ಅಮ್ಮ ಎಂದರೆ ಎನೋ ಹರುಷವು ನಮ್ಮ ಪಾಲಿಗೆ ಅವಳೇ ದೈವವೂ……….ಸೋಲು ಎಂದರೆ ಬಾಕಿ ಉಳಿದ ಸವಾಲು ,ಮರಳಿ ಪ್ರಯತ್ನಿಸು ಎಂದರ್ಥವಂತೆ .ಗೆಲುವು ಎಂದರೆ ಇನ್ನೂ ಕಾಲಹರಣ ಮಾಡುವುದು ಸೂಕ್ತವಲ್ಲ ಎಂದರ್ಥವಂತೆ ..ಶಬ್ದಕೋಶ ದಲ್ಲೂ ಸಿಗದ ಅರ್ಥವನ್ನು ,ಬದುಕಿನ ದೊಡ್ಡ ಸಂಕಷ್ಟವನ್ನು ಸರಳವಾಗಿಯೇ ಬಗೆಹರಿಸುವಂತೆ ತಿಳಿ ಹೇಳುವ ಅವಳ ಮಾತು ಇನ್ನೇಲ್ಲೋ ನೆನಪಾಗಿ ಆ ವಿಷಯವೇ ಶಕ್ತಿ ತುಂಬುವುದುಂಟು ಮರಳಿ ಹೋರಾಟ ನಡೆಸಲು…. ಹಾ,ಪ್ರೀತಿ ಕುರುಡು ಎನಿಸಿಕೊಂಡಿದ್ದು ಇವಳಿಂದಲೇ ಎನೋ […]
Category: ಕುಂದಾಪ್ರ ಕನ್ನಡ
ಕುಂದಾಪ್ರ ಕನ್ನಡ
ಯಕ್ಷಗಾನದ “ಪವರ್ ಸ್ಟಾರ್” ಕೊಳಲಿ ಕೃಷ್ಣ ಶೆಟ್ಟಿ
ಕರಾವಳಿಯ ಸಾಂಸ್ಕ್ರತಿಕ ಹಿರಿಮೆಯ ಕಲೆಯಾದ ಯಕ್ಷಗಾನದ ಪ್ರಮುಖ ಕಲಾವಿದರುಗಳ ಪಟ್ಟಿ ಮಾಡುತ್ತ ಹೋದರೆ ಅಭಿಮಾನ್ಯು -ಅಭಿಮಾನ್ಯು -ಅಭಿಮಾನ್ಯು ಈ ಪ್ರಸಂಗದ ಅಭಿಮಾನಿಗಳ ಅಭಿಮನ್ಯು ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಕಲಾವಿದರೆಂದರೆ ಅದು ಕೊಳಲಿ ಕೃಷ್ಣ ಶೆಟ್ಟಿಎಂದರೆ ಯಾರೂ ಅಲ್ಲಗಳೆಯುವಂತಿಲ್ಲ.ಹಿರಿಯ ಕಲಾವಿದ ಕೊಳಲಿ ಕೃಷ್ಣ ಶೆಟ್ಟಿಯವರಪರಿಚಯವನ್ನು ಸಂಗ್ರಹಿಸುವಾಗ ಮಾರಣಕಟ್ಟೆ ಮೇಳದ ಮೇರು ಭಾಗವತರಾದ ತಿಮ್ಮಪ್ಪ ದೇವಾಡಿಗ ಹೇರಂಜಾಲು ಈ ಪರಿಚಯ ಲೇಖನಕ್ಕೆ ಸಹಕರಿಸಿದ ಇವರನ್ನು ಸಹಕಾರವನ್ನು ಸ್ಮರಿಸಿಕೊಳ್ಳುತ್ತಾ ಕುಂದ ವಾಹಿನಿ ಮೂಲಕ ಕೊಳಲಿ ಕೃಷ್ಣ […]
ಥ್ಯಾಂಕ್ಯೂ ಹೇಳೋಣವೇ – 2021ಕ್ಕೆ ..
