ಶಿರ್ವ(ಜೂ, 5): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಎನ್ಸಿಸಿ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಘಟಕದ ಸ್ವಯಂಸೇವಕರ ಮನೆಯ ಅಂಗಳಗಳಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಯುವಕರನ್ನು ಪ್ರೇರೇಪಿಸಿದರು. ಕಾಲೇಜಿನ ಪ್ರಾಂಶುಪಾಲರು ಡಾ|ಹೆರಾಲ್ಡ್ ಐವನ್ ಮೋನಿಸ್ ರವರು ಎಲ್ಲರಿಗೂ ಶುಭಹಾರೈಸಿದರು. ಎನ್ಸಿಸಿ ಘಟಕದ ಸಹ ಸಂಯೋಜಕಿ ಯಶೋಧಾ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ : ಎನ್. ಎಸ್. ಎಸ್. ಘಟಕದ ವತಿಯಿಂದ ಹಸಿರೇ ಉಸಿರು ಅಭಿಯಾನಕ್ಕೆ ಚಾಲನೆ
ಕುಂದಾಪುರ (ಜೂ, 5): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಸಿರೇ ಉಸಿರು (ಉಸಿರನಿತ್ತ ಪ್ರಕೃತಿಯನ್ನು ಹಸಿರಾಗಿಸೋಣ) ಎನ್ನುವ ಗಿಡ ನೆಡುವ ಅಭಿಯಾನಕ್ಕೆ ಜೂನ್ 5ರಂದು ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ.ಉಮೇಶ್ ಶೆಟ್ಟಿ ಹಾಗೂ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೊವಾಡಿಯವರ ಮಾರ್ಗದರ್ಶನದೊಂದಿಗೆ ಕಾಲೇಜಿನ ರಾಷ್ಟ್ರೀಯ […]
ಕರಾವಳಿ – ಮೂಡಣದಿ ಹಿತವಾಗಿ ಆರಂಭಗೊಂಡ ಮುಂಗಾರು ಮಳೆ
ಕರಾವಳಿ ಹಾಗೂ ಮೂಡಣ( ಪಶ್ಚಿಮಘಟ್ಟ) ಭಾಗದಲ್ಲಿ ಮುಂಗಾರು ಮಳೆ ಆರಂಭಗೊಂಡು ಹಿತವಾಗಿ ಸುರಿದಿದೆ. ಹವಾಮಾನ ವರದಿಯ ದಿನದಂತೆ ಬಂದು ತನ್ನ ಆಗಮನವನ್ನು ತೋರಿಸಿ ಜನರಲ್ಲಿ ಖುಷಿಯನ್ನು ಮೂಡಿಸಿತು. ಭಾರತದಲ್ಲಿ ಮುಂಗಾರು ಮಳೆಗೆ ಹೆಚ್ಚಿನ ಮಹತ್ವ ಇದೆ. ಈ ಮಳೆ ಈ ವರುಷ ನಮ್ಮ ಜಿಲ್ಲೆಗೆ ಸಮಯಕ್ಕೆ ಸರಿಯಾಗಿ ಬಂದಿರುವುದು ವಿಶೇಷ. ಜೂನ್ 3 ರೊಳಗೆ ರಾಜ್ಯಕ್ಕೆ ಮುಂಗಾರು ಪ್ರವೇಶಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಮಳೆಯ ಜೊತೆ ಅನ್ನದಾತ […]
ಇಂದು ವಿಶ್ವ ಪರಿಸರ ದಿನ
