ಉಡುಪಿ (ಆ, 09) : ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್ ವ್ಯಾಪ್ತಿಯ ಕೆಲವು ಭಾಗಗಳಿಗೆ ಉಡುಪಿ ನಗರ ಸಭೆಯ ಫುಡ್ ಆಫೀಸರ್ ಕರುಣಾಕರ್ ಮತ್ತು ಶಂಕರ್, ಬಿಲ್ ಕಲೆಕ್ಟರ್ ಮತ್ತು ನಗರ ಸಭೆ ಸದಸ್ಯರ ತಂಡ ದಿಢೀರ್ ಭೇಟಿ ಕೊಟ್ಟು ಸ್ವಚ್ಛತೆ, ಪ್ಲಾಸ್ಟಿಕ್ ಉಪಯೋಗ ಮತ್ತು ಕರೋನಾ ನಿಯಮದ ಪಾಲನೆಯ ಕುರಿತು ಪರಿಶೀಲನೆ ನಡೆಸಿದರು. ನಿಯಮ ಪಾಲಿಸದೆ ಇದ್ದವರಿಗೆ ದಂಡವನ್ನು ವಿಧಿಸಿದರು.
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಮಲ್ಪೆ : ಕಡಲಮ್ಮನಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ಮೀನುಗಾರರು
ಮಲ್ಪೆ (ಆ, 09) : ಮಳೆಗಾಲ ಮುಗಿದು, ಮೀನುಗಾರಿಕೆ ವರ್ಷ ಋತು ಆರಂಭಿಸುವ ಶುಭ ಘಳಿಗೆಯಲ್ಲಿ ಸಮುದ್ರ ಪೂಜೆ ಸಲ್ಲಿಸುವುದು ಕರಾವಳಿ ಮೀನುಗಾರರು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಪದ್ದತಿ ಹಾಗೂ ನಂಬಿಕೆ. ಆ ಹಿನ್ನೆಲೆಯಲ್ಲಿ ಮೀನುಗಾರಿಕೆ ನೆಡೆಸುವ ಮೊಗವೀರ ಸಮುದಾಯದ ಗುರು ಹಿರಿಯರು, ಗುರಿಕಾರರು ಹಾಗೂ ಸಮಸ್ತ ಮೀನುಗಾರಿಕೆ ವೃತ್ತಿ ಮಾಡುವ ಜನತೆ ಕರ್ಕಾಟಕ ಅಮಾವಾಸ್ಯೆ ದಿನದಂದು ಮಲ್ಪೆ ಬಂದರಿನಲ್ಲಿ ಪೂಜೆ ಸಲ್ಲಿಸಿ ಸಮುದ್ರದಲ್ಲಿ ಹೇರಳ ಮೀನು ಸಿಗುವಂತಲಿ ಎಂದು […]
ಕೊಡುಗೈದಾನಿ, ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಕುಂದಾಪ್ರ ರತ್ನ ಪ್ರಶಸ್ತಿ
ಬೆಂಗಳೂರು (ಆ, 08) : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದಲೂ ಕುಂದಾಪುರ ಭಾಗದ ಜನತೆ ಆಸಾಡಿ ಅಮವಾಸ್ಯೆದಿನದಂದು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು ,ಈ ಬಾರಿ ಆಗಸ್ಟ್ 08 ರ ಆಸಾಡಿ ಅಮವಾಸ್ಯೆಯೆಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ ತಂಡದ ನೇತೃತ್ವದಲ್ಲಿ ರಾಜಾಜಿನಗರದ ಕದಂಬ ಸಾಮ್ರಾಟ್ ಸಭಾ ಭವನದಲ್ಲಿ ವೈಭವದಿಂದ ನೆರವೇರಿತು. ಈ ಸಂದರ್ಭದಲ್ಲಿ ಉದ್ಯಮಿ ,ಶೇಫ್ ಟಾಕ್ ಹಾಸ್ಪಿಟಾಲಿಟಿ […]