ಮತ್ತದೇ ಡಿಸೆಂಬರ್ ಅಂತ್ಯ….ಹೌದು 2021ರ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಹೊಸವರ್ಷ ಆಚರಣೆ ಈ ಬಾರಿ ಇಲ್ಲ.ಆದರೆ ನಮ್ಮ ದಿನನಿತ್ಯದ ದಿನಗಳ ಗಣನೆ, ದಿನಚರಿಯ ನಡುವೆ ಹೊಸ ವರ್ಷದ ಕ್ಯಾಲೆಂಡರ್ ಸಾಂಕೇತಿಕ ಆಚರಣೆ ಸಮಯ …. ಹೊಸ ವರ್ಷಕ್ಕೆ ಹೊಸ ಅಭಿಯಾನ ಒಂದನ್ನು ಆರಂಭಿಸಿದ್ದರೂ.. 2021ರ ಒಂದು ಪಕ್ಷಿ ನೋಟದೊಡನೆ ಸುಖ- ದುಃಖ ಎನ್ನದೇ ಎಲ್ಲದ್ದಕ್ಕೂ ಕೃತಜ್ಞತೆ ತೋರುವ ಸಲುವಾಗಿ ಥ್ಯಾಂಕ್ಯೂ_ಹೇಳೋಣ ಎಂದು.. ಹೌದು 2021 ಬಹಳಷ್ಟು ಹೊಸ ಅನುಭವಗಳನ್ನು ನೀಡಿತು. ನೋವು […]
••ಯಾರವನು?••
ಅವನೊಂದು ಮಹಾನ್ ಚೇತನ ಹಸಿ ಮಣ್ಣಿಗೆ ನೆತ್ತರ ಸುರಿಸಿಬದುಕನ್ನೇ ಉಳುವವನು….. ಹಸಿದ ಹೊಟ್ಟೆಗೆ ಅನ್ನ ನೀಡಲು ತನ್ನನ್ನೇ ಪಣವಾಗಿಟ್ಟು ನಗುವನು ಕಣ್ಣಂಚಿನ ನೋವಿನ ಕತ್ತು ಹಿಸುಕುತ್ತಾ… ಕಾಣದ ಕನಸಿಗೆ ದಾರಿಯಾಗುವ ಆಸೆ ಬದುಕು ಬರಡಾಗಿರಲು ಭೂಮಿಗೆಲ್ಲಿ ಫಸಲು? ಬಾರದ ಬೆಳೆಗಾಗಿ ದಿನವಿಡೀ ಕಾಯುವನು ಬಹುಶಃ ನಾಳೆಯೂ ಕೂಡಾ!! ಹಸಿಮಣ್ಣ ಎಡೆಯಲ್ಲಿ ಗುಂಡಿತೋಡಿ ಉಸಿರ ಬಚ್ಚಿಡಬಹುದಿತ್ತು ನಿರಾಶಾವಾದಿಯಾಗಿದ್ದಲ್ಲಿ ಆದರೆ ಅವನಲ್ಲ….. ಹಸಿದ […]
ಇಷ್ಟೇನಾ ನಿನ್ನ ಬೆಲೆ…?
ಮನೆ ಮುಂದೆ ಒಲೆ,ಹಸಿ ತೆಂಗಿನ ಗರಿ, ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ,ಬದಿಯಲ್ಲೊಂದು ಸೀಮೆಎಣ್ಣೆ ಡಬ್ಬ, ಸಾಕಾಗದಿದ್ರೆ ಒಂದು ಸ್ವಲ್ಪ ಪೆಟ್ರೋಲು,ಸುರಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ ಈ ನಿನ್ನ ಶರೀರ.ಇಷ್ಟೇನಾ ನಿನ್ನ ಬೆಲೆ…? ಒಂದು ಸಂಜೆ ಪ್ರಾಣ ಪಕ್ಷಿ ಹಾರಿ ಹೋಯಿತು,ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು. ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ ನೋಡುತ್ತಿದ್ದಾರೆ, ಅರೇ, ಬೇಗನೇ ಎತ್ತಿರಿ,ಕತ್ತಲಾಗುತ್ತ ಬಂತು,ಹೊಟ್ಟೆ ಹಸಿದಿದೆ,ಯಾರು ರಾತ್ರಿಯೆಲ್ಲಾ ಕಾಯುವರು? ಇದು ನೆಂಟರ ನಡುವಿನ ಸಂಭಾಷಣೆ…ಇಷ್ಟೇನಾ ನಿನ್ನ ಬೆಲೆ? ನಾ ಸತ್ತು ಆತ್ಮ ಮೇಲಕ್ಕೆ ಹಾರುತ್ತಿದೆ,ನಕ್ಷತ್ರಗಳ ಮೇಲೆ. […]
