2012 ರಲ್ಲಿ ಎಮ್. ಮಹೇಶ ಹೆಗ್ಡೆ ಯವರಿಂದ ಸ್ಥಾಪನೆಗೊಂಡ “ಎಕ್ಸಲೆಂಟ್ ಪಿ.ಯು. ಕಾಲೇಜ್, ಸುಣ್ಣಾರಿ” ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆ. ಕೇವಲ ಕುಂದಾಪುರ-ಉಡುಪಿ ಪರಿಸರದ ವಿದ್ಯಾರ್ಥಿಗಳು ಮಾತ್ರವಲ್ಲದೇ ರಾಜ್ಯ-ಹೊರ ರಾಜ್ಯದಿಂದಲೂ ಈ ಶಿಕ್ಷಣ ಸಂಸ್ಥೆಗೆ ವಿದ್ಯಾರ್ಜನೆಗೆ ಆಗಮಿಸುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ನಿದರ್ಶನ. ಸ್ಥಾಪನೆಗೊಂಡ ಕಿರು ಅವಧಿಯಲ್ಲಿಯೇ ಅತಿ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು, ಐಐಟಿ ವಿದ್ಯಾರ್ಥಿಗಳು ಮತ್ತು ಸಿಎ ವಿದ್ಯಾರ್ಥಿಗಳನ್ನು ಈ ಸಂಸ್ಥೆ ರೂಪಿಸಿದೆ. […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಮೆಸ್ಕಾಂ ಅಧಿಕಾರಿಗಳೊಂದಿಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಸಭೆ
ಕುಂದಾಪುರ ( ಮೇ, 22): ಮಳೆಗಾಲದಲ್ಲಿನ ವಿದ್ಯುತ್ ಸಮಸ್ಯೆ ಹಾಗೂ ಮೆಸ್ಕಾಂ ಸಿಬ್ಬಂದಿಗಳು ಎದುರಿಸುತ್ತಿರುವ ಸವಾಲುಗಳ ಕುರಿತಾಗಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಮೆಸ್ಕಾಂ ಅಧಿಕಾರಿಗಳ ಜೊತೆ ಕುಂದಾಪುರ ತಾಲೂಕು ಪಂಚಾಯತ್ ಕಛೇರಿಯಲ್ಲಿ ಸಭೆ ನಡೆಸಿದರು. ಮಳೆಗಾಲದ ಸಂಧರ್ಭದಲ್ಲಿನ ಮೆಸ್ಕಾಂ ಸಿಬ್ಬಂದಿಗಳ ಸಮಸ್ಯೆಗಳ ಕುರಿತಾಗಿ ಮಾಹಿತಿಯನ್ನು ಪಡೆಯುವುದರ ಜೊತೆಗೆ ಕರೋನಾ ಕಾರಣದಿಂದಾಗಿ ಮನೆಯಲ್ಲೇ ಓದುತ್ತಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಹಾಗೂ ಹಲವು ಉದ್ಯೋಗಸ್ಥರು ಮನೆಯಲ್ಲಿಂದಲೇ ಕೆಲಸ ನಿರ್ವಹಿಸುತ್ತಿರುವುದರಿಂದ ವಿದ್ಯುತ್ ವ್ಯತ್ಯಯ […]
ಸರ್ಕಾರಿ ಶಾಲಾ – ಕಾಲೇಜುಗಳ ಅತಿಥಿ ಶಿಕ್ಷಕರ ಗೋಳು ಕೇಳುವವರೇ ಇಲ್ಲ. ಅತಿಥಿ ಶಿಕ್ಷಕರು ಕೇವಲ ಅತಿಥಿಗಳಾ? ಶಿಕ್ಷಕರಲ್ಲವಾ?
