ಕುಂದಾಪುರ ( ಮೇ ,09): ನಾನು ಮತ್ತು ನನ್ನ ಗೀಚು ಸಾಹಿತ್ಯ ಬಳಗವು ಹಮ್ಮಿ ಕೊಂಡಿದ್ದ ಯುಗಾದಿ – ವಿಷು ಹಬ್ಬ ವಿಶೇಷ ಗೀಚು ಕಥಾ ಸ್ಪರ್ಧೆ 2025ರಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅವರ ಕಥೆ “ಯಾರು ಒಳ್ಳೆಯವರು?’ ಅತ್ಯುತ್ತಮ ಕಥಾ ಬಹುಮಾನಕ್ಕೆ ಪಾತ್ರವಾಗಿದೆ.
ಒಂದು ಸಂಪಾದಿತ ಕೃತಿ ಸೇರಿದಂತೆ ಒಟ್ಟು ಐದು ಪುಸ್ತಕಗಳನ್ನು ಬರೆದಿರುವ ನರೇಂದ್ರ ಎಸ್ ಗಂಗೊಳ್ಳಿ ಅವರ ಮುಂದಿನ ಕೃತಿ ‘ರೂಮಿನೊಳಗಿಂದ’ ಸದ್ಯದಲ್ಲೇ ಬಿಡುಗಡೆಯಾಗಲಿದೆ