ಗುರು ಎನ್ನುವ ಪರಿಕಲ್ಪನೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಏಕೆಂದರೆ ಒರ್ವ ಗುರು ತಂದೆ-ತಾಯಿಯ ಎರಡು ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನಾಗಿದ್ದು, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಭಾವಿಸುವ ,ಪ್ರೀತಿಸುವ ಹಾಗೂ ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಮತ್ತು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವ ದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಹಾಕಲು ಶಿಕ್ಷಕರು ಮಾರ್ಗದರ್ಶಕರಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವು ಅಜ್ಞಾನವನ್ನು ಓಡಿಸುವುದೇ ಆಗಿದೆ. ಪ್ರತಿಯೊಬ್ಬರ ಜೀವನದ ಏಳು- ಬೀಳುಗಳಿಗೆ […]
Tag: eshwara navunda
ಕುಂದವಾಹಿನಿಗೆ ಧನ್ಯವಾದ ಸಲ್ಲಿಸಿದ ಸಾಹಸಿ – ಆಪತ್ಭಾಂಧವ ಈಶ್ವರ್ ಮಲ್ಪೆ
ನನ್ನೆಲ್ಲಾ ಅಭಿಮಾನಿ ಬಂಧುಗಳಿಗೆ ಪ್ರೀತಿ ಪೂರ್ವಕ ಧನ್ಯವಾದಗಳು. ನಾನಾಯ್ತು, ನನ್ನ ಸಮಾಜ ಸೇವೆ ಕಾರ್ಯ ಆಯ್ತು ಎಂದು ಎಲೆಮರೆಯ ಕಾಯಿಯಂತಿದ್ದ ನನ್ನನ್ನು ಇಂದು ನೀವು ಗುರುತಿಸಿ, ಸನ್ಮಾನಿಸಿ ಪ್ರೀತಿಯಿಂದ ಗೌರವಿಸುತ್ತಿರುವುದು ನನ್ನ ಸಮಾಜಸೇವಾ ಕಾರ್ಯದ ಜವಾಬ್ದಾರಿ ಇನ್ನೂ ಹೆಚ್ಚಿಸಿದಂತೆ ಭಾಸವಾಗುತ್ತಿದೆ. ವಿವಿಧ ಮಾಧ್ಯಮಗಳಲ್ಲಿ ನನ್ನ ಸಮಾಜ ಸೇವಾ ಕಾರ್ಯದ ಕುರಿತು ಸಂದರ್ಶನ, ಲೇಖನಗಳು ಬಿತ್ತರಗೊಂಡಿದೆ. ಆದರೆ ನನ್ನ ಈ ಸಮಾಜ ಸೇವಾ ಕಾರ್ಯಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಮುತುವರ್ಜಿವಹಿಸಿದ ಪ್ರಮುಖ ವ್ಯಕ್ತಿ […]
ನಾ ಕಂಡಂತೆ ಕರುಣಾಮಯಿ ಶ್ರೀ ಗೋವಿಂದ ಬಾಬು ಪೂಜಾರಿ
ಅದು ಇಡೀ ಜಗತ್ತನ್ನೇ ಸರ್ವನಾಶ ಮಾಡಲು ಬಂದ ಕರೋನ ಮಹಾಮಾರಿಯ ಆರಂಭದ ಸಮಯ. ಕರೋನಾ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ಡೌನ್ ಅನಿವಾರ್ಯವಾಗಿ ಆ ಸಂದರ್ಭದಲ್ಲಿ ಕಂಡುಬಂದರೂ ಸಹ ಹಲವರ ಬದುಕಿನ ದಿಕ್ಕು ತಪ್ಪಿದಂತೂ ಸುಳ್ಳಲ್ಲ. ಸರಿಸುಮಾರು ನಾಲ್ಕು ತಿಂಗಳು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದೆ. 30 ವರ್ಷದಿಂದ ಮುಂಬೈಯಲ್ಲಿ ವಾಸವಾಗಿದ್ದ ನನಗೆ ಬಹುತೇಕ ಎಲ್ಲಾ ಕ್ಯಾಟ್ ರಿಂಗ್ ವಲಯದ ಒಡನಾಟವಿದೆ. ಸಣ್ಣ ಮಟ್ಟದಲ್ಲಿ ನನ್ನ ಒಡೆತನದಲ್ಲಿ ಆಕಾಶ್ ಹೆಲ್ತ್ ಫುಡ್ ಪಾಸ್ತಾ ಅಂಡ್ […]
