ಮಲ್ಪೆ (ಆ, 09) : ಮಳೆಗಾಲ ಮುಗಿದು, ಮೀನುಗಾರಿಕೆ ವರ್ಷ ಋತು ಆರಂಭಿಸುವ ಶುಭ ಘಳಿಗೆಯಲ್ಲಿ ಸಮುದ್ರ ಪೂಜೆ ಸಲ್ಲಿಸುವುದು ಕರಾವಳಿ ಮೀನುಗಾರರು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಪದ್ದತಿ ಹಾಗೂ ನಂಬಿಕೆ. ಆ ಹಿನ್ನೆಲೆಯಲ್ಲಿ ಮೀನುಗಾರಿಕೆ ನೆಡೆಸುವ ಮೊಗವೀರ ಸಮುದಾಯದ ಗುರು ಹಿರಿಯರು, ಗುರಿಕಾರರು ಹಾಗೂ ಸಮಸ್ತ ಮೀನುಗಾರಿಕೆ ವೃತ್ತಿ ಮಾಡುವ ಜನತೆ ಕರ್ಕಾಟಕ ಅಮಾವಾಸ್ಯೆ ದಿನದಂದು ಮಲ್ಪೆ ಬಂದರಿನಲ್ಲಿ ಪೂಜೆ ಸಲ್ಲಿಸಿ ಸಮುದ್ರದಲ್ಲಿ ಹೇರಳ ಮೀನು ಸಿಗುವಂತಲಿ ಎಂದು […]
Category: ಜಿಲ್ಲಾ ಸುದ್ದಿ
ಸುದ್ದಿ ಸಮಾಚಾರ — > ಜಿಲ್ಲಾ ಸುದ್ದಿ
ಕೊಡುಗೈದಾನಿ, ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಕುಂದಾಪ್ರ ರತ್ನ ಪ್ರಶಸ್ತಿ
ಬೆಂಗಳೂರು (ಆ, 08) : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದಲೂ ಕುಂದಾಪುರ ಭಾಗದ ಜನತೆ ಆಸಾಡಿ ಅಮವಾಸ್ಯೆದಿನದಂದು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು ,ಈ ಬಾರಿ ಆಗಸ್ಟ್ 08 ರ ಆಸಾಡಿ ಅಮವಾಸ್ಯೆಯೆಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ ತಂಡದ ನೇತೃತ್ವದಲ್ಲಿ ರಾಜಾಜಿನಗರದ ಕದಂಬ ಸಾಮ್ರಾಟ್ ಸಭಾ ಭವನದಲ್ಲಿ ವೈಭವದಿಂದ ನೆರವೇರಿತು. ಈ ಸಂದರ್ಭದಲ್ಲಿ ಉದ್ಯಮಿ ,ಶೇಫ್ ಟಾಕ್ ಹಾಸ್ಪಿಟಾಲಿಟಿ […]
ಸನಾತನ ಯಕ್ಷಾಲಯ ಮಂಗಳೂರು ಇದರ 12ನೇ ವಾರ್ಷಿಕೋತ್ಸವ
ಉಡುಪಿ (ಆ, 08): ಯಕ್ಷಗುರು ರಾಕೇಶ್ ರೈ ಅಡ್ಕ ನೇತೃತ್ವದ ಸನಾತನ ಯಕ್ಷಾಲಯ ಮಂಗಳೂರು ಸಂಸ್ಥೆಯು ತನ್ನ 12ನೇ ವಾರ್ಷಿಕೋತ್ಸವವನ್ನು 10ನೇ ಆಗಸ್ಟ್ 2021 ರ ಮಂಗಳವಾರ ಆಚರಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಜೆ ಘಂಟೆ 4.00 ರಿಂದ ಪೂರ್ವರಂಗ ಮತ್ತು ಸಂಜೆ ಘಂಟೆ 4.30 ರಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇದರ ವಿದ್ಯಾರ್ಥಿಗಳಿಂದ ಅತೀ ಅಪರೂಪವಾಗಿ ಕಾಣಸಿಗುವ ಒಡ್ಡೋಲಗಗಳು ಹಾಗೂ ತೆರೆ ಕಲಾಸುಗಳ ಪ್ರದರ್ಶನ ಕಾರ್ಯಕ್ರಮ […]
ಹೋಟೆಲ್ ಉದ್ಯಮಿ ಆತ್ಮಹತ್ಯೆಗೆ ಯತ್ನ : ಈಶ್ವರ್ ಮಲ್ಪೆ ಮತ್ತು ಸತ್ಯದ ತುಳುವೆರ್ ಬಳಗದಿಂದ ರಕ್ಷಣೆ
