ಕುಂದಾಪುರ (ಸೆ,22): ಕುಂದಾಪುರ ತಾಲೂಕು ದಸರಾ ಚಾಂಪಿಯನ್ಶಿಪ್ ನಲ್ಲಿ ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾ ಸಂಸ್ಥೆಯ ಕ್ರೀಡಾಪಟುಗಳು ಉತ್ತಮ ಸಾಧನೆಗೈದಿದ್ದಾರೆ. 1500 ಮೀಟರ್ ಓಟದಲ್ಲಿ ನವ್ಯಾ ಆಚಾರ್ ದ್ವಿತೀಯ ಸ್ಥಾನ ಹಾಗೂ 3000 ಮೀಟರ್ ಓಟದಲ್ಲಿ ದ್ವಿತೀಯಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ . ಹಾಗೆಯೇ ರೆನಸ್ಲಿ 200 ಮೀಟರ್ ಓಟದಲ್ಲಿ 3 ನೇ ಸ್ಥಾನ ಪಡೆದಿದ್ದಾರೆ. ಈ ಸಂಸ್ಥೆಯ ಮಹಿಳೆಯರ ತಂಡ 4×100ಮೀಟರ್ ರಿಲೇ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕ : ರಕ್ತದಾನ ಶಿಬಿರ
ಕುಂದಾಪುರ ( ಸೆ.22): ಮೊಗವೀರ ಯುವ ಸಂಘಟನೆ ( ರಿ. ), ಉಡುಪಿ ಜಿಲ್ಲೆ, ಕುಂದಾಪುರ ಘಟಕ, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ. ) ಅಂಬಲಪಾಡಿ ಉಡುಪಿ, ಇವರ ನೇತೃತ್ವದಲ್ಲಿ ವಿಠ್ಠಲವಾಡಿ ಫ್ರೆಂಡ್ಸ್ (ರಿ.), ಕುಂದಾಪುರ, ಕಿಂಗಫಿಷರ್ ಸ್ಪೋರ್ಟ್ಸ್ ಕ್ಲಬ್ ಖಾರ್ವಿಕೇರಿ ಕುಂದಾಪುರ, ಕೆ. ಎಂ. ಸಿ. ರಕ್ತನಿಧಿ ವಿಭಾಗ ಮಣಿಪಾಲ, ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 22 ರಂದು ಕುಂದಾಪುರದ ಮೊಗವೀರ ಭವನದಲ್ಲಿ ನಡೆದ ರಕ್ತದಾನ […]
ರೋಟರಿ ಕ್ಲಬ್ ಕೋಟೇಶ್ವರ ವತಿಯಿಂದ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ
ಕೋಟೇಶ್ವರ( ಸೆ.13): ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಗೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊರವಡಿ ಇಲ್ಲಿನ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕೋಟೇಶ್ವರ ಇದರ ನೇತ್ರತ್ವದಲ್ಲಿ “ದೀಆರ್ವಿ” ಚಿಟ್ಸ್ ಪ್ರೈ, ಲಿ. ಮಂಗಳೂರು ಇವರ ಸಹಕಾರದಿಂದ ಉಚಿತ ಕ್ರೀಡಾ ಸಮವಸ್ತ್ರಗಳ ವಿತರಣಾ ಕಾರ್ಯಕ್ರಮವು ಸೆಪ್ಟೆಂಬರ್,12 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ ಇಲ್ಲಿ ನೆರವೇರಿತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ದೀಪಿಕಾ ಆರ್ ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆ […]
ಅಂಪಾರು:ನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನ
ಕುಂದಾಪುರ(ಸೆ,5): ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಸಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಅಂಪಾರಿನ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಹೇರೂರು ದೊಡ್ಡಮನೆ ಎಚ್ ಬಿ ಬಾಬಯ್ಯ ಶೆಟ್ಟಿ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ವಕ್ವಾಡಿ ಭಾಸ್ಕರ್ ಶೆಟ್ಟಿ ವಹಿಸಿದ್ದರು. ಗೌರವಾಧ್ಯಕ್ಷರಾದ ಶ್ರೀ ವಕ್ವಾಡಿ ದಿನಕರ್ ಶೆಟ್ಟಿ, ಸಂಘದ ಕಾರ್ಯದರ್ಶಿ […]
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ: ಶಿಕ್ಷಕ ದಂಪತಿಗಳಿಗೆ ಸನ್ಮಾನ
ಹೆಮ್ಮಾಡಿ (ಸೆ. 05): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ,ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕ ದಂಪತಿಗಳಾದ ಪಡುಕೋಣೆ ಶ್ರೀ ಪಿ.ನರಸಿಂಹಮೂರ್ತಿ ಹಾಗೂ ಶ್ರೀಮತಿ ಜಯಂತಿ ಇವರನ್ನು ಘಟಕದ ವತಿಯಿಂದ ಅವರ ಸ್ವಗ್ರಹಕ್ಕೆ ತೆರಳಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸಾಹಿತಿ,ನಾಟಕಕಾರ, ಸಮಾಜ ಸೇವಕ ಪ್ರಗತಿಪರ ಕೃಷಿಕ ,ನಿವೃತ್ತ ಶಿಕ್ಷಕ ಶ್ರೀ ಪಿ ನರಸಿಂಹಮೂರ್ತಿ ಮಾತನಾಡಿ […]
ಹಿಂದಿ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ನಾರಾಯಣ ಈ ನಾಯ್ಕ್ ಆಯ್ಕೆ
ಉಡುಪಿ ( ಆ,26): ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಹಿಂದಿ ಉಪನ್ಯಾಸಕರ ಸಂಘದ 2024 -25 ನೇ ಶೈಕ್ಷಣಿಕ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕರಾದ ನಾರಾಯಣ .ಇ . ನಾಯ್ಕ್ ಆಯ್ಕೆ ಆಗಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಭೋದಕ ಮತ್ತು ಬೋಧಕೇತರ ವರ್ಗ ಅವರನ್ನು ಅಭಿನಂದಿಸಿದೆ.
