ಬ್ರಹ್ಮಾವರ (ಎ. 19): ಇಲ್ಲಿನ ಕ್ರಾಸ್ ಲ್ಯಾಂಡ್ ಪದವಿ ಕಾಲೇಜಿನ ಮಾನವ ಹಕ್ಕು ಘಟಕದ ಆಶ್ರಯದಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏಪ್ರಿಲ್,19 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಮಾತನಾಡಿ ಮಾನವ ಹಕ್ಕುಗಳ ಅರಿವು ಎಲ್ಲರಿಗೂ ಅಗತ್ಯ ಏಕೆಂದರೆ ಮಾನವ ಹಕ್ಕು ನಮ್ಮ ಅಜನ್ಮ ಸಿದ್ಧ ಹಕ್ಕು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಅತಿ ಅವಶ್ಯಕವಾದ ಹಕ್ಕು, ನಮ್ಮ ಮಾನವ ಹಕ್ಕು ಉಲ್ಲಂಘನೆಯಾದರೆ ಅದನ್ನು ನಾವು ಕ್ಲಪ್ತ ಕಾಪಾಡಿಕೊಳ್ಳಬೇಕು. ಸಮಾನತೆ,ಏಕತೆ, ಭ್ರಾತತ್ವ, ವನ್ನು ಎತ್ತಿ ಹಿಡಿಯುವುದರೊಂದಿಗೆ ಮಾನವಿಯ ನೆಲೆಯ ಬದುಕನ್ನು ಕಟ್ಟಿಕೊಳ್ಳಲು ಎಲ್ಲರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಬಿಜು ಜಾಕೋಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕರಾದ ಶ್ರೀಮತಿ ಮಮತಾ ವೇದಿಕೆಯಲ್ಲಿ ಉಪಸಿತರಿದ್ದರು.ವಿದ್ಯಾರ್ಥಿನಿ ಬೆರ್ನಿಸ್ ಲಿಲ್ಲಿ ತೋಮಸ್ ಸ್ವಾಗತಿಸಿದರು. ಅಬೆಲ್ ಅಜಿ ಜಾನ್ ಧನ್ಯವಾದಗೈದರು.