ತ್ರಾಸಿ(ಜು,07): ಸ್ವರಾಜ್ಯ ೭೫” ಇದರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆಯ ಅಭಿಯಾನದ 14ನೇ ಕಾಯ೯ಕ್ರಮ ಬೈಂದೂರು ತಾಲೂಕು ವ್ಯಾಪ್ತಿಯ ತ್ರಾಸಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರ ಹೆಬ್ಬಾರ್ ಮನೆಯಲ್ಲಿ ಜುಲೈ,03 ರಂದು ನಡೆಯಿತು.
ನಾಮ ಫಲಕ ಅನಾವರಣವನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿರುವ ಶ್ರೀಯುತ ನೀಲಾವರ ಸುರೇಂದ್ರ ಅಡಿಗರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕೆಯ ಮಿತ್ರರಾದ ಶ್ರೀ ಜನಾರ್ದನ ಮರವಂತೆ ಇವರು ವಹಿಸಿದ್ದರು.
ಕಾರ್ಯಕ್ರಮದ ಅತಿಥಿಯಾಗಿ ಶ್ರೀ ಶ್ರೀಧರ್ ಗಂಗೊಳ್ಳಿ,ಶ್ರೀ ಪ್ರೀಯದಶಿ೯ನಿ,ಶ್ರೀ ಗೀತಾ ದೇವಾಡಿಗ,ಶ್ರೀ ಪುಂಡಲೀಕ ನಾಯಕ್, ಶ್ರೀ ಗಣೇಶ್ ಹೆಬ್ಬಾರ್ ತ್ರಾಸಿ ಇವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ,ಶ್ರೀ ಮಿಥುನ್ ತ್ರಾಸಿ,ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರು ,ಸ್ಥಳೀಯರು ಉಪಸ್ಧಿತರಿದ್ದರು. ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ ,ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್,ಗ್ರಾಮ ವಿಕಾಸ ಸಮಿತಿ ಬೈಂದೂರು,ಶ್ರೀ ಸುಜೀತ್ ಶೆಟ್ಟಿ ಹಿಲಿಯಾಣ,ತ್ರಾಸಿ ಯುವಕ ಮಂಡಲ ತ್ರಾಸಿ ಗ್ರಾಮಸ್ಥರ ಸಹಕಾರದಿಂದ ಕಾಯ೯ಕ್ರಮ ನಡೆಯಿತು.
ಕಾಯ೯ಕ್ರಮ ನಿರೂಪಣೆಯನ್ನು ಶ್ರೀಮತಿ ಆಶಾಲತಾ ಮರವಂತೆ, ಪ್ರಾಸ್ತಾವಿಕವನ್ನು ಸ್ವರಾಜ್ಯ ೭೫ ಕಾರ್ಯಕ್ರಮ ಸಂಚಾಲಕರು ಆಗಿರುವ ಶ್ರೀ ಪ್ರದೀಪ ಕುಮಾರ್ ಬಸ್ರೂರು ನಡೆಸಿದರು. ಶ್ರೀ ಮಿಥುನ್ ರವರು ಧನ್ಯವಾದ ಸಮರ್ಪಿಸಿದರು.