ಮಾನವೀಯತೆ ಮೆರೆದ ಗೆಳೆಯರ ಬಳಗ ಬೀಜಾಡಿ
ಕೋಟೇಶ್ವರ (ಆ, 24): ಗೆಳೆಯರ ಬಳಗ ಬೀಜಾಡಿ ಇವರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಕಿ ಡಿಪ್ ಹಾಗೂ ಕ್ರಿಕೆಟ್ ಪಂದ್ಯಾಟದಿಂದ ಸಂಗ್ರಹಿಸಿದ 1 ಲಕ್ಷ 12 ಸಾವಿರ ಮೊತ್ತವನ್ನು ಬೀಜಾಡಿ ಗ್ರಾಮದ ಬಡ ಕುಟುಂಬದ ಹುಡುಗಿಯ ವೈದ್ಯಕೀಯ ಚಿಕಿತ್ಸೆಗಾಗಿ ಹುಡುಗಿಯ ಪೋಷಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ,ಗೋಪಾಡಿ ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ,ಮೀನುಗಾರಿಕಾ ಸೊಸೈಟಿಯ ಅಧ್ಯಕ್ಷರಾದ […]
ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕ: ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಕುಂದಾಪುರ(ಆ,25): ಮೊಗವೀರ ಯುವ ಸಂಘಟನೆ (ರಿ ),ಉಡುಪಿ ಜಿಲ್ಲೆ ಇದರ ಕುಂದಾಪುರ ಘಟಕದ 2024 -26 ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರಧಾನ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಏಪ್ರಿಲ್ 25ರ ಆದಿತ್ಯವಾರದಂದು ಕುಂದಾಪುರದ ಚಿಕ್ಕಮ್ಮನಸಾಲು ರಸ್ತೆಯ ಮೊಗವೀರ ಭವನದಲ್ಲಿ ಜರಗಿತು. ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮೊಗವೀರ ಸಮುದಾಯವನ್ನು ಸಂಘಟಿಸುವುದರ ಜೊತೆಗೆ ಯುವಶಕ್ತಿಯನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಮೊಗವೀರ ಯುವ […]
ರೋಟರಿ ಕ್ಲಬ್ ಕೋಟೇಶ್ವರ : ವಲಯ ಮಟ್ಟದ ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್ ವಿಚಾರ ಸಂಕಿರಣ
ಕೋಟೇಶ್ವರ( ಆ,25): ರೋಟರಿ ಸಂಸ್ಥೆಗೆ ಸಮಾಜದ ವಿವಿಧ ಸ್ತರಗಳ ವಿವಿಧ ವೃತ್ತಿಗಳ ಸಮರ್ಥವಾದ ಸದಸ್ಯರನ್ನು ಸೇರಿಸುವುದರ ಜೊತೆಗೆ ಅವರು ರೋಟರಿಯಲ್ಲಿಯೇ ಉಳಿಯುವಂತೆ ಪ್ರೋತ್ಸಾಹಿಸಿದಾಗ ರೋಟರಿ ಪಬ್ಲಿಕ್ ಇಮೇಜ್ ನಿಜವಾದ ಅರ್ಥದಲ್ಲಿ ಬೆಳೆಯುತ್ತದೆ ಎಂದು ರೋಟರಿ ಜಿಲ್ಲೆ 31 82ರ ಸದಸ್ಯತ್ವ ಅಭಿವೃದ್ಧಿಯ ಜಿಲ್ಲಾ ಚೇರ್ಮೆನ್ ರೋ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು. ಅವರು ವಲಯ ಎರಡರ ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್ ವಿಚಾರ ಸಂಕಿರಣ “ಅಭಿವರ್ಧನೆ 2024” ವಿಚಾರ […]
ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ.ಹೆಮ್ಮಾಡಿ: ಮೀನುಗಾರರ ಕಲ್ಯಾಣ ಯೋಜನೆ ಉಳಿತಾಯ ಮತ್ತು ಪರಿಹಾರ ಯೋಜನೆಗೆ ನೋಂದಾವಣೆ
ಹೆಮ್ಮಾಡಿ( ಆ,21): ಇಲ್ಲಿನ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ.ಹೆಮ್ಮಾಡಿಯಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರರ ಕಲ್ಯಾಣ ಯೋಜನೆ ಉಳಿತಾಯ ಮತ್ತು ಪರಿಹಾರ ಯೋಜನೆಯ 2024-25 ನೇ ಸಾಲಿನ ನೋಂದಾವಣೆ ಪ್ರಾರಂಭಗೊಂಡಿದೆ. ಅರ್ಜಿ ಸಲ್ಲಿಸ ಬಯಸುವವರು ಕೆಳಗೆ ತಿಳುಹಿಸಿದ ಅರ್ಹತೆಯನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ. ಅರ್ಹತೆಗಳು1 ಫಲಾನುಭವಿಯು ಮೀನುಗಾರರ ಸಹಕಾರ ಸಂಘದ ಮೀನುಗಾರಿಕಾ ಸದಸ್ಯರಾಗಿರಬೇಕು2 ಬಿ.ಪಿ.ಎಲ್ ಕಾರ್ಡ್ ದಾರರಾಗಿರಬೇಕು3 18 ರಿಂದ 60 ವರ್ಷದೊಳಗಿನವರಾಗಿರಬೇಕುಬೇಕಾಗುವ ದಾಖಲೆಗಳು1 ಪೋಟೋ2 […]










