ತಿದ್ದೇವೆ. ಒಂದು ಹೆಣ್ಣು […]
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೈಕಂಬ್ಳಿ : ಜ್ಞಾನ ಫೌಂಡೇಶನ್ ಬೆಂಗಳೂರು ವತಿಯಿಂದ ಉಚಿತ ಸಮ ವಸ್ತ್ರ ವಿತರಣೆ
ವಂಡ್ಸೆ (ಆ, 29) : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೈಕಂಬ್ಳಿಯ ವಿದ್ಯಾರ್ಥಿಗಳಿಗೆ ಆರ್ಡಿಯ ಸಿ. ಎ. ಸುದೀಪ್ ಶೆಟ್ಟಿ ನಾಯಕತ್ವದ ಜ್ಞಾನ ಫೌಂಡೇಶನ್ ಬೆಂಗಳೂರು ಕೊಡಮಾಡಿದ ಉಚಿತ ಸಮವಸ್ತ್ರವನ್ನು ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆಯವರು ವಿತರಿಸಿದರು. ಗ್ರಾಮೀಣ ಭಾಗದ ನಮ್ಮ ಶಾಲೆಗೆ ಕಟ್ಟಡಗಳ ಕೊರತೆಯಿದೆ. ಅಗತ್ಯ ಸೌಲಭ್ಯಗಳ ಪೂರೈಕೆಗೆ ದಾನಿಗಳ ಸಹಕಾರ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರೇರಣಾ ಮತ್ತು ಜ್ಞಾನ ಪೌಂಢೇಶನ್ ಈ ರೀತಿಯ ಸಹಕಾರಕ್ಕೆ ಧನ್ಯವಾದ ಎಂದು […]
ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಗಂಗೊಳ್ಳಿ (ಆ, 27) : ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ವತಿಯಿಂದ ಎಸ್ ಎಂ ಗೋಪಾಲಕೃಷ್ಣ ಬೆಳ್ಳಾರೆ ಪ್ರಾಯೋಜಕತ್ವದಲ್ಲಿ, ಪೈ ಟೆಕ್ಸ್ ಟೈಲ್ಸ್ ಮತ್ತು ಪೈ ಗಾರ್ಮೆಂಟ್ಸ್ ಗಂಗೊಳ್ಳಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ […]
ಶ್ರೀಗೋವಿಂದ ಬಾಬು ಪೂಜಾರಿಯವರಿಗೆ “ಭಾರತ ಗೌರವ ಪ್ರಶಸ್ತಿ”
ಬೆಂಗಳೂರು (ಆ, 27) : ಜನ್ಮಭೂಮಿ ಫೌಂಡೇಷನ್ (ರಿ)ಬೆಂಗಳೂರು ಕೊಡಮಾಡುವ “ಭಾರತ ಗೌರವ ಪ್ರಶಸ್ತಿ”ಗೆ ಉದ್ಯಮಿ, ಸಮಾಜಸೇವಕ ಶ್ರೀ ಗೋವಿಂದ ಬಾಬು ಪೂಜಾರಿ ಆಯ್ಕೆಯಾಗಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಕೊರೊನಾ ವಾರಿಯರ್ಸ್ಗೆ ಆಗಸ್ಟ್ , 29 ರಂದು ಬೆಂಗಳೂರಿನ ಗಾಂಧಿನಗರದ ಆನಂದರಾವ್ ಸರ್ಕಲ್ ಬಳಿಯ ಸ್ಯಾಂಕ್ಟಮ್ ಹೋಟೆಲ್ ನಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು “ಭಾರತ ಗೌರವ ಪ್ರಶಸ್ತಿ”ಯೊಂದಿಗೆ ಸನ್ಮಾನಗೊಳ್ಳಲಿದ್ದಾರೆ. […]
ಕುಂದವಾಹಿನಿಗೆ ಧನ್ಯವಾದ ಸಲ್ಲಿಸಿದ ಸಾಹಸಿ – ಆಪತ್ಭಾಂಧವ ಈಶ್ವರ್ ಮಲ್ಪೆ
