ಭಾರತೀಯ ಪ್ರೊ ಕಬ್ಬಡ್ಡಿ ತಂಡದ ಬಾಗಿಲು ಬಡಿದು ಬಂದಿದ್ದ ಸುಷ್ಮಂತ್ ಎನ್ನುವ ಮಲೆನಾಡಿನ ಪ್ರತಿಭೆ ಇನ್ನೇನು ಮುಂಬೈ ತಂಡ ಸೇರಿಯೇ ಬಿಟ್ಟ ಅನ್ನೋವಷ್ಟರಲ್ಲಿ ಆತನ ಜೀವನದಲ್ಲಿ ವಿಧಿ ಬೇರೆಯದೇ ಆಟ ಆಡಿತ್ತು. ಮೂರು ವರ್ಷಗಳ ಹಿಂದೆ ಪ್ರೊ ಕಬಡ್ಡಿ ಉತ್ತುಂಗಕ್ಕೆ ಏರಿದಾಗ ಕಬಡ್ಡಿ ಆಟಗಾರರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ಮಾತೇ.ಮಲೆನಾಡಿನ ಹೊಸನಗರದ ಹೆದ್ದಾರಿಪುರದ ತೊರೆಗದ್ದೆಯ ಮಧ್ಯಮ ಕುಟುಂಬದ ಹುಡುಗ ಬಾಲ್ಯದಿಂದಲೂ ಕಬ್ಬಡ್ಡಿ ಅಂಕಣದಲ್ಲಿ ಕಳೆದದ್ದೇ ಹೆಚ್ಚು. […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಮುಳುಗುವೀರ ಈಶ್ವರ ಮಲ್ಪೆಯವರಿಗೆ ಉಡುಪಿಯ ಕನ್ನಡ, ತುಳು ವೇದಿಕೆಯಿಂದ ಸನ್ಮಾನ
ಮಲ್ಪೆ(ಮೇ,15): ಕನ್ನಡ ಮತ್ತು ತುಳು ಸಾಹಿತ್ಯ ವೇದಿಕೆ, ಉಡುಪಿ ಜಿಲ್ಲೆ ಇದರ ಎರಡನೆಯ ವಾರ್ಷಿಕೋತ್ಸವದ ಪ್ರಯುಕ್ತ ಖ್ಯಾತ ಮುಳುಗುವೀರ ಹಾಗೂ ಸಮಾಜ ಸೇವಕ ಶ್ರೀಯುತ ಈಶ್ವರ ಮಲ್ಪೆ ಇವರನ್ನು ಸನ್ಮಾನಿಸಲಾಯಿತು. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವೇದಿಕೆಯ ಸದಸ್ಯರೆಲ್ಲರೂ ಪ್ರತಿವರ್ಷ ಹಣವನ್ನು ಒಟ್ಟುಗೂಡಿಸಿ, ಅರ್ಹರಿಗೆ ನೀಡಿ, ಆ ಮೂಲಕ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಬಾರಿ ವೇದಿಕೆಯು ಸ್ಪಂದನ ವಿಶೇಷ ಮಕ್ಕಳ ಶಾಲೆ, […]
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಲ್ಲೂರು ದೇಗುಲಕ್ಕೆ ಭೇಟಿ
ಕೊಲ್ಲೂರು(ಮೇ,15): ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಕೇಂದ್ರ ಶ್ರೀ ಕ್ಷೇತ್ರ ಕೊಲ್ಲೂರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಮೇ14 ರ ಬೆಳಿಗ್ಗೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ದೇಗುಲದ ಹಿರಿಯ ಅರ್ಚಕ ಡಾ. ಕೆ.ಎನ್ .ನರಸಿಂಹ ಅಡಿಗ ಹಾಗೂ ಶ್ರೀ ಎನ್.ಪರಮೇಶ್ವರ ಅಡಿಗರವರ ನೇತ್ರತ್ವದಲ್ಲಿ ಸಚಿವರಿಗೆ ಗೌರವಪೂರ್ವಕವಾಗಿ ದೇವಳಕ್ಕೆ ಸ್ವಾಗತಿಸಲಾಯಿತು.ಈ ಸಂಧರ್ಭದಲ್ಲಿ ಹಿಂದಿನ ದಿನಗಳಲ್ಲಿ ತಾವು ದೇವಾಲಯಕ್ಕೆ ಆಗಮಿಸಿದ ಸಂದರ್ಭಗಳನ್ನು ಹಾಗೂ ದೇವಿಯ […]
ಸುಣ್ಣಾರಿ: ವಿವೇಕೋದಯ ಶಾಲೆಗೆ ದಾನಿಗಳ ಕೊಡುಗೆ