ಬೆಂಗಳೂರು : ಟಿಮ್ ಕುಂದಾಪುರಿಯನ್ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಬೆಂಗಳೂರು (ಆ, 08) : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದಲೂ ಕುಂದಾಪುರ ಭಾಗದ ಜನತೆ ಆಸಾಡಿ ಅಮವಾಸ್ಯೆದಿನದಂದು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು, ಈ ಬಾರಿ ಆಗಸ್ಟ್ 08 ರ ಆಸಾಡಿ ಅಮವಾಸ್ಯೆಯೆಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಟಿಮ್ ಕುಂದಾಪುರಿಯನ್ ತಂಡದ ನೇತೃತ್ವದಲ್ಲಿ ರಾಜಾಜಿನಗರದ ಕದಂಬ ಸಾಮ್ರಾಟ್ ಸಭಾ ಭವನದಲ್ಲಿ ವೈಭವದಿಂದ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ […]
ಕುಂದಾಪುರದ ಅನನ್ಯತೆ
ಕುಂದಾಪುರ (ಕುಂದಗನ್ನಡ) ಕನ್ನಡ ನಾಡಿನ ವಿಭಿನ್ನ ಹಾಗೂ ವಿಶಿಷ್ಟ ಭಾಷಾ ಸೊಗಡಿನ ಪ್ರದೇಶ. ಸುತ್ತ ಮುತ್ತ ಹಸಿರಿನಿಂದ ಮೈದುಂಬಿ ಕಂಗೊಳಿಸುತ್ತ ,ಹಕ್ಕಿಗಳ ಚಿಲಿಪಿಲಿ ಕಲರವ ಕೇಳುತ್ತ, ಪಶ್ಚಿಮ ದಿಕ್ಕಿನಗಲಕ್ಕೂ ಸಮುದ್ರದ ಬೋರ್ಗರೆಯುವ ಅಲೆಗಳನ್ನು ನೋಡುತ್ತಾ ಖುಷಿ ನೀಡುವ ತಾಣ ನಮ್ಮ ಕುಂದಾಪುರ. ಕುಂದಾಪುರ ಬರೀ ಕರ್ನಾಟಕ ರಾಜ್ಯ ಹಾಗೂ ಭಾರತ ದೇಶದಲ್ಲಿ ಅಲ್ಲದೆ ಅನೇಕ ಕಾರಣಗಳಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ರಾಜ್ಯದ ಇತರೆ ಭಾಗಗಳಿಗಿಂತ ವಿಶಿಷ್ಟ ಶೈಲಿಯ ಅಸ್ಮೀತೆ, ಸಂಸ್ಕೃತಿ ಮತ್ತು […]
ಸನಾತನ ಯಕ್ಷಾಲಯ ಮಂಗಳೂರು ಇದರ 12ನೇ ವಾರ್ಷಿಕೋತ್ಸವ