ನನ್ನೆಲ್ಲಾ ಅಭಿಮಾನಿ ಬಂಧುಗಳಿಗೆ ಪ್ರೀತಿ ಪೂರ್ವಕ ಧನ್ಯವಾದಗಳು. ನಾನಾಯ್ತು, ನನ್ನ ಸಮಾಜ ಸೇವೆ ಕಾರ್ಯ ಆಯ್ತು ಎಂದು ಎಲೆಮರೆಯ ಕಾಯಿಯಂತಿದ್ದ ನನ್ನನ್ನು ಇಂದು ನೀವು ಗುರುತಿಸಿ, ಸನ್ಮಾನಿಸಿ ಪ್ರೀತಿಯಿಂದ ಗೌರವಿಸುತ್ತಿರುವುದು ನನ್ನ ಸಮಾಜಸೇವಾ ಕಾರ್ಯದ ಜವಾಬ್ದಾರಿ ಇನ್ನೂ ಹೆಚ್ಚಿಸಿದಂತೆ ಭಾಸವಾಗುತ್ತಿದೆ. ವಿವಿಧ ಮಾಧ್ಯಮಗಳಲ್ಲಿ ನನ್ನ ಸಮಾಜ ಸೇವಾ ಕಾರ್ಯದ ಕುರಿತು ಸಂದರ್ಶನ, ಲೇಖನಗಳು ಬಿತ್ತರಗೊಂಡಿದೆ. ಆದರೆ ನನ್ನ ಈ ಸಮಾಜ ಸೇವಾ ಕಾರ್ಯಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಮುತುವರ್ಜಿವಹಿಸಿದ ಪ್ರಮುಖ ವ್ಯಕ್ತಿ […]
ಕರೋನಾ ಮುಕ್ತ ಪ್ರಶಂಸೆಗೆ ಪಾತ್ರವಾದ ಗೋಪಾಡಿ ಗ್ರಾಮ : ಮುಂಜಾಗ್ರತಾ ಕ್ರಮವಾಗಿ ನಾಲ್ಕನೇ ಬಾರಿ ಕೋವಿಡ್ ಲಸಿಕಾ ಅಭಿಯಾನ
ಕೋಟೇಶ್ವರ (ಆ,25): ಕರೋನಾ ಮುಕ್ತ ಗ್ರಾಮ ಪ್ರಶಂಸೆಗೆ ಪಾತ್ರವಾದ ಗೋಪಾಡಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನಿರಂತರ ಪ್ರಯತ್ನದಿಂದಾಗಿ ಕರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು ,ಮುಂಜಾಗ್ರತಾ ಕ್ರಮವಾಗಿ ಸತತ ನಾಲ್ಕನೇ ಬಾರಿಗೆ ಕೋವಿಡ್ ಲಸಿಕಾ ಅಭಿಯಾನವನ್ನು ಆಗಸ್ಟ್ ,24 ರಂದು ಆಯೋಜಿಸಲಾಗಿತ್ತು. ಈ ಅಭಿಯಾನ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಸರ್ವ ಸದಸ್ಯರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಎಸ್ ಡಿ.ಎಂ.ಸಿ ಅಧ್ಯಕ್ಷರು,ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು […]
ಬೈಂದೂರು ಮಂಡಲ ಬಿ.ಜೆ.ಪಿ. ಎಸ್ಸಿ ಮೊರ್ಚಾ : ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಶಾಸಕರ ಬಿ. ಎಂ. ಸುಕುಮಾರ ಶೆಟ್ಟಿಯವರಿಗೆ ಮನವಿ
ವಂಡ್ಸೆ (ಆ, 23) : ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಬೈಂದೂರು ಮಂಡಲ ಬಿ.ಜೆ.ಪಿ ಎಸ್ಸಿ ಮೊರ್ಚಾದ ಸದಸ್ಯರು ಕ್ಷೇತ್ರದ ಶಾಸಕರಾದ ಬಿ ಎಂ ಸುಕುಮಾರ ಶೆಟ್ಟಿಯವರಿಗೆ ಆಗಸ್ಟ್,22 ರಂದು ಶಾಸಕರ ನಿವಾಸಕ್ಕೆ ತೆರಳಿ ಮನವಿ ನೀಡಿದರು. ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ಚಂದ್ರ ಪಂಚವಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಮೂಡುಬಗೆ, ನಿಕಟಪೂರ್ವ ತಾಲೂಕು ಪಂಚಾಯಿತಿ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಹಾಗೂ […]
ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ : ಭಕ್ತರಿಂದ ದೇವಾಲಯದ ಗರ್ಭಗುಡಿ ದ್ವಾರಕ್ಕೆ ಹಿತ್ತಾಳೆ ಹೋದಿಕೆ ಹಾಗೂ ಪ್ರಭಾವಳಿ ಹಸ್ತಾಂತರ
ಬೈಂದೂರು (ಆ, 23) : ವಿಶ್ವಕರ್ಮ ಸಮಾಜಬಾಂಧವರ ಪ್ರಮುಖ ಧಾರ್ಮಿಕ ಕೇಂದ್ರವಾದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಳ್ಳೂರು -11 ರ ಉಪ್ರಳ್ಳಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಗರ್ಭಗುಡಿಯ ಶಿಲಾಮಯ ದ್ವಾರಬಾಗಿಲುಗಳಿಗೆ ಭಕ್ತರಾದ ಶ್ರೀ ಯೋಗೀಶ್ ಆಚಾರ್ಯ ಮತ್ತು ಶ್ರೀಮತಿ ಶರ್ಮಿಳಾ ಯೋಗೀಶ್ ಆಚಾರ್ಯ ಬಸ್ರೂರು ದಂಪತಿಗಳು ಹಿತ್ತಾಳೆಯ ಕಲಾತ್ಮಕ ಹೊದಿಕೆಯನ್ನು ಹಾಗೂ ಸುಬ್ರಾಯ ಆಚಾರ್ಯ ಮತ್ತು ಮಕ್ಕಳು ಅಕ್ಸಾಲಿಮನೆ ಬಗ್ವಾಡಿ ಯವರು ದೇವರಿಗೆ ಹಿತ್ತಾಳೆಯ ಪ್ರಭಾವಳಿಯನ್ನು ಸೇವಾರೂಪದಲ್ಲಿ ದೇವಾಲಯದ […]
ಗಂಗೊಳ್ಳಿ: ಮೀನುಗಾರರಿಗೆ ಅತ್ಯಾಧುನಿಕ ಜೀವ ರಕ್ಷಕ ಸಲಕರಣೆ ಗಳನ್ನು ಸರಕಾರ ಒದಗಿಸಬೇಕು: ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ ಮನವಿ
ಗಂಗೊಳ್ಳಿ(ಆ,22): ಸರಕಾರ ಮೀನುಗಾರರಿಗೆ ಅತ್ಯಾಧುನಿಕವಾದ ಜೀವ ರಕ್ಷಕ ಸಲಕರಣೆಗಳು ಒದಗಿಸಬೇಕು ಹಾಗೂ ಅಳಿವೆ ಬಾಗಿಲಿನ ಸುತ್ತಮುತ್ತಲು ಮೀನುಗಾರರಿಗೆ ಯಾವುದೇ ರೀತಿಯ ಜೀವ ಹಾನಿಯಾಗದಂತೆ 24X7 ರಕ್ಷಣಾ ಪಡೆ ನಿರ್ಮಿಸಿ ಕಾರ್ಯನಿರತರಾಗುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಗಂಗೊಳ್ಳಿ ವಲಯ ನಾಡದೋಣಿ ಸಂಘದ ವತಿಯಿಂದ ಯಶವಂತ ಖಾರ್ವಿಯವರ ನೇತ್ರತ್ವದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕಿ ಸುಮಲತಾ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗಣಪತಿ ಖಾರ್ವಿ, ನಿರ್ದೇಶಕ ರಾಜೇಶ್ ಖಾರ್ವಿ ಹಾಗೂ ಜೊತೆ […]










