ನದಿಯ ಮೇಲೆ ತೇಲುವ ನಾವೆಯ ಗಾನಕೆಹರಿವ ನೀರಿನ ನಾದವಿಲ್ಲಿ ಹಿನ್ನಲೆ ಸಂಗೀತಅಂಬಿಗನೀಗ ಮೈಮರೆತಿದ್ದಾನೆಆ ಶಿಖರದ ಮೈಸವರಿ ಸಾಗುತ್ತಿದೆ ತಂಗಾಳಿಕುಣಿವ ಸಸ್ಯಶ್ಯಾಮಲೆಯ ನೋಡುತ್ತಲೀಗನನ್ನೂರು ಹಾಗೇ ಮೈಮರೆತಿದೆಗದ್ದೆಯೊಳಗಿನ ರೈತನ ಹಾಡನ್ನು ಪೈರುಗಳು ಆಲಿಸಿವೆಅವನ ಪ್ರತಿಹೆಜ್ಜೆಗಳೂ ನಾಟ್ಯದಂತೆಯೇಧರಿತ್ರಿಗೂ ಏನೋ ರೋಮಾಂಚನವಾಗುತ್ತಿದೆಪತಂಗಗಳೂ ಜೇನ್ನೊಳಗಳೂ ಹುಡುಕಾಡಿವೆ ಮಧುವಿಗಾಗಿಹೂವೊಂದು ಸುಖಿಸುತ್ತಿರಲೀಗ ಗೋವಿನ ಕೊರಳ ಗಂಟೆಗಳುಹಿಮ್ಮೇಳ ನುಡಿಸುತ್ತೀವೆಮೂಡಣದಲ್ಲೀಗ ನೇಸರನಾಗಮನದ ಸಮಯಪಕ್ಷಿಗಳೀಗ ಆಲಾಪನೆ ಶುರುಹಚ್ಚಿಕೊಂಡಿವೆಮರದೆಲೆಗಳಿಂದ ಬೀಳುವ ಮುತ್ತಿನ ಹನಿಗಳೂ ಏನೋವಿಶೇಷ ಪರಿಣಾಮವನ್ನುಂಟುಮಾಡಿವೆ ಸಂಗೀತಕ್ಕೆನಡುವಲ್ಲಿ ಕೊಡವ ಹೊತ್ತು ಸಾಗಿದ ನೀರೆಯದ್ದೊಂದು ಕಾವ್ಯಹಟ್ಟಿಯನ್ನು ಬಿಟ್ಟ […]
Month: September 2021
ಸ್ಪರ್ಧೆಗಳ ಮೂಲಕ ವ್ಯಕ್ತಿತ್ವ ವಿಕಸನ ವೃದ್ಧಿ-ಡಾ| ಹೆರಾಲ್ಡ್ ಐವನ್ ಮೋನಿಸ್
ಶಿರ್ವ(ಸೆ,18) : ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚುತ್ತಿರುವ ಕಾರಣ ಕಂಪ್ಯೂಟರ್ ಕಲಿಕೆಯ ಅವಶ್ಯಕತೆ ಇಂದು ಅಗತ್ಯವಾಗಿದೆ .ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಕಂಪ್ಯೂಟರ್ ಗಳನ್ನು ಹೆಚ್ಚಾಗಿ ಬಳಸಿಕೊಂಡು ಸಮಾಜಕ್ಕೆ ಬೇಕಾಗುವ ತಂತ್ರಜ್ಞಾನವನ್ನು ರೂಪಿಸಿ,ಸಂಶೋಧನಾ ಮನಸ್ಥಿತಿ ಬೆಳೆಸಿಕೊಂಡು ಉತ್ತಮ ಉದ್ಯೋಗ ಪಡೆದುಕೊಳ್ಳಬೇಕೆಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಹೇಳಿದರು. ಅವರು ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ಐಟಿ ಕ್ಲಬ್ […]
ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ: ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ಕುಂದಾಪುರ (ಸೆ,18): ಬಿ.ಜೆ.ಪಿ ಕುಂದಾಪುರ ಮಂಡಲದ ವ್ಯಾಪ್ತಿಯಲ್ಲಿ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಕ್ಕೆ ಸಪ್ಟೆಂಬರ್,18 ರಂದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಕುಂದಾಪುರ ಪುರಸಭೆ ವ್ಯಾಪ್ತಿಯ ಸಂಗಮ್ ವಾರ್ಡ್, ಮಂಗಳೂರು ಟೈಲ್ಸ್ ಪ್ಯಾಕ್ಟರಿ ವಾರ್ಡ್, ಬಹದ್ದೂರ್ ಷಾ ವಾರ್ಡ್ ಬೂತ್ ಅಧ್ಯಕ್ಷರ ಮನೆಗೆ […]
ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನಾಚರಣೆ: ಶಿರೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ರೀ ಗಾರ್ಡ್ ಕೊಡುಗೆ