ಕೋಟೇಶ್ವರ(ಮೇ,14): ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕರಾದ ಸುಣ್ಣಾರಿ, ಶ್ರೀ ಕಿಶೋರ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2021-22 ನೇ ಸಾಲಿನ ಆಯವ್ಯಯವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಘುರಾಮ ಶೆಟ್ಟಿ ಸಭೆಯಲ್ಲಿ ಮಂಡಿಸಿದರು.2022-23ನೇ ಸಾಲಿನ ಖರ್ಚು ವೆಚ್ಚಗಳ ಬಗ್ಗೆಐದು ಜನ ಗೌರವ ಶಿಕ್ಷಕರ ಸಂಬಳ, ಶಾಲಾ ವ್ಯಾನ್ ನಿರ್ವಹಣೆ ಅದರ ಬಗ್ಗೆ, ಹಣ ಕ್ರೋಡಿಕರಣ, ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. […]
ಶಿರ್ವ: ಉದ್ಯೋಗ ತರಬೇತಿ ಸಹಯೋಗದ ಪರಸ್ಪರ ಒಡಂಬಡಿಕೆ ಕಾರ್ಯಕ್ರಮ
ಶಿರ್ವ(ಮೇ13) : ಸಂತ ಮೇರಿಸ್ ಕಾಲೇಜು,ಶಿರ್ವ ಮತ್ತು ಉನ್ನತಿ ಕ್ಯಾರಿಯರ್ ಅಕಾಡೆಮಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉದ್ಯೋಗ ತರಬೇತಿ ಕಾರ್ಯಕ್ರಮಗಳ ಪರಸ್ಪರ ಒಡಂಬಡಿಕೆಯು ಎರಡು ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಡೆಯಿತು. ನಮ್ಮ ದೇಶದಲ್ಲಿ ಶೇಕಡಾ 50ರಷ್ಟು ಜನರು 35ವರ್ಷಕ್ಕಿಂತ ಸಣ್ಣವರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಲಭಿಸುವುದು ಕಷ್ಟಸಾಧ್ಯವಾಗಿದೆ.ಯುವಜನರ ಉದ್ಯೋಗದ ಸಾಮಾರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದರೆ ಅಯಾ ಉದ್ಯೋಗಗಳ ಹಿನ್ನಲೆಯಲ್ಲಿ ಸೂಕ್ತ ತರಬೇತಿಯು ಅತ್ಯಂತ ಅಗತ್ಯವಾಗಿದೆ. ತಾಂತ್ರಿಕತೆ ಇಂದು ಎಲ್ಲಾರಂಗಗಳಲ್ಲಿ ವ್ಯಾಪಕವಾಗಿರುವ […]
ಪುಸ್ತಕ ದಾನ ನೀಡಿ ಜ್ಞಾನ ಹರಡಿಸಿ ಪುಸ್ತಕ ಸಂಗ್ರಹ ಅಭಿಯಾನಕ್ಕೆ ಕೈ ಜೋಡಿಸಿ
ರಾಣಿಬೇನ್ನೂರು ನಗರದ ಯುವ ಕವಿ,ಸಾಹಿತ್ಯ ಪರಿಚಾರಕ ಬಸವರಾಜ ಎಸ್. ಬಾಗೇವಾಡಿಮಠರವರು ತಮ್ಮ ಸಂಸ್ಥೆಯವತಿಯಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಬಡ ಮಕ್ಕಳಿಗೆ ಓದಲು ಕೊಡುವ ದೃಷ್ಟಿಯಿಂದ ವಿನೂತನ ಯೋಜನೆಯೊಂದನ್ನು ಜಾರಿಗೊಳಿದ್ದಾರೆ. ಮನೆಯಲ್ಲಿ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ಯಾವುದೇ ಹಳೆಯ ಪಠ್ಯ ಪುಸ್ತಕ, ಕಾದಂಬರಿ,ಕಥೆ, ಕವನ ಸಂಕಲನ, ಲೇಖಕನಗಳ ಮಾಲಿಕೆ, ವಾರ-ಮಾಸ ಪತ್ರಿಕೆ,ಗ್ರಂಥಗಳು, ನಿಘಂಟುಗಳು ಸೇರಿದಂತೆ ಇತರೆ ಯಾವುದೇ ವಿಷಯ ಜ್ಞಾನಾರ್ಜನೆ ಹೆಚ್ಚಿಸುವ ಪುಸ್ತಕಗಳಿರಲಿ ಅವುಗಳನ್ನು ರದ್ದಿಗೆ ಹಾಕದೇ ಮುಕ್ತವಾಗಿ ಶೃಂಗಾರ ಕಾವ್ಯ […]
ಮೂಡ್ಲಕಟ್ಟೆ ಎಂ ಐ ಟಿ ಮತ್ತು ಐ ಸಿ ಟಿ ಅಕಾಡೆಮಿ ಒಪ್ಪಂದ
ಕುಂದಾಪುರ(ಮೇ,11): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಉದ್ಯೋಗವಕಾಶ ಕಲ್ಪಿಸುವ ಮತ್ತು ಹೊಸ ತಂತ್ರಜ್ಞಾನ ದ ಮೇಲೆ ತರಬೇತಿ ನೀಡುವ ಸಲುವಾಗಿ ಪ್ರತಿಷ್ಟಿತ ಐ ಸಿ ಟಿ ಅಕಾಡೆಮಿ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕಾಲೇಜಿನ ಪ್ರಾಂಶುಪಾಲ, ಡಾ .ಚಂದ್ರರಾವ್ ಮದಾನೆ ಮತ್ತು ಐ ಸಿ ಟಿ ಕಡೆಯಿಂದ ರೋಹಿತ್ ಕಜವ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ । ಮೆಲ್ವಿನ್ ದ ಸೋಜಾ ಮತ್ತು ಡೀನ್ ಅಕಾಡೆಮಿಕ್ […]