ಶಿಕ್ಷಕ ವ್ರತ್ತಿ ಶ್ರೇಷ್ಠ ವ್ರತ್ತಿ. ಉತ್ತಮ ನಾಗರಿಕ ಸಮಾಜವನ್ನು ಸ್ರಷ್ಟಿ ಮಾಡುವವರೇ ನಮ್ಮ ಶಿಕ್ಷಕರು. ಆದರೆ ಶಿಕ್ಷಕ ವ್ರತ್ತಿಯಲ್ಲೂ ಖಾಯಂ ಶಿಕ್ಷಕ ಮತ್ತು ಅತಿಥಿ ಶಿಕ್ಷಕ ಎಂಬ ತಾರತಮ್ಯ ಇದೆ ಎಂದು ಅನುಭವ ಬಂದಿರುವುದು ನಾನು ಶಿಕ್ಷಕಿಯಾದಾಗ. ಖಾಸಗಿ ಶಾಲೆಯಲ್ಲಿ ನಾನು ವ್ಯಾಸಂಗ ಮಾಡುತ್ತಿದ್ದಾಗ, ಅಲ್ಲಿಯ ಶಿಕ್ಷಕರಲ್ಲಿ ನಾನೆಂದು ತಾರತಮ್ಯ ಕಂಡಿಲ್ಲ. ಆದರೆ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಈ ಖಾಯಂ ಶಿಕ್ಷಕ ಮತ್ತು ಅತಿಥಿ ಶಿಕ್ಷಕ ಎಂಬ ತಾರತಮ್ಯ ಸ್ವಲ್ಪ […]
ಪ್ರವೀಣ ರಾಘವನನ್ನ ಕಂಡವನೆ ‘ನಿಂಗ್ ಮರ್ಯಾದಿ ಇಲ್ಲ್ಯನ, ನಿಮ್ಮಂತರೆಲ್ಲ ನಮ್ಮನಿಗ್ ಬಪ್ಕಾಗ ಅಂದೇಳಿ ಗುತ್ತಿಲ್ಲ್ಯ. ಅಪ್ಪಯ್ಯ ನಿನ್ನೆಯೇ ಹೇಳಿರ್. ನೀನ್ ಒಳಗ್ ಬಂದ್ರ್ ನಾನ್ ಅಪ್ಪಯ್ಯ ನ್ ಕರೀತೆ ಅಷ್ಟೆ’ ಎಂದ. ರಾಘವನಲ್ಲಿ ಕಣ್ಣೀರೊಂದನ್ನು ಬಿಟ್ಟು ಬೇರೇನು ಉಳಿದಿರಲಿಲ್ಲ.
ಪ್ರವೀಣ ರಾಘವನನ್ನ ಕಂಡವನೆ ‘ನಿಂಗ್ ಮರ್ಯಾದಿ ಇಲ್ಲ್ಯನ, ನಿಮ್ಮಂತರೆಲ್ಲ ನಮ್ಮನಿಗ್ ಬಪ್ಕಾಗ ಅಂದೇಳಿ ಗುತ್ತಿಲ್ಲ್ಯ. ಅಪ್ಪಯ್ಯ ನಿನ್ನೆಯೇ ಹೇಳಿರ್. ನೀನ್ ಒಳಗ್ ಬಂದ್ರ್ ನಾನ್ ಅಪ್ಪಯ್ಯ ನ್ ಕರೀತೆ ಅಷ್ಟೆ’ ಎಂದ. ರಾಘವನಲ್ಲಿ ಕಣ್ಣೀರೊಂದನ್ನು ಬಿಟ್ಟು ಬೇರೇನು ಉಳಿದಿರಲಿಲ್ಲ. ಅಂದು ಇಡೀ ಶಾಲೆಗೆ ಶಾಲೆಯೇ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿತ್ತು. ಶಾಲೆಯ ಸೂರಿನ ಮೇಲೆ, ಊರಿಗೆ ಮುಖಮಾಡಿ ಕಟ್ಟಿರುವ, ಉದ್ದ ಮೂತಿಯ ಧ್ವನಿವರ್ಧಕಗಳು , ಒಮ್ಮೊಮ್ಮೆ ಇಂಪಾದ ಹಾಡುಗಳನ್ನು ಸೂಸಿದರೆ, ಮತ್ತೊಮ್ಮೆ ಯಾವುದೊ […]
ಆದಿ ಕವಿ ಪಂಪ ರಾಜ್ಯ ಪ್ರಶಸ್ತಿ ಪಡೆದ ಜಯಶ್ರೀ ಅವಟಿ
ಸಾಹಿತ್ಯದಲ್ಲಿ ಸಾಧನೆ ಮಾಡುವುದು ಒಂದು ವಿಶಿಷ್ಟವಾದ ಕಲೆ. ಈ ಸಾಹಿತ್ಯ ಎನ್ನುವುದು ಯಾರಿಗೆ ಯಾವ ಸಂಧರ್ಭದಲ್ಲಿ ಹೇಗೆ ಒದಗಿ ಬರುತ್ತದೆಂದು ಯಾರಿಗೂ ಹೇಳಲು ಸಾಧ್ಯವಾಗದು. ಇನ್ನೂ ಮನುಷ್ಯ ಭೂಮಿ ಮೇಲೆ ಜನಿಸಿದ ಮೇಲೆ ನಾವು ಏನಾದರೊಂದು ಸಾಧನೆ ಮಾಡಬೇಕೆಂದು ಆತ್ಮ ವಿಶ್ವಾಸ ಇದ್ದರೆ ಬದುಕಿನಲ್ಲಿ ಮುಂದೆ ಬರಲು ಸಾಧ್ಯ ಎನ್ನುವುದನ್ನು ಕಂಡುಕೊಂಡವರು ಕುಮಾರಿ ಜಯಶ್ರೀ. ತಮ್ಮ ಶಿಕ್ಷಣ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳಸಿ ಕೊಂಡು ರಾಜ್ಯ ಪ್ರಶಸ್ತಿ ಪಡೆದ ಬೆಳಗಾವಿ […]
