ಕುಂದಾಪುರ (ಮಾ. 10) ಶ್ರೀ ಶಾರದಾ ಕಾಲೇಜಿನ ಮಹಿಳಾ ವೇದಿಕೆ ಮತ್ತು ರೋವರ್ ಹಾಗೂ ರೇಂಜರ್ ಘಟಕದ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾರಣೆ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಅಂತರಾಷ್ಟ್ರೀಯ ಮಹಿಳಾ ದಿನ ಒಂದು ವಿಶೇಷ ದಿನವಾಗಿದ್ದು, ಮಹಿಳೆ ಒಂದು ಕುಟುಂಬದ ಆಧಾರ ಸ್ತಂಭವಾಗಿ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ವಿಜ್ಞಾನ, ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ನೆನೆಯುವ ದಿನವಾಗಿದೆ. ಮಹಿಳೆಯರ ಸಾಧನೆಗೆ ಪ್ರೋತ್ಸಾಹ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಡಾ| ಬಿ.ಬಿ ಹೆಗ್ಡೆ ಕಾಲೇಜು : ಲಯನ್ಸ್ ಕ್ಲಬ್ ಕುಂದಾಪುರ ವತಿಯಿಂದ ವಾಟರ್ ಕೂಲರ್ ಹಸ್ತಾಂತರ
ಒಂದು ಜಿಲ್ಲೆ ಒಂದು ಯೋಜನೆಯಡಿ ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷರಾಗಿರುವ ಲಯನ್ ಕೆ. ಚಂದ್ರಶೇಖರ್ ರವರು ಡಾ. ಬಿ. ಬಿ. ಹೆಗ್ಡೆ ಕಾಲೇಜಿಗೆ ಕೊಡುಗೆಯಾಗಿ ನೀಡಿದ ವಾಟರ್ ಕೂಲರ್ ನ್ನು ಲಯನ್ಸ್ ಕ್ಲಬ್ ಇದರ ಜಿಲ್ಲಾ ಗವರ್ನರ್ Ln. ಎನ್.ಎಮ್ ಹೆಗ್ಡೆ ಹಾಗೂ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್.ಟಿ.ಸೋನ್ಸ್ ಉದ್ಘಾಟಿಸಿದರು.
ಬಜೆಟ್ – 2021 ರ ಕುರಿತು ಡಾ| ಶ್ರೀಪತಿ ಕಲ್ಲೂರಾಯರಿಂದ ವಿಶೇಷ ಉಪನ್ಯಾಸ
ಕುಂದಾಪುರ (ಮಾ. 9) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ “ಬಜೆಟ್ 2021 ಕುರಿತು ಚರ್ಚೆ” ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುನಿಯನ್ ಬಜೆಟ್ 2021ರ ಪ್ರಮುಖ ಮುಖ್ಯಾಂಶಗಳಾದ ಆರೋಗ್ಯ ಮತ್ತು ಯೋಗಕ್ಷೇಮ, ಭೌತಿಕ ಮತ್ತು ಆರ್ಥಿಕ ಬಂಡವಾಳ ಮತ್ತು ಮೂಲ ಸೌಕರ್ಯ, ಮಹತ್ವಾಕಾಂಕ್ಷೆಯ ಭಾರತ ಕ್ಕೆ ಅಂತರ್ಗತ ಅಭಿವೃದ್ಧಿ, ಮಾನವ ಬಂಡವಾಳವನ್ನು ಉತ್ತೇಜಿಸುವ ,ನಾವೀನ್ಯತೆ ಮತ್ತು ಸಂಶೋಧನೆ […]
ಶ್ರೀ ಶಾರದಾ ಕಾಲೇಜು ಬಸ್ರೂರು : ಮಾರ್ಚ್ 12 ರಂದು ಶ್ರೀ ಶಾರದ ಕಾಲೇಜು ಬಸ್ರೂರಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಶ್ರೀ ಶಾರದಾ ಕಾಲೇಜು ಬಸ್ರೂರಿನಲ್ಲಿ ಇದೇ ಮಾರ್ಚ್ 12 ರಂದು ಕರಾವಳಿ ಲೇಖಕಿಯರ – ವಾಚಕಿಯರ ಸಂಘ (ರಿ.) ಮತ್ತು ಶ್ರೀ ಶಾರದಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ “ಮಹಿಳೆ ಮತ್ತು ಪುರಾಣ : ಸೃಜನಾತ್ಮಕತೆ”ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾಲೇಜಿನ ವೀರರಾಜೇಂದ್ರ ಹೆಗ್ಡೆ ಸಭಾಂಗಣದಲ್ಲಿ ನಡೆಯಲಿದೆ.
