ಕುಂದಾಪುರ (ಫೆ.19): ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಪ್ರಾಕ್ತನ ಸಂಘದ ಜಂಟಿ ಆಶ್ರಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಎನ್.ಇ.ಪಿ. ಪಠ್ಯಕ್ರಮದ ಅಡಿಯಲ್ಲಿ ಮಿನಿ ರಿಸರ್ಚ್ ಪ್ರಾಜೆಕ್ಟ್ನ ಬಗ್ಗೆ ರಿಸರ್ಚ್ ಕಾರ್ಯಾಗಾರ ಪ್ರಾಕ್ತನ ಯಾನ ಶೀರ್ಷಿಕೆಯಡಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾಲೇಜಿನ 2023–24ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯದಲ್ಲಿ 6ನೇ ರ್ಯಾಂಕ್ ಪಡೆದ ಪ್ರಾಕ್ತನ ವಿದ್ಯಾರ್ಥಿನಿ ಕುಮಾರಿ ರಶ್ಮಿ ಉಡುಪ ಮೊಳಹಳ್ಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಿಸರ್ಚ್ ಪ್ರಾಜೆಕ್ಟ್ಗಳು ಹೇಗೆ […]
Category: ಸಮಗ್ರ ಕನ್ನಡ
ಗುರುವೇ ನಿನಗೆ ನಮನ
ಏನೆಂದು ಕರೆಯಲಿ ನಿನ್ನ?ನೀ ನನ್ನ ಬಾಳಲಿ ತುಂಬಿದೆ ಬಣ್ಣ.ಆಚಾರ ವಿಚಾರಗಳನ್ನು ತಿಳಿಸಿದ ಆಚಾರ್ಯನೇ?ಅಧ್ಯಯನದ ಕಡೆಗೆ ಧ್ಯಾನ ಹರಿಸಿದ ಅಧ್ಯಾಪಕನೇ?ವಿದ್ಯೆಯನ್ನು ಧಾರೆಯರಿಸಿದ ಉಪಾಧ್ಯಾಯನೇ?ಮನ ಪೀಡಿತರನ್ನು ಪ್ರಜ್ಞೆ – ಪಾಂಡಿತ್ಯದಿಂದ ಪೋಷಿಸಿದ ಪಂಡಿತನೇ?ಶಿಕ್ಷೆ ಇಂದ ಜೀವನವನ್ನು ರೂಪಿಸಿದ ಶಿಕ್ಷಕನೇ?ಶಸ್ತ್ರಾಸ್ತ್ರ – ಶಾಸ್ತ್ರಗಳನ್ನು ಕಲಿಸಿದ ಶಾಸ್ತ್ರಿಯೇ?ಜ್ಞಾನ ಗಂಗೆಯನು ಗೆದ್ದ ಜ್ಞಾನಿಯೇ?ನುಡಿದಂತೆ ನಡೆದ ಮಹನಿಯೇ?ನನ್ನ ಎಳಿಗೆಯ ಮೇಲೆ ಸದಾ ಇರುವುದು ನಿನ್ನ ಗಮನಲಗುವಾಗಿ ಬಾಳನ್ನು ಬೆಳಗಿಸಿದ ಗುರುವೇನಿನಗೆ ಕೋಟಿ ಕೋಟಿ ನಮನ. ಡಾ. ಉಮ್ಮೆ ಸಲ್ಮಾ […]
ಜಿಲ್ಲಾ ಮಟ್ಟದ ಕವಿಗೋಷ್ಠಿಗೆ ಕವಿತೆಗಳ ಆಹ್ವಾನ
ಉಡುಪಿ ( ನ .17) : ಕರ್ನಾಟಕ ಯುವ ಬರಹಗಾರರ ಬಳಗದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಸಂಸ್ಮರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಪ್ರಥಮ ಕವಿಗೋಷ್ಠಿಯನ್ನು ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಆಸಕ್ತ ಕವಿ-ಕವಯಿತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಜಿ.ಎಸ್. ಕಿರಣ್ ಕುಮಾರ್ ತಿಳಿಸಿದ್ದಾರೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಯಾವುದೇ ವಯೋಮಾನದ ಆಸಕ್ತ ಕವಿ-ಕವಯಿತ್ರಿಯರು […]
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ ಜ್ಞಾನ ಸಮ್ಮುದ್ರವ ಕಲಕಿಸ್ಮೃತಿಪಟಲದಲ್ಲಿ ತಲಪಿವಿದ್ಯೆ – ಬುದ್ಧಿ ವಿನಯ-ವಿಧೇಯ ನೀಡುವ ಶ್ರೇಷ್ಠನೆಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃ. ಶಾರದೆಯ ನಿವಾಸ ನಿನ್ನ ಜಿಹ್ವವುಮಮತೆ ತುಂಬಿರುವ ಎದೆ ಭಾವವುಪ್ರೀತಿ ನೀತಿಯೇ ನಿನ್ನ ಕಣ್ಗಳುಕ್ಷಮೆ ತಾಳ್ಮೆಯೇ ನಿನ್ನ ಭುಜಗಳುಶಿಸ್ತು ಗತ್ತೆ ನಿನ್ನ ಕಾಲುಗಳುಧೈರ್ಯ ಸ್ಥೈರ್ಯವೇ ನಿನ್ನ ಕರಗಳುನಖ-ಶಿರ ತುಂಬಾ ಕೌಶಲ್ಯ ತುಂಬಿದ ಕುಂಜವೇಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ […]
ಬಾವುಟದ ಪಾಠ
ಬಾವುಟದ ಪಾಠ ತ್ರಿವರ್ಣ ಧ್ವಜದ ಮಹಿಮೆನಮ್ಮೆಲ್ಲರ ಗರಿಮೆಉತ್ತುಂಗಕ್ಕೆ ಹಾರುತಿರುವ ನಮ್ಮ ಬಾವುಟಸಾರುತಿಹುದು ಜೀವನದ ಪಾಠ. ಬಾವುಟದ ಮೊದಲ ಬಣ್ಣ ಕೇಸರಿತ್ಯಾಗ-ಶೌರ್ಯದ ಪ್ರತೀಕವೇ ಸರಿವಿಶ್ವಕ್ಕೆ ಹೇಳುತಿಹುದು ಸಾರಿ ಸಾರಿಭಾರತೀಯರ ಬಲ, ಬೆಂಬಲ ಹಂಬಲದ ಐಸಿರಿ. ಮಧ್ಯಮ ಬಣ್ಣ ಶ್ವೇತಸತ್ಯ – ಶಾಂತಿಯ ಇದು ಸಂಕೇತಭಾರತ ಎಂದಿಗೂ ವಿಶ್ವ ಶಾಂತಿಯ ಧೂತಸತ್ಯ ಪ್ರತಿಷ್ಠಾಪನೆಗೆ ಆಗುವುದು ಅವಧೂತ. ಬಿಳಿಯ ಮಧ್ಯ ಅಶೋಕ ಚಕ್ರ ನೀಲಿಏನು ಹೇಳುತ್ತಿದೆ ನೀವು ಕೇಳಿ?24 ತಾಸು ನಡೆಮುಂದೆ ಧರ್ಮದ ಹಾದಿಯಲಿಪ್ರಗತಿ […]
ಯಕ್ಷಗಾನ ಯಕ್ಷ ಚೆಲುವೆ ಶರತ್ ಶೆಟ್ಟಿ ತೀರ್ಥಳ್ಳಿ
ಯಕ್ಷಗಾನದಲ್ಲಿ ಸ್ತ್ರೀ ಪಾತ್ರಕ್ಕೆ ವಿಭಿನ್ನ ಮತ್ತು ವಿಶಿಷ್ಟ ವೇಷಭೂಷಣದ ಮೆರಗು ಇರುವುದು ಯಕ್ಷಗಾನ ಪ್ರಿಯರಿಗೆ ತಿಳಿದ ವಿಷಯ. ಸಾಂಪ್ರದಾಯಿಕ ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಕಲಾವಿದರಿಗೆ ಒಂದು ಸವಾಲೇ ಸರಿ. ಸ್ವರದ ಸಮತೋಲನ ತನ್ನದಲ್ಲದ ನಯ ವಿನಯ ವಯ್ಯಾರ ತನ್ನ ಪಾತ್ರದಲ್ಲಿ ತಂದು ಪಾತ್ರಕ್ಕೂ ನ್ಯಾಯ ಒದಗಿಸುತ್ತ ಅಭಿಮಾನಿಗಳನ್ನು ಆಕರ್ಷಿಸುತ್ತ ಯಕ್ಷಗಾನದಲ್ಲಿ ಒಂದು ಭದ್ರವಾದ ಸ್ಥಾನವನ್ನು ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. ಪಾತ್ರದ ಒಳಹೊಕ್ಕು ಸ್ತ್ರಿ ವೈಯಾರಗಳಲ್ಲಿ ಹೆಣ್ಣನ್ನೇ ನಾಚಿಸುವ […]
ಮಣ್ಣ್ ಅರಳಿ ಹಣತೆಯಾಗಿ………….
ಏ ಸಖಿ,………….ನಾ ನಿನಗೆ ದೀಪಾವಳಿಯ ಕಥೆ ಹೇಳಲೆಂದೆ ಬಂದೆ. ಆದರೆ ಕಥೆ ಮುಗಿಯುವ ತನಕ ನಾನು ಕರೆದುಕೊಂಡಲ್ಲಿ ನೀನು ಬರಬೇಕು ಅಷ್ಟೆ! ಸರಿ ಎಂದು ತಲೆ ಆಡಿಸಿದ ಆರು ವರುಷದ ಪುಟಾಣಿ ಸಖಿ, ಕಿವಿಗಳೆರಡು ನೆಟ್ಟಗೆ ಮಾಡಿಕೊಂಡು ಬಾ ಎಂದು ಕರೆದೊಯ್ದಿದ್ದು ದೇವಲೋಕಕ್ಕೆ. ಕಲ್ಪನಾಲೋಕದ ಕಥಾಯಾನ ಶುರು. ಹೀಗೆ ಕಥೆ ಪ್ರಾರಂಭವಾಯಿತು. ಒಮ್ಮೆ ದೇವಲೋಕದಲ್ಲಿ ಒಂದು ಸಭೆಯನ್ನು ಏರ್ಪಡಿಸಲಾಗುತ್ತದೆ. ಆ ಸಭೆಯಲ್ಲಿ ಬೆಳಕಿನ ಕಿಡಿಗಳು ತಮ್ಮ ನಿಜವಾದ […]
ಕಾಂತಾರ…..ಇದು ದೈವಲೀಲೆಯ ಅವತಾರ…..