ಬಡ ರೈತನ ಮಗಳಾಗಿ ಸಮಾಜ ಸೇವೆ ಜೊತೆಗೆ ಬಡಮಕ್ಕಳಿಗೆ ಜ್ಞಾನ ದಾಸೋಹಿನಿಯಾದ ಕುಮಾರಿ ಬಿಂದು
ನಾವು ಮಾನವರಾಗಿ ಧರೆಗಿಳಿದು ಬಂದ ಮೇಲೆ ಮನೆಯವರಿಂದ ಪಡೆದ ನಾಮಕರಣ ಜೊತೆಗೆ ಬಾಲ್ಯ, ಶಿಕ್ಷಣ, ಮದುವೆ, ಜೀವನ ಮಾಡಿಕೊಂಡು ಮರಣವೆಂಬ ಮೂರು ಅಕ್ಷರದಿಂದ ಬದುಕಿನ ಪಯಣ ನಿಲ್ಲಿಸುತ್ತೇವೆ. . ನಾವು ಮನುಷ್ಯರಾಗಿ ಮರಣವೆಂಬ ಮೂರು ಅಕ್ಷರದ ಬಿರುದನ್ನು ಪಡೆಯುವುದಕ್ಕಿಂತ ಮುಂಚಿತವಾಗಿ ನಾವು ಶಿಕ್ಷಣ, ಸಾಹಿತ್ಯ, ಧಾರ್ಮಿಕ, ಸಮಾಜ ಸೇವೆ, ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು, ನಾವು ಇನ್ನೊಬ್ಬರಿಗೆ ಆದರ್ಶ ವ್ಯಕ್ತಿಯಾಗಿ, ಬಡವರಿಗೆ ಮಾರ್ಗದರ್ಶಕರಾಗಿ ಬದುಕಬೇಕು.ಸಮಾಜ ಸೇವೆ ಎನ್ನುವ ಪದ […]
ನಮ್ಮೂರು ನಮಗೆ ಚಂದ
ಭೂಮಿ ತಾಯಿ ಸುತ್ತಲೂ ಹಸಿರನ್ನು ಹೊದಿಕೆ ಮಾಡಿಕೊಂಡು ಕಣ್ಣ್ಮನ ನಾಚುವಂತೆ ಮನಸ್ಸಿಗೆ ಮುದ ನೀಡುತ, ಒಂದು ಕಡೆ ನೋಡಿದರೆ ಶ್ರೀ ಮೂಕಾಂಬಿಕಾ ಅಭಯಾರಣ್ಯ, ಮಧ್ಯದಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಹಲವು ಸಾವಿರಾರು ಪ್ರಭೇದದ ಔಷಧಿ ಸಸ್ಯರಾಶಿಯಿಂದ ಕಂಗೊಳಿಸುವ ಸಸ್ಯಕಾಶಿ, ಮತ್ತೊಂದು ಕಡೆಯಿಂದ ನೋಡಿದರೆ ಕೊಡಚಾದ್ರಿ ಬೆಟ್ಟದ ತುತ್ತತುದಿಯ ಮಧ್ಯದಿಂದ ರುದ್ರ ರಮಣೀಯವಾಗಿ ಅಂಕುಡೊಂಕಾಗಿ ಹಾಲ್ನೊರೆಯಂತೆ ಜುಳು ಜುಳು ಶಬ್ದನಾದದಂತೆ ಹರಿಯುವ ನೀರನಲ್ಲಿ ಲಕ್ಷಾಂತರ ವಿವಿಧ ಬಣ್ಣ,ಪ್ರಭೇದದ ಜಲಚರಗಳ ಬದುಕಿಗೆ ಆಹಾರ […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿಎಸ್ ಪರೀಕ್ಷೆಯಲ್ಲಿ ಶೇ100 ಫಲಿತಾಂಶ