ದಾಸಶ್ರೇಷ್ಟ ಕನಕದಾಸರು
ಕರ್ನಾಟಕದ ಹರಿದಾಸಭಕ್ತ ಶ್ರೇಷ್ಟರಲ್ಲಿ ಒಬ್ಬರಾಗಿದ್ದ ಕನಕದಾಸರು ರಣರಂಗದಕಲಿ, ಜನಪ್ರಿಯದೊರೆ, ಸಮರ್ಥ ಆಡಳಿತಗಾರ, ಕವಿ, ಸಂತ, ಕೀರ್ತನಾಕಾರ, ಸಂಗೀತಗಾರ, ವಿಚಾರವಂತ ಮತ್ತು ಸಮಾಜ ಸುಧಾರಕರಾಗಿದ್ದರು. ದಾಸ ಪರಂಪರೆಯಲ್ಲಿ ಬರುವ 250 ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರೆಂಬುದು ನಿಜಕ್ಕೂ ಹೆಗ್ಗಳಿಕೆಯೇ. ಇವರು ಪುರಂದರದಾಸರ ಸಮಕಾಲೀನರು. ಧಾರವಾಡ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಕಾಗಿನೆಲೆಯ ಸಮೀಪದ ‘ಬಾಡ’ ಎಂಬ ಗ್ರಾಮದಲ್ಲಿ (ಈಗ ಹಾವೇರಿ ಜಿಲ್ಲೆಸಿಗ್ಗಾವಿ ತಾಲ್ಲೂಕಿನ ಬಾಡ) ಬೀರಪ್ಪನಾಯಕ ಮತ್ತು ಬಚ್ಚಮ್ಮ ಕುರುಬ ದಂಪತಿಗಳ […]
ಜೀವ ರಕ್ಷಕ, ಮುಳುಗು ತಜ್ಞ ಸುರೇಶ ಖಾರ್ವಿ ಭಟ್ಕಳ್ (ಕಡಲಾಳದ ಅಂತರಂಗ- ಬದುಕಿನ ಕಥೆ ವ್ಯಥೆ )
ಜೀವ ರಕ್ಷಣೆ ಮತ್ತು ಸಾವು ಅದು ಎಷ್ಟು ಕಠೋರವೆಂದರೆ ಆ ಚಕ್ರವ್ಯೂಹಕ್ಕೆ ಸಿಲುಕಿ ಬದುಕು ಬಂದವರರಿಗೆ ಮಾತ್ರ ಗೊತ್ತು .ಸಾವಿನಂಚಿನ ಕದ ತಟ್ಟಿ ಬದುಕಿ ಬರುವುದೆಂದರೆ ಅದೇನು ಆಟವಲ್ಲಾ.ಅದರ ಪರಿಕಲ್ಪನೆ ಮಾಡುವುದು ಕೂಡ ಕಷ್ಟ, ಅಂತಹ ಪರಿಸ್ಥಿತಿಯಲ್ಲಿ ಇರುವವರನ್ನು ಬದುಕಿಸುವವರೇ ಜೀವ ರಕ್ಷಕರು. ಜೀವರಕ್ಷಕರು ಅಕ್ಷರಶಃ ದೇವರಿಗೆ ಸಮನಾದವರು. ಆದರೆ ಇಂಥ ದೇವರುಗಳು ಮಾತ್ರ ಕಣ್ಣೀರಲ್ಲಿ ಕೈತೊಳೆತ್ತಾ ಇರುವುದು ಮಾತ್ರ ಶೋಚನೀಯ…!ಇವರ ನಿಸ್ವಾರ್ಥ ಸೇವಾ ಕಾರ್ಯವನ್ನು ಗುರುತಿಸಿ ಇವರಿಗೆ ಗೌರವದ […]
•••ಗೆಳೆತನ•••
