ವಂಡ್ಸೆ(ಮಾ.15): ಶ್ರೀ ವಿನಾಯಕ ಯುವಕ ಸಂಘ( ರಿ.)ನೆಂಪು ಇವರ ಪ್ರಸ್ತುತಿಯಲ್ಲಿ ಏಪ್ರಿಲ್,15 ರಂದು ವಂಡ್ಸೆ ಸಮೀಪದ ನೆಂಪುವಿನಲ್ಲಿ ನಡೆಯುವ “ನೆಂಪು ಉತ್ಸವ” ದ ಪೋಸ್ಟರ್ ನ್ನು ಮಾರ್ಚ್ ,15 ರಂದು ನೆಂಪು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಕೃಷ್ಣ ಭಟ್ ನೆಂಪು, ಹಿರಿಯರಾದ ನಾರಾಯಣ ಆಚಾರ್ ಹೇರ್ಜಾಡಿ, ಬಸವ ನಾಯ್ಕ್ ನೆಂಪು, ನಾಗ ನಾಯ್ಕ್ ನೀರ್ಕೋಡ್ಲು,ಶ್ರೀನಿವಾಸ್ ಮೊಗವೀರ ನೆಂಪು,ಮಂಜಯ್ಯ ಶೆಟ್ಟಿ ಹೇರ್ಜಾಡಿ, ವಿಠ್ಠಲ್ ಮೊಗವೀರ ಮಂಗಲಸನಕಟ್ಟೆ,ಆನಂದ್ ನಾಯ್ಕ್ ಶಾರಳ, ಸಂಜೀವ ನಾಯ್ಕ್ ನೆಂಪು, ಉಪನ್ಯಾಸಕರಾದ ವೆಂಕಟ್ ರಾಮ್ ಭಟ್,ವಕೀಲರು ರಾಜ್ ಕುಮಾರ್ ನೆಂಪು,ಗೋಪಾಲ ನಾಯ್ಕ್ ಶಾರಳ, ಸಂತೋಷ್ ಕುಮಾರ್ ಶೆಟ್ಟಿ ನೆಂಪು, ಗಿರಿರಾಜ್ ಭಟ್ ನೆಂಪು,ಗೋಪಾಲ ಶೆಟ್ಟಿ ನೆಂಪು,ರಾಮಕೃಷ್ಣ ಶೆಟ್ಟಿ ಗುಡ್ರಿ, ಮೂಡುರ ನಾಯ್ಕ್ ಮಂಗಲಸನಕಟ್ಟೆ,ಮಂಜುನಾಥ್ ನೀರ್ಕೋಡ್ಲು, ರಾಘವೇಂದ್ರ ನೆಂಪು,ರವಿ ಗಾಣಿಗ ಕೆಂಚನೂರು, ಮೋಹನ್ ದೇವಾಡಿಗ,ಸುಕುಮಾರ್ ಶಾರಳ, ಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ್ ನೀರ್ಕೋಡ್ಲು, ಗೌರವ ಅಧ್ಯಕ್ಷರಾದ ಜಗದೀಶ್ ನೆಂಪು,ಅಧ್ಯಕ್ಷರಾದ ಅರುಣ್ ನೆಂಪು, ಹಾಗೂ ಸಂಘದ ಮಾಜಿ ಅಧ್ಯಕ್ಷರುಗಳು, ಗೌರವ ಸಲಹೆಗಾರರು, ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.