ಕುಂದಾಪುರ(ಸೆ,21): ಸುಜ್ಞಾನ ಎಜುಕೇಶನ್ ಟ್ರಸ್ಟ್ ಮೂಡುಬಿದರಿ ಇದರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಕ್ಸಲೆಂಟ್ ಕಾಲೇಜು ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಕಾಲೇಜುಗಳಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ರಿಷಿ ಮಯೂರ 224 ನೇ ರ್ಯಾಂಕ್ ಸಿಇಟಿ ಯಲ್ಲಿ ಪಡೆಯುವುದರ ಮೂಲಕ ಕಾಲೇಜು ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 694 ಬಿ ಎನ್ ವೈ ಎಸ್ 731, ಪಶುವೈದ್ಯಕೀಯದಲ್ಲಿ 731, 224 ಅಗ್ರಿಕಲ್ಚರಲ್ ಬಿ.ಎಸ್ಸಿ ವಿಭಾಗದಲ್ಲಿ ರ್ಯಾಂಕ್ ಗಳಿಸಿರುತ್ತಾರೆ. ಈ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಚಲನ್ ಚಂದ್ರ ಶೆಟ್ಟಿ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ
ಕುಂದಾಪುರ (ಸೆ,21): ಕುಂದಾಪುರ ಮೂಲದ ಚಲನ್ ಚಂದ್ರ ಶೆಟ್ಟಿಯವರು ಜೂನ್ 2021ರ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಉಡುಪಿಯ ಶ್ರೀ ಸುರೇಂದ್ರ ನಾಯಕ್ ರವರಲ್ಲಿ ಆರ್ಟಿಕಲ್ ಶಿಪ್ ಮಾಡಿರುವ ಚಲನ್ ಚಂದ್ರ ಶೆಟ್ಟಿ ಯವರು ಅಧ್ಯಾಪಕರಾದ ಬಿಲ್ಲಾಡಿಮನೆ ಶ್ರೀ ಚಂದ್ರಶೇಖರ ಶೆಟ್ಟಿ ಮಣಿಗೇರಿ ಹಾಗೂ ಶಿರೂರು ಹೈಕಾಡಿಮನೆ ಶ್ರೀಮತಿ ಶ್ಯಾಮಲಾ ಸಿ ಶೆಟ್ಟಿ ಯವರ ಪುತ್ರ.
ನಿಸ್ವಾರ್ಥ ಕಲಾ ಸೇವಕಿ ಮತ್ತು ಭಜನಾ ಗಾಯಕಿ ಸುಶೀಲಾ ಪೂಜಾರಿ ನಾವುಂದ
ದೇವರ ಮೇಲಿನ ಭಕ್ತಿ ಮತ್ತು ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇವರ ಕ್ರಪೆಗೆ ಪಾತ್ರರಾಗಲು ಹಲವು ವಿಧಾನಗಳಿವೆ. ಆದರೆ ಭಜನೆ ಸರಳವಾದ ಮಾರ್ಗ.ಆದರೆ ಆಧುನಿಕತೆಯ ಸ್ಥಿತ್ಯಂತರಕ್ಕೆ ಒಳಗಾದ ಯುವ ಜನತೆ ಆಧ್ಯಾತ್ಮಿಕತೆ , ಭಜನೆ ಹಾಡುವುದು, ಕುಣಿತ ಭಜನೆ, ಜಾನಪದ ಗೀತೆ ಭಾವಗೀತೆಯಂತಹ ಧಾರ್ಮಿಕ ಚಟುವಟಿಕೆಯಿಂದ ದೂರವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮನೆ-ಮನಗಳಲ್ಲಿ ಭಜನೆಯ ಭಕ್ತಿ -ಭಾವ ಕಡಿಮೆಗೊಳ್ಳುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಭಜನೆಯನ್ನು ಭಕ್ತಿಪೂರ್ವಕವಾಗಿ ಹಾಡುತ್ತಾ, […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅಖಿಲ ಭಾರತ 29ನೇ ರ್ಯಾಂಕ್
ಕುಂದಾಪುರ(ಸೆ,19): ಇಲ್ಲಿನ ಕುಂದೇಶ್ವರ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್(ಸ್ಪೇಸ್) ಸಿಎ/ಸಿಎಸ್/ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಅವರು 543 ಅಂಕ ಗಳಿಸುವುದರೊಂದಿಗೆ ಅಖಿಲ ಭಾರತಕ್ಕೆ 29ನೇರ್ಯಾಂಕ್ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ್ ಶೆಟ್ಟಿ 246, […]
ಸಂಗೀತ
ನದಿಯ ಮೇಲೆ ತೇಲುವ ನಾವೆಯ ಗಾನಕೆಹರಿವ ನೀರಿನ ನಾದವಿಲ್ಲಿ ಹಿನ್ನಲೆ ಸಂಗೀತಅಂಬಿಗನೀಗ ಮೈಮರೆತಿದ್ದಾನೆಆ ಶಿಖರದ ಮೈಸವರಿ ಸಾಗುತ್ತಿದೆ ತಂಗಾಳಿಕುಣಿವ ಸಸ್ಯಶ್ಯಾಮಲೆಯ ನೋಡುತ್ತಲೀಗನನ್ನೂರು ಹಾಗೇ ಮೈಮರೆತಿದೆಗದ್ದೆಯೊಳಗಿನ ರೈತನ ಹಾಡನ್ನು ಪೈರುಗಳು ಆಲಿಸಿವೆಅವನ ಪ್ರತಿಹೆಜ್ಜೆಗಳೂ ನಾಟ್ಯದಂತೆಯೇಧರಿತ್ರಿಗೂ ಏನೋ ರೋಮಾಂಚನವಾಗುತ್ತಿದೆಪತಂಗಗಳೂ ಜೇನ್ನೊಳಗಳೂ ಹುಡುಕಾಡಿವೆ ಮಧುವಿಗಾಗಿಹೂವೊಂದು ಸುಖಿಸುತ್ತಿರಲೀಗ ಗೋವಿನ ಕೊರಳ ಗಂಟೆಗಳುಹಿಮ್ಮೇಳ ನುಡಿಸುತ್ತೀವೆಮೂಡಣದಲ್ಲೀಗ ನೇಸರನಾಗಮನದ ಸಮಯಪಕ್ಷಿಗಳೀಗ ಆಲಾಪನೆ ಶುರುಹಚ್ಚಿಕೊಂಡಿವೆಮರದೆಲೆಗಳಿಂದ ಬೀಳುವ ಮುತ್ತಿನ ಹನಿಗಳೂ ಏನೋವಿಶೇಷ ಪರಿಣಾಮವನ್ನುಂಟುಮಾಡಿವೆ ಸಂಗೀತಕ್ಕೆನಡುವಲ್ಲಿ ಕೊಡವ ಹೊತ್ತು ಸಾಗಿದ ನೀರೆಯದ್ದೊಂದು ಕಾವ್ಯಹಟ್ಟಿಯನ್ನು ಬಿಟ್ಟ […]
ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ: ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ಕುಂದಾಪುರ (ಸೆ,18): ಬಿ.ಜೆ.ಪಿ ಕುಂದಾಪುರ ಮಂಡಲದ ವ್ಯಾಪ್ತಿಯಲ್ಲಿ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಕ್ಕೆ ಸಪ್ಟೆಂಬರ್,18 ರಂದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಕುಂದಾಪುರ ಪುರಸಭೆ ವ್ಯಾಪ್ತಿಯ ಸಂಗಮ್ ವಾರ್ಡ್, ಮಂಗಳೂರು ಟೈಲ್ಸ್ ಪ್ಯಾಕ್ಟರಿ ವಾರ್ಡ್, ಬಹದ್ದೂರ್ ಷಾ ವಾರ್ಡ್ ಬೂತ್ ಅಧ್ಯಕ್ಷರ ಮನೆಗೆ […]
ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನಾಚರಣೆ: ಶಿರೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ರೀ ಗಾರ್ಡ್ ಕೊಡುಗೆ
