ಕುಂದಾಪುರ( ಅ,4): ತಾಲೂಕಿನ ವಿಶೇಷ ಚೇತನರ ಸಂಪನ್ಮೂಲ ಕೇಂದ್ರಕ್ಕೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಾನ್ಯ ರಾಜ್ಯ ಆಯುಕ್ತರು ಹಾಗೂ ನಿರ್ದೇಶಕರಾದ ಕೆ.ಎಸ್.ಲತಾ ಕುಮಾರಿ ಇತ್ತೀಚೆಗೆ ಭೇಟಿ ನೀಡಿದರು . ಈ ಸಂದರ್ಭದಲ್ಲಿ ಅವರನ್ನು ತಾಲೂಕು MRW VRW,URW ನೌಕರರ ಸಂಘದಿಂದ ಸ್ವಾಗತಿಸಿ ,ಅಭಿನಂದಿಸಿದರು.
ಈ ಸಂದರ್ಭದಲ್ಲಿ ತಾಲೂಕು ವಿಶೇಷ ಚೇತನ ಸಂಪನ್ಮೂಲ ವ್ಯಕ್ತಿ ಹಾಗೂ ಯೂನಿಯನ್ ಗೌರವಾಧ್ಯಕ್ಷರಾದ ಶ್ರೀ ಮಂಜುನಾಥ ಹೆಬ್ಬಾರ್, ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಆಕಾಶ್ ಶೆಟ್ಟಿ ಅಂಪಾರು, ಪ್ರಧಾನ ಕಾರ್ಯದರ್ಶಿ ದೇವರಾಜ , ಖಜಾಂಚಿ ಮಹೇಂದ್ರ ಹಾಗೂ ಯೂನಿಯನ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.