ಉಡುಪಿ (ಮೇ, 5): ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆಗೊಳಗಾದ ತಮ್ಮ ಬ್ಯಾಂಕಿನ ಸದಸ್ಯರುಗಳಿಗೆ ವೈದ್ಯಕೀಯ ಸಹಾಯ ಧನ ನೀಡುವ ಯೋಜನೆಯನ್ನು ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ರೂಪಿಸಿದ್ದು, ಕೊರೋನ ಸೋಂಕಿಗೆ ತುತ್ತಾದ ಸದಸ್ಯರು ಅರ್ಜಿ ಸಲ್ಲಿಸುವಂತೆ ಬ್ಯಾಂಕಿನ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನ ಸದಸ್ಯರು ಮಾತ್ರ ಈ ಯೋಜನೆಗೆ ಅರ್ಹರಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಶಾಖೆಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೂಕ್ತ ದಾಖಲೆಯನ್ನು […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಮರವಂತೆ ಯುವಕರಿಂದ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಪೂರೈಕೆ
ಮರವಂತೆ (ಮೇ, 3): ಕೋವಿಡ್-19 ಎರಡನೇ ಅಲೆಯ ಲಾಕ್ಡೌನ್ ನಿಂದಾಗಿ ಲಾರಿ ಮತ್ತಿತರ ವಾಹನ ಚಾಲಕರಿಗೆ ಆಹಾರದ ಅವಶ್ಯಕತೆಯನ್ನು ಗಮನಿಸಿದ ಮರವಂತೆಯ ಯುವಕರಾದ ಗೀತೇಶ್ ದೇವಾಡಿಗ ಮರವಂತೆ,ರಂಜಿತ್ ಪೂಜಾರಿ ನೇರಳಕಟ್ಟೆ, ಗಣೇಶ ದೇವಾಡಿಗ ನಾವುಂದ, ರಾಘವೇಂದ್ರ ದೇವಾಡಿಗ ಹಾಗೂ ಕೀರ್ತನ್ ಶೆಟ್ಟಿ ಯವರು ರಾಷ್ಟ್ರೀಯ ಹೆದ್ದಾರಿ 66 ರ ಮರವಂತೆಯ ಬಳಿ ಲಾರಿ ಮತ್ತು ಇತರೆ ವಾಹನ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಬಾಟಲ್ […]
ಕುಂದಾಪುರ : ಬ್ರಹತ್ ರಕ್ತದಾನ ಶಿಬಿರ
ಕುಂದಾಪುರ (ಮೇ, 2): ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ, ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ, ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತ ನಿಧಿ, ಕುಂದಾಪುರ ಮತ್ತು ಜೆಸಿಐ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ಜೆಸಿಐ ಭವನದಲ್ಲಿ ಮೇ 1. ರ ಶನಿವಾರದಂದು ರಕ್ತದಾನ ಶಿಬಿರ ನಡೆಯಿತು. ಈ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ […]
ಕೊಲ್ಲೂರು : ಅಪಾಯಕಾರಿ ಒಳಚರಂಡಿ ಮುಚ್ಚಳ ದುರಸ್ತಿಗೆ ಮನವಿ
ವಂಡ್ಸೆ (ಮೇ, 04): ಕೊಲ್ಲೂರಿನ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಅಪಾಯಕಾರಿ ಒಳಚರಂಡಿಯ ಮುಚ್ಚಳ ತೆರೆದ ಸ್ಥಿತಿಯಲ್ಲಿದ್ದು ,ಅದರಲ್ಲಿ ಚೂಪಾದ ಕಬ್ಬಿಣದ ಸರಳುಗಳು ಎದ್ದು ನಿಂತು ಹಲವು ದಿನಗಳಾಗಿವೆ.ಕೊಲ್ಲೂರು ಶಿವಮೊಗ್ಗ ರಸ್ತೆಯ ಪರಬ್ರಹ್ಮ ಗೆಸ್ಟ್ ಹೌಸಿನ ಮುಂಭಾಗದ ತಿರುವಿನಲ್ಲಿ ಈ ಅಪಾಯಕಾರಿ ಒಳಚರಂಡಿ ಇದ್ದು ಜನತೆಗೆ ಸುಗಮ ಸಂಚಾರಕ್ಕೆ ಸವಾಲಾಗಿದೆ. ಯಾವುದೇ ಜೀವ ಹಾನಿ ಆಗುವ ಮೊದಲು ಸಂಬಂಧಪಟ್ಟ ಇಲಾಖೆ ಕೂಡಲೇ ಇದನ್ನು ಗಮನಿಸಿ ಸರಿಪಡಿಸಬೇಕಾಗಿ ಗ್ರಾಮಸ್ಥರ ಪರವಾಗಿ ಪರಿಸರ ಅಭಿವೃದ್ಧಿ […]
ಶಿಕ್ಷ ಪ್ರಭಾ ಅಕಾಡಮಿ ಕುಂದಾಪುರ – ಸಿ.ಎ., ಸಿ.ಎಸ್. ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ವೆಬಿನಾರ್
ಕುಂದಾಪುರ (ಮೇ, 1):ಕುಂದಾಪುರದ ಕುಂದೇಶ್ವರ ದೇವಸ್ಥಾನ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿ.ಎ,ಸಿ.ಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯಾಗಿದ್ದು ಸಿ.ಎ-ಸಿ.ಎಸ್ ನಂತಹ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ.ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಸಿ.ಎ.ಸಿ.ಎಸ್ ಕೋರ್ಸುಗಳಲ್ಲಿ ಈ ಗಾಗಲೇವಿಶಿಷ್ಟ ಸಾಧನೆ ಗೈದಿರುತ್ತಾರೆ. ಕೋವಿಡ್ ನ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಸಂಸ್ಥೆಯು ತನ್ನ ಈಗಿನ ವಿದ್ಯಾರ್ಥಿಗಳಿಗೆ ಲೈವ್ ಆನ್ ಲೈನ್ […]