ಶಿರೂರು(ಸೆ,18): ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮ ದಿನದ ಪ್ರಯುಕ್ತಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಶಿರೂರು ಮಹಾಶಕ್ತಿ ಕೇಂದ್ರ ವತಿಯಿಂದ “ಸೇವೆ ಮತ್ತು ಸಮರ್ಪಣಾ ಅಭಿಯಾನ”ದ ಅಂಗವಾಗಿ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿಯವರುಶಿರೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಟ್ರೀ ಗಾರ್ಡ್ ಕೊಡುಗೆ ನೀಡಿದರು. ಕಳೆದ ಎಂಟು ವರ್ಷಗಳಲ್ಲಿ ದೇಶದ ಪ್ರಸಿದ್ದಿ ಜಗತ್ತಿನಾದ್ಯಂತ ಪಸರಿಸಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಈ ದೇಶ ಅತ್ಯಂತ ಅಭಿವೃದ್ಧಿಯ ಪಥದತ್ತ ಸಾಗಿದೆ ಎಂದು ಶಾಸಕರು […]
ಶ್ರೀ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ :ಸ್ವರ್ಣ ಕಳಶ ಸಮಿತಿ ಕುಂದಾಪುರ ವಲಯದ ಸಭೆ
ಕುಂದಾಪುರ (ಸೆ,18): ಉಚ್ಚಿಲ ಮಹಾಲಕ್ಷ್ಮೀ, ಬೆಣ್ಣೆಕುದ್ರು ಕುಲಮಾಸ್ತಿ, ಮತ್ತು ಬಗ್ವಾಡಿ ಮಹಿಷಮರ್ದಿನಿ ಈ ಮೂರು ಹೋಬಳಿಗಳ ಆದಿ ಶಕ್ತಿ ಮೂರು ದೇವತೆಗಳಲ್ಲಿ ಒಂದಾದ ಉಚ್ಚಿಲ ಮಹಾ ಲಕ್ಷ್ಮೀ ದೇವಿಗೆ ಸ್ವರ್ಣ ಕಳಶ ಅರ್ಪಿಸಲು ನಿಧಿ ಸಂಗ್ರಹಿಸುವ ಸಲುವಾಗಿ ಕುಂದಾಪುರ ವಲಯದ ವತಿಯಿಂದ ಸಪ್ಟೆಂಬರ್,18ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಗೃಹದಲ್ಲಿಸಭೆಯನ್ನು ಆಯೋಜಿಸಲಾಗಿತ್ತು. ಬೈಂದೂರು, ಹೆಮ್ಮಾಡಿ, ಕುಂದಾಪುರ, ಹಾಲಾಡಿ ಕೋಟೇಶ್ವರ, ಕೋಟ, ಸಾಲಿಗ್ರಾಮ, ಮಂದಾರ್ತಿ ಒಳಗೊಂಡ ಸ್ವರ್ಣ ಕಲಶ ಸಮಿತಿ ಕುಂದಾಪುರ ಇದರ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, […]
ಉಚ್ಚಿಲ ಮಹಾಲಕ್ಷ್ಮೀ ಸ್ವರ್ಣ ಕಳಶ ಸಮಿತಿ :ಕುಂದಾಪುರ ವಲಯದ ಸಭೆ
ಕುಂದಾಪುರ (ಸೆ,18): ಉಚ್ಚಿಲ ಮಹಾಲಕ್ಷ್ಮೀ, ಬೆಣ್ಣೆಕುದ್ರು ಕುಲಮಾಸ್ತಿ, ಮತ್ತು ಬಗ್ವಾಡಿ ಮಹಿಷಮರ್ದಿನಿ ಈ ಮೂರು ಹೋಬಳಿಗಳ ಆದಿ ಶಕ್ತಿ ಮೂರು ದೇವತೆಗಳಲ್ಲಿ ಒಂದಾದ ಉಚ್ಚಿಲ ಮಹಾ ಲಕ್ಷ್ಮೀ ದೇವಿಗೆ ಸ್ವರ್ಣ ಕಳಶ ಅರ್ಪಿಸಲು ನಿಧಿ ಸಂಗ್ರಹಿಸುವ ಸಲುವಾಗಿ ಕುಂದಾಪುರ ವಲಯದ ವತಿಯಿಂದ ಸಪ್ಟೆಂಬರ್,18ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಗೃಹದಲ್ಲಿಸಭೆಯನ್ನು ಆಯೋಜಿಸಲಾಗಿತ್ತು. ಬೈಂದೂರು, ಹೆಮ್ಮಾಡಿ, ಕುಂದಾಪುರ, ಹಾಲಾಡಿ ಕೋಟೇಶ್ವರ, ಕೋಟ, ಸಾಲಿಗ್ರಾಮ, ಮಂದಾರ್ತಿ ಒಳಗೊಂಡ ಸ್ವರ್ಣ ಕಲಶ ಸಮಿತಿ ಕುಂದಾಪುರ ಇದರ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಕಾರ್ಯಾಗಾರ
