ಬ್ರಹ್ಮಾವರ(ಫೆ,02): ಅಭಿಮತ ಸಂಭ್ರಮ ಈ ಬಾರಿ ಬ್ರಹ್ಮಾವರದಲ್ಲಿ ಆಕೃತಿಗೊಳ್ಳುತ್ತಿರುವುದು ಸಂತಸ ತಂದಿದೆ. ಅಭಿಮತ ಸಂಭ್ರಮದ ಕಂಪು ರಾಜ್ಯ ಹಾಗೂ ದೇಶ ಮಟ್ಟದಲ್ಲಿಯೂ ಪಸರಿಸಲಿ ಎಂದು ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿಯವರು ಶುಭ ಹಾರೈಸಿದರು.
ಅಭಿಮತ ಸಂಭ್ರಮವನ್ನು ಹೊಸ ಬಗೆಯ ಸಾಧ್ಯತೆಯೊಂದಿಗೆ ಬ್ರಹ್ಮಾವರದಲ್ಲಿ ವಿನೂತನವಾಗಿ ಆಯೋಜಿಸುವ ಕುರಿತು ಬ್ರಹ್ಮಾವರದ ಸ್ವರ್ಣ ನಗರದಲ್ಲಿ ಫೆಬ್ರವರಿ 02 ರಂದು ಹಮ್ಮಿಕೊಂಡ ಅಭಿಮತ ಸಂಭ್ರಮದ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಹೆದ್ದಾರಿ ಮಠದ ವೇದಮೂರ್ತಿ ಗುರುಮೂರ್ತಿ ಅಡಿಗ ಅವರು ವೇದ ಮಂತ್ರ ಘೋಷದ ಪಠಣದೊಂದಿಗೆ ಅಭಿಮತ ಸಂಭ್ರಮ ಕಚೇರಿ ಉದ್ಘಾಟನೆ ನಡೆಯಿತು.
ಉದ್ಯಮಿಗಳಾದ ಕುಶಲ ಶೆಟ್ಟಿ ಮಣೂರು, ಅಚ್ಯುತ ಪೂಜಾರಿ ಬ್ರಹ್ಮಾವರ,ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಉದಯ ಶೆಟ್ಟಿ ಪಡುಕರೆ, ಪ್ರವೀಣ ಯಕ್ಷಿಮಠ, ಅರುಣ್ಕುಮಾರ ಶೆಟ್ಟಿ ಗಿಳಿಯಾರ್, ಶರತ್ಕುಮಾರ ಶೆಟ್ಟಿ ಉಪ್ಪುಂದ,ದಿನೇಶ ಶೆಟ್ಟಿ ಬೇಳೂರು, ಗುರುಕಾರ್ತಿಕ್ ಶೆಟ್ಟಿ ಉಪ್ಪುಂದ, ಸುದೇಶ್ ಶೆಟ್ಟಿ ಬ್ರಹ್ಮಾವರ, ಅಶೋಕ್ ಶೆಟ್ಟಿ ಬನ್ನಾಡಿ, ಅಶ್ವಿತ ಶೆಟ್ಟಿ ಕೊಡ್ಲಾಡಿ, ಪ್ರವೀರ ಆಚಾರ್ಯ ಬಾರ್ಕೂರು ಉಪಸ್ಥಿತರಿದ್ದರು. ರಾಘವೇಂದ್ರರಾಜ್ ಸಾಸ್ತಾನ ಕಾರ್ಯಕ್ರಮ ನಿರೂಪಿಸಿದರು.