ಬೈಂದೂರು (ಸೆ,22): ಉಡುಪಿ ಜಿಲ್ಲೆಯ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶವನ್ನು ಹೊಂದಿರುವ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 9000 ವಸತಿ ರಹಿತರಿದ್ದು, ಅವರಿಗೆ ಶಾಶ್ವತ ನೆಲೆ ಕಂಡುಕೊಳ್ಳಲು ಹೆಚ್ಚುವರಿ ಮನೆಗಳನ್ನು ಮಂಜುರು ಮಾಡಬೇಕು,ಹಿಂದೆ ಪ್ರತಿ ಗ್ರಾಮ ಪಂಚಾಯತ್ ಗೆ ನೀಡಿರುವ 20 ಮನೆಗಳ ಆದೇಶ ಆದಷ್ಟು ಶೀಘ್ರವಾಗಿ ಶೀಘ್ರ ನೀಡಬೇಕು ಎಂದು ಬೈಂದೂರಿನ ಶಾಸಕ ಬಿ.ಎಂ .ಸುಕುಮಾರ ಶೆಟ್ಟಿ ಸದನದಲ್ಲಿ ವಸತಿ ಸಚಿವ ಶ್ರೀ ವಿ. ಸೋಮಣ್ಣ […]
Year: 2021
ರಾಜ್ಯ ಮಟ್ಟದ “ ಶಿಕ್ಷಕ ರತ್ನ” ಪ್ರಶಸ್ತಿಗೆ ಶಿಕ್ಷಕ ಶ್ರೀ ಮಹೇಶ್ ಹೈಕಾಡಿ ಆಯ್ಕೆ
ಉಡುಪಿ (ಸೆ,21): ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ (ರಿ ).ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ ನೀಡುವ ರಾಜ್ಯ ಮಟ್ಟದ “ ಶಿಕ್ಷಕ ರತ್ನ” ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಪಿ.ಆರ್.ಎನ್.ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದ ಉಪ ಮುಖ್ಯೋಪಧ್ಯಾಯರಾದ ಶ್ರೀ ಮಹೇಶ್ ಹೈಕಾಡಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ಶಾಲೆಯ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಗಳಿಂದ […]
ಬಂಟಕಲ್ಲಿನ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ
ಉಡುಪಿ (ಸೆ,20): ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ನವೀನ್ ಹೆಗ್ಡೆ, ಹರ್ಷವರ್ಧನ ಎನ್. ಸೌರವ್ .ಕೆ ,ಮಹಮ್ಮದ್ ನೌಫಾಲ್ ರವರು ಅಭಿವೃದ್ಧಿ ಪಡಿಸಿದ ಮಣ್ಣಿನ ತೇವಾಂಶ ಹಾಗೂ ತೇವಾಂಶ ಹಿಡಿದಿಡುವ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಅಳೆಯುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ “ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ” ದೊರಕಿದೆ. ಸಿವಿಲ್ ವಿಭಾಗದ ಪ್ರೊ. ಸುನಿಲ್ ಹಲ್ದಂಕರ್ ಹಾಗೂ […]
ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ :ಪದಪ್ರದಾನ ಸಮಾರಂಭ
ಕೋಟೇಶ್ವರ(ಸೆ,21): ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ ಮತ್ತು ಮಹಿಳಾ ಸಂಘಟನೆ ಇದರ ಹದಿನಾರನೇ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೋಟೇಶ್ವರ ಘಟಕದ ನಿಕಟಪೂರ್ವ ಅಧ್ಯಕ್ಷರಾದ ರವೀಶ್ ಎಸ್. ಕೊರವಡಿಯವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೊಗವೀರ ಸಂಘಟನೆ (ರಿ) ಉಡುಪಿ ಇದರ ಜಿಲ್ಲಾಧ್ಯಕ್ಷರಾದ ಶಿವರಾಮ ಕೆ.ಎಂ ರವರು ಮುಂದಿನ ಎರಡು ವರ್ಷಗಳ ಸಾಲಿಗೆ ಆಯ್ಕೆಯಾದ […]
ನರೇಶ್ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ
ಕುಂದಾಪುರ (ಸೆ,21); ಜೂನ್ 2021ರ ಚಾರ್ಟರ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಹುಯ್ಯಾರು ಹೆಬ್ಬಾಗಿಲು ಮನೆ ನರೇಶ್ ಶೆಟ್ಟಿ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಿನ ಟಿ.ಆರ್. ಚಡ್ಡಾ ರವರಲ್ಲಿ ಆರ್ಟಿಕಲ್ ಶಿಪ್ ಮಾಡಿರುವ ನರೇಶ್ ಶೆಟ್ಟಿ ಶ್ರೀ ಚಂದ್ರಶೇಖರ ಶೆಟ್ಟಿ ಹಾಗೂ ಹುಯ್ಯಾರು ಹೆಬ್ಬಾಗಿಲು ಮನೆ ಶ್ರೀಮತಿ ವಸಂತಿ ಶೆಟ್ಟಿ ಯವರ ಪುತ್ರ.