ಕುಂದಾಪುರ (ಮೇ, 20): ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ,ಸಿಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ (ಸ್ಪೇಸ್) ಯ ವಿದ್ಯಾರ್ಥಿಗಳು ಇನ್ಸಿಟ್ಯೂಟ್ ಆಫ್ ಕಂಪೆನಿ ಸಕ್ರೆಟರಿ ಆಫ್ ಇಂಡಿಯಾ ಮೇ 2021 ರಲ್ಲಿ ನಡೆಸಿದ ಸಿಎಸ್ ಫೌಂಡೇಶನ್ ಸಿಎಸ್ಇಇಟಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಪಡೆದು ಸಾಧನೆಗೈದಿದ್ದಾರೆ. ಪರೀಕ್ಷೆ ಬರೆದ 5 ವಿದ್ಯಾರ್ಥಿಗಳಾದ ದಿಶಾ (131), ಜಯಲಕ್ಷ್ಮಿ (126), ದೀಪಿಕಾ (108), […]
ಬಡ ಕುಟುಂಬದ ಮಹಿಳೆಗೆ ನೆರವಾಗಲು ಮಂದಾದ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ : ಸುಸಜ್ಜಿತ ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಂಕಲ್ಪ
ಕುಂದಾಪುರ (ಮೇ, 20) : ಮೂರ್ನಾಲ್ಕು ದಿನದ ಹಿಂದೆ ತೌಖ್ತೆ ಚಂಡಮಾರುತದ ಪರಿಣಾಮ ಕರಾವಳಿ ಭಾಗದಪ್ಪಳಿಸಿದ ಭಾರಿ ಗಾಳಿ ಮಳೆಯ ಕಂಡು ಬೆಪ್ಪಾಗಿ ಬೆಚ್ಚಗೆ ಮನೆಯೊಳಗೇ ನಾವು ನೀವು ಕುಳಿತಿದ್ದಂತು ನಿಜ. ಆದರೆ ಅದೇ ಪರಿಸ್ಥಿತಿಯಲ್ಲಿ ವ್ಯವಸ್ಥಿತ ಸೂರಿಲ್ಲದೆ ಸೋರುವ ಹಟ್ಟಿಯೊಳಗಡೆ ಸುರಿವ ಮಳೆಗೆ, ಕೊರೆವ ಚಳಿಗೆ ಮೈಯೊಡ್ಡಿ ಗಡಗಡನೆ ನಡುಗುತ್ತಾ ಆ ಕರಾಳ ರಾತ್ರಿಯನ್ನು ಗೋಳಿನಲಿ ಕಳೆದ ಈ ಗೋವುಗಳ ಸ್ಥಿತಿಯಂತೂ ನಾವು ಕಣ್ಣಾರೆ ಕಾಣುವುದಕ್ಕಿಂತಲೂ ಬಹಳ ಶೋಚನೀಯವಾಗಿದ್ದಿದಂತು […]
ನಶಿಸಿ ಹೊಗುತ್ತಿರುವ ಪ್ರಕ್ರತಿಯ ಜೊತೆಗೆ ನರಳುತ್ತಿರುವ ಮಾನವ
ಪ್ರಕೃತಿ ಮಾನವ ಸೇರಿದಂತೆ ಇಡೀ ಜೀವಿ ಸಂಕುಲಕ್ಕೆ ದೇವರು ನೀಡಿಡ ಮಹತ್ವ ಪೂರ್ಣವಾದ ಕೊಡುಗೆ.ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಮನುಜ ತನ್ನ ಸ್ವಾರ್ಥ ಸಾಧನೆಗೆ ಪ್ರಕೃತಿಯನ್ನು ನಾಶ ಮಾಡುತ್ತಾಹೋಗುತ್ತಿದ್ದಾನೆ. ದುರ್ದೈವದ ಸಂಗತಿ ಎನೆಂದರೆ ಪ್ರಕೃತಿ ನಾಶಕ್ಕೆ ಪ್ರತಿಯಾಗಿ ದೊಡ್ಡ ಬೆಲೆ ತೆತ್ತ ಬೇಕಂತ ಮನುಜನಿಗೆ ಗೊತ್ತೇ ಇಲ್ಲ. ಪ್ರಕೃತಿಯಿಂದ ನಾವೋ .. ಇಲ್ಲ ನಮ್ಮಿಂದ ಪ್ರಕ್ರತಿಯೋ, ಇದನ್ನ ಅರ್ಥ ಮಾಡಿಕೊಳ್ಳುವ ವೇಳೆಗೆ ಇಡೀ ಮಾನವ ಸಂಕೂಲವೆ ನಶಿಸಿ ಹೋಗುವ ಸ್ಥಿತಿಗೆ […]










