ಗಂಗೊಳ್ಳಿ (ಮೇ, 26): ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಏಳು ಅರ್ಹ ಕುಟುಂಬಗಳಿಗೆ ತಲಾ 3.90 ಲಕ್ಷ ರೂಪಾಯಿ ಮೌಲ್ಯದ ದೋಣಿ ಮತ್ತಿತರ ಮೀನುಗಾರಿಕಾ ಸಲಕರಣೆಗಳನ್ನು ಬೈಂದೂರಿನ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ವಿತರಿಸಿದರು.ಮೀನುಗಾರರು ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂಬ ಆಶಯದೊಂದಿಗೆ ಮೀನುಗಾರಿಕೆ ದೋಣಿ, ಇಂಜಿನ್, ಬಲೆ, ಲೈಫ್ ಜಾಕೆಟ್, ಶಾಖ ನಿರೋಧಕ ಪೆಟ್ಟಿಗೆ ಹಸ್ತಾಂತರಿಸಲಾಗಿದೆ ಎಂದು ಶಾಸಕರು […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಮುರುಡೇಶ್ವರದ ಸತೀಶ್ ದೇವಾಡಿಗರ ಕಲೆಯ ಕೈಚಳಕಕ್ಕೆ ಮನಸೋತ ನಟ ಅರ್ಜುನ್ ಸರ್ಜಾ
ಬೈಂದೂರು (ಮೇ, 27): ಮುರುಡೇಶ್ವರದ ಪ್ರಸಿದ್ಧ ಮರದ ಕಲಾಕ್ರತಿ ರಚಿಸುವ ಕಲೆಗಾರ ಸತೀಶ್ ದೇವಾಡಿಗ ಇವರ ಅದ್ಭುತವಾದ ಮರದ ಕೆತ್ತನೆಗೆ ಮನಸೋತ ಭಾರತೀಯ ಚಿತ್ರರಂಗದ ಪ್ರಸಿದ್ದ ನಟ ಅರ್ಜುನ್ ಸರ್ಜಾ ಅವರು ಚೆನ್ನೈ ನಲ್ಲಿರುವ ತನ್ನ ಆರಾಧ್ಯ ದೇವರಾದ ಆಂಜನೇಯ ದೇವಾಲಯದ ಪ್ರವೇಶದ್ವಾರದ ಬಾಗಿಲುಗಳ ಮರದ ಕೆತ್ತನೆಯ ಕೆಲಸವನ್ನು ಸತೀಶ್ ದೇವಾಡಿಗರಿಗೆ ಒಪ್ಪಿಸಿದ್ದಾರೆ. ಹಾಗೆಯೇ ಅರ್ಜುನ್ ಸರ್ಜಾರವರ ಅಳಿಯ ಚಿರಂಜೀವಿ ಸರ್ಜಾ ಹಾಗೂ ಅರ್ಜುನ್ ಸರ್ಜಾರ ಸಹೋದರ ಕಿಶೋರ್ ಸರ್ಜಾ […]
ಕೊರೋನಾದಿಂದ ಗುಣಮುಖರಾದ ಕಟ್ ಬೇಲ್ತೂರಿನ ಒಂದೇ ಕುಟುಂಬದ 9 ಮಂದಿ ಸದಸ್ಯರು
ಹೆಮ್ಮಾಡಿ (ಮೇ, 23): ಹೌದು, ಕರೋನಾ ಆತಂಕದಿಂದ ಭಯಭೀತರಾಗುವ ಜನರ ನಡುವೆ ಇದೊಂದು ಪಾಸಿಟಿವ್ ಸ್ಟೋರಿ. ಕುಂದಾಪುರ ತಾಲೂಕಿನ ಕಟ್ ಬೇಲ್ತೂರು ಎಂಬ ಗ್ರಾಮದ ಶಂಕರ್ ನಾಯ್ಕ್ ಎನ್ನುವವರ ಕುಟುಂಬದ 9 ಮಂದಿ ಸದಸ್ಯರು ಕೊರೋನ ಪಾಸಿಟಿವ್ ಗೆ ತುತ್ತಾಗಿದ್ದರು. ಒಂದು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಈ ಕುಟುಂಬ ಎಲ್ಲಾ ಸದಸ್ಯರಿಗೂ ಕೊರೋನಾ ಅಂಟಿಕೊಂಡಿತ್ತು. ಆದರೆ ಈ ಕುಟುಂಬದ ಸದಸ್ಯರು ಧ್ರತಿಗೆಡದೆ ಧೈರ್ಯದಿಂದ ಕರೋನಾ ಗೆದ್ದು ಗುಣಮುಖರಾಗಿದ್ದಾರೆ. ಆತ್ಮಸ್ಥೈರ್ಯದ ಜೊತೆ […]
ಬಡ ಕುಟುಂಬದ ಮಹಿಳೆಗೆ ನೆರವಾಗಲು ಮಂದಾದ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ : ಸುಸಜ್ಜಿತ ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಂಕಲ್ಪ