ಎಕ್ಸಲೆಂಟ್ ಕಾಲೇಜು ಕುಂದಾಪುರ: ಸಿಇಟಿ ಪರೀಕ್ಷೆಯಲ್ಲಿ ರಿಷಿ ಮಯೂರ ಕುಂದಾಪುರ ತಾಲೂಕಿಗೆ ಅಗ್ರಸ್ಥಾನ
ಕುಂದಾಪುರ(ಸೆ,21): ಸುಜ್ಞಾನ ಎಜುಕೇಶನ್ ಟ್ರಸ್ಟ್ ಮೂಡುಬಿದರಿ ಇದರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಕ್ಸಲೆಂಟ್ ಕಾಲೇಜು ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಕಾಲೇಜುಗಳಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ರಿಷಿ ಮಯೂರ 224 ನೇ ರ್ಯಾಂಕ್ ಸಿಇಟಿ ಯಲ್ಲಿ ಪಡೆಯುವುದರ ಮೂಲಕ ಕಾಲೇಜು ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 694 ಬಿ ಎನ್ ವೈ ಎಸ್ 731, ಪಶುವೈದ್ಯಕೀಯದಲ್ಲಿ 731, 224 ಅಗ್ರಿಕಲ್ಚರಲ್ ಬಿ.ಎಸ್ಸಿ ವಿಭಾಗದಲ್ಲಿ ರ್ಯಾಂಕ್ ಗಳಿಸಿರುತ್ತಾರೆ. ಈ […]
ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬ್ರಹತ್ ನಿಲ್ಸ್ ಕಲ್ಲು ಪತ್ತೆ
ಕುಂದಾಪುರ (ಸೆ,21): ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಐತಿಹಾಸಿಕ ನಗರವಾದ ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬ್ರಹತ್ ನಿಲ್ಸ್ ಕಲ್ಲು ಒಂದು ಪತ್ತೆಯಾಗಿದೆ. ಶಿರ್ವಾದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರವಿಭಾಗದ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ಈ ನಿಲ್ಸ್ ಕಲ್ಲಿನ ಐತಿಹಾಸಿಕ ಹಿನ್ನೆಲೆಯನ್ನು ಗುರುತಿಸಿದ್ದಾರೆ.
ಚಲನ್ ಚಂದ್ರ ಶೆಟ್ಟಿ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ
ಕುಂದಾಪುರ (ಸೆ,21): ಕುಂದಾಪುರ ಮೂಲದ ಚಲನ್ ಚಂದ್ರ ಶೆಟ್ಟಿಯವರು ಜೂನ್ 2021ರ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಉಡುಪಿಯ ಶ್ರೀ ಸುರೇಂದ್ರ ನಾಯಕ್ ರವರಲ್ಲಿ ಆರ್ಟಿಕಲ್ ಶಿಪ್ ಮಾಡಿರುವ ಚಲನ್ ಚಂದ್ರ ಶೆಟ್ಟಿ ಯವರು ಅಧ್ಯಾಪಕರಾದ ಬಿಲ್ಲಾಡಿಮನೆ ಶ್ರೀ ಚಂದ್ರಶೇಖರ ಶೆಟ್ಟಿ ಮಣಿಗೇರಿ ಹಾಗೂ ಶಿರೂರು ಹೈಕಾಡಿಮನೆ ಶ್ರೀಮತಿ ಶ್ಯಾಮಲಾ ಸಿ ಶೆಟ್ಟಿ ಯವರ ಪುತ್ರ.
ನಿಸ್ವಾರ್ಥ ಕಲಾ ಸೇವಕಿ ಮತ್ತು ಭಜನಾ ಗಾಯಕಿ ಸುಶೀಲಾ ಪೂಜಾರಿ ನಾವುಂದ
ದೇವರ ಮೇಲಿನ ಭಕ್ತಿ ಮತ್ತು ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇವರ ಕ್ರಪೆಗೆ ಪಾತ್ರರಾಗಲು ಹಲವು ವಿಧಾನಗಳಿವೆ. ಆದರೆ ಭಜನೆ ಸರಳವಾದ ಮಾರ್ಗ.ಆದರೆ ಆಧುನಿಕತೆಯ ಸ್ಥಿತ್ಯಂತರಕ್ಕೆ ಒಳಗಾದ ಯುವ ಜನತೆ ಆಧ್ಯಾತ್ಮಿಕತೆ , ಭಜನೆ ಹಾಡುವುದು, ಕುಣಿತ ಭಜನೆ, ಜಾನಪದ ಗೀತೆ ಭಾವಗೀತೆಯಂತಹ ಧಾರ್ಮಿಕ ಚಟುವಟಿಕೆಯಿಂದ ದೂರವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮನೆ-ಮನಗಳಲ್ಲಿ ಭಜನೆಯ ಭಕ್ತಿ -ಭಾವ ಕಡಿಮೆಗೊಳ್ಳುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಭಜನೆಯನ್ನು ಭಕ್ತಿಪೂರ್ವಕವಾಗಿ ಹಾಡುತ್ತಾ, […]
ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿಎ ಇಂಟರ್ಮೀಡಿಯೇಟ್ ರ್ಯಾಂಕ್ ವಿಜೇತೆ ವೈಷ್ಣವಿ ಎಂ.ವಿ ಯವರಿಗೆ ಸನ್ಮಾನ
ಕುಂದಾಪುರ (ಸೆ,20): ಇಲ್ಲಿನ ಕುಂದೇಶ್ವರ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ ಸಿಎಸ್/ ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಭಾರತಕ್ಕೆ 29ನೇ ರ್ಯಾಂಕ್ ಪಡೆದ ವೈಷ್ಣವಿ ಎಂ ವಿ ಯವರನ್ನು ಸನ್ಮಾನಿಸಲಾಯಿತು. ಅತ್ಯಂತ ಕಠಿಣ ಪಠ್ಯಕ್ರಮ ಪರೀಕ್ಷೆಯಲ್ಲೊಂದಾದ ಸಿಎ ಪರೀಕ್ಷೆಯಲ್ಲಿ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಇಂತಹ ಸಾಧನೆ […]