ಉಡುಪಿ (ಆ, 08): ಯಕ್ಷಗುರು ರಾಕೇಶ್ ರೈ ಅಡ್ಕ ನೇತೃತ್ವದ ಸನಾತನ ಯಕ್ಷಾಲಯ ಮಂಗಳೂರು ಸಂಸ್ಥೆಯು ತನ್ನ 12ನೇ ವಾರ್ಷಿಕೋತ್ಸವವನ್ನು 10ನೇ ಆಗಸ್ಟ್ 2021 ರ ಮಂಗಳವಾರ ಆಚರಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಜೆ ಘಂಟೆ 4.00 ರಿಂದ ಪೂರ್ವರಂಗ ಮತ್ತು ಸಂಜೆ ಘಂಟೆ 4.30 ರಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇದರ ವಿದ್ಯಾರ್ಥಿಗಳಿಂದ ಅತೀ ಅಪರೂಪವಾಗಿ ಕಾಣಸಿಗುವ ಒಡ್ಡೋಲಗಗಳು ಹಾಗೂ ತೆರೆ ಕಲಾಸುಗಳ ಪ್ರದರ್ಶನ ಕಾರ್ಯಕ್ರಮ […]
ಹೋಟೆಲ್ ಉದ್ಯಮಿ ಆತ್ಮಹತ್ಯೆಗೆ ಯತ್ನ : ಈಶ್ವರ್ ಮಲ್ಪೆ ಮತ್ತು ಸತ್ಯದ ತುಳುವೆರ್ ಬಳಗದಿಂದ ರಕ್ಷಣೆ
ಉಡುಪಿ (ಆ, 6) : ಆರ್ಥಿಕ ನಷ್ಟದಿಂದ ಮನನೊಂದು ಗುರುವಾರ ತಡರಾತ್ರಿ ಕುರ್ಕಾಲುನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕೃಷ್ಣ ಭಟ್ ರವರನ್ನು ಆಪದ್ಬಾಂಧವ ಈಶ್ವರ್ ಮಲ್ಪೆ ಹಾಗೂ ಸತ್ಯದ ತುಳುವೆರ್ ಬಳಗದವರು ರಕ್ಷಿಸಿದ್ದಾರೆ. ಉಡುಪಿ ರಥಬೀದಿಯ ಹೋಟೆಲೊಂದರ ಮಾಲೀಕರಾಗಿದ್ದ ಕುಕ್ಕಿಕಟ್ಟೆಯ ಬಾಲಕೃಷ್ಣ ಭಟ್ ಕೋವಿಡ್ ಹಿನ್ನೆಲೆಯಲ್ಲಿ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ್ದರು. ಆರ್ಥಿಕ ನಷ್ಟದ ಕಾರಣದಿಂದ ಮನನೊಂದು ಕುರ್ಕಾಲು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸುದ್ದಿ “ಆಪದ್ಬಾಂಧವ” ಈಶ್ವರ್ ಮಲ್ಪೆ ತಂಡಕ್ಕೆ ತಿಳಿದ […]
ಕುಂದಾಪುರ : ಡಾ. ಹೆಚ್. ಎಸ್. ಮಲ್ಲಿಯವರ ಪಕ್ಷಿಗಳ ಕುರಿತಾದ ಕೃತಿ ಬಿಡುಗಡೆ
ಕುಂದಾಪುರ (ಆ, 06) : ಕುಂದಾಪುರದ ಫ್ಲೋರಾ ಎಂಡ್ ಫೌನಾ ಕ್ಲಬ್ನ ಅಧ್ಯಕ್ಷರಾಗಿರುವ ರೋಟೆರಿಯನ್ ಡಾ. ಹೆಚ್. ಎಸ್. ಮಲ್ಲಿ ಯವರ ಪಕ್ಷಿಗಳ ಕುರಿತಾಗಿ ರಚಿಸಿದ ಕೃತಿ ಹಾರ್ಬಿನ್ಜೆರ್ ಆಫ್ ಡಿಲೈಟ್ ನ್ನು ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಅಧ್ಯಕ್ಷರಾದ ಎ. ಶಶಿಧರ ಹೆಗ್ಡೆ ಅವರು ಆಗಸ್ಟ್, 5ರಂದು ಡಾ. ಹೆಚ್. ಎಸ್. ಮಲ್ಲಿ ಯವರ ಚಿಕಿತ್ಸಾಲಯದಲ್ಲಿ ಬಿಡುಗಡೆಗೊಳಿಸಿ ಡಾ. ಹೆಚ್.ಎಸ್. ಮಲ್ಲಿಯವರು ಪಕ್ಷಿ ಪ್ರೇಮ ಹಾಗೂ ಅಧ್ಯಯನ ಆಸಕ್ತಿಯನ್ನು […]