ಬಂಧುಗಳೆ,ಇಂದು ವಿಶ್ವ ಪರಿಸರ ದಿನ. ಅದರ ನೆನಪಿಗಾಗಿ ಮತ್ತು ನಮ್ಮ ಉಳಿವಿಗಾಗಿ ಎಲ್ಲರೂ ಒಂದೊಂದು ಗಿಡ ನೆಡೋಣ. 138 ಕೊಟಿ ಜನ ಒಂದೊಂದು ಗಿಡ ಎಂದರೆ 138 ಕೋಟಿ ಆಕ್ಸಿಜನ್ ಸಿಲಿಂಡರ್ಗಳು ಎಂದರ್ಥ. ಅದರಲ್ಲಿ 38 ಕೋಟಿ ತೆಗೆದರೂ 100 ಕೋಟಿ ಜನ ಮನಸ್ಸು ಮಾಡಿ ಒಂದೊಂದು ಗಿಡ ನೆಟ್ಟರೂ ನೂರು ಕೋಟಿ ಆಕ್ಸಿಜನ್ ಸಿಲಿಂಡರ್ ಲೆಕ್ಕ ಆಗುತ್ತದೆ. ಆದ್ದರಿಂದ ಬಂಧುಗಳೇ, ಮರೆಯದೆ ಪ್ರತಿಯೊಬ್ಬರು ಒಂದೊಂದು ಅಥವಾ ನಿಮ್ಮ ಕೈಲಾದಷ್ಟು […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿಎ/ಸಿಎಸ್ ಕೋರ್ಸುಗಳಿಗೆ ದಾಖಲಾತಿ ಆರಂಭ
ಕುಂದಾಪುರ (ಜೂ. 05) : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸ್ಪೇಸ್) ಸಂಸ್ಥೆ ಸಿಎ/ಸಿಎಸ್ ಮತ್ತು ಸಿಎಂಎ ಪರೀಕ್ಷೆಗಳಿಗೆ ಅನೇಕ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ತಯಾರಿಗೊಳಿಸಿ ಅಖಿಲ ಭಾರತ ಮಟ್ಟದಲ್ಲಿ ರ್ಯಾಂಕ್ ಮತ್ತು ಅತ್ಯುತ್ತಮ ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುತ್ತದೆ. ಸಂಸ್ಥೆಯ […]
ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, SSLC ಪರೀಕ್ಷೆ ಇರುತ್ತೆ : ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು (ಜೂ. 04): ಕರೋನಾ ಕಾರಣದಿಂದಾಗಿ ಈಗಾಗಲೇ ಕೇಂದ್ರ ಸರ್ಕಾರ ಸಿಬಿಎಸ್ ಇ ಮತ್ತು ಐಸಿಎಸ್ಇಯ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳು ರದ್ದು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರ ರಾಜ್ಯದಲ್ಲಿನ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ, ಪರೀಕ್ಷೆಗಳ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಈ ವರ್ಷ […]
ಬಾಡಿಗೆಗಿದೆ
ಅದು ಬೆಂಗಳೂರಿನ ಹೊರವಲಯದಲ್ಲಿದ್ದ ಹತ್ತು ವರ್ಷದ ಹಳೆಯ ಅಪಾರ್ಟ್ ಮೆಂಟ್. ಅಲ್ಲಿ ಇಪ್ಪತ್ತೈದು ಕುಟುಂಬದವರು ವಾಸಿಸುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಅಲ್ಲಿ ಸಂತೋಷದಿಂದ ಬದುಕುತ್ತಿದ್ದಾರೆ. ಹತ್ತು ವರ್ಷಗಳಿಂದ ಒಂದೇ ಕಡೆ ಜೀವನ ಸಾಗಿಸುತ್ತಿರುವ ಈ ಅಪಾರ್ಟ್ ಮೆಂಟ್ ವಾಸಿಗಳ ನಡುವೆ ಒಂದು ವಿಶೇಷವಾದ ಬಾಂಧವ್ಯ ಬೆಳೆದಿದೆ. ಅವರುಗಳ ನಡುವೆ ಸ್ನೇಹ ಸಂಬಂಧವನ್ನು ಮೀರಿದ ಒಂದು ಅನುಬಂಧ ಏರ್ಪಟ್ಟಿದೆ. ಕಳೆದ ಎರಡು ಮೂರು ತಿಂಗಳಿಂದ ಈ ಅಪಾರ್ಟ್ ಮೆಂಟ್ […]