ಎತ್ತ ಸಾಗುವುದೀ ಪಯಣ ಹೊತ್ತು ಮುಳುಗುವ ಮುನ್ನ ಚಿತ್ತ ಧೃತಿಗೆಡದಿದ್ದರೆ ಸಾಕು ಮತ್ತೆ ಶೋಧಿಸಲು ಸಮಯವಾದೀತು…..!! ಕಳೆದೆವು ಅದೆಷ್ಟೋ ಕ್ಷಣಗಳ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯೇರಿ ಸಾಗಿದಷ್ಟೂ ದೂರ ಸೇರಿದಷ್ಟೂ ದಾರಿ….. ಸವಿದರೂ ಸವೆಯದ ಸ್ನೇಹವ ನೆನೆದು ಅಳುವುದೊಂದೆ ಉಳಿದಿದೆ ಇನ್ನೆಲ್ಲವ ನಾವಾಗಲೇ ಅಳಿಸಿಯಾಗಿದೆ. ಅನಂತತೆಯ ಅಲೆಯೊಂದು ಉದಯಿಸಿದೆ ಎದೆಯೊಳಗೆ ಸಾಗಲು ದೋಣಿ ಹಡಗುಗಳಿಲ್ಲ ಸೇರಲು ಸ್ನೇಹ ಸಂಬಂಧಗಳಿಲ್ಲ ತೀರ ಸಾಗರದಲ್ಲಿ ಒಂಟಿ ನಾನು….. ಮಾತಿನ ಶಿಖರಕ್ಕೀಗ ಮೌನದ ಮೆಟ್ಟಿಲು […]
ದೀಪಾವಳಿಯ ನೆನಪಿನಂಗಳ
ದೀಪಾವಳಿ ……ದೀಪಾವಳಿ…………. ಗೋವಿಂದ ಲೀಲಾವಳಿ.. ಅಳಿಯ ಮಗನಾ…….. ” ಹರಿಯಾ ಆ ಟೇಪ್ ಸೌಂಡ್ ಒಂಚೂರ್ ಕಮ್ಮಿ ಮಾಡ್.. ಕೆಮಿ ಕೆಪ್ಪ್ ಆಯ್ತಾ ನಿಮ್ದ್?”… ಗಡಾ ಹೋಯ್ ಕಮ್ಮಿ ಮಾಡ್, ಇಲ್ದಿರ್ ಅಪ್ಪ ಪಟಾಕಿಗ್ ದುಡ್ದ್ ಕೊಡುದಿಲ್ಲ.. ಹ್ಮಾಂ.. ಸರಿ; ಗಳಿನ್ ಒಟ್ಟಿಯಂಗ್ ದುಡ್ಡ್ ಇಟ್ಟದ್ ತೆಗುವಾ? ಪಟಾಕಿಗ್ ಆತ್ತ್…. ಉದ್ದ ತೆಮಿಗ್ ಕಟ್ಟದ್, ಬಿದ್ರಂಗ್ ಮಾಡದ್ ಗೂಡ್ ದೀಪ ಗಾಳಿಗ್ ಬಾಲ ಬೀಸ್ತಾ ಇತ್ತು…ಬಿಸ್ಲ್ ನೆತ್ತಿಗ್ ಏರುಕ್ ಹತ್ತಿತ್…. ಸೆಗ್ಣಿ […]
ಪುರಿ ಜಗನ್ನಾಥ….
ಪ್ರತಿಯೊಬ್ಬರ ಹೃದಯದಲ್ಲಿ ಒಂದೇ ವೇದ, ಮಂತ್ರ,ಭಕ್ತಿ. ಜಗನ್ನಾಥ ನಮ್ಮನ್ನು ರಕ್ಷಿಸು…ಕುಂದವಾಹಿನಿ ಓದುಗರಿಗೆ ನನ್ನ ಯಾತ್ರೆಯ ಮೊದಲ ತೀರ್ಥಸ್ಥಳವಾದ ಒಡಿಶಾ ರಾಜ್ಯದ ಪುರಿ ಜಗನ್ನಾಥ ದರ್ಶನದ ನನ್ನ ಅನುಭವ ನಿಮಗೆ ಕಟ್ಟಿ ಕೊಡುವ ಸಣ್ಣ ಪ್ರಯತ್ನ. ಶ್ರೀ ಕೃಷ್ಣ ಪರಮಾತ್ಮ ಬದರಿನಾಥದಲ್ಲಿ ಸ್ನಾನ, ಜ್ನಾನ ಪುರಿಯಲ್ಲಿ ಭೋಜನ, ದ್ವಾರಕಾದಲ್ಲಿ ಅಲಂಕಾರ,ಶಯನಹೀಗೆ ತನ್ನ ಹಲವಾರು ಆಯಾ ಕ್ಷೇತ್ರದಲ್ಲಿ ನಮಗೆ ದರ್ಶನ ನೀಡುವ ದೇವ..ಪುರಿಯಲ್ಲಿ ಜಗನ್ನಾಥನಿಗೆ ನಿತ್ಯ ಒಂಬತ್ತು ಸಮಯದಲ್ಲಿ ಅನ್ನದ ಖಿಚಿಡಿ ಸೇರಿದಂತೆ […]










