ಕುಂದಾಪುರ (ಜು:14): ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ಆನಗಳ್ಳಿ, ಗೆಳೆಯರ ಬಳಗ ಆನಗಳ್ಳಿ,ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ರಿಜಾಯ್ ಇವೆಂಟ್ ಗ್ರೂಪ್, ಹಾಗೂ ರಕ್ತ ನಿಧಿ ಕೆಎಂಸಿ ಆಸ್ಪತ್ರೆ ಮಣಿಪಾಲ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಜುಲೈ 14 ರಂದು ಆನಗಳ್ಳಿಯಲ್ಲಿ ನಡೆಯಿತು.
ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ರಕ್ತದಾನ ಮಹಾದಾನ, ಯುವ ತರುಣರೇ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ಒಂದೊಂದು ಹನಿ ರಕ್ತವು ಮೂರು ಜೀವವನ್ನು ಬದುಕಿಸುತ್ತದೆ, ಇದರಿಂದ ಆರೋಗ್ಯವಂತ ಭಾರತಾ ನಿರ್ಮಾಣವಾಗುತ್ತದೆ ಎಂದರು. ಕರಾವಳಿ ಭಾಗದಲ್ಲಿ ದಾಖಲೆಯ ರಕ್ತದಾನ ಶಿಬಿರದ ಆಯೋಜನೆ ನೆರವೇರುತ್ತಿದ್ದು. ಈ ಶಿಬಿರದ ಒಂದೊಳ್ಳೆ ಮಹತ್ಕಾಕಾರ್ಯಕ್ಕೆ ಅವರು ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ರಕ್ತದಾನವು ಒಂದು ಉದ್ಧಾತ ಕಾರ್ಯವಾಗಿದೆ ರೋಗಿಗಳು ಜೀವ ಉಳಿಸಲು ಸಹಾಯಕವಾಗುತ್ತದೆ. ರಕ್ತದಾನ ಮಾಡುವುದರಿಂದ ವ್ಯಕ್ತಿಗೆ ಯಾವುದೇ ರೀತಿಯ ಹಾನಿಯಾಗದೆ. ಹಲವಾರು ಪ್ರಾಯೋಜನೆಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಸ್ತಾವಿಸಿದರು.
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದು ಬಸ್ರೂರಿನ ಜನಪ್ರಿಯ ವೈದ್ಯರಾದ ಜಯ ನಂಬಿಯಾರ್ ಹಾಗೂ ಡಾIಶಮಿ ಶಾಸ್ತ್ರಿ ಪ್ರೊಫೆಸರ್ ಮತ್ತು ಹೆಡ್ ಕೆಎಂಸಿ ಆಸ್ಪತ್ರೆ ರಕ್ತ ನಿಧಿ ಘಟಕ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ನಾಗೇಶ್ ತಾಲೂಕು ಸರಕಾರಿ ಆಸ್ಪತ್ರೆ ಕುಂದಾಪುರ, ಡಾ.ಶಮಿ ಶಾಸ್ತ್ರಿ, ಪ್ರೊಫೆಸರ್ ಮತ್ತು ಹೆಡ್ ಕೆಎಂಸಿ ಆಸ್ಪತ್ರೆ ರಕ್ತ ನಿಧಿ ಘಟಕ ಮಣಿಪಾಲ,ಜಯಕರ್ ಶೆಟ್ಟಿ ಸಭಾಪತಿಗಳು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಸಿಂಚನ,ಎಸ್. ಪೂಜಾರಿ ದತ್ತಾಶ್ರಮ ಆದಿಶಕ್ತಿ ಮಠ ಆನಗಳ್ಳಿ. ಸತೀಶ್ ಸಾಲಿಯನ್ ಮಣಿಪಾಲ, ರಕ್ತದಾನದ ಆಪದ್ಬಾಂಧವ ಅಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ,ಗಣೇಶ್.ಕೆ. ಅಧ್ಯಕ್ಷರು ಗೆಳೆಯರ ಬಳಗ ಆನಗಳ್ಳಿ,,ಭಾಸ್ಕರ್ ಬಿಲ್ಲವ ಹೇರಿಕುದ್ರು ತಾಲೂಕು ಪಂಚಾಯಿತಿನ ಮಾಜಿ ಅಧ್ಯಕ್ಷ, ಸುಧೀರ್ ಕೆ.ಎಸ್.ಕುಂದಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಮೂಕಾಂಬು ಸದಸ್ಯರು ಆನಗಳ್ಳಿ ಗ್ರಾಮ ಪಂಚಾಯತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಘವೇಂದ್ರ ಕಾಂಚನ್ ಮರವಂತೆ ಸ್ವಾಗತಿಸಿ ನಿರೂಪಿಸಿದರು. ಗೆಳೆಯರ ಬಳಗ ಸಂಸ್ಥೆಯ ಅಧ್ಯಕ್ಷ ಗಣೇಶ್ ಕೆ. ವಂದಿಸಿದರು.
✍. ವರದಿ ಸುರೇಂದ್ರ ಕಾಂಚನ್ ಸಂಗಮ್