ಕುಂದಾಪುರ( ಆ,06): ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಪವರ್ ಲಿಫ್ಟಿಂಗ್ ಪಂದ್ಯಕೂಟದಲ್ಲಿ 69 ಕೆ.ಜಿ. ಸಬ್ ಜೂನಿಯರ್ ಬೆಂಚ್ ಪ್ರೆಸ್ ಕ್ಲಾಸಿಕ್ ಮತ್ತು ಇಕ್ವಿಪ್ದ್ ವಿಭಾಗದಲ್ಲಿ ಗಂಗೊಳ್ಳಿಯ ವೈಷ್ಣವಿ ಖಾರ್ವಿ ಅವರು ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ. ಈಕೆ ಕುಂದಾಪುರದ ನ್ಯೂ ಹರ್ಕುಲಸ್ ಜಿಮ್ ನ ಸದಸ್ಯೆ. ತರಬೇತುದಾರ ಸತೀಶ್ ಖಾರ್ವಿ ಮತ್ತು ಕಾರ್ತಿಕ್ ಪೂಜಾರಿ ತರಬೇತಿ ನೀಡಿರುತ್ತಾರೆ. ಈಕೆ ಗಂಗೊಳ್ಳಿಯ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಮೊಗವೀರ ಯುವ ಸಂಘಟನೆ(ರಿ),ಹೆಮ್ಮಾಡಿ ಘಟಕ:ಡಾ. ಜಿ.ಶಂಕರ್ ರವರ 68 ನೇ ಹುಟ್ಟು ಹಬ್ಬದ ಪ್ರಯುಕ್ತ ತಲ್ಲೂರಿನ ನಾರಾಯಣ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಜನ್ಮ ದಿನಾಚರಣೆ
ತಲ್ಲೂರು(ಆ.05): ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ.ಶಂಕರ್ ರವರ 68 ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತಲ್ಲೂರಿನ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು. ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಜೊತೆಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಯಿತು. ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷ […]
ಬೆಂಗಳೂರು: ಸಿರಿಕಲಾ ಮೇಳದ 13ನೇ ವಾರ್ಷಿಕೋತ್ಸವ – ಸನ್ಮಾನ
ಬೆಂಗಳೂರು (ಅ,02): ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಿರಿಕಲಾಮೇಳದ 13ನೇ ವಾರ್ಷಿಕೋತ್ಸವ ಕಾರ್ಯಕ್ರಮ ಅಕ್ಟೋಬರ್ 01 ರಂದು ಜರುಗಿತು. ಸಿರಿಕಲಾಮೇಳದ 13ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿ.ವಿ.ದತ್ತಾತ್ರೇಯ ಯವರಿಗೆ ಸಿರಿಕಲಾಪುರಸ್ಕಾರ,ಕೃಷ್ಣಮೂರ್ತಿ ಮಂಜರಿಗೆ ಮತ್ತು ನಾಗರಾಜ ನಾಯಕ ತೊರ್ಕೆಯವರಿಗೆ ಸಿರಿಕಲಾಪೋಷಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಧಾಕರ ಪೈ, ಆರ್.ವಿ.ಜಾಗೀರದಾರ್, ದಿನೇಶ ಜೋಶಿ, ಆರ್.ಶ್ರೀನಿವಾಸಾಚಾರ್, ಕರುಣಾಕರ ಹೆಗ್ಡೆ, ಸುಜಾತ, ಮಹಾಬಲೇಶ್ವರ, ಕೃಷ್ಣಮೂರ್ತಿ ನಾಯಕ್, ವಿ.ಎನ್.ಹೆಗಡೆ, ವಾಸುದೇವ ರಾವ್, ಸುರೇಶ ಹೆಗಡೆ, ಗೋ.ನಾ.ಸ್ವಾಮಿ, ಶ್ರೀದೇವಿ […]
ಎಚ್.ಎಮ್.ಎಮ್.ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಆಚರಣೆ
ಕುಂದಾಪುರ(ಆ,03): : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಅಕ್ಟೋಬರ್ 02 ರಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್, ವಿವಿಧ ವಿಭಾಗಗಳ ಮುಖ್ಯಸ್ಥರುr ದೀಪ ಬೆಳಗಿಸಿ, ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನಗೈದು ಕಾರ್ಯಕ್ರಮ ವನ್ನು […]
ಡಾ|ಬಿ.ಬಿ.ಹೆಗ್ಡೆ ಕಾಲೇಜು: ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ
ಕುಂದಾಪುರ (ಅ.02): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ಸ & ರೇಂಜರ್ಸ್ , ಯುವ ರೆಡ್ಕ್ರಾಸ್ ಘಟಕ ಹಾಗೂ ರೋರ್ಯಾಕ್ಟ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಅಕ್ಟೋಬರ್ 02ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ […]
ಡಾ| ಬಿ.ಬಿ.ಹೆಗ್ಡೆ ಕಾಲೇಜು, ಕುಂದಾಪುರ: ಸರ್ವಧರ್ಮ ಪ್ರಾರ್ಥನೆ
ಕುಂದಾಪುರ (ಅ.02): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯ ಪ್ರಯುಕ್ತ ಕಾಲೇಜಿನ ರೋವರ್ಸ ಮತ್ತು ರೇಂಜರ್ಸ್ ಘಟಕದ ವತಿಯಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಕಾಲೇಜಿನ ರೋವರ್ಸ ಸ್ಕೌಟ್ ಲೀಡರ್ ಶ್ರೀ […]
ಕೂಕನಾಡು ಪುಟ್ಟಮ್ಮ ಶೆಡ್ತಿ ನಿಧನ
ಹೆಮ್ಮಾಡಿ (ಆ.03): ಇಲ್ಲಿನ ದೇವಲ್ಕುಂದ ಗ್ರಾಮದ ಸಾಲಗದ್ದೆ ದಿ.ಶಿವರಾಮ ಶೆಟ್ರ ಪತ್ನಿ ಕೂಕನಾಡು ಪುಟ್ಟಮ್ಮ ಶೆಡ್ತಿ (93) ಅಕ್ಟೋಬರ್ 03 ರಂದು ನಿಧನ ಹೊಂದಿದ್ದಾರೆ. ಇವರು ಕೂಕನಾಡು ಅರಣ್ಯ ಗುತ್ತಿಗೆದಾರ ರಾಜರಾಮ ಶೆಟ್ಟಿ ಸೇರಿ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಗಾಂಧಿ ಎಂಬ ಮಾಂತ್ರಿಕ …..