ಭವಿಷ್ಯದ ಕೋವಿಡ್ ಸವಾಲುಗಳನ್ನು ಎದುರಿಸಲು ಇಗಲೇ ಸನ್ನದ್ದರಾಗಬೇಕಿದೆ – ಡಾ. ದೇವಿ ಪ್ರಸಾದ್ ಶೆಟ್ಟಿ
ಬೆಂಗಳೂರು (ಏ. 30): ದೇಶದಲ್ಲಿ ಕೊರೋನಾ ಎರಡನೆ ಅಲೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಮುಂದಿನ ಪರಿಸ್ಥಿತಿಯನ್ನು ಎದುರಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ನಾರಾಯಣ ಹೃದಯಾಲಯ ಸ್ಥಾಪಕ ಡಾ. ದೇವಿ ಪ್ರಸಾದ್ ಶೆಟ್ಟಿ ಮುನ್ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಹೆಚ್ಚುವರಿ 5 ಲಕ್ಷ ಐಸಿಯು ಹಾಸಿಗೆಗಳು, 2 ಲಕ್ಷ ನರ್ಸಗಳು ಮತ್ತು 1.5 ಲಕ್ಷ ವೈದ್ಯರ ಅಗತ್ಯವಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಭಾರತದಲ್ಲಿ ಕೇವಲ 75,000 ರಿಂದ 90,000 […]
ಸೆಲೆಬ್ರೆಟಿಯಾದ ಭಜನಾ ರಂಗದ ಪ್ರತಿಭೆ….
ಕೆಲವು ದಿನಗಳಿಂದ ಕರಾವಳಿಯ ಉದ್ದಗಲಕ್ಕೂ ಸೋಷಿಯಲ್ ಮಿಡಿಯಗಳಲ್ಲಿ ಯುವಕನ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ… ಸುದ್ದಿ ವಾಹಿನಿಗಳು ಕೂಡ ಸುದ್ದಿಯಲ್ಲಿ ಹಂಚಿ ಕೊಂಡವು..ಅಷ್ಟೊಂದು ವೈರಲ್ ಆಯ್ತು ಆ ಒಂದು ಹಾಡಿನ ವಿಡಿಯೋ…ಯಾವ ಹಾಡು ಇರಬಹುದು?ಸಿನಿಮಾ ಹಾಡು ಇರಬಹುದು ಅನ್ಕೊಂಡ್ರ !ಹಾಗಂದು ಕೊಂಡ್ರೆ ನಿಮ್ಮ ಊಹೆ ತಪ್ಪು. ಅದೊಂದು ರಾಮನ ಭಜನೆ. ರಾಮ ಮಂತ್ರವ ಜಪಿಸಿ … ಪಾಪವ ಕಳೆಯೋಣ ಎನ್ನುವ ರಾಮ ನಾಮ ಸ್ಮರಣೆಯ ಆ ಹಾಡನ್ನು ಒಟ್ಟಾರೆ 10 […]
ಕುಂದಗನ್ನಡದ ಕಂಗ್ಲೀಷ್ ಪದಗಳು
ಕರ್ನಾಟಕದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕುಂದಗನ್ನಡವು ಒಂದಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನ ಜನರು ಅತಿವೇಗದಲ್ಲಿ ಹಾಗೂ ಚುಟುಕಾಗಿ ಪದಗಳನ್ನು ಪೋಣಿಸಿ ಮಾತನಾಡುವ ಭಾಷೆ ಈ ಕುಂದಗನ್ನಡ. ಪ್ರಾದೇಶಿಕತೆಯ ವೈಶಿಷ್ಟತೆಯನ್ನು ಒಳಗೊಂಡಿರುವ ಈ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವುದೇ ಚೆಂದ. ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ಪದಗಳನ್ನು ಸೇರಿಸಿ ಮಾತನಾಡುವ ಈ ಭಾಷೆ ಅನ್ಯರಿಗೆ ಸ್ವಲ್ಪ ವೈಶಿಷ್ಟಪೂರ್ಣ ಹಾಗೂ ವಿಭಿನ್ನವಾಗಿ ಕಂಡುಬರುವುದು ಸಹಜ. ಹಾಗೆಯೇ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವಾಗ ಈ ಭಾಗದ […]
ಏಪ್ರಿಲ್ 30 ರಂದು ತ್ರಾಸಿಯಲ್ಲಿ ರಕ್ತದಾನ ಶಿಬಿರ
ತ್ರಾಸಿ (ಏ, 29): ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ತೀವ್ರ ಅಭಾವವಿರುವುದರಿಂದಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ರಕ್ತನಿಧಿ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರ, ಉಡುಪಿ ಇವರಸಹಯೋಗದೊಂದಿಗೆ ಏಪ್ರಿಲ್ 30ರ ಶುಕ್ರವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತ್ರಾಸಿಯ ಸಾಕೇತ ವೈದ್ಯಕೀಯ ಪ್ರಯೋಗಾಲಯ ಹಾಗೂ ತಪಾಸಣಾ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.