ಕೆಂಚನೂರು: ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನ: ಅಷ್ಟಬಂಧ ಪುನ:ಪ್ರತಿಷ್ಠೆ ಸಂಪನ್ನ
ವಂಡ್ಸೆ( ಮೇ,10): ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನ ಪಡೂರು, ಭಟ್ರಮಕ್ಕಿ ಇದರ ಅಷ್ಟಬಂಧ ಪುನ:ಪ್ರತಿಷ್ಠೆ ಮೇ7 ಹಾಗೂ 8 ರಂದು ನಡೆಯಿತು. ಅರ್ಚಕರಾದ ಪ್ರಶಾಂತ್ ಭಟ್ ರವರ ನೇತೃತ್ವದಲ್ಲಿ ಅಷ್ಟಬಂಧ ಪುನ:ಪ್ರತಿಷ್ಠೆಯ ಧಾರ್ಮಿಕ ವಿಧಿ -ವಿಧಾನಗಳು ನೇರವೇರಿತು. ಧಾರ್ಮಿಕ ಸಭಾ ಕಾರ್ಯಕ್ರಮ ನೆಂಪು ಸೀತಾರಾಮ ಶೆಟ್ಟಿ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನದ ಗೌರವಾಧ್ಯಕ್ಷರಾದ ಶೀನ ಗಾಣಿಗ ಚೂಡಿಕಟ್ಟೆ […]
ಕಮಲಶಿಲೆ: ಶ್ರೀ ಬ್ರಾಹ್ಮಿ ಗೀತಾಮೃತ- ಭಕ್ತಿ ಗೀತೆ ಅನಾವರಣ
ಕಮಲಶಿಲೆ( ಮೇ,09): ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ,ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ದೇವಿಯ ಭಕ್ತಿ ಗೀತೆ” ಶ್ರೀ ಬ್ರಾಹ್ಮಿ ಗೀತಾಮೃತ”ವನ್ನು ಮೇ, 8 ರ ಆದಿತ್ಯವಾರದಂದು ಕ್ಷೇತ್ರದ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರರವರು ದೇವಳದ ಮುಂಭಾಗದಲ್ಲಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ, ಜೊತೆ ಧರ್ಮದರ್ಶಿ ಆಜ್ರಿ ಚಂದ್ರಶೇಖರ ಶೆಟ್ಟಿ, ಭಕ್ತಿಗೀತೆಗಳ ನಿರ್ಮಾಪಕ ಸುಕುಮಾರ್ ಶೆಟ್ಟಿ ಕಮಲಶಿಲೆ, ಭಕ್ತಿ ಗೀತೆಗಳ ಗೀತಸಾಹಿತಿ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗೀತ ಗಾಯಕರಾದ ಕೃಷ್ಣ […]
ನೀ ಸೂತ್ರಧಾರಿ ನಾ ಪಾತ್ರಧಾರಿ
” ಕುಣಿಸಲು ನೀನು ಕುಣಿವೇನು ನಾನು ……..ನೀ ಸೂತ್ರಧಾರಿ ನಾ ಪಾತ್ರಧಾರಿ “ಎನ್ನುವ ಸಾಲು ಪ್ರತಿ ವ್ಯಕ್ತಿಯ ಜೀವನ ಬಂಡಿಯ ಚಲನೆಗೆ ಒಂದು ನಿದರ್ಶನ. ಭೂಮಿ ನಮ್ಮದಲ್ಲ, ಗಾಳಿ ನಮ್ಮದಲ್ಲ, ಈ ನಾಲ್ಕು ದಿನದ ಜೀವನದಲ್ಲಿ ಚಿರಾಸ್ಥಾಯಿಯಾಗಿ ಉಳಿಯುವು ಸತ್ಕರ್ಮವಷ್ಟೇ! ಜೀವನಕ್ಕೇನು? ನಿರ್ಜೀವ ವಸ್ತುಗಳಿಗೂ ಕೂಡ ಹುಟ್ಟು , ವಿಕಾಸ ಹಾಗೂ ಅವನತಿ ಎನ್ನುವ ಜೀವನದ ಹಂತವಿರುತ್ತದೆ. ಆದರೆ ಈ ಜೀವನದಲ್ಲಿ ಅವಶ್ಯವಾಗಿರುವುದು ಜೀವಿಸುವುದು ಹಾಗೂ ನಿರರ್ಥಕ ಜೀವನವನ್ನು ಸಾರ್ಥಕವನ್ನಾಗಿಸಿಕೊಂಡು ಬದುಕಿನಲ್ಲಿ […]