ಉಡುಪಿ (ಆ, 6) : ಆರ್ಥಿಕ ನಷ್ಟದಿಂದ ಮನನೊಂದು ಗುರುವಾರ ತಡರಾತ್ರಿ ಕುರ್ಕಾಲುನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕೃಷ್ಣ ಭಟ್ ರವರನ್ನು ಆಪದ್ಬಾಂಧವ ಈಶ್ವರ್ ಮಲ್ಪೆ ಹಾಗೂ ಸತ್ಯದ ತುಳುವೆರ್ ಬಳಗದವರು ರಕ್ಷಿಸಿದ್ದಾರೆ. ಉಡುಪಿ ರಥಬೀದಿಯ ಹೋಟೆಲೊಂದರ ಮಾಲೀಕರಾಗಿದ್ದ ಕುಕ್ಕಿಕಟ್ಟೆಯ ಬಾಲಕೃಷ್ಣ ಭಟ್ ಕೋವಿಡ್ ಹಿನ್ನೆಲೆಯಲ್ಲಿ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ್ದರು. ಆರ್ಥಿಕ ನಷ್ಟದ ಕಾರಣದಿಂದ ಮನನೊಂದು ಕುರ್ಕಾಲು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸುದ್ದಿ “ಆಪದ್ಬಾಂಧವ” ಈಶ್ವರ್ ಮಲ್ಪೆ ತಂಡಕ್ಕೆ ತಿಳಿದ […]
ಸಂತೆಕಟ್ಟೆ : ಕೃಷ್ಣಾನುಗ್ರಹ ಮಕ್ಕಳ ಅನಾಥಾಶ್ರಮಕ್ಕೆ ಭೇಟಿ ನೀಡಿದ ಶ್ರೀ ಗೋವಿಂದ ಬಾಬು ಪೂಜಾರಿ
ಉಡುಪಿ (ಆ, 5) : ಇಲ್ಲಿನ ಸಂತೆಕಟ್ಟೆಯ “ಕೃಷ್ಣಾನುಗ್ರಹ” ಅನಾಥ ಮಕ್ಕಳ ದತ್ತು ಸ್ವೀಕಾರ ಕೇಂದ್ರಕ್ಕೆ ಕೊಡುಗೈದಾನಿ, ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಇತ್ತೀಚೆಗೆ ತಮ್ಮ ಕುಟುಂಬಿಕರೊಂದಿಗೆ ಭೇಟಿ ನೀಡಿದರು. ಈ ಸಂದರ್ಭ ಕೇಂದ್ರಕ್ಕೆ ಅಗತ್ಯವಿರುವ ಸುಮಾರು ಒಂದು ತಿಂಗಳ ದಿನಸಿ ಸಾಮಾಗ್ರಿ, ಒಂದು ಸಾವಿರ ಪ್ಯಾಂಪರ್ಸ್ ಹಾಗೂ ಮಕ್ಕಳಿಗೆ ತಿಂಡಿ ತಿನಿಸು ವಿತರಿಸಿದರು. ಅನಾಥಾಶ್ರಮದ ಮಕ್ಕಳ ಜೊತೆ ಕೆಲಕಾಲ ಸಮಯ ಕಳೆದ ಗೋವಿಂದ ಬಾಬು ಪೂಜಾರಿಯವರು ಮಕ್ಕಳ […]
ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಆ, 5) : ಕುಂದಗನ್ನಡ ನಾಡು-ನುಡಿ, ಸಂಸ್ಕೃತಿಯ ಕುರಿತಾಗಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕುಂದಗನ್ನಡ ಭಾಗದ ಜನತೆ ಆಚರಿಸುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್ 09 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಂದಾಪ್ರ ಕನ್ನಡದ ರಾಯಭಾರಿ, ಸಾಂಸ್ಕೃತಿಕ ಚಿಂತಕ ಹಾಗೂ ಶಿಕ್ಷಕರಾದ ಶ್ರೀ ಮನು ಹಂದಾಡಿಯವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ […]
ಕರಾವಳಿಯ ಮೂವರಿಗೆ ಮಂತ್ರಿ ಸ್ಥಾನ : ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ಕುಮಾರ್, ಶ್ರೀ ಅಂಗಾರ ಸಚಿವ ಸಂಪುಟಕ್ಕೆ !