ಬಂಟಕಲ್ (ಸೆ, 17) : ಇಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ಐಎಸ್ ಟಿಇ ಶಿಕ್ಷಕರ ಘಟಕದ ಸಹಯೋಗದೊಂದಿಗೆ ವಿಶ್ವ ಒಝೋನ್ ದಿನದ ಅಂಗವಾಗಿ “ಒಝೋನ್ ಪದರದ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವುದು” ಎಂಬ ವಿಷಯದ ಬಗ್ಗೆ ತಾಂತ್ರಿಕ ಕಾರ್ಯಾಗಾರವನ್ನು 16 ಸಪ್ಟೆಂಬರ್ 2021ರಂದು ಆಯೋಜಿಲಾಗಿತ್ತು. ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಕೇಶವ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. […]
ವರಸಿದ್ದಿವಿನಾಯಕ ಪಿಯು ಕಾಲೇಜು ಕೆರಾಡಿ : ಫ್ರೇಶರ್ಸ್ ಡೇ ಕಾರ್ಯಕ್ರಮ
ಕೆರಾಡಿ (ಸೆ, 17) : ಇಲ್ಲಿನ ವರಸಿದ್ದಿವಿನಾಯಕ ಪಿಯು ಕಾಲೇಜಿ ನಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಫ್ರೇಶರ್ಸ್ ಡೇ ಕಾರ್ಯಕ್ರಮವನ್ನು ಸಪ್ಟೆಂಬರ್ 15ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಉಪನ್ಯಾಸಕರಾದ ಅಭಿಜಿತ್ ಹೆಮ್ಮಾಡಿ, ನೇಹಾ ಶೆಟ್ಟಿ ಮತ್ತು ಶ್ವೇತಾ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಭು ಸ್ವಾಗತಿಸಿ, ಧನುಶ್ ರಾಜ್ ವಂದಿಸಿದರು. ಉಪನ್ಯಾಸಕರಾದ ಅಭಿಜಿತ್ ಹೆಮ್ಮಾಡಿ ಮತ್ತು […]
ಸಂತ ಮೇರಿ ಕಾಲೇಜು ಶಿರ್ವ: ಕಾಲೇಜು ಆಡಳಿತ ಕಛೇರಿಯ ಅಧೀಕ್ಷ ಕರಾಗಿ ಶ್ರೀಮತಿ ಡೊರಿನ್ ಡಿ’ಸಿಲ್ವ ನೇಮಕ
ಶಿರ್ವ (ಸೆ,16): ಇಲ್ಲಿನ ಸಂತ ಮೇರಿ ಕಾಲೇಜಿನಆಡಳಿತ ಕಛೇರಿಯ ಸಿಬ್ಬಂದಿಯಾದ ಶ್ರೀಮತಿ ಡೊರಿನ್ ಡಿ’ಸಿಲ್ವ ರವರನ್ನು ಕಾಲೇಜು ಆಡಳಿತ ಮಂಡಳಿಯಾದ ಕ್ಯಾಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ (CESU)ಯು ಸಪ್ಟೆಂಬರ್,16 ರಂದು ಪದೋನ್ನತಿಗೊಳಿಸಿ ಕಾಲೇಜು ಆಡಳಿತ ಕಛೇರಿಯ ಅಧೀಕ್ಷ ಕರನ್ನಾಗಿ ನೇಮಕಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಇಂಜಿನಿಯರ್ಸ್ ಡೇ ದಿನಾಚರಣೆ
ಕುಂದಾಪುರ (ಸೆ,17): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಸಪ್ಟೆಂಬರ್ 15 ರಂದು ಕುಂದಾಪುರದ ಜೆ. ಕೆ. ಹೋಟೆಲ್ ಸಭಾಂಗಣದಲ್ಲಿ ಆಚರಿಸಲಾಯಿತು.ಕೋಟ ಮೆಸ್ಕಾಂನ ಸಹಾಯಕ ಇಂಜಿನಿಯರ್ ಪ್ರಶಾಂತ್ ಶೆಟ್ಟಿ ಯವರನ್ನು ಕ್ಲಬ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಸನ್ಮಾನಿಸಿ ಗೌರವಿಸುವ ಮೂಲಕ ಆಚರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಶೆಟ್ಟಿ ಇಂಜಿನಿಯರ್ಸ್ ಡೇ ದೇಶದಾದ್ಯಂತ ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಪ್ರಯುಕ್ತ […]