ಕುಂದಾಪುರ (ಮೇ, 20) : ಮೂರ್ನಾಲ್ಕು ದಿನದ ಹಿಂದೆ ತೌಖ್ತೆ ಚಂಡಮಾರುತದ ಪರಿಣಾಮ ಕರಾವಳಿ ಭಾಗದಪ್ಪಳಿಸಿದ ಭಾರಿ ಗಾಳಿ ಮಳೆಯ ಕಂಡು ಬೆಪ್ಪಾಗಿ ಬೆಚ್ಚಗೆ ಮನೆಯೊಳಗೇ ನಾವು ನೀವು ಕುಳಿತಿದ್ದಂತು ನಿಜ. ಆದರೆ ಅದೇ ಪರಿಸ್ಥಿತಿಯಲ್ಲಿ ವ್ಯವಸ್ಥಿತ ಸೂರಿಲ್ಲದೆ ಸೋರುವ ಹಟ್ಟಿಯೊಳಗಡೆ ಸುರಿವ ಮಳೆಗೆ, ಕೊರೆವ ಚಳಿಗೆ ಮೈಯೊಡ್ಡಿ ಗಡಗಡನೆ ನಡುಗುತ್ತಾ ಆ ಕರಾಳ ರಾತ್ರಿಯನ್ನು ಗೋಳಿನಲಿ ಕಳೆದ ಈ ಗೋವುಗಳ ಸ್ಥಿತಿಯಂತೂ ನಾವು ಕಣ್ಣಾರೆ ಕಾಣುವುದಕ್ಕಿಂತಲೂ ಬಹಳ ಶೋಚನೀಯವಾಗಿದ್ದಿದಂತು […]
ಸಮಾಜಸೇವಕ ಗೋವಿಂದ ಬಾಬು ಪೂಜಾರಿಯವರಿಂದ 350 ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರು ಸರಬರಾಜು
ಬೈಂದೂರು (ಮೇ, 13): ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ಉಪ್ಪುಂದ ಇದರ ಪ್ರವರ್ತಕರಾದ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ನೇತ್ರತ್ವದಲ್ಲಿ ಬೈಂದೂರು ತಾಲೂಕಿನ ಅಳವೆಕೋಡಿ, ತಾರಪತಿ, ಪಡುವರಿ ಹಾಗೂ ಉಪ್ಪುಂದ ವ್ಯಾಪ್ತಿಯ ಸುಮಾರು 350ಕ್ಕೂ ಹೆಚ್ಚಿನ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ಬೇಸಿಗೆ ಸಂದರ್ಭದಲ್ಲಿ ಈ ಭಾಗದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎರುರಾಗುತ್ತಿದ್ದು, ಕಳೆದ ವರ್ಷವೂ ಸಹ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ಉಪ್ಪುಂದದ ವತಿಯಿಂದ ಕುಡಿಯುವ ನೀರಿನ […]
ಪಡು ಗೋಪಾಡಿಯಲ್ಲಿ ವಿದ್ಯುತ್ ಕಡಿತ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಭಾಗಿಯಾದ ಗ್ರಾಮಸ್ಥರು
ಕೋಟೇಶ್ವರ (ಮೇ, 17): ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಪಡು ಗೋಪಾಡಿಯಲ್ಲಿ ಸತತ ಎರಡು ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿದ್ದು ಗ್ರಾಮಸ್ಥರಿಗೆ ದಿನನಿತ್ಯದ ಕಾರ್ಯಚಟುವಟಿಕೆಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕಾಂಚನ್ ನೇತೃತ್ವದ ತಂಡ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡರು. ಈ ತಂಡ ಇಡೀ ದಿನ ವಿದ್ಯುತ್ ಕಂಬಗಳ ಸುತ್ತ ಬೆಳೆದಿರುವ ಮರ-ಗಿಡಗಳ ಗೆಲ್ಲುಗಳನ್ನು ಕತ್ತರಿಸಿ ಮೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಿ ಗ್ರಾಮಸ್ಥರಿಂದ […]
ತೌಖ್ತೆ ಚಂಡಮಾರುತದ ತೀವ್ರತೆಯಿಂದ ಕಡಲ್ಕೊರೆತಕ್ಕೆ ಒಳಗಾದ ಪ್ರದೇಶಕ್ಕೆ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ
ಬೈಂದೂರು (ಮೇ, 15) : ತೌಖ್ತೆ ಚಂಡಮಾರುತದ ತೀವ್ರತೆಯಿಂದ ಕಡಲ್ಕೊರೆತಕ್ಕೆ ಒಳಗಾದ ಬೈಂದೂರು ಕ್ಷೇತ್ರದ ಕಡಲ ತೀರದ ಭಾಗಗಳಿಗೆ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ನೀಡಿದರು. ಚಂಡ ಮಾರುತದಿಂದಾಗಿ ಸಂಭವಿಸಿದ ಹಾನಿಗಳ ಕುರಿತು ಪರಿಶೀಲನೆ ನಡೆಸಿ ಮುಖ್ಯಮಂತ್ರಿಗಳು ಮತ್ತು ಸಂಸದ ಬಿ.ವೈ ರಾಘವೇಂದ್ರರ ಗಮನಕ್ಕೆ ತಂದು ಸಂತ್ರಸ್ತರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ತೌಖ್ತೇ ಚಂಡಮಾರುತ ಅಬ್ಬರ – ಗೋಪಾಡಿ ಕಡಲತೀರದ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಕುಂದಾಪುರ (ಮೇ. 15) : ತೌಖ್ತೇ ಚಂಡಮಾರುತ ಅಬ್ಬರ ಕರಾವಳಿ ಭಾಗದ ಕಡಲ ತೀರದಲ್ಲಿ ಅಪಾರ ಹಾನಿಯನ್ನು ಉಂಟುಮಾಡಿದ್ದು,ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಕಡಲ ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.. ದಿನದಿಂದ ದಿನಕ್ಕೆ ಸಮುದ್ರದ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು ಕಡಲತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಚಿಂತನೆ ನಡೆಯುತ್ತಿದೆ. ಮೇ 15ರ ಸಂಜೆ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜ ಪೂಜಾರಿ ಹಾಗೂ ಸದಸ್ಯ ಪ್ರಭಾಕರ್ ಯಾನೆ ಪ್ರಕಾಶ್ […]
ಮರಣ ಬಲೆ
ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ “ಮರಣ ಬಲೆ” ಕೂಡಾ ಒಂದು. ಹೆಸರೇ ಅರ್ಥೈಸುವಂತೆ ಅಜಾಗರೂಕತೆ, ಮರಣ-ಮಸಣಕ್ಕೊಯ್ಯುವಂತದ್ದು. ಅಲೆಗಳಬ್ಬರ ಹೆಚ್ಚಿದ್ದಾಗ ಮಾತ್ರ ಬಲೆ ನೀರಿನಾಳಕ್ಕೆ ಇಳಿಯುತ್ತದೆ. ಬಲೆ ಹೊತ್ತು ಅಲೆ ದಾಟಿ ಕೈ ಸಡಿಲಿಸುವಲ್ಲಿ ಮೀನುಗಾರ ನಿಪುಣನಾಗಿರಲೇ ಬೇಕು. ಹೆಚ್ಚಾಗಿ ಆಳ ಸಮುದ್ರದ ಮೀನುಗಾರಿಕೆಗೆ ಮಳೆಗಾಲದ ರಜೆಯಿತ್ತಾಗ ಈ ‘ಮರಣಬಲೆ’ ಯನ್ನು ಅಣಿಗೊಳಿಸಲಾಗುತ್ತದೆ. ಮುಳ್ಳು ಬಿಡಿಸ ಬಲ್ಲವಗೆ ಯಾವ ಮೀನಾದರೇನು? ಅಲೆಗೆ ಎದೆಯೊಡ್ಡುವವಗೆ ಯಾವ ಬಲೆಯಾದರೇನು? ವೀರ ಕಳೆ ಮೊಗದಲ್ಲಿದ್ದರಷ್ಟೇ ಸಾಕು… ಅದೋ […]
ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಅಧಿಕಾರ ಸ್ವೀಕಾರ
ಗಂಗೊಳ್ಳಿ (ಮೇ, 12) : ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಮೇ 11ರಂದು ಅಧಿಕಾರ ಸ್ವೀಕರಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಭೀಮಾಶಂಕರ್ ಎಸ್. ರವರು ವರ್ಗಾವಣೆಗೊಂಡ ಬಳಿಕ ಖಾಲಿಯಿದ್ದ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ನಂಜಾ ನಾಯ್ಕ ಎನ್. ನಿಯುಕ್ತಿಗೊಂಡಿರುತ್ತಾರೆ. ನೂತನ ಉಪನಿರೀಕ್ಷಕರಾದ ನಂಜಾ ನಾಯ್ಕ ಎನ್. ಅವರಿಗೆ ಪ್ರಭಾರ ಎಸ್. ಐ. ಪ್ರಕಾಶ್ ಸಾಲಿಯಾನ್ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.