ಬೆಂಗಳೂರು ( ಆ,4) : ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಚಿವ ಸಂಪುಟಕ್ಕೆ ಕರಾವಳಿಯ ಮೂವರು ಆಯ್ಕೆಯಾಗಿದ್ದು, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸಚಿವ ಸ್ಥಾನದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಮಂತ್ರಿಯಾಗಿದ್ದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಮೊದಲ ಬಾರಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹಾಗೂ ಸುಳ್ಯದ ಶಾಸಕ, ಮಾಜಿ ಸಚಿವ ಶ್ರೀ ಅಂಗಾರ ರವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಹಾಲಾಡಿ ಶ್ರೀನಿವಾಸ […]
ರೋಟರಿ ಕ್ಲಬ್ ಕುಂದಾಪುರ : ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಕುಂದಾಪುರ (ಆ, 03) : ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ Rtn. ಸಾಲಗದ್ದೆ ಶಶಿಧರ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು, ತೋಪ್ಲು ಹಾಗೂ ಹಕ್ಲಾಡಿ ಶಾಲಾ ಮಕ್ಕಳಿಗೆ ಅಗಸ್ಟ್ 2 ರಂದು ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ Rtn. ಶಶಿಧರ ಹೆಗ್ಡೆಯವರು ವಹಿಸಿಕೊಂಡು ಶುಭಹಾರೈಸಿ ಮಾತನಾಡಿದರು. ಜಿಲ್ಲಾ ಪ್ರಶಸ್ತಿ ವಿಜೇತ, ಶಿಕ್ಷಕ […]
ಕರೋನಾ ಹಿನ್ನೆಲೆ- ಮಂಗಳೂರು ವಿ.ವಿ ಎಲ್ಲಾ ಪದವಿ ಪರೀಕ್ಷೆಗಳ ರದ್ದು – ತರಗತಿಗಳು ಮುಂದೂಡಿಕೆ: ದ.ಕ. ಜಿಲ್ಲಾಧಿಕಾರಿ ಆದೇಶ
ಕರೋನಾ ಲಾಕ್ಡೌನ್ ಕಾರಣದಿಂದಾಗಿ ಬಾಕಿಯಾದ ಮಂಗಳೂರು ವಿ. ವಿ. 1, 3, 5 ಸೆಮಿಸ್ಟರ್ ನ ಪರೀಕ್ಷೆಗಳು ಅಗಸ್ಟ್ 2 ರಂದು ಪ್ರಾರಂಭಗೊಂಡಿದ್ದು, ಈಗ ಮತ್ತೆ ಕರೋನಾ ಮೂರನೇ ಅಲೆಯ ಆತಂಕದಿಂದಾಗಿ ಮುಂದೂಡಲಾಗಿದೆ.
ಶಿರ್ವ ಸಂತ ಮೇರಿ ಮಹಾವಿದ್ಯಾಲಯ : ಆಡಳಿತ ಸಿಬ್ಬಂದಿ ಶ್ರೀಮತಿ ಅಲ್ವಿರಾ ಕ್ಲೇರೆನ್ಸ್ ಫೆರ್ನಾಂಡಿಸ್ ರವರಿಗೆ ಬೀಳ್ಕೊಡುಗೆ
ಶಿರ್ವ( ಜು, 31) : ಒಂದು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸೇವೆಯು ಅತ್ಯಂತ ಅಮೂಲ್ಯ ಹಾಗೂ ಉಪಯುಕ್ತವಾದುದು. ವರ್ಗವಾರು ಕರ್ತವ್ಯವೆನ್ನವುದು ಜವಾಬ್ದಾರಿಯ ಹಿನ್ನೆಲೆಯಲ್ಲಿ ಇದ್ದರೂ ಕೂಡ ಪ್ರತಿಯೊಬ್ಬರ ಸೇವೆಯೂ ಪರಿಗಣಿತ ಹಾಗೂ ಶ್ರೇಷ್ಠ ವಾದುದು ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೆನಿಸ್ ಡೇಸಾ ಸಂತ ಮೇರಿ ಹೇಳಿದರು. ಅವರು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಆಡಳಿತ ಸಿಬ್ಬಂದಿ ಶ್ರೀಮತಿ ಅಲ್ವಿರಾ ಕ್ಲೇರೆನ್ಸ್ […]










