ಕೋಟೇಶ್ವರ (ಫೆ.06): ಬಡತನದಲ್ಲಿ ಹುಟ್ಟಿ, ಬಡತನದ ನೋವುಂಡು, ಅದನ್ನು ಮೆಟ್ಟಿ ನಿಲ್ಲಬೇಕೆಂಬ ಏಕೈಕ ಆಶಯದೊಂದಿಗೆ ಸಿಕ್ಕ ಪ್ರತಿ ಅವಕಾಶಗಳನ್ನು ಬಳಸಿಕೊಂಡು, ಅವಕಾಶ ಇಲ್ಲದಾಗ ಅದನ್ನು ಸೃಷ್ಟಿಸಿಕೊಂಡು ಅವಿರತ ಪ್ರಯತ್ನ ಮಾಡುತ್ತಿರುವಾಗ, ವ್ಯಕ್ತಿ ಓರ್ವ ಮಾರಕ ಕಾಯಿಲೆಗೆ ತುತ್ತಾದಾಗ ಅವನ ಇಡೀ ಸಂಸಾರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಜೀವನವೇ ಕಷ್ಟ ಸಾಧ್ಯವಾಗುತ್ತದೆ. ಅಂತಹ ಸಂಸಾರಕ್ಕೆ ಆಸರೆಯಾಗಿ ನಿಂತು ಅವರ ಅನಾರೋಗ್ಯದ ಬಗ್ಗೆ ಒಂದು ನಿಧಿಯನ್ನು ನೀಡಿ, ಅವರ ಬಾಳನ್ನು ಹಸನಾಗಿಸಲು ಕಂಕಣಬದ್ಧವಾಗಿ ನಿಂತಿದ್ದಾರೆ, ಹುಣಸೆಮಕ್ಕಿ ಪರಿಸರದ ಸಮಾನ ಮನಸ್ಕರ ಬಂಟರ ಬಳಗವೇ, ದಯಾನಿಧಿ ಬಂಟರ ಬಳಗ. ಹುಣಸೆ ಮಕ್ಕಿ.
ಸುತ್ತಲಿನ ಆರು ಏಳು ಗ್ರಾಮಗಳಲ್ಲಿ ಆರೋಗ್ಯ ಅಶಕ್ತರಾದ ಬಂಟರ ಸಮುದಾಯದಲ್ಲಿ ಹುಟ್ಟಿದ ಜನರಿಗೆ ಆರ್ಥಿಕ ಸಹಾಯ ಮಾಡುವ ಒಂದು ಪರಿಕಲ್ಪನೆಯಿಂದ ಹುಟ್ಟಿಕೊಂಡ ಬಳಗವೇ ದಯಾನಿಧಿ ಬಂಟರ ಬಳಗ, ಹುಣಸೆಮಕ್ಕಿ, ಇದರ ಉದ್ಘಾಟನೆಯನ್ನು ಮಾಡಿದ ಸಮಾಜದ ಹಿರಿಯ ಧಾರ್ಮಿಕ ಮುಖಂಡ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಶ್ರೀ ಬಿ ಅಪ್ಪಣ್ಣ ಹೆಗ್ಡೆಯವರು ಮಾತನಾಡಿ, ಗ್ರಾಮೀಣ ಭಾಗದ ಬಂಟರ ಸಮುದಾಯದಲ್ಲಿ ಇನ್ನೂ ಅನೇಕರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಆರೋಗ್ಯ,ಶೈಕ್ಷಣಿಕ ಹಾಗೂ ವಸತಿ ವಿಷಯದಲ್ಲಿ ಹಿಂದೆ ಇದ್ದು, ಆರ್ಥಿಕ ಸಂಕಷ್ಟದಲ್ಲಿ ರುವ ಬಂಟರ ಸಮುದಾಯಕ್ಕೆ ಸಹಕರಿಸುವ ಉದ್ದೇಶದಿಂದ ಹುಟ್ಟಿಕೊಂಡ ಈ ದಯಾನಿಧಿ ಬಂಟರ ಬಳಗ ಉತ್ತರೋತ್ತರ ಅಭಿವೃದ್ದಿಯನ್ನು ಹೊಂದಿ ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಲಿ ಈ ಬಳಗ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶೋಭಾ ಶೆಟ್ಟಿ ಕಾಳವರ, ಜಯಪ್ರಕಾಶ್ ಶೆಟ್ಟಿ ಜಪ್ತಿ, ದೀಕ್ಷಿತ್ ಶೆಟ್ಟಿ ಕಾಳವರ, ಸುಕ್ಷಿತ್ ಶೆಟ್ಟಿ ಮೊಳಹಳ್ಳಿ, ಗೀತಾ ಶೆಟ್ಟಿ ಕಾಳವರ ಇವರೆಲ್ಲರಿಗೂ ತಲಾ ಹತ್ತು ಸಾವಿರ ರೂಪಾಯಿಯಂತೆ ದಯಾನಿಧಿಯನ್ನು ನೀಡಿ ಸಹಕರಿಸಿದರು. ಮುಖ್ಯ ಅತಿಥಿಗಳಾದ ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಎನ್.ಮಂಜಯ್ಯ ಶೆಟ್ಟಿ ಮಾತನಾಡಿ, ಈ ಬಳಗವೂ ಪರಿಸರದ ಜನರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತಾ ಇದು ನಿಂತ ನೀರಾಗದೆ ನಿತ್ಯ ನಿರಂತರ ಹರಿಯುವ ನದಿಯಾಗಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷರು ಹಾಗೂ ದಯಾನಿಧಿ ಬಂಟರ ಬಳಗದ ಅಧ್ಯಕ್ಷರಾದ ಶ್ರೀ ಗಣೇಶ ಶೆಟ್ಟಿ ಮಾತನಾಡಿ, ಪ್ರದೀಪ ಕುಮಾರ್ ಶೆಟ್ಟಿ ಜಪ್ತಿ ಇವರ ಕಲ್ಪನೆಯ ಈ ಬಳಗದ ಉದ್ದೇಶ ಮತ್ತು ಮುಂದಿನ ಗುರಿಗಳ ಬಗ್ಗೆ ಸಭೆಗೆ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಯಡ್ತಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಪ್ರಕಾಶ್ ಶೆಟ್ಟಿ, ನಿವೃತ್ತ ಇಂಜಿನಿಯರ್ ಮಂಡಾಡಿ ರತ್ನಾಕರ ಶೆಟ್ಟಿ, ಉದ್ಯಮಿ ಕರುಣಾಕರ್ ಶೆಟ್ಟಿ ಹೊಂಬಾಡಿ, ಹಾಗೂ ಬಳಗದ ಹಿರಿಯ ಸದಸ್ಯರಾದ ದಿನಕರ ಹೆಗ್ಡೆ ಉಪಸ್ಥಿತರಿದ್ದರು.ಈ ಉದ್ದೇಶಕ್ಕಾಗಿ ಸಹಕರಿಸಿದ ಅರುಣ ಕುಮಾರ್ ಶೆಟ್ಟಿ ಕೆದೂರು, ಪ್ರಕಾಶ ಶೆಟ್ಟಿ ಯಡ್ತಾಡಿ, ಜಗನ್ನಾಥ ಶೆಟ್ಟಿ ಹೊಂಬಾಡಿ ಇವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ರಾಜಶೇಖರ ಶೆಟ್ಟಿ ಪ್ರಾಸ್ತವಿಕ ಮಾತನಾಡಿದರು,ಸುರೇಶ್ ಕುಮಾರ್ ಶೆಟ್ಟಿ ವಂದಿಸಿದರು. ಉದಯ್ ಕುಮಾರ್ ಶೆಟ್ಟಿ ನಿರೂಪಿಸಿದರು.