ಸಂತೆಕಟ್ಟೆ : ಕೃಷ್ಣಾನುಗ್ರಹ ಮಕ್ಕಳ ಅನಾಥಾಶ್ರಮಕ್ಕೆ ಭೇಟಿ ನೀಡಿದ ಶ್ರೀ ಗೋವಿಂದ ಬಾಬು ಪೂಜಾರಿ
ಉಡುಪಿ (ಆ, 5) : ಇಲ್ಲಿನ ಸಂತೆಕಟ್ಟೆಯ “ಕೃಷ್ಣಾನುಗ್ರಹ” ಅನಾಥ ಮಕ್ಕಳ ದತ್ತು ಸ್ವೀಕಾರ ಕೇಂದ್ರಕ್ಕೆ ಕೊಡುಗೈದಾನಿ, ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಇತ್ತೀಚೆಗೆ ತಮ್ಮ ಕುಟುಂಬಿಕರೊಂದಿಗೆ ಭೇಟಿ ನೀಡಿದರು. ಈ ಸಂದರ್ಭ ಕೇಂದ್ರಕ್ಕೆ ಅಗತ್ಯವಿರುವ ಸುಮಾರು ಒಂದು ತಿಂಗಳ ದಿನಸಿ ಸಾಮಾಗ್ರಿ, ಒಂದು ಸಾವಿರ ಪ್ಯಾಂಪರ್ಸ್ ಹಾಗೂ ಮಕ್ಕಳಿಗೆ ತಿಂಡಿ ತಿನಿಸು ವಿತರಿಸಿದರು. ಅನಾಥಾಶ್ರಮದ ಮಕ್ಕಳ ಜೊತೆ ಕೆಲಕಾಲ ಸಮಯ ಕಳೆದ ಗೋವಿಂದ ಬಾಬು ಪೂಜಾರಿಯವರು ಮಕ್ಕಳ […]
ಮಾತು
ಈಗೀಗ ಮನದೊಳಗಿನ ಭಾವನೆಗಳುನಾಲ್ಗೆಗೆ ಬರಲು ಹೆದರುತ್ತವೆಎಲ್ಲರೂ ಬೇಲಿಹಾಕಿಕೊಂಡು ಬಿಟ್ಟಿದ್ದಾರೆಮನದೊಳಗೂ, ಮೆದುಳೊಳಗೂಪ್ರತಿ ನುಡಿಯಲ್ಲೂ ಏನಾದರೊಂದು ಲೋಪಕೊಂಕಿರಬಹುದು ಎಂದೇ ಹುಡುಕುವವರಿದ್ದಾರೆಮೌನವಾಗಿದ್ದರೆ…. ಮೌನವೇ ಜ್ವಾಲಾಮುಖಿಲಾಗಿಲಾವಾರಸ ಉಕ್ಕಿ ಮಾತುಗಳನ್ನೇ ಬಲಿಹಾಕಿಬಿಡಬಹುದುಯಂತ್ರವಾಗಬೇಕು, ರೋಬೋವೇ ಆಗಿಬಿಡಬೇಕುಕೃತಕತೆ ತುಂಬಿದ ವಾಕ್ಯಗಳನ್ನು ಒಳ ತೂರಿಸಿಮತ್ತೆ ಮತ್ತೆ ಎಲ್ಲರಿಗೂ ಖುಷಿನೀಡುವಅದೇ ಸಾಲು, ಸುಳ್ಳಿನ ಸಾಲುಗಳನ್ನುಕ್ಲೀಷೆಯಾಗುವವರೆಗೆ ಕೇಳಿಸುತ್ತಲೇ ಇರಬೇಕುತುಟಿಬಿರಿದು ಹಳದಿಯಂಟಿದ ಹಲ್ಲುಗಳನ್ನುತೋರಿಸಿ ಧನ್ಯರಾಗಿಬಿಡುತ್ತಾರೆಆರೇಳಿಂಚಗಲದ ಸ್ಮಾರ್ಟ್ ಫೋನ್ ಪರದೆಯೂಳಗೆಮುಖ ಹುದಿಗಿಸಿ ಹೂಂ ಗಟ್ಟುತ್ತಾರೆಕಾಫಿ ಕುಡಿಯುವಾಗಲೂ, ಊಟಮಾಡುವಾಗಲೂಮಾತುಗಳೆಲ್ಲ ಹಾಗೇ ತೇಲಿಹೋಗಿಬಿಡುತ್ತವೆಮಾತುಗಳೇ ಮೇಲೇರಿ ಮೋಡಗಳಾಗಿಘನೀಕರಿಸಿ, ಕರಗಿ ಧೋ…ಎಂದುಸುರಿಯುವಂತಿದ್ದರಾಗುತ್ತಿತ್ತು…ಬಹುಶಃ ಮಾತನಾಡಲು […]










