ಕುಂದಾಪುರ (ಆ, 09) : ಖ್ಯಾತ ಜಾನಪದ ಗಾಯಕ ಗಣೇಶ್ ಗಂಗೊಳ್ಳಿಯವರಿಗೆ ಜಾನಪದ ಸಂಗೀತ, ಸಂಘಟನೆ ಹಾಗೂ ಸಂಘ- ಸಂಸ್ಥೆಗಳಲ್ಲಿ ನ ವಿಶಿಷ್ಟ ಸೇವೆಯನ್ನು ಗುರುತಿಸಿ ತಮಿಳುನಾಡಿನ ಇಂಡಿಯನ್ ಎಂಪಯರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ.
ಶ್ರೀಯುತರು ಜಾನಪದ ಗಾಯಕರಾಗಿ ಸರಿಸುಮಾರು 32 ವರ್ಷ ದಿಂದ ನಮ್ಮ ನಾಡು ಅಲ್ಲದೆ ದೇಶದ ಹಲವಾರು ರಾಜ್ಯ ಗಳಲ್ಲಿ ಜನಮನ್ನಣೆ ಗಳಿಸಿದ್ದಾರೆ. ಪ್ರತಿಷ್ಠಿತ ಕನ್ನಡ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಇವರು ಮೂಲ ಜಾನಪದ ಹಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಇವರು ಪಿ.ಕಾಳಿಂಗ ರಾವ್ ಪಾಂಡೇಶ್ವರ ಪ್ರತಿಷ್ಠಾನ ಇದರ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
2021 ಸಾಲಿನ ಬೀದರ್ ಜಿಲ್ಲೆಯ ಮಂದಾರ ಕಲಾವಿದರ ವೇದಿಕೆ ಹಾಗೂ ದೇಶಪಾಂಡೆ ಪ್ರತಿಷ್ಠಾನದ ಕರ್ನಾಟಕ ಜಾನಪದ ಭೂಷಣ ರಾಜ್ಯ ಪ್ರಶಸ್ತಿ (2021) ಮತ್ತು ಕರುನಾಡ ಸೇವಾ ಟ್ರಸ್ಟ್ ಮಂಡ್ಯ ಜಿಲ್ಲೆ (2021) ಕರುನಾಡ ಸಾಧಕ ರತ್ನ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ನಾಡಿನ ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರುತಿಸಿ ಸನ್ಮಾನಿಸಿದೆ. ಕರ್ನಾಟಕ ಸರಕಾರ ಇಲಾಖೆಗಳ ಯೋಜನೆಗಳನ್ನು ಜಾನಪದ ಕಲಾ ಪ್ರಕಾರಗಳ ಮೂಲಕ ಗ್ರಾಮೀಣ ಜನರಿಗೆ ತಿಳಿಸುವಲ್ಲಿ ಇಲಾಖೆಗಳಿಂದ ತರಬೇತಿ ಪಡೆದು ಮಾಹಿತಿ ನೀಡುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯಗೆ ಆಯೋಜಿಸಿರುವ ತರಬೇತಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಂವಹನಕಾರರಾಗಿ ಭಾಗವಹಿಸಿದ್ದಾರೆ.