ಗಂಗೊಳ್ಳಿ(ಜು,6): ರೋಟರಿ ಕ್ಲಬ್ ಗಂಗೊಳ್ಳಿ ಡಿಸ್ಟ್ರಿಕ್ 3182 ವಲಯ 1ರ, 2022 – 23ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಸುಗುಣ ಆರ್ ಕೆ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಚಂದ್ರಕಲಾ ಟಿ ಮತ್ತು ಖಜಾಂಜಿಯಾಗಿ ಜನಾರ್ದನ ಪೆರಾಜೆ ಆಯ್ಕೆಯಾಗಿರುತ್ತಾರೆ. ಜುಲೈ 17 ರ ಭಾನುವಾರದಂದು ಪದಪ್ರಧಾನ ಸಮಾರಂಭವು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಇಂಡೋರ್ ಸ್ಟೇಡಿಯಂನಲ್ಲಿ ಜರಗಲಿದ್ದು ವಲಯ 1 ರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ಪದಪ್ರಧಾನ ಸಮಾರಂಭವನ್ನು […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ : ಡಾ.ರಮೇಶ್ ಶೆಟ್ಟಿ
ಕೋಟೇಶ್ವರ(ಜು,4): ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಶಾಲೆಯಲ್ಲಿ ಮಕ್ಕಳ ಸೃಜನಶೀಲ ಚಟುವಟಿಕೆಗೆ ವೇದಿಕೆ ಕಲ್ಪಿಸಲು ಶಾಲಾ ಭಿತ್ತಿಫಲಕವನ್ನು ವಿಶೇಷವಾಗಿ ಉದ್ಘಾಟಿಸಲಾಯಿತು. ಸಂಸ್ಥೆಯ ಅವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ : ಡಾ.ರಮೇಶ್ ಶೆಟ್ಟಿಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪುರವರ ಕವಿವಾಣಿಯಂತೆ ಶಾಲಾ ಕಾಲೇಜಿನಲ್ಲಿ ‘ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಠ್ಯೇತರ ಚಟುವಟಿಕೆ ಪೂರಕ’ ಎಂದು ಹೇಳಿದರು. ಮುಖ್ಯಶಿಕ್ಷಕಿಯಾದ ಶ್ರೀಮತಿ ಸುರೇಖಾರವರು […]
ಕೊರವಡಿ: ಸಸಿ ವಿತರಣೆ ಕಾರ್ಯಕ್ರಮ
ಕೋಟೇಶ್ವರ(ಜು,4): ಶ್ರೀ ಮಹಾಂಕಾಳಿ ಫ್ರೆಂಡ್ಸ್ (ರಿ). ಕೊರವಡಿ ಜು,03ರಂದು ಗೀತಾನಂದ ಫೌಂಡೇಶನ್(ರಿ) ಪ್ರಯೋಜಿತ ಸಸಿ ವಿತರಣೆ ಕಾರ್ಯಕ್ರಮ ಶ್ರೀ ಮಹಾಂಕಾಳಿ ದೈವಸ್ಥಾನ ಕೊರವಡಿ ಕುಂಭಾಶಿ ,ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ಸಂಯೋಜಕರಾಗಿ ರವಿಕಿರಣ್ ಮತ್ತು ಜನತಾ ಫಿಶ್ ಮಿಲ್ ವ್ಯವಸ್ಥಾಪಕರಾದ ಶ್ರೀನಿವಾಸ ಕುಂದರ್.ಶ್ರೀ ಮಹಾಂಕಾಳಿ ಫ್ರೆಂಡ್ಸ್ (ರಿ.) ಕೊರವಡಿ ಇದರ ಅಧ್ಯಕ್ಷರಾದ ವಿಜಯ ಶ್ರೀಯಾನ್,ಉಪಾಧ್ಯಕ್ಷರಾದ ಗಣೇಶ್ ಚಂದನ್, ಕಾರ್ಯದರ್ಶಿ ಪ್ರಶಾಂತ್ ಚಂದನ್, ರಮೇಶ್ ಕೋಟ್ಯಾನ್,ಹರೀಶ್ ಚಂದನ್,ಸುಧಾಕರ್ ಶ್ರೀಯಾನ್, […]
ಹೈಕಾಡಿ:ಯಕ್ಷಗಾನ ಹೆಜ್ಜೆ ತರಬೇತಿ ಉದ್ಘಾಟನೆ