ಮುಂಬೈ ವೆಡ್ಡಿಂಗ್ ಅಸೋಸಿಯೇಷನ್ ವತಿಯಿಂದ ರಾಜ್ ಸಾಹೇಬ್ ಠಾಕ್ರೆ ಭೇಟಿ
ಮಂಬೈ (ಆ, 03) : ಕೊರೊನಾ ಲಾಕ್ದೌನ್ ನಿಂದಾಗಿ ಮುಂಬೈಯಲ್ಲಿ ಕೇಟರಿಂಗ್ ಮತ್ತು ಡೆಕೋರೇಷನ್ ಉದ್ಯಮಕ್ಕೆ ಬಹಳಷ್ಟು ಪೆಟ್ಟು ಬಿದ್ದಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ನವಿ ಮುಂಬೈ ವೆಡ್ಡಿಂಗ್ ಅಸೋಷಿಯೇಷನ್ (ರಿ.) ಕಳೆದ ಕೆಲವು ತಿಂಗಳುಗಳಿಂದ ಬಹಳ ಶ್ರಮ ಪಡುತ್ತಿದೆ. ಹಲವಾರು ಜನಪ್ರತಿನಿಧಿಗಳ ಬಳಿ ತೆರಳಿ ನೆನೆಗುದಿಗೆ ಬಿದ್ದಿರುವ ಈ ಉದ್ಯಮವನ್ನು ಮತ್ತು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಕೇಟರಿಂಗ್ ಉದ್ಯಮವನ್ನು ಉಳಿಸಿ ಕೊಡಬೇಕಾಗಿ […]
ಬಂಧನದೊಳಗೆ
ಮೋಹವೋ, ವ್ಯಾಮೋಹವೋ … ಸೆಳತಕೆ ಒಳಗಾಗಿ ಬಂದಿಯಾಗುತಿದ್ದೇವೆ….ಯಾರಿಗೂ ತಿಳಿಯದೆ, ತಿಳಿದು ಗೊತ್ತಾಗದೆ ಹೊಟ್ಟೆಯ ಚೀಲ ತುಂಬಿಸಲು…ಜೀವದ ಹಂಗು ತೊರೆದು ಎರಡು ಅಲೆಗಳಿಗೆ ಎದೆ ಕೊಟ್ಟುಈಜಿದ್ದು ಗೊತ್ತಾಗಲೇ ಇಲ್ಲಾ ! ಬದುಕಿನ ದೋಣಿ ಮುಳುಗಿದ್ದು ಗೊತ್ತಾಗುವ ಮುನ್ನವೇ… ಆಸೆ ಭಾಸೆಗಳ ಆಡುವು ಇಟ್ಟಿದ್ದು ನಿನ್ನ ಒಳ ಮನಸಿಗು ಗೊತ್ತಾಗಲಿ …!!! ನೀರಿನ ಸೆಳತದಲ್ಲಿ ಸಿಕ್ಕಿ ಈಗಷ್ಟೇ ದಡಕ್ಕೆ ಬರುತ್ತಿರುವ ದೋಣಿಗೆಮಹತ್ವದ ಸೂಚನೆಯಂತೆ ಏಳುತಿದೆಯಂತೆ ಮೂರನೇ ಅಲೆ ಈ ಅಲೆಗಳಿಗೆ ಬೆಲೆ ಕೊಟ್ಟು […]
ಶ್ರೀ ಗೋವಿಂದ ಬಾಬು ಪೂಜಾರಿಯವರು ಬಡ ಕುಟುಂಬಗಳಿಗೆ ನಾಲ್ಕನೇ ಮನೆ ನಿರ್ಮಿಸಿ, ಹಸ್ತಾಂತರಿಸುವ ಶುಭ ಘಳಿಗೆಯಲ್ಲಿ ….
ತನ್ನ ದುಡಿಮೆಯ ಒಂದು ಭಾಗವನ್ನು ಅಶಕ್ತರ ಪಾಲಿಗೆ ಮೀಸಲಿಟ್ಟು, ನಿರಂತರವಾಗಿ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ್ನು ಹುಟ್ಟುಹಾಕಿ, ಆ ಮೂಲಕ ಕಡು ಬಡವರ ಬದುಕಿನಲ್ಲಿ ಆಶ್ರಯದಾತ, ಅನ್ನದಾತ ಮತ್ತು ಆರೋಗ್ಯದಾತರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಆಶ್ರಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಹಿನ್ನೆಲೆಯಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು […]
ಕುಡಿ – ನುಡಿ
ಎಲ್ಲಾ ಹೆಂಗಳೆಯರು ನನ್ನನ್ನು ಮೆಚ್ಚಿದ್ದೆ, ಮೆಚ್ಚಿದ್ದು ನಾ ಅವರಿಗೆ ಅಣ್ಣಾ ನಂತೆ…..ಅದಕ್ಕೆ ಕಾರಣ ಕೇಳಿದರೆ …..ನಾ ಕುಡಿಯುದಿಲ್ಲವಂತೆ…….!!! ✍️ಈಶ್ವರ ಸಿ ನಾವುಂದ.