ಕರಿನೆರಳು
ಇಂದು-ನಾಳೆ ಹೇಗೋಹಾಗೆ ದಿನ, ವಾರ, ತಿಂಗಳುಗಳುವರ್ಷಗಳು ಉರುಳುತ್ತಿವೆ ಗೊತ್ತೇ ಆಗದೆಬದುಕು ಸಹಜ ಅ ಸಹಜಗಳ ಇಂದು, ನಾಳೆಗಳ ಮಧ್ಯೆಈಗ ಎಲ್ಲಾ ಭರವಸೆಗಳ ಮೇಲೆ ಕಟ್ಟಿದ ಬದುಕುಗಾಜಿನ ಮನೆಯಂತಾಗಿದೆಕಾಯುತ್ತಿದ್ದೇವೆ ನಾವುಗಳು ಸರತಿಸಾಲಿನಲ್ಲಿ ಇಂದು, ನಾಳೆಯೂ ಮುಂದೆ ಏನೇನೊ ಎಂದುಮುಂದೆ ಹೋಗುವವರಿಗೆ ದಾರಿ ಮಾಡಿ ಕೊಡುತ್ತಾ ಕಂಡು ಕಾಣದ ಎಂದೂ ಮರೆಯದ ಈ ಹೆಮ್ಮಾರಿ ಕಾಯಿಲೆಗೆ ಶರಣಾಗಿಕೆಲವರ ಜೀವ ಪಂಚ ಭೂತಗಳಲ್ಲಿ ಲೀನವಾಗಿದೆಹೇಳದೆ ಕೇಳದೆ ಕನಸು ಮಾರಿ ಹೊರಟು ಬಿಟ್ಟಿದ್ದಾರೆ ಹೊಸ ಲೋಕ […]
ಗಂಗೊಳ್ಳಿಯಲ್ಲಿ ಕೋವಿಡ್ ಲಸಿಕೆ ಅಭಿಯಾನ
ಗಂಗೊಳ್ಳಿ (ಜೂ, 2): ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ಸೇವಾ ಭಾರತಿಯ ಸಹಕಾರದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ಸರಸ್ವತಿ ವಿದ್ಯಾಲಯದಲ್ಲಿ (ಲಸಿಕೆಯ ಇರುವಿಕೆಯ ಮೇರೆಗೆ) ಲಸಿಕಾ ಅಭಿಯಾನ ನಡೆಯುತ್ತಿದೆ. ಸಾರ್ವಜನಿಕರು ಕೋವಿಡ್ ಲಸಿಕೆಯ ವಿಚಾರದಲ್ಲಿ ಸ್ವಯಂ ಸೇವಕರನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು ಹಾಗೂ ಲಸಿಕಾ ಕೇಂದ್ರಕ್ಕೆ ಬರುವ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸೇವಾಭಾರತಿ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ಆಗಮಿಸಬೇಕೆಂದು […]
ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ|ಗಿರೀಶ್ ಕುಲಕರ್ಣಿಯವರಿಗೆ ಗೌರವಾರ್ಪಣೆ
ಗಂಗೊಳ್ಳಿ (ಜೂ, 2): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿ ಸೇವಾ ನಿಮಿತ್ತ ಯಾದಗಿರಿಗೆ ವರ್ಗಾವಣೆಗೊಂಡಿರುವ ಡಾ|ಗಿರೀಶ್ ಕುಲಕರ್ಣಿ ಇವರಿಗೆ ಸೇವಾ ಭಾರತಿ ಗಂಗೊಳ್ಳಿ ಇದರ ಸ್ವಯಂಸೇವಕರು ಗೌರವ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲ್ಲಿಸಿದರು. ಕೋವಿಡ್ ಸಂದರ್ಭದಲ್ಲಿನ ಡಾ |ಗಿರೀಶ್ ಕುಲಕರ್ಣಿಯವರ ವೈದ್ಯಕೀಯ ಸೇವೆಗೆ ಸ್ವಯಂಸೇವಕರು ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.