ಹೈಕಾಡಿ(ಜು,3): ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ.),ಸದ್ಗುರು ಕುಟೀರ ಹೈಕಾಡಿ ಇವರು ಆಯೋಜಿಸಿರುವ ಯಕ್ಷಗಾನ ಹೆಜ್ಜೆ ಕುಣಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರುಕೈಯಲ್ಲಿ ಇತ್ತೀಚೆಗೆ ನಡೆಯಿತು. ಬೆಳ್ವೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕರುಣಾಕರ ಶೆಟ್ಟಿ ಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಮ್ಮ ಸಂಸ್ಥೆಯ ವಿದ್ಯಾರ್ಥಿ ಗಳ ಜೊತೆಗೆ ಸುತ್ತಮುತ್ತಲಿನ ಯಕ್ಷಗಾನದ ಆಸಕ್ತಿಯಿರುವ ಮಕ್ಕಳಿಗೆ ಸುಲಭವಾಗಿ ದೊರಕುವಂತೆ ಯಕ್ಷಗಾನ ಕಲೆ ಉಳಿಸಿ […]
ಆರ್. ಎನ್. ಶೆಟ್ಟಿ ಪಿ. ಯು ಕಾಲೇಜು: ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಕೋಚಿಂಗ್ ತರಬೇತಿಗಳ ಉದ್ಘಾಟನೆ
ಕುಂದಾಪುರ(ಜು,2): ಪೃಕೃತಿಯ ಮೂಲಭೂತ ಸಂಗತಿಗಳನ್ನು ತಿಳಿಸುವ ಮೂಲಕ ಹೊಸ ಚಿಂತನೆಗೆ ದಾರಿ ಮಾಡಿಕೊಡುವ ವಿಜ್ಞಾನ ವಿಭಾಗದ ವಿಷಯಗಳ ಆಳದ ವಿಚಾರಗಳನ್ನು ಕಲಿಯುವಲ್ಲಿ ಸಿ.ಇ.ಟಿ, ಜೆ. ಇ. ಇ, ನೀಟ್ ಕೋಚಿಂಗ್ ಸಹಕಾರಿಯಾಗಿದೆ. ಇಂಥ ಕೋಚಿಂಗ್ ಪಡೆದ ಪರಿಣಿತರಿಗೆ ಉನ್ನತ ವ್ಯಾಸಂಗಕ್ಕೆ ಸಂಬಂಧ ಪಟ್ಟ ಸಂಶೋಧನಾ ಕೇಂದ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ ” ಎಂದು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. […]
ವೈದ್ಯರ ದಿನಾಚರಣೆ: ಡಾ. ಮಹೇಶ್ ಜಿ & ಡಾ.ಸುಜಾತ ದಂಪತಿಗೆ ಸನ್ಮಾನ
ಗಂಗೊಳ್ಳಿ(ಜು,2): ವೈದ್ಯರ ದಿನಾಚರಣೆಯ ಪ್ರಯುಕ್ತ ಗಂಗೊಳ್ಳಿ ರೋಟರಿ ಕ್ಲಬ್ ನ ವತಿಯಿಂದ ಗಂಗೊಳ್ಳಿಯ ಚಂದ್ರ ನರ್ಸಿಂಗ್ ಹೋಮಿನ ನಿರ್ದೇಶಕರಾದ ಡಾ. ಮಹೇಶ್ ಜಿ ಹಾಗೂ ಡಾ ಸುಜಾತ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯ್ಷತೆಯನ್ನು ರೋಟರಿಯ ಅಧ್ಯಕ್ಷರಾದ ಸುಗುಣ ಆರ್. ಕೆ ವಹಿಸಿಕೊಂಡಿದ್ದರು. ರೊಟೇರಿಯನ್ ರಾಮನಾಥ್ ನಾಯಕ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವೆಕೇಷನ್ ಸರ್ವಿಸ್ ಚೆರ್ಮನ್ ಗೋಪಾಲ್ ಅವರು ಸನ್ಮಾನವನ್ನು ನೆರವೇರಿಸಿದರು. ರೋಟೇರಿಯನ್ ಉಮೇಶ್ ಮೇಸ್ತ ವೈದ್ಯ ದಂಪತಿಗಳ ಸೇವೆಯನ್ನು ಶ್ಲಾಘಿಸಿದರು. ಕ್ಲಬ್ […]
ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ಮುಖ್ಯಮಂತ್ರಿಗಳ ಪ್ರಶಸ್ತಿ’
ಕುಂದಾಪುರ (ಜು,2): ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ 2021-22ನೇ ಸಾಲಿನ ಪ್ರತಿಷ್ಠಿತ‘ಮುಖ್ಯಮಂತ್ರಿಗಳ ಪ್ರಶಸ್ತಿ’ ಗೆ ಶ್ರೀ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರು ಆಯ್ಕೆಯಾಗಿದ್ದು ಜುಲೈ 1 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಇವರು ಪ್ರಸ್ತುತ ಮಂಗಳೂರಿನ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಎಸ್ ಟಿ […]