ನಿದ್ದೆ ಬಾರದ ರಾತ್ರಿ
ಮಗ್ಗಲು ಬದಲಿಸಲು ರಾತ್ರಿಗಳೆಷ್ಟುಘೋರ ರಾತ್ರಿಯಲ್ಲಿ ಬೆಳದಿಂಗಳ ಹುಡುಕುವ ಬಯಕೆ!ಒಳಗೆ ಹೇಳಲಾಗದ ಚಡಪಡಿಕೆಹೊರಗೆ ಘನ ಘೋರ ಮಳೆನಿದ್ದೆ ಹತ್ತಿರ ಸುಳಿಯುತ್ತಿಲ್ಲ …ಅದೇನೋ ಯಾತನೆ….. ಕಠೋರ ವರ್ತನೆ ಹೇಳಬೇಕಾದುದು ಹೇಳಲಾಗುತ್ತಿಲ್ಲಅನುಭವಿಸಬೇಕಾದುದು.. ಅನುಭವಿಸಲಾಗುತ್ತಿಲ್ಲನನ್ನ ಬಣ್ಣ ಮಾಸಿದ ಬದುಕಿನ ಬಗ್ಗೆ ಏನಾದರೂ ಹೇಳಲೇ ಬೇಕಿತ್ತುಕಪ್ಪು ಮಸಿ ಹಚ್ಚಿದ ವಿಧಿ ಬರಹದ ಪರಿಯು ಹೇಳಬೇಕಿತ್ತುನಿದ್ದೆಗೂ ಹೊಟ್ಟೆಕಿಚ್ಚು …ಯಾಕೆ ಗೊತ್ತಾ ನಿದ್ದೆ ಬಂದರೆ ನೀನು ಕನಸಲ್ಲಿ ಬಂದು ಬಿಡ್ತೆಯಾಲ್ಲಾ….!?
“ಮಳೆ ಹನಿ”
ಬಾನಿಂದ ಜಾರಿ ಹಂಚಿನ ಮೇಲೆರಗಿ ಯಾರಿಗೂ ಕಾಯದೆನನ್ನ ಬಳಿ ಬಂದು ಉಲ್ಲಾಸ ನೀಡಿದ್ದುಯಾರಿಗೂ ಗೊತ್ತಾಗಲಿಲ್ಲಕೆಲಸವಿಲ್ಲದೆ ಕುಳಿತ ನನ್ನೊಬ್ಬನನ್ನು ಬಿಟ್ಟು … ವರ್ಣಿನೆಗೂ ಮೀರಿದ ನಿನ್ನ ಮಾಯೆನಿನ್ನ ಕಿರು ಹನಿಯೇ ಪ್ರಕ್ರತಿಗೆ ಛಾಯೆ ಗೊತ್ತಾಗುತ್ತಿಲ್ಲವಲ್ಲಾ ನಿನ್ನ ತುಂತುರು ಹನಿಗಳ ಲೀಲೆ ಆಕಾಶ ಬಿರಿದು ಹೊರ ಬರಲು ಸಾಲು ನಿಂತ ಹನಿಗಳ ಸರದಿ.ನೀ ಹಿತ ಮಿತವಾಗಿ ಬಂದರಷ್ಟೇ ಜಗಕೆ ನೆಮ್ಮದಿಜೋರಾಗಿ ಸುರಿದರೆ ಮಾಡಬೇಕಾದಿತು ನಿನ್ನ ಮೇಲೆ ವರದಿ ✍️ಈಶ್ವರ ಸಿ. ನಾವುಂದ
ನೆನಪು
ಅದೆಷ್ಟೋ ರಾತ್ರಿ ನಿನ್ನ ನೆರಳ ಚಾದರ ಹೊದ್ದು ಮಲಗಿದ್ದೆ ನಾನು….ಕನಸು ಮಾರಿಕೊಂಡು ನಿನ್ನ ಸವಿನೆನಪ ಮೆರವಣಿಗೆಯಲ್ಲಿ….ಕಳೆದು ಹೋದ ಬಯಕೆಗಳ ಹುಡುಕಾಟದಲ್ಲಿ ಹುಟ್ಟಿದ ಭಾವನೆಗಳಿಗೆ ಲೆಕ್ಕವೇ ಇಲ್ಲ …ಚಾದರದ ಮುಸುಕಿನೊಳಗಿನ ಗುದ್ದಾಟಗಳಿಗೆ ಅರ್ಥವೇ ಇಲ್ಲ ….ಬರಿ ಹಸಿ, ಹಸಿ ನೆನಪುಗಳ ನೆಪದಲ್ಲೇ ಉಳಿದುಸಮಯ ಸಿಕ್ಕರೆ ಕನಸಲ್ಲೂ ಬಂದು ಬಿಡುನಿನ್ನ ಮರೆತು ಬಿಡುವ ಮೊದಲು…! ನೆನಪಲ್ಲೇ ಬೆಂದು ಸಾಕಾಗಿದೆ ನನಗೆ…!!! ✍️ಕಲ್ಪನೆ : ಈಶ್ವರ ಸಿ ನಾವುಂದ