2 ಅಕ್ಟೋಬರ್ 1869 ರಂದು ನಮ್ಮ ಭಾರತಾಂಬೆಯ ಪುಣ್ಯಗರ್ಭದಲ್ಲಿ ಜನಿಸಿ, ಭಾರತಾಂಬೆಯ ಕೀರ್ತಿಪತಾಕೆಯನ್ನು ವಿಶ್ವಕ್ಕೆ ಹಾರಿಸಿದ ಮಹಾನ್ ಚೇತನ ಮಹಾತ್ಮಾ ಗಾಂಧೀಜಿ. ಗಾಂಧಿ ಎಂದರೆ ಯಾರೊಬ್ಬರೂ ಮರೆಯಲಾಗದ ಭಾವ. ಜಗತ್ತಿಗೆಲ್ಲಾ ಶಾಂತಿ ಪಾಠಮಾಡಿದ ಶಾಂತಿ ದೂತ. ಆಧುನಿಕ ತಂತ್ರಜ್ಞಾನ ಯುಗದಲ್ಲೂ ಸದಾ ಕಾಡುವ ಶಕ್ತಿ. ದೇಶಕಾಲಗಳನ್ನು ಮೀರಿದ ವ್ಯಕ್ತಿ, ಇವರು ವ್ಯಕ್ತಿಯಷ್ಟೇ ಅಲ್ಲ ಚಿಂತನೆಗಳ ಜಾಲವಾಗಿದ್ದಾರೆ. ಆದರೆ ನಮ್ಮ ದುರ್ದೈವವೆಂದರೆ ಅಂದಿನಿoದ ಇಂದಿನವರೆಗೂ ಅಂತಹ ಮತ್ತೊಬ್ಬ ಮಹಾನ್ ಚೇತನ ಭಾರತಾಂಬೆಯ […]
ಗಂಗೊಳ್ಳಿ:ಗೂಡ್ಸ್, ಏಸ್ ಮತ್ತು ಪಿಕಪ್ ರಿಕ್ಷಾ ಚಾಲಕ ಮತ್ತು ಮಾಲಕರಿಂದ ಸ್ವಚ್ಚತಾ ಕಾರ್ಯ
ಗಂಗೊಳ್ಳಿ(ಆ.01): ಸ್ವಚ್ಚತಾ ಹೀ ಸೇವಾ ಅಭಿಯಾನದಡಿ ಗಂಗೊಳ್ಳಿಯ ಗೂಡ್ಸ್, ಏಸ್ ಮತ್ತು ಪಿಕಪ್ ರಿಕ್ಷಾ ಚಾಲಕರು ಮತ್ತು ಮಾಲಕರು (ರಿ). ವತಿಯಿಂದ ಗಂಗೊಳ್ಳಿಯ ಪರಿಸರದ ಬಂದರು ಒಳಗಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಯೂನಿಯನ್ ಅಧ್ಯಕ್ಷರಾದ ಅನಂತ್ ಕೊಡೇರಿ, ಉಪಾಧ್ಯಕ್ಷರಾದ .ಜಿ.ಟಿ.ರಾಘವೇಂದ್ರ ಹಾಗೂ ಖಜಾಂಚಿ ಶರತ್ ಖಾರ್ವಿ ಹಾಗೂ ಯೂನಿಯನ್ ಸರ್ವ ಸದಸ್ಯರು ಸ್ವಚ್ಛತೆ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಉಡುಪಿ: ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಮನವಿ
ಉಡುಪಿ (ಸೆ,28): 2006 ರ ಏಪ್ರಿಲ್ 01 ರ ಪೂರ್ವದಲ್ಲಿ ಹಾಗೂ ನಂತರ ಸೇವೆಗೆ ಸೇರಿ ಅನುದಾನಕ್ಕೆ ಒಳಪಟ್ಟ ನೌಕರರಿಗೆ ನೂತನ ಪಿಂಚಣಿ ಯೋಜನೆ ಅಥವಾ ನಿಶ್ಚಿತ ಪಿಂಚಣಿ ಯೋಜನೆ ಎನ್ನುವ ಯಾವುದೇ ಸೌಲಭ್ಯ ಇರುವುದಿಲ್ಲ. ಈ ವ್ಯವಸ್ಥೆಯಿಂದ ಈಗಾಗಲೇ 25 ರಿಂದ 30 ವರ್ಷಗಳವರೆಗೆ ಸೇವೆ ಸಲ್ಲಿಸಿದ ನೌಕರರು ವಯೋನಿವೃತ್ತಿ ಸಮಯದಲ್ಲಿ ಬರಿಗೈಯಲ್ಲಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿವೃತ್ತಿ ಹೊಂದಿದ ಅನೇಕ ನೌಕರರು ಮಾನಸಿಕ ತೊಂದರೆಗೆ ಒಳಗಾಗಿ […]