ಗಂಗೊಳ್ಳಿ: ಕೆನರಾ ಬ್ಯಾಂಕ್ ಸಿಬ್ಬಂದಿ ಜಾರ್ಜ್ ಫರ್ನಾಂಡೀಸ್ ಸೇವಾ ನಿವೃತ್ತಿ- ಸನ್ಮಾನ
ಗಂಗೊಳ್ಳಿ(ಜು,01): ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಜಾರ್ಜ್ ಫರ್ನಾಂಡೀಸ್ ರವರು ಸೇವಾ ನಿವ್ರತ್ತಿ ಹೊಂದಿದ್ದಾರೆ. 1983 ರಲ್ಲಿ ಗಂಗೊಳ್ಳಿಯ ಕೆನರಾ ಬ್ಯಾಂಕ್ ನಲ್ಲಿ ವತ್ತಿ ಜೀವನ ಆರಂಭಿಸಿದ ಇವರು ನಂತರದ ದಿನಗಳಲ್ಲಿ ಮಂಗಳೂರು ಮಹಾ ನಗರದ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಉಪ್ಪುಂದದ ಶಾಖೆಯಲ್ಲಿಯೂ ಕೆಲಸ ನಿರ್ವಹಿಸಿ ನಂತರ ವರ್ಗಾವಣೆಗೊಂಡು ಮೂರು ವರ್ಷಗಳಿಂದ ಗಂಗೊಳ್ಳಿ ಶಾಖೆಯಲ್ಲಿ ಸೇವೆ ಸಲ್ಲಿಸಿ ನಿವ್ರತ್ತಿ ಹೊಂದಿದ್ದಾರೆ. ಈ ಸನ್ಮಾನ ಕಾರ್ಯಕ್ರಮದಲ್ಲಿ ಗಂಗೊಳ್ಳಿಯ ಖ್ಯಾತ […]
ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿನಿ ಸುರಕ್ಷ ಶೆಟ್ಟಿಗೆ ಪ್ರೋತ್ಸಾಹ ಧನ ವಿತರಣೆ
ನಾವುಂದ( ಜೂ,27): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿನಿ ಸುರಕ್ಷ ಶೆಟ್ಟಿ ಅವರಿಗೆ 1995 -96ನೇ ಸಾಲಿನ ಕಾಲೇಜಿನ ವಿಜ್ಞಾನ ವಿಭಾಗದ ಹಳೆಯ ವಿದ್ಯಾರ್ಥಿಗಳು ನೀಡಿದ 15000 ರೂಪಾಯಿ ಪ್ರೋತ್ಸಾಹ ಧನವನ್ನು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳ ಪರವಾಗಿ ಭಾಷ್ ಟೆಕ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಹೆಬ್ಬಾರ್ […]
ಎಕ್ಸಲೆಂಟ್ ಪಿಯು ಕಾಲೇಜು & ಶಾಲೆ : ವಿಶ್ವ ಪರಿಸರ ದಿನಾಚಾರಣೆ
ಕುಂದಾಪುರ (ಜೂ ,27): ಜೂನ್ 05 ರ ವಿಶ್ವ ಪರಿಸರ ದಿನದ ಅಂಗವಾಗಿ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಶಾಲೆಯಲ್ಲಿ ವಿಶ್ವಪರಿಸರ ದಿನ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಾತಾನಾಡಿ ಪ್ರತಿಯೊಬ್ಬರು ಗಿಡ-ಮರ ನೆಟ್ಟು ಬೆಳಸಿ ಹಸಿರೇ ಉಸಿರಾಗಿರುವಂತೆ ಮತುವರ್ಜಿವಹಿಸಬೇಕೆಂದರು. ಶಾಲೆಯ ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸ್ಥೆಯ ಖಜಾಂಚಿಯಾದ ಭರತ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಸಾಲುಮರದ ತಿಮ್ಮಕ್ಕನಂತೆ ಪರಿಸರ ಉಳಿಸಿ ಬೆಳೆಸುವ ಕಾಳಜಿಯನ್ನು ಮೈಗೂಡಿಕೊಳ್ಳಬೇಕೆಂದರು. ವಿಶ್ವ […]