ಶಿರೂರು(ಸೆ,18): ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮ ದಿನದ ಪ್ರಯುಕ್ತಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಶಿರೂರು ಮಹಾಶಕ್ತಿ ಕೇಂದ್ರ ವತಿಯಿಂದ “ಸೇವೆ ಮತ್ತು ಸಮರ್ಪಣಾ ಅಭಿಯಾನ”ದ ಅಂಗವಾಗಿ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿಯವರುಶಿರೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಟ್ರೀ ಗಾರ್ಡ್ ಕೊಡುಗೆ ನೀಡಿದರು. ಕಳೆದ ಎಂಟು ವರ್ಷಗಳಲ್ಲಿ ದೇಶದ ಪ್ರಸಿದ್ದಿ ಜಗತ್ತಿನಾದ್ಯಂತ ಪಸರಿಸಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಈ ದೇಶ ಅತ್ಯಂತ ಅಭಿವೃದ್ಧಿಯ ಪಥದತ್ತ ಸಾಗಿದೆ ಎಂದು ಶಾಸಕರು […]
ಶ್ರೀ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ :ಸ್ವರ್ಣ ಕಳಶ ಸಮಿತಿ ಕುಂದಾಪುರ ವಲಯದ ಸಭೆ
ಕುಂದಾಪುರ (ಸೆ,18): ಉಚ್ಚಿಲ ಮಹಾಲಕ್ಷ್ಮೀ, ಬೆಣ್ಣೆಕುದ್ರು ಕುಲಮಾಸ್ತಿ, ಮತ್ತು ಬಗ್ವಾಡಿ ಮಹಿಷಮರ್ದಿನಿ ಈ ಮೂರು ಹೋಬಳಿಗಳ ಆದಿ ಶಕ್ತಿ ಮೂರು ದೇವತೆಗಳಲ್ಲಿ ಒಂದಾದ ಉಚ್ಚಿಲ ಮಹಾ ಲಕ್ಷ್ಮೀ ದೇವಿಗೆ ಸ್ವರ್ಣ ಕಳಶ ಅರ್ಪಿಸಲು ನಿಧಿ ಸಂಗ್ರಹಿಸುವ ಸಲುವಾಗಿ ಕುಂದಾಪುರ ವಲಯದ ವತಿಯಿಂದ ಸಪ್ಟೆಂಬರ್,18ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಗೃಹದಲ್ಲಿಸಭೆಯನ್ನು ಆಯೋಜಿಸಲಾಗಿತ್ತು. ಬೈಂದೂರು, ಹೆಮ್ಮಾಡಿ, ಕುಂದಾಪುರ, ಹಾಲಾಡಿ ಕೋಟೇಶ್ವರ, ಕೋಟ, ಸಾಲಿಗ್ರಾಮ, ಮಂದಾರ್ತಿ ಒಳಗೊಂಡ ಸ್ವರ್ಣ ಕಲಶ ಸಮಿತಿ ಕುಂದಾಪುರ ಇದರ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಕಾರ್ಯಾಗಾರ
ಬಂಟಕಲ್ (ಸೆ, 17) : ಇಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ಐಎಸ್ ಟಿಇ ಶಿಕ್ಷಕರ ಘಟಕದ ಸಹಯೋಗದೊಂದಿಗೆ ವಿಶ್ವ ಒಝೋನ್ ದಿನದ ಅಂಗವಾಗಿ “ಒಝೋನ್ ಪದರದ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವುದು” ಎಂಬ ವಿಷಯದ ಬಗ್ಗೆ ತಾಂತ್ರಿಕ ಕಾರ್ಯಾಗಾರವನ್ನು 16 ಸಪ್ಟೆಂಬರ್ 2021ರಂದು ಆಯೋಜಿಲಾಗಿತ್ತು. ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಕೇಶವ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. […]










