ಕುಂದಾಪುರ (ಅ,18): ಶ್ರಿ ನಾರಾಯಣ ಗುರು ಯುವಕ ಮಂಡಲ (ರಿ) ಕುಂದಾಪುರ ಆಯೋಜನೆಯ ಅದ್ದೂರಿ ಕುಂದಾಪುರ ದಸರಾ-2021 ರ ಸಂದರ್ಭದಲ್ಲಿ ಉದ್ಯಮಿ ಕೊಡುಗೈದಾನಿ ಡಾ. ಗೋವಿಂದ ಬಾಬು ಪೂಜಾರಿ ಯವರಿಗೆ ಕರಾವಳಿ ಕಾಮಧೇನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ,ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಶ್ರಿನಾಥ ಕಡ್ಗಿಮನೆ, ನಾರಾಯಣ ಗುರು ಟ್ರಸ್ಟ್ ನ ಕಾರ್ಯದರ್ಶಿ ಭಾಸ್ಕರ ವಿಟಲವಾಡಿ,ಬಿಲ್ಲವ […]
Author: KundaVahini Editor
ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ:ನೂತನ ಅಧ್ಯಕ್ಷರಾಗಿ ನಾಗರಾಜ್ ಹೆಮ್ಮಾಡಿ ,ಪ್ರಧಾನ ಕಾರ್ಯದರ್ಶಿಗಳಾಗಿ ಕೃಷ್ಣಮೂರ್ತಿ ಡಿಬಿ ಆಯ್ಕೆ
ಕುಂದಾಪುರ (ಅ,17): ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ(ರಿ) ಇದರಕುಂದಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಗೌರವಾಧ್ಯಕ್ಷರಾದ ಉದಯ ಬಳ್ಕೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ ಇದರ ಆಂಗ್ಲ ಭಾಷಾ ಉಪನ್ಯಾಸಕ ನಾಗರಾಜ್ ಹೆಮ್ಮಾಡಿ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರ ಇದರ ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿಬಿ ಆಯ್ಕೆಯಾಗಿದ್ದಾರೆ.
ಪ್ರವೀಣ್ ಬಾಳೆಕೆರೆಯವರ ಮಿರಾಕಲ್ ಡ್ಯಾನ್ಸ್ ಟೀಮ್ ಡಾನ್ಸ್ ಸ್ಟುಡಿಯೋ ಶಾಖೆ ಶುಭಾರಂಭ
ಹೆಮ್ಮಾಡಿ(ಅ,17): ಮಿರಾಕಲ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕರಾದ ಪ್ರವೀಣ್ ರವರ ಈ ಡ್ಯಾನ್ಸ್ ಟೀಮ್ ಸತತ ಏಳು ವರ್ಷಗಳಿಂದ ನೃತ್ಯ ತರಬೇತಿಯನ್ನು ನೀಡಿ ಹಲವಾರು ನೃತ್ಯಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಖ್ಯಾತಿ ಈ ತಂಡಕ್ಕಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಡ್ಯಾನ್ಸ್- ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ತನ್ನದೇ ಆದ ಛಾಪನ್ನು ಮೂಡಿಸಿದೆ. ಪ್ರಸ್ತುತ ಮಿರಾಕಲ್ ಡ್ಯಾನ್ಸ್ ಕಟ್ ಬೆಲ್ತೂರುನಲ್ಲಿ ರಾಮ ಲಕ್ಷ್ಮಣ ಸಭಾಗ್ರಹ ಹೆಮ್ಮಾಡಿ (ಕೊಲ್ಲೂರು ರೋಡ್)ಲ್ಲಿ ಹೊಸದಾಗಿ […]
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಸ್ವರ್ಣಕಲಶ ರಶೀದಿ ಪುಸ್ತಕ ಮತ್ತು ನಿವೇದನಾ ಪತ್ರ ಬಿಡುಗಡೆ ಸಮಾರಂಭ
ಉಚ್ಚಿಲ(ಅ,17): ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ(ರಿ) ಉಚ್ಚಿಲ,ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸ್ವರ್ಣ ಕಲಶ ನಿರ್ಮಾಣ ಸಮಿತಿಯ ಆಯೋಜನೆಯಲ್ಲಿ ತಾಯಿ ಶ್ರೀ ಮಹಾಲಕ್ಷ್ಮೀ ದೇಗುಲದ ಸ್ವರ್ಣ ಕಲಶ ಸಮರ್ಪಣೆಯ ಕುರಿತಾದ ಸ್ವರ್ಣಕಲಶ ಸಮಿತಿಯ ರಶೀದಿ ಪುಸ್ತಕ ಹಾಗೂ ನಿವೇದನಾ ಪತ್ರ ಬಿಡುಗಡೆ ಸಮಾರಂಭ ಅಕ್ಟೋಬರ್,17 ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸಭಾಂಗಣದಲ್ಲಿ ನಡೆಯಿತು. ಸಮಿತಿಯ ಮಾರ್ಗದರ್ಶಕರಾದ ನಾಡೋಜ ಡಾ.ಜಿ ಶಂಕರ್ ರವರು […]
ಇ ಸಿ ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ : ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ
ಮಧುವನ(ಅ,16): ಇಲ್ಲಿನ ಇ ಸಿ ಆರ್ ಕಾಲೇಜಿನಲ್ಲಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಸಂಸ್ಥೆಯ ಚೇರ್ಮನ್ ಶ್ರೀ ಮಧು ಟಿ ಭಾಸ್ಕರ್ ರವರು ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಪುಷ್ಪವನ್ನು ಅರ್ಪಿಸುವ ಮೂಲಕ ಮಹಾತ್ಮರ ಜನ್ಮ ದಿನಾಚರಣೆಯನ್ನು ನರವೇರಿಸಿ ಅವರನ್ನು ನೆನಪಿಸುತ್ತ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಗಾಂಧೀಜಿಯವರ ಸತ್ಯ, ಶಾಂತಿ, ತ್ಯಾಗ ಹಾಗೂ ಅಹಿಂಸಾ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ದೇಶಕ್ಕಾಗಿ […]
ಈಜುಗಾರ ,ಜೀವರಕ್ಷಕ, ಭಾಸ್ಕರ್ ತಲಗೋಡುರವರಿಗೆ ಮಾನವೀಯ ನೆಲೆಯ ಸಹಾಯ: ಉಡುಪಿಯ ಬೆಳ್ಮಣ್ ನ ‘ಹ್ಯೂಮನಿಟಿ “ಸೇವಾ ಸಂಸ್ಥೆವತಿಯಿಂದ ಗ್ರಹ ನಿರ್ಮಾಣಕ್ಕೆ 1ಲಕ್ಷ ರೂ, ಧನಸಹಾಯ
ಕುಂದಾಪುರ(ಅ,15): ಈಜುಗಾರ ,ಜೀವರಕ್ಷಕ, ಭಾಸ್ಕರ್ ಕಳಸ,ತಲಗೋಡು ರವರ ಸಮಾಜ ಸೇವೆ ಗುರುತಿಸಿ ಕೊಟ್ಟ ಸನ್ಮಾನದ ಪ್ರಶಸ್ತಿಪತ್ರ ಹಲವಾರು . ಆದರೆ ಇವರಿಗೆ ವಾಸವಾಗಿರಲು ಮನೆ ಇಲ್ಲದಿರುವುದುಹಾಗೂ ಸರ್ಕಾರದ ಇಲಾಖೆಗಳ ನಿರ್ಲಕ್ಷ್ಯದ ಕುರಿತಾದ ಪೂರ್ಣ ಕಥೆ ಮತ್ತು ವ್ಯಥೆಯ ಪುಟವನ್ನು ಸಾರ್ವಜನಿಕರ ಎದುರು ತೆರೆದಿಟ್ಟಿದ್ದೆವು. ಇದನ್ನು ಗಮನಿಸಿದ ಉಡುಪಿ ಬೆಳ್ಮಣ್ ನ ‘ಹ್ಯೂಮನಿಟಿ “ಸೇವಾ ಸಂಸ್ಥೆ ಭಾಸ್ಕರ್ ತಲಗೋಡುರವರ ಮನೆ ಕಟ್ಟುವ ಆಸೆಗೆ ಸ್ಪಂದಿಸಿ 1ಲಕ್ಷ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. […]
ಜಯ’ದೊಂದಿಗೆ ಮತ್ತೆ ಪ್ರಕಾಶಿಸಿ..
ಜಯ ಪ್ರಕಾಶ್ ಹೆಗ್ಡೆ…ಈ ಹೆಸರು ಕರ್ನಾಟಕ ಜನತೆಗೆ ಚಿರಪರಿಚಿತ ಮತ್ತು ಸ್ವಚ್ಚಾರಿತ ರಾಜಕಾರಣಿ,ವಿಶೇಷವಾಗಿ ಅವಿಭಜಿತ ಉಡುಪಿ ಜಿಲ್ಲೆಯ ಉದ್ಭವಕ್ಕೆ ಕಾರಣಿಕರ್ತರುಇಂದು ಉಡುಪಿ ಜಿಲ್ಲೆಯ ಹತ್ತು ಹಲವು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿದ ಕೀರ್ತಿ ಸಲ್ಲಬೇಕಾದ್ದು ಅದು ಜೆ.ಪಿ ಹೆಗ್ಡೆ ಅವರಿಗೆ ಎಂದರೆ ಅದು ಅತೀಶಯೊಕ್ತಿ ಅಲ್ಲ. ಅಧಿಕಾರ ಇರಲಿ ,ಇಲ್ಲದಿರಲಿ ತನ್ನತ್ವ ಮತ್ತು ತನ್ನ ಸಿದ್ಧಾಂತ ಎಂದಿಗೂ ಬಿಟ್ಟುಕೊಟ್ಟ ಮನುಷ್ಯ ಅಲ್ಲಎಂಬತ್ತರ ದಶಕಗಳಲ್ಲಿ ಎರಡು ಬಾರಿ ವಿದೇಶಿ ಸಂಸತ್ತಿನಲ್ಲಿ ಸೆನೆಟ್ ಅಧ್ಯಕ್ಷರಾಗಿ […]
ಕಡಲ ತಡಿಯ ಆಪದ್ಬಾಂಧವ, ಜನಸೇವಕ, ಮತ್ಸ್ಯೋದ್ಯಮಿ ಜಗನ್ನಾಥ ಉಪ್ಪುಂದ
ಮಾನವೀಯತೆ ಎಂದರೆ ಮಾನವ ಸ್ಥಿತಿಯಿಂದ ಉದ್ಭವಿಸಿದ ಪರ ಹಿತ ಚಿಂತನೆಯ ಮೂಲಭೂತ ನೀತಿತತ್ವ. ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು”ಎಂದು ಸರ್ವಜ್ಞನ ಮಾತಿನಂತೆ, ತನ್ನಂತೆಯೇ ಇನ್ನೊಂದು ಜೀವಕ್ಕೂ ನೋವಾಗುತ್ತದೆ ಆದು ಗೊತ್ತಿದ್ದು ಇನ್ನೊಂದು ಜೀವವನ್ನು ತಾನು ನೋಯಿಸಬಾರದು ಎಂಬ ವಿವೇಕ ನಮ್ಮಲ್ಲಿ ಜಾಗೃತ ವಾದರೆ ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಒಂದು ಅರ್ಥ ಬರುತ್ತದೆ. ಮಾನವೀಯತೆ ಪ್ರತಿ ಮನುಷ್ಯನ ಹೃದಯದಲ್ಲಿ ಮನೆ ಮಾಡಬೇಕು.ಮಾನವೀಯತೆ ಏಕೆ ಮಾನವನಿಗೆ ಮಹತ್ವದಾಗಿದೆ ಎಂಬ ಕಲ್ಪನೆ ಮತ್ತು […]
ಯಶಸ್ಸು ನಿರಂತರ ಪರಿಶ್ರಮದ ಫಲ – ಗಿಳಿಯಾರ್ ( ಡಾ।ಬಿ. ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ)
ಕುಂದಾಪುರ (ಅ, 15) : ಈ ಟೀನೇಜಿನ ಮೋಹಗಳು, ನಮ್ಮ ಗುರಿಯೆಡೆಗಿನ ದಾರಿ ತಪ್ಪಿಸಬಾರದು. ಕನಸು ಕಾಣುವುದಷ್ಟೆ ಅಲ್ಲ, ದಿನನಿತ್ಯ ಅದನ್ನೆ ಯೋಚಿಸಬೇಕು, ಅದನ್ನು ಸಾಧಿಸುವ ಮಾರ್ಗವೇ ನಿತ್ಯದ ತಪನ ಆಗಿರಬೇಕು. ಇಂತಹ ಪರಿಶ್ರಮವಿದ್ದರೆ ಮಹತ್ವದ ಕನಸುಗಳು ನನಸಾಗುತ್ತದೆ ಎಂದು ಪತ್ರಕರ್ತ, ಸಾಂಸ್ಕೃತಿಕ ಚಿಂತಕ ವಸಂತ್ ಗಿಳಿಯಾರ್ ಹೇಳಿದರು. ಅವರು ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇಲ್ಲಿನ ಪ್ರಥಮ ವರ್ಷದ ಪದವಿ ಪ್ರವೇಶಾರ್ಥಿಗಳಿಗೆ ಆಯೋಜಿಸಿದ […]
ನಾನು ಮತ್ತು ನನ್ನ ಫಸ್ಟ್ ಬ್ಯಾಚ್ ಸ್ಟೂಡೆಂಟ್ಸ್
ತಾಯಿ ಮಡಿಲಿನಲ್ಲಿ ಹಸುಗೂಸು ಕಣ್ತೆರೆದರೂ, ಒಳಗಣ್ಣು ತೆರೆಯುವುದು ಗುರುವಿನ ಸಮಕ್ಷಮದಲ್ಲಿ. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ, ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಮಹತ್ವವನ್ನರಿತು ಶಿಕ್ಷಕಿಯಾಗಬೇಕೆಂಬ ಹಂಬಲದಿಂದ ಶಿಕ್ಷಣವನ್ನು ಮುಗಿಸಿ ಶಿಕ್ಷಕರ ವ್ರತ್ತಿಗೆ ಕಾಲಿಟ್ಟಾಗ ಕಾಲೇಜಿನ ಮೊದಲನೇ ದಿನದ ಅನುಭವ ಒಂಥರಾ ಚೆಂದ. ಮನಸ್ಸಲ್ಲಿ ಒಂಥರಾ ಖುಷಿ, ಒಂದಿಷ್ಟು ಭಯ, ಒಂದಿಷ್ಟು ಗೊಂದಲಗಳ ಗೂಡಾಗಿತ್ತು. ಪ್ರತಿಯೊಬ್ಬ ಶಿಕ್ಷಕರಿಗೂ ತಮ್ಮ ಮೊದಲ ಬ್ಯಾಚ್ ಸ್ಟೂಡೆಂಟ್ ಗಳ ನೆನಪು ಅಮರ. ಏಕೆಂದರೆ ಶಿಕ್ಷಕ ವೃತ್ತಿಯ […]