ಡಾ|ಬಿ. ಬಿ. ಹೆಗ್ಡೆ ಕಾಲೇಜು : ರಾಷ್ಟ್ರೀಯ ವಿಜ್ಞಾನ ದಿನ – ತರಂಗ 2K21
ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವೇದಿಕೆ ಆಶ್ರಯದಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನ – ತರಂಗ 2K21’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕುಂದಗನ್ನಡ ಅಧ್ಯಯನ ಪೀಠಕ್ಕೆ ಮಂಗಳೂರು ವಿವಿಯಲ್ಲಿ ನಿರ್ಣಯ
ಉಡುಪಿ (ಮಾ. 9) ತನ್ನದೆಯಾದ ಸಂಸ್ಕೃತಿಗಳ ಅಸ್ಮಿತೆ, ಜನಪದ ಹಾಡುಗಳು, ಭಾಷಾ ಸೊಗಡು ಹಾಗೂ ವಿಶೇಷ ಆಚರಣೆಯನ್ನು ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಹೆಬ್ರಿ, ಬ್ರಹ್ಮಾವರ ಭಾಗದ ಜನರ ಆಡುಭಾಷೆಯಾಗಿರುವ ಕುಂದಗನ್ನಡದ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಕುಂದಗನ್ನಡ ಭಾಷಾ ಅಧ್ಯಯನ ಪೀಠ ಸ್ಥಾಪನೆಗೆ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಮಂಗಳೂರು ವಿವಿಯ ಕುಲಸಚಿವರು ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು […]
ಶಿಕ್ಷಣದಿಂದಲೇ ಸಮಾಜದ ಪರಿವರ್ತನೆ ಸಾಧ್ಯ – ಶಾಸಕ ಬಿ .ಎಂ. ಸುಕುಮಾರ್ ಶೆಟ್ಟಿ
ಶಿಕ್ಷಣ ಪ್ರತಿಯೊಂದು ಮಗುವಿಗೂ ಅವಶ್ಯಕ. ಶಿಕ್ಷಣ ಎಂದೆಂದಿಗೂ ನನ್ನ ಮೊದಲ ಆದ್ಯತೆ, ಸದೃಡ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಮೂಲ ಅಡಿಪಾಯ ಎಂದು ಬೈಂದೂರಿನ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಹೇಳಿದರು.
ಶ್ರೀ ಧವಲಾ ಕಾಲೇಜು ಮೂಡಬಿದ್ರೆ : ನಾಯಕತ್ವ ತರಬೇತಿ ಶಿಬಿರ
ಉಡುಪಿ (ಮಾ.6) ಶ್ರೀ ಧವಲಾ ಕಾಲೇಜಿನಲ್ಲಿ ವಿಧ್ಯಾರ್ಥಿ ನಾಯಕರಿಗೆ ಒಂದು ದಿನದ ನಾಯಕತ್ವ ತರಬೇತಿ ಶಿಬಿರವು ಮಾರ್ಚ್ 4 ರಂದು ಜರುಗಿತು. ಈ ಶಿಬಿರವನ್ನು ಕಾಲೇಜಿನ ಹಳೆ ವಿಧ್ಯಾರ್ಥಿ ಹಾಗೂ ಶ್ರೀ ನವದುರ್ಗ, ಇಂಡಸ್ಟ್ರೀಸ್ ಸಚ್ಚರಿಪೇಟೆ ಇದರ ಮಾಲಕರಾದ ಶ್ರೀಯುತ ಶ್ರೀಕಾಂತ್ ಕಾಮತ್ರವರು ಉದ್ಘಾಟಿಸಿದರು. ವಿಧ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತಿಳಿದುಕೊಂಡರೆ ಮುಂದೆ ದೇಶದ ನಾಯಕರಾಗುವ ಸೌಭಾಗ್ಯವಂತರಾಗಬಹುದು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಮಾತನಾಡಿದರು. ಶಿಬಿರದ […]
ಭಾರತೀಯ ಸೇನಾ ನೇಮಕಾತಿ ರ್ಯಾಲಿ – ಸೈನಿಕ ಪ್ರಶಾಂತ್ ದೇವಾಡಿಗರಿಂದ ಉಚಿತ ತರಬೇತಿ & ಮಾಹಿತಿ ಕಾರ್ಯಕ್ರಮ
ಭಾರತೀಯ ಸೈನ್ಯಕ್ಕೆ ಸೇರಲಿಚ್ಚಿಸುವ ಯುವಕರಿಗೆ ಇದೇ ತಿಂಗಳ 16 ರಿಂದ ಉಡುಪಿಯಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ ನಡೆಯಲಿದ್ದು ಅದಕ್ಕೆ ಪೂರ್ವತಯಾರಿ ಹಿನ್ನೆಲೆಯಲ್ಲಿ ಬೇಕಾಗುವ ಕೆಲವು ತರಬೇತಿ ಹಾಗೂ ಸಲಹೆಯನ್ನು ಬೈಂದೂರಿನ ಹೆಮ್ಮೆಯ ಯುವ ಸೈನಿಕರಾದ ಪ್ರಶಾಂತ್ ದೇವಾಡಿಗರವರು ಉಚಿತವಾಗಿ ನೀಡಲಿದ್ದಾರೆ.
ಶಿರ್ವ ಸಂತ ಮೇರಿ ಕಾಲೇಜು : ರಕ್ಷಕ – ಶಿಕ್ಷಕ ಸಭೆ
ಉಡುಪಿ(ಮಾ.6): ಸಂತ ಮೇರಿ ಕಾಲೇಜಿನ ಕಂಪ್ಯೂಟರ್ ಸಾಯನ್ಸ್ ವಿಭಾಗದ ಆಯೋಜನೆಯಲ್ಲಿ ರಕ್ಷಕ-ಶಿಕ್ಷಕ ಸಭೆಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ರವರು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಇಂದಿನ ಯುವ ಜನತೆಗೆ ಮಾರ್ಗದರ್ಶನ ಮಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ, ಯುವಜನತೆಯ ಮನಸ್ಸನ್ನು ಇಂದಿನ ಜಗತ್ತು ನಾನಾ ಧುಶ್ಚಟಗಳಿಗ್ಗೆ ಸೆಳೆಯುತ್ತಿದೆ ಇದರಿಂದ ದೂರವಿರಿಸಿ […]