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಕೆರಾಡಿ ಎನ್ನುವ ಹಳ್ಳಿಯೊಂದರಲ್ಲಿ ಚಿತ್ರೀಕರಣಗೊಂಡು, ಅದೇ ಹಳ್ಳಿಗರ ಮನೆಮಗ ಸ್ಯಾಂಡಲ್ ವುಡ್ ನ ಖ್ಯಾತ ನಟ -ನಿರ್ದೇಶಕ ರಿಷಬ್ ಶೆಟ್ಟಿಯವರು ನಾಯಕನಾಗಿ ನಟಿಸಿರುವ ಹಾಗೂ ಕೆ.ಜಿ.ಫ್ ಖ್ಯಾತಿಯ ಹೊಂಬಾಳೆ ಫಿಲ್ಸಂ ರವರ ನಿರ್ಮಾಣದಲ್ಲಿ ಮೂಡಿ ಬಂದ ಕಾಂತಾರ ಚಿತ್ರ ಕನ್ನಡದ ಸಿನಿಮಾರಂಗದಲ್ಲಿ ಹೊಸ ಅಲೆಯನ್ನು ಸ್ರಷ್ಠಿಸಿದೆ. ದೈವಾರಾಧನೆಯ ಜೊತೆಗೆ ಭೂ ಮಾಲೀಕತ್ವದ ಸಂಘರ್ಷದೊದಿಗೆ ಹೆಣೆದು ಕೊಂಡಿರುವ ಸಿನೆಮಾದ ಕಥೆ ತುಳುನಾಡು […]
ಅಮ್ಮನ ಅಂತರಾಳ
ಆಕೆಗೆ ಸುಮಾರು ಅರವತ್ತಗಿರಬಹುದು.ಆದರೂ ತನ್ನದೇ ಆದ ಸ್ವಂತ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಾಳೆ.ಆಕೆಗೆ ಏರಡು ಮಕ್ಕಳು. ಅದರಲ್ಲೊಬ್ಬ ಮಾನಸಿಕ ಅಸಮಾನತೆಗೆ ಒಳಪಟ್ಟ ಅಂಗವಿಕಲ.ಇನ್ನೊಬ್ಬ ಗಲ್ಫ್ ದೇಶದಲ್ಲಿ ಕೆಲಸದಲ್ಲಿದ್ದ. ಆತನನ್ನು ಈಕೆ ನೋಡದೆ ಎಷ್ಟೋ ವರುಷಗಳೇ ಆಗಿದ್ದವು.ಹಬ್ಬಕ್ಕೆ ಹುಣ್ಣಿಮೆಗೊಮ್ಮೆ ಪಕ್ಕದ ಶೆಟ್ಟರ ಮನೆಗೆ ಕರೆಮಾಡಿ ಆಕೆಯ ಬಳಿ ಮಾತನಾಡುತ್ತಿದ್ದ. ಪ್ರತಿ ಬಾರಿಯೂ ಕರೆ ಮಾಡಿದಾಗಲೂ ಆತ ಹೇಳುತ್ತಿದ್ದದ್ದು ಏರಡೇ ಮಾತು.ಮುಂದಿನ ತಿಂಗಳಲ್ಲಿ ಊರಿಗೆ ಬರುವೆ ಹಾಗೂ ನಾಳೆ ಶೆಟ್ಟರ ಬಳಿ ಮಾತನಾಡಿದ್ದೇನೆ ಅವರ […]
ಹಕ್ಕಿ & ಪುಟಾಣಿಗಳು
ನಭದಿ ಹಾರುವ ಹಕ್ಕಿಗಳೆ ನಮ್ಮಯ ಕೂಗನು ಆಲಿಸಿ ಹಾರುವ ಆಸೆಯು ಮನದಲಿ ಹುಟ್ಟಿದೆ ನಮಗೂ ಹಾರಲು ಕಲಿಸುವಿರಾ..? ಅಷ್ಟು ಎತ್ತರ ಹೇಗೆ ಏರಿದಿರಿ ನಮಗೂ ಸ್ವಲ್ಪ ತಿಳಿಸುವಿರಾ? ಗಾಳಿಯ ಪಟದಂತೆ ಮೇಲೆ ಕೆಳಗೆ ತೇಲುತಾ ಆಡುತಾ ಮೆರೆಯುವಿರಿ ಸಾಲುಸಾಲಾಗಿ ಹಾರುವ ಹಕ್ಕಿಗಳೆ ನಮಗೂ ಶಿಸ್ತನು ಕಲಿಸಿದಿರಿ ಭೂಮಿಯ ತುಂಬಾ ಚಿಣ್ಣರ ದಂಡು ಕೇಕೆಯ ಹಾಕುತಾ ನಲಿಯುತಿದೆ ಬೇಗನೆ ಬನ್ನಿರಿ ನಮ್ಮೊಡನೆ ಸರ್ರನೆ ಇಳಿಯುತ ಭೂಮಿಯ ಕಡೆ ಜೊತೆ ಜೊತೆಯಾಗಿ ನಲಿಯುವ […